ಏನೇ ಆಗ್ಲಿ ಈ ವರ್ಷ ಎಂಕಾಂ ಮಾಡ್ಲೇಬೇಕು

ಪ್ರತಿ ಯುಗಾದಿಗೆ ನಿರ್ದಿಷ್ಟ ಗುರಿ ಇಟ್ಟುಕೊಂಡು ಜೀವನ ನಡೆಸುವ ಪಕ್ಕಾ planned ಪಂಗಡಕ್ಕೆ ಸೇರಿದವನು ನಾನಲ್ಲ. ಆದರೆ ಈ ಯುಗಾದಿಗೆ ಒಂದು resolution ತೆಗೆದುಕೊಂಡು ಅದನ್ನು ಮುಂದಿನ ಯುಗಾದಿಯ ಒಳಗೆ ಆ ನಿಟ್ಟಿನಲ್ಲಿ ಒಂದು ಹೆಜ್ಜೆ ಇಡಬೇಕೆನ್ನುವುದು ನನ್ನ ಸದ್ಯದ ಈಗಿನ ಮನಸ್ಥಿತಿ.
ಜೀವನದಲ್ಲಿ ಮೊದಲಬಾರಿಗೆ ಒಂದು ನಿರ್ದಿಷ್ಟ ಟಾರ್ಗೆಟ್ ಇಟ್ಟುಕೊಂಡವನು. ಹಾಗಾಗಿ ನನ್ನ ಪ್ರಯತ್ನದಲ್ಲಿ ತಕ್ಕ ಮಟ್ಟಿನ ಯಶಸ್ಸು ಹೊಂದುತ್ತೇನೆ ಎನ್ನುವ ಅಪಾರ ನಂಬಿಕೆಯಲ್ಲಿದ್ದೇನೆ. ನಾನು ಬಿಕಾಂ ಪಧವೀಧರ. ನನ್ನ ಈ ವರ್ಷದ resolution ಏನೆಂದರೆ ಎಂಕಾಂ ಮಾಡಬೇಕು. ಅಲ್ಲದೆ ಪತ್ರಿಕೋದ್ಯಮದಲ್ಲಿ ಕೂಡಾ ಕೋರ್ಸ್ ಮಾಡಬೇಕೆಂದು ಇದ್ದೇನೆ.
ನಲವತ್ತು ವರ್ಷವಾಯಿತು ಯಾಕಪ್ಪ ಹೈಯರ್ education ಎನ್ನುವ ಹಿತಶತ್ರುಗಳಿಗೆ ನನ್ನಲ್ಲಿ ಏನೂ ಕೊರತೆ ಇಲ್ಲ. ಆದರೆ ವಿದ್ಯೆಗೆ ವಯಸ್ಸಿನ ಕಟ್ಟುಪಾಡು ಸರಿಯಲ್ಲ ಎಂದು ಒಂದು ಹೆಜ್ಜೆ ಮುಂದೆ ಇಟ್ಟೇ ಬಿಡೋಣ ಎನ್ನುವ ಗಟ್ಟಿ ನಿರ್ಧಾರಕ್ಕೆ ಬಂದಿದ್ದೇನೆ. ಪತ್ರಿಕೋದ್ಯಮದಲ್ಲಿ ಯಾವ ಕೋರ್ಸ್ ಮಾಡಿದರೆ ಒಳ್ಳೇದು ಎಂದು, ಅಂತರ್ಜಾಲದಲ್ಲಿ ಕನ್ನಡವನ್ನು ಯಾವ ರೀತಿಯಲ್ಲಿ ಪೋಣಿಸಬೇಕು ಎಂದು ಪ್ರತಿದಿನ ನನಗೆ ತಿದ್ದಿಬುದ್ದಿ ಹೇಳುತ್ತಿರುವ ಶಾಮ ಸುಂದರ ಅವರ ಬಳಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕೂಂತ ಇದ್ದೀನಿ.
ಶ್ರೀನಂದನ ಸಂವತ್ಸರದಲ್ಲಿ ನಾನು ನಂಬಿದ ಕುಲದೇವರು, ಗ್ರಾಮದೇವರು, ಶ್ರೀವಾದಿರಾಜ ಗುರುಗಳು ನನ್ನ ಇಷ್ತಾರ್ಥವನ್ನು ಸಿದ್ದಿಸುತ್ತಾರೆ ಎನ್ನುವ ನಂಬಿಕೆಯೊಂದಿಗೆ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. [ನಿಮ್ಮ ಕನಸುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ]
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications