ಎಲವೋ ಕಳ್ಳ, ಕದಿಯುವ ಮುನ್ನ ಆಧಾರ್ ತೋರ್ಸಯ್ಯ!
ಮಗು ಹುಟ್ಟಿ ಇನ್ನೂ ಅಮ್ಮನ ಎದೆಹಾಲು ಕೂಡ ಕುಡಿದಿರುವುದಿಲ್ಲ ಅಷ್ಟರಲ್ಲಾಗಲೇ ಮಗುವಿನ ಆಧಾರ್ ಕಾರ್ಡಿಗೆ ಅಪ್ಪ ಅರ್ಜಿ ಹಾಕಿರುತ್ತಾನೆ. ಇದು ಉತ್ಪ್ರೇಕ್ಷೆ ಅಲ್ಲ. ಮಹಾರಾಷ್ಟ್ರದ ಓಸ್ಮಾನಾಬಾದ್ ಜಿಲ್ಲೆಯಲ್ಲಿ ಅಪ್ಪನೊಬ್ಬ ಮಗಳು ಹುಟ್ಟಿ 6 ನಿಮಿಷದಲ್ಲಿ ಮಗುವಿಗೆ ಆಧಾರ್ ಪಡೆದಿದ್ದ.
ಇದು ಆಧಾರ್ ಮಹತ್ವವನ್ನು ಸಾರುತ್ತದೆ. ಬ್ಯಾಂಕ್ ಖಾತೆ ತೆರೆಯಲಾಗಲಿ, ಬ್ಯಾಂಕ್ ಜೊತೆ ಎಲ್ಪಿಜಿ ಲಿಂಕ್ ಮಾಡಲಾಗಲಿ, ಏರ್ಪೋರ್ಟಲ್ಲಿ ಪ್ರವೇಶ ಪಡೆಯಲಿಕ್ಕಾಗಲಿ, ಪ್ಯಾನ್ ಕಾರ್ಡ್ ಪಡೆಯಲು, ವಿಮೆ ಪಾಲಿಸಿ ಹೊಂದಲು, ಮ್ಯೂಚುವಲ್ ಫಂಡ್ ನಲ್ಲಿ ಹೂಡಲು, ಮೊಬೈಲ್ ಕೊಳ್ಳಲು... ಹೀಗೆ ಪ್ರತಿಯೊಂದಕ್ಕೂ ಆಧಾರ್ ಬೇಕೇಬೇಕು.
ಆಧಾರ್ ಕಾರ್ಡ್ ಇರುವುದೇ ಜನರ ಅನುಕೂಲಕ್ಕಾಗಿ. ಇದರಿಂದ ಹಲವಾರು ವಂಚನೆಗಳನ್ನು ತಡೆಗಟ್ಟಲು ಸಾಧ್ಯವಿದೆ. ಆಧಾರ್ ಇಂದು ದೇಶದ ಪ್ರತಿಯೊಬ್ಬರ ಐಡೆಂಟಿಟಿಯಾಗಿದೆ. ದುರಾದೃಷ್ಟವೆಂದರೆ, ಹಲವಾರು ಜನರು ಆಧಾರ್ ಕಾರ್ಡ್ ಇಲ್ಲದ್ದರಿಂದ ಹಲವಾರು ಯೋಜನೆಗಳಿಂದಲೂ ವಂಚಿತರಾಗಿದ್ದಾರೆ.

ಕಾರ್ಗಿಲ್ ಯುದ್ಧದಲ್ಲಿ ಅಸುನೀಗಿದ್ದ ಧೀರ ಯೋಧರೊಬ್ಬರ ಪತ್ನಿಯೊಬ್ಬರು ಆಧಾರ್ ಕಾರ್ಡ್ ಇಲ್ಲದ್ದರಿಂದ ಆಸ್ಪತ್ರೆಗೆ ಸಕಾಲದಲ್ಲಿ ದಾಖಲಾಗದೆ ಕೆಲ ದಿನಗಳ ಹಿಂದೆ ಅಸುನೀಗಿದ್ದರು. ಒಂದು ರೀತಿ ಆಧಾರ್ ಉಪಯೋಗಿಯಾಗಿದ್ದರೆ, ಮತ್ತೊಂದು ರೀತಿಯಲ್ಲಿ ಶ್ರೀಸಾಮಾನ್ಯನಿಗೆ ತೊಂದರೆಯೂ ಆಗುತ್ತಿದೆ.
ಇವೆಲ್ಲ ಗಂಭೀರ ಸಂಗತಿಗಳಾದರೆ, ಸೋಷಿಯಲ್ ಮೀಡಿಯಾದಲ್ಲಿ ಆಧಾರ್ ಹಾಸ್ಯದ ವಸ್ತುವಾಗಿದೆ. ಆಧಾರ್ ಕುರಿತಂತೆ ಹಲವಾರು ಮೀಮ್ಸ್ ಗಳು, ವ್ಯಂಗ್ಯಚಿತ್ರಗಳು, ಟ್ರೋಲ್ ಗಳು, ಜೋಕುಗಳು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಗೆ ಸಖತ್ ಮಜಾ ಕೊಡುತ್ತಿದೆ. ಇಲ್ಲಿ ಎಮ್ಮೆಗೂ ಆಧಾರ್ ನೀಡಲಾಗುತ್ತದೆ, ಕತ್ತೆಗೂ ಆಧಾರ್ ಸಿಗುತ್ತದೆ.
ಇನ್ನು ವ್ಯಂಗ್ಯ ಚಿತ್ರಕಾರು ಕೇಳಬೇಕೆ? ಖ್ಯಾತ ವ್ಯಂಗ್ಯ ಚಿತ್ರಕಾರರಾದ ಸತೀಶ್ ಆಚಾರ್ಯ ಅವರು ಆಧಾರ್ ಮೇಲೆ ವ್ಯಂಗ್ಯಚಿತ್ರ ಬಿಡಿಸಿದ್ದು, ಇದರಲ್ಲಿ ವಿಡಂಬನೆ ಹಾಸುಕೊಕ್ಕಾಗಿರುವುದು ಮಾತ್ರವಲ್ಲ, ಆಧಾರ್ ಬಗ್ಗೆ ಮರುಚಿಂತನೆ ಮಾಡುವಂತೆ ಮಾಡಿದೆ. ಇದಕ್ಕೆ ಹೆಚ್ಚಿನ ವಿವರಣೆಯೇ ಬೇಕಾಗಿಲ್ಲ, ವ್ಯಂಗ್ಯ ಚಿತ್ರವೇ ಎಲ್ಲವನ್ನೂ ಹೇಳಿಬಿಡುತ್ತದೆ.
ನಿಮಗೆ ಗೊತ್ತಿರಲಿಕ್ಕಿಲ್ಲ. ಇತ್ತೀಚೆಗೆ ಇವಾಂಕಾ ಟ್ರಂಪ್ ಭಾರತಕ್ಕೆ ಏಕೆ ಬಂದಿದ್ದು ಗೊತ್ತಾ? ಆಧಾರ್ ಕಾರ್ಡ್ ಮಾಡಿಸಲು!
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications