ಮುದ್ದುಕೃಷ್ಣನ ಲೀಲೆಯ ನೋಡಬನ್ನಿ ಉಡುಪಿಗೆ

ಉಂಡೆ, ಚಕ್ಕುಲಿ ಸಹಿತ ಬಗೆಬಗೆಯ ಸಿಹಿತಿಂಡಿಗಳನ್ನು ಉಡುಪಿ ಪರ್ಯಾಯ ಪೀಠದ ಮಠದಲ್ಲಿ ತಯಾರಾಗಿವೆ. ಮೊಸರು ಕುಡಿಕೆ ಉತ್ಸವ ಎಂದೇ ಖ್ಯಾತಿವೆತ್ತಿರುವ ದ್ವಾದಶಿಯ ವಿಟ್ಲಪಿಂಡಿಗೆ ಭರದ ಸಿದ್ಧತೆಗಳು ನಡೆದಿವೆ. ಅಷ್ಟಮಠದ ರಥಬೀದಿಯಲ್ಲಿ ನಡೆಯುವ ಮೊಸರು ಕುಡಿಕೆ ಉತ್ಸವಕ್ಕೆ ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ. ಮೊಸರು ಕುಡಿಕೆ ಒಡೆಯುವ ಕಲಿಗಳು ಬಹುಮಾನವಾಗಿ ನಗದು ಪಡೆಯುತ್ತಾರೆ.
ಮೊಸರು ಕುಡಿಕೆ ಉತ್ಸವದ ಮತ್ತೊಂದು ವಿಶೇಷವೆಂದರೆ ಹುಲಿವೇಷಗಳು. ನೂರಾರು ಹುಲಿವೇಷದ ತಂಡಗಳು ಉಡುಪಿಗೆ ಆಗಮಿಸಲಿವೆ. ತಾಸೆಯ ವಾದನಕ್ಕೆ ಹೆಜ್ಜೆಹಾಕಿ ಕುಣಿಯುವ ಹುಲಿಗಳ ಬಿಂಕವನ್ನು ನೋಡುವುದೇ ಸೊಗಸು. ಕುಣಿತದೊಂದಿಗೆ ಅವು ನಡೆಸುವ ವಿವಿಧ ಕಸರತ್ತುಗಳು ಚಿತ್ತಾಕರ್ಷಕವಾಗಿರುತ್ತವೆ. ಈ ಹುಲಿಗಳಿಗೆ ಪರ್ಯಾಯ ಪೀಠಾಧೀಶರು ನೋಟುಗಳ ಮಾಲೆ ಹಾಕಿ ಗೌರವಿಸುತ್ತಾರೆ.
ಉಡುಪಿಯಿಂದ ಹೊರಗೆ ಬಂದರೆ ಕರಾವಳಿ ಜಿಲ್ಲೆಗಳಲ್ಲಿ ಮೊಸರು ಕುಡಿಕೆ ಉತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಸಾರ್ವಜನಿಕ ಸಂಘ ಸಂಸ್ಥೆಗಳು ಮೊಸರು ಕುಡಿಕೆ ಉತ್ಸವವನ್ನು ತಮ್ಮ ಇತಿಮಿತಿಯಲ್ಲಿ ವೈಭವದಿಂದಲೇ ಆಚರಿಸುತ್ತವೆ. ಕೃಷ್ಣವೇಷ ಸ್ಪರ್ಧೆ ಕರಾವಳಿಯ ವಿಶೇಷ. ಮುದ್ದು ಕೃಷ್ಣ, ಬೆಣ್ಣೆ ಕೃಷ್ಣ, ಬಾಲಕೃಷ್ಣ ಹೀಗೆ ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ ವಿಭಾಗಿಸಿ ಸ್ಪರ್ಧೆಗಳಿರುತ್ತವೆ. ಹಾಲುಗೆನ್ನೆಯ ಹಸುಗೂಸುಗಳೂ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ಪುಟಾಣಿಗಳಿಗೆ ಕೃಷ್ಣನ ವೇಷ ಹಾಕಿ ಹೆತ್ತವರು ಸಂತಸಪಡುತ್ತಾರೆ.
ಎತ್ತರವಾದ ಅಡಕೆ ಮರದ ತುದಿಯಲ್ಲಿ ಮೊಸರು ಕುಡಿಕೆ ಕಟ್ಟಿ ಅದರೊಳಗೆ ಹಣ ಹಾಕುತ್ತಾರೆ, ಸಾಹಸಿಗಳು ಮರವನ್ನು ಏರಿ ಕುಡಿಕೆ ಒಡೆದು ಹಣ ತಮ್ಮದಾಗಿಸಿಕೊಳ್ಳಬೇಕು. ಹೀಗೆ ಗೋಪಿಕೃಷ್ಣನ ಆಟ, ಲೀಲೆಗಳನ್ನು ಮರುಮನನ ಮಾಡುವುದಕ್ಕೆ ಕೃಷ್ಣಾಷ್ಟಮಿ ನೆಪ. ಆ ಮೂಲಕ ಈ ಪೀಳಿಗೆಗೆ ಕೃಷ್ಣನ ಲೀಲೆಗಳನ್ನು ಪರಿಚಯಿಸುವ ಅವಕಾಶ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications