ನಮಗೆ ನಿಮ್ಮ ಕನಸುಗಳ ಕನಸು ಬಿದ್ದಿದೆ
ತಳಿರು, ತೋರಣ, ಮಾವು ಬೇವು ಬೆಲ್ಲ, ಹೊಸ ಬಟ್ಟೆ, ಪಂಚಾಂಗ ಶ್ರವಣ, ಹಿರಿಯರ ಪಾದಕ್ಕೆ ನಮಸ್ಕಾರ. ಹೊಸ ವರ್ಷ ಎಲ್ಲರಿಗೂ ಅಂದರೆ, ಕನ್ನಡಿಗರಿಗೆ, ಕರ್ನಾಟಕ ಸಂಜಾತರಿಗೆ ಮತ್ತು ಸಮಸ್ತ ಕರ್ನಾಟಕಕ್ಕೆ ನೆಮ್ಮದಿ ಮತ್ತು ಸಮೃದ್ಧಿ ತರಲೆಂದು ಆಶಿಸುವ ಸಂದರ್ಭ.
ಈ ಯುಗಾದಿ ಹಬ್ಬದ ಸಂದರ್ಭದಲ್ಲಿ ನಮಗೆ ಕನಸೊಂದು ಬಿದ್ದಿದೆ. ನಮ್ಮದು ಮತ್ತು ನಮ್ಮ ಓದುಗ ವೃಂದದ ಹೊಸ ವರ್ಷದ ಕನಸುಗಳನ್ನು ತೆರೆದಿಡುವ ಕನಸಿದು. ಜನವರಿ 1ರಂದು ಆರಂಭವಾಗುವ ಇಂಗ್ಲಿಷ್ ಕ್ಯಾಲೆಂಡರ್ ಸಮಯದಲ್ಲಿ ಹೊಸ ವರ್ಷದ ಕನಸುಗಳನ್ನು ಮತ್ತು ಠರಾವುಗಳನ್ನು ಕೈಗೊಳ್ಳುವ ನಾವು, ಹಿಂದೂ ಹೊಸ ವರ್ಷದಂದು ಸುಮ್ಮನಿರುವುದೆಂದರೆ ಏನರ್ಥ!
ಹಿಂದು ಪಂಚಾಂಗದ ರೀತ್ಯ ಆರಂಭವಾಗುವ ಹೊಸ ವರ್ಷದಲ್ಲಿ ಒಂದು ತೀರ್ಮಾನಕ್ಕೆ ಬರೋಣ. ಈಗ ನೀವು ಮಾಡಬೇಕಾದುದಿಷ್ಟೆ. ನೀವು ಒಂದು ಕನಸನ್ನು ಕಂಡಿದ್ದೀರಿ. ಅದನ್ನು ಕನ್ನಡ ಅಂತರ್ಜಾಲ ಓದುಗ ಸಾಗರದೊಂದಿಗೆ ಹಂಚಿಕೊಳ್ಳಿ. ನಿಮ್ಮ ಕನಸು ಏನೂ ಇರಲಿ, ಅದನ್ನು ದಾಖಲಿಸಿ. ಬರಹ ಚಿಕ್ಕದಾಗಿ ಚೊಕ್ಕದಾಗಿರಲಿ. ನಿಮ್ಮ ಬರಹ ನಮ್ಮ ಕೈತಲುಪಬೇಕಾದ ಕಡೆ ದಿನಾಂಕ ಬುಧವಾರ 21 ಮಾರ್ಚ್. ಬರಹ ಕಳಿಸುವ ವಿಳಾಸ : [email protected]