ಶ್ರಾವಣ, ಭಾದ್ರಪದ, ಕಾರ್ತಿಕ ಮಾಸಗಳ ಹಬ್ಬಹರಿದಿನಗಳ ಪಟ್ಟಿ 2019
ಹಿಂದೂ ಪಂಚಾಂಗದ ಪ್ರಕಾರ ಗಂಡನ ಪೂಜೆ - ಭೀಮನ ಅಮಾವಾಸ್ಯೆಯೊಂದಿಗೆ ಸಾಲು ಸಾಲು ಹಬ್ಬಗಳ ಪರ್ವ ಆರಂಭವಾಗಲಿದೆ. ಇದೇ ಶುಕ್ರವಾರದಿಂದ (ಆ 2) ಶ್ರಾವಣ ಮಾಸ ಆರಂಭ.
ಕಳೆದ ವರ್ಷದಂತೆ ಈ ಬಾರಿಯೂ ಹಲವು ಹಬ್ಬಗಳು ವಾರಾಂತ್ಯಕ್ಕೆ ಹೊಂದಿಕೊಂಡು ಬಂದಿರುವುದರಿಂದ ಸಾಲುಸಾಲು ಹಬ್ಬಗಳ ರಜೆಯನ್ನು ಸವಿಯಬಹುದಾಗಿದೆ. ಜೊತೆಗೆ, ಫುಲ್ &, ಕಲರ್ ಫುಲ್ ಮೀಲ್ಸ್ ಗಳ ಭರಾಟೆ.
ಶ್ರಾವಣ ಬಂತು ನಾಡಿಗೆ, ಬಂತು ಬೀಡಿಗೆ ಎನ್ನುವಂತೆ ಹಬ್ಬದ ಸಂಭ್ರಮದ ಸಿರಿಯನ್ನು ಹೊತ್ತು ಬಡವ ಬಲ್ಲಿದ ಎನ್ನದೇ ತಮ್ಮ ತಮ್ಮ ಶಕ್ತ್ಯಾನುಸಾರ ಬರುವ ಹಬ್ಬಗಳನ್ನು ಸ್ವಾಗತಿಸಿ, ಆಚರಿಸಿ, ಸಂಭ್ರಮಿಸುವ ಮಾಸ.

ಪ್ರತೀ ವರ್ಷದಂತೆ, 'ಒನ್ ಇಂಡಿಯಾ ಕನ್ನಡ', ಶ್ರಾವಣ, ಭಾದ್ರಪದ, ಅಶ್ವಯುಜ, ಕಾರ್ತಿಕ ಮಾಸಗಳಲ್ಲಿ ಬರುವ ಹಬ್ಬಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಿದೆ. ಇದರ ಪ್ರಿಂಟ್ ಔಟ್ ತೆಗೆದುಕೊಂಡು ಇಟ್ಟುಕೊಳ್ಳಿ ಅಥವಾ ಬುಕ್ ಮಾರ್ಕ್ ಮಾಡಿಕೊಳ್ಳಿ. ಹ್ಯಾಪ್ಪೀ ಫೆಸ್ಟಿವಲ್ಸ್..
| ಶಾಲಿವಾಹನ ಶಕ 1942 ವಿಕಾರಿ ನಾಮ ಸಂವತ್ಸರ, ದಕ್ಷಿಣಾಯಣ, ಶ್ರಾವಣ ಮಾಸ | |||
| ಕ್ರ. ಸಂಖ್ಯೆ | ದಿನಾಂಕ | ದಿನ | ಹಬ್ಬ |
|---|---|---|---|
| 1 | ಆಗಸ್ಟ್ 1 | ಗುರುವಾರ | ದೀವಿಗೆ ಅಮಾವಾಸ್ಯೆ, ಭೀಮನ ಅಮಾವಾಸ್ಯೆ |
| 2 | ಆಗಸ್ಟ್ 3, 10, 17, 24 | ಶನಿವಾರ | ಶ್ರಾವಣ ಶನಿವಾರ |
| 3 | ಆಗಸ್ಟ್ 5 | ಸೋಮವಾರ | ನಾಗರ ಪಂಚಮಿ, ಕಲ್ಕೀ ಜಯಂತಿ |
| 4 | ಆಗಸ್ಟ್ 6 | ಮಂಗಳವಾರ | ಮಂಗಲಗೌರೀ ವ್ರತ |
| 5 | ಆಗಸ್ಟ್ 9 | ಶುಕ್ರವಾರ | ವರಮಹಾಲಕ್ಷ್ಮೀ ವ್ರತ, ನಿರ್ಭಂದಿತ ರಜೆ |
| 6 | ಆಗಸ್ಟ್ 12 | ಸೋಮವಾರ | ಬಕ್ರೀದ್, ಈದ್-ಉಲ್-ಜುಹಾ, ಸರಕಾರೀ ರಜೆ |
| 7 | ಆಗಸ್ಟ್ 14 | ಬುಧವಾರ | ಚಾಂದ್ರ ಋಗೋಪಾಕರ್ಮ |
| 8 | ಆಗಸ್ಟ್ 15 | ಗುರುವಾರ | ಸ್ವಾತಂತ್ರ್ಯ ದಿನಾಚರಣೆ, ರಕ್ಷಾ ಬಂಧನ, ಯಜುರುಪಾಕರ್ಮ, ನೂಲ ಹುಣ್ಣಿಮೆ, ಸಾರ್ವತ್ರಿಕ ರಜೆ |
| 9 | ಆಗಸ್ಟ್ 17 | ಶನಿವಾರ | ಗುರು ರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ |
| 10 | ಆಗಸ್ಟ್ 23 | ಶುಕ್ರವಾರ | ಶ್ರೀಕೃಷ್ಣ ಜನ್ಮಾಷ್ಟಮಿ, ನಿರ್ಭಂದಿತ ರಜೆ |
| 11 | ಆಗಸ್ಟ್ 24 | ಶನಿವಾರ | ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ, ಶಾಲಿವಾಹನ ಶಕ 1942 ವಿಕಾರಿ ನಾಮ ಸಂವತ್ಸರ, ದಕ್ಷಿಣಾಯಣ, ಭಾದ್ರಪದ ಮಾಸ |
| 12 | ಸೆಪ್ಟಂಬರ್ 1 | ಭಾನುವಾರ | ಗೌರೀ ತೃತೀಯ, ಮೊಹರಂ ಪ್ರಾರಂಭ |
| 13 | ಸೆಪ್ಟಂಬರ್ 2 | ಸೋಮವಾರ | ಗಣೇಶ ಚತುರ್ಥೀ, ಸಾಮೋಪಾಕರ್ಮ, ಸರಕಾರೀ ರಜೆ |
| 14 | ಸೆಪ್ಟಂಬರ್ 3 | ಮಂಗಳವಾರ | ಋಷಿ ಪಂಚಮೀ |
| 15 | ಸೆಪ್ಟಂಬರ್ 5 | ಗುರುವಾರ | ಡಾ. ರಾಧಾಕೃಷ್ಣನ್ ಜನ್ಮದಿನ, ಶಿಕ್ಷಕರ ದಿನ |
| ಸೆಪ್ಟಂಬರ್ 8 | ಭಾನುವಾರ | ಸಂತ ಮೇರಿಯಮ್ಮ ಹಬ್ಬ, ನೇಟಿವಿಟಿ | |
| 17 | ಸೆಪ್ಟಂಬರ್ 10 | ಮಂಗಳವಾರ | ಮೊಹರಂ, ಸರಕಾರೀ ರಜೆ |
| 18 | ಸೆಪ್ಟಂಬರ್ 11 | ಮಂಗಳವಾರ | ಸೌರಋಗೋಪಾಕರ್ಮ, ತಿರು ಓಣಂ |
| 19 | ಸೆಪ್ಟಂಬರ್ 12 | ಗುರುವಾರ | ಅನಂತ ಚತುರ್ದಶೀ ವ್ರತ, ನೋಂಪು |
| 20 | ಸೆಪ್ಟಂಬರ್ 13 | ಶುಕ್ರವಾರ | ನಾರಾಯಣ ಗುರು ಜನ್ಮದಿನ |
| 21 | ಸೆಪ್ಟಂಬರ್ 17 | ಮಂಗಳವಾರ | ವಿಶ್ವಕರ್ಮ ಜಯಂತಿ |
| 22 | ಸೆಪ್ಟಂಬರ್ 28 | ಶನಿವಾರ | ಮಹಾಲಯ ಅಮಾವಾಸ್ಯೆ, ಸರ್ವಪಿತೃ ಅಮಾವಾಸ್ಯೆ, ನವರಾತ್ರಿ ಆರಂಭ, ಶಾಲಿವಾಹನ ಶಕ 1942 ವಿಕಾರಿ ನಾಮ ಸಂವತ್ಸರ, ದಕ್ಷಿಣಾಯಣ, ಅಶ್ವಯುಜ ಮಾಸ |
| 23 | ಅಕ್ಟೋಬರ್ 2 | ಬುಧವಾರ | ಗಾಂಧೀ ಜಯಂತಿ, ಲಲಿತ ಪಂಚಮಿ, ಸಾರ್ವತ್ರಿಕ ರಜೆ |
| 24 | ಅಕ್ಟೋಬರ್ 5 | ಶನಿವಾರ | ಶಾರದಾಪೂಜೆ |
| 25 | ಅಕ್ಟೋಬರ್ 6 | ಭಾನುವಾರ | ದುರ್ಗಾಷ್ಟಮಿ |
| 26 | ಅಕ್ಟೋಬರ್ 7 | ಸೋಮವಾರ | ಮಹಾನವಮಿ, ಆಯುಧಪೂಜೆ, ಸರಕಾರೀ ರಜೆ |
| 27 | ಅಕ್ಟೋಬರ್ 8 | ಮಂಗಳವಾರ | ವಿಜಯದಶಮಿ, ಮಧ್ವ ಜಯಂತಿ, ಸರಕಾರೀ ರಜೆ |
| 28 | ಅಕ್ಟೋಬರ್ 13 | ಭಾನುವಾರ | ವಾಲ್ಮೀಕಿ ಜಯಂತಿ |
| 29 | ಅಕ್ಟೋಬರ್ 27 | ಭಾನುವಾರ | ನರಕ ಚತುರ್ದಶೀ |
| 30 | ಅಕ್ಟೋಬರ್ 28 | ಸೋಮವಾರ | ದೀಪಾವಳಿ, ಸೋಮಾವತೀ ಅಮಾವಾಸ್ಯೆ |
| 31 | ಅಕ್ಟೋಬರ್ 29 | ಮಂಗಳವಾರ | ಬಲಿಪಾಡ್ಯಮಿ, ಸರಕಾರೀ ರಜೆ |
| 32 | ನವೆಂಬರ್ 1 | ಶುಕ್ರವಾರ | ಕರ್ನಾಟಕ ರಾಜ್ಯೋತ್ಸವ, ಸಾರ್ವತ್ರಿಕ ರಜೆ |
More From
-
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications