ಏನೇ ಆಗ್ಲಿ ಈ ವರ್ಷ ಎಂಕಾಂ ಮಾಡ್ಲೇಬೇಕು

ಪ್ರತಿ ಯುಗಾದಿಗೆ ನಿರ್ದಿಷ್ಟ ಗುರಿ ಇಟ್ಟುಕೊಂಡು ಜೀವನ ನಡೆಸುವ ಪಕ್ಕಾ planned ಪಂಗಡಕ್ಕೆ ಸೇರಿದವನು ನಾನಲ್ಲ. ಆದರೆ ಈ ಯುಗಾದಿಗೆ ಒಂದು resolution ತೆಗೆದುಕೊಂಡು ಅದನ್ನು ಮುಂದಿನ ಯುಗಾದಿಯ ಒಳಗೆ ಆ ನಿಟ್ಟಿನಲ್ಲಿ ಒಂದು ಹೆಜ್ಜೆ ಇಡಬೇಕೆನ್ನುವುದು ನನ್ನ ಸದ್ಯದ ಈಗಿನ ಮನಸ್ಥಿತಿ.
ಜೀವನದಲ್ಲಿ ಮೊದಲಬಾರಿಗೆ ಒಂದು ನಿರ್ದಿಷ್ಟ ಟಾರ್ಗೆಟ್ ಇಟ್ಟುಕೊಂಡವನು. ಹಾಗಾಗಿ ನನ್ನ ಪ್ರಯತ್ನದಲ್ಲಿ ತಕ್ಕ ಮಟ್ಟಿನ ಯಶಸ್ಸು ಹೊಂದುತ್ತೇನೆ ಎನ್ನುವ ಅಪಾರ ನಂಬಿಕೆಯಲ್ಲಿದ್ದೇನೆ. ನಾನು ಬಿಕಾಂ ಪಧವೀಧರ. ನನ್ನ ಈ ವರ್ಷದ resolution ಏನೆಂದರೆ ಎಂಕಾಂ ಮಾಡಬೇಕು. ಅಲ್ಲದೆ ಪತ್ರಿಕೋದ್ಯಮದಲ್ಲಿ ಕೂಡಾ ಕೋರ್ಸ್ ಮಾಡಬೇಕೆಂದು ಇದ್ದೇನೆ.
ನಲವತ್ತು ವರ್ಷವಾಯಿತು ಯಾಕಪ್ಪ ಹೈಯರ್ education ಎನ್ನುವ ಹಿತಶತ್ರುಗಳಿಗೆ ನನ್ನಲ್ಲಿ ಏನೂ ಕೊರತೆ ಇಲ್ಲ. ಆದರೆ ವಿದ್ಯೆಗೆ ವಯಸ್ಸಿನ ಕಟ್ಟುಪಾಡು ಸರಿಯಲ್ಲ ಎಂದು ಒಂದು ಹೆಜ್ಜೆ ಮುಂದೆ ಇಟ್ಟೇ ಬಿಡೋಣ ಎನ್ನುವ ಗಟ್ಟಿ ನಿರ್ಧಾರಕ್ಕೆ ಬಂದಿದ್ದೇನೆ. ಪತ್ರಿಕೋದ್ಯಮದಲ್ಲಿ ಯಾವ ಕೋರ್ಸ್ ಮಾಡಿದರೆ ಒಳ್ಳೇದು ಎಂದು, ಅಂತರ್ಜಾಲದಲ್ಲಿ ಕನ್ನಡವನ್ನು ಯಾವ ರೀತಿಯಲ್ಲಿ ಪೋಣಿಸಬೇಕು ಎಂದು ಪ್ರತಿದಿನ ನನಗೆ ತಿದ್ದಿಬುದ್ದಿ ಹೇಳುತ್ತಿರುವ ಶಾಮ ಸುಂದರ ಅವರ ಬಳಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕೂಂತ ಇದ್ದೀನಿ.
ಶ್ರೀನಂದನ ಸಂವತ್ಸರದಲ್ಲಿ ನಾನು ನಂಬಿದ ಕುಲದೇವರು, ಗ್ರಾಮದೇವರು, ಶ್ರೀವಾದಿರಾಜ ಗುರುಗಳು ನನ್ನ ಇಷ್ತಾರ್ಥವನ್ನು ಸಿದ್ದಿಸುತ್ತಾರೆ ಎನ್ನುವ ನಂಬಿಕೆಯೊಂದಿಗೆ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. [ನಿಮ್ಮ ಕನಸುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ]
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications