ಸುಗ್ಗಿ ಹಿಗ್ಗಿನ ಸಂಕೇತ ಮಕರ ಸಂಕ್ರಾಂತಿ

ಮಕರ ಸಂಕ್ರಮಣದ ಇನ್ನೊಂದು ಮಹತ್ವವೇನೆಂದರೆ, ಇಚ್ಛಾಮರಣದ ವರ ಪಡೆದಿದ್ದ ಭೀಷ್ಮಾಚಾರ್ಯರು, ಕುರುಕ್ಷೇತ್ರದಲ್ಲಿ ಕೌರವ, ಪಾಂಡವರ ಯುದ್ಧಾನಂತರ, ಉತ್ತರಾಯಣದಲ್ಲಿ ಪ್ರಾಣ ಬಿಟ್ಟರೆ ಸ್ವರ್ಗದ ಬಾಗಿಲು ತೆರೆದಿರುತ್ತದೆ, ಸದ್ಗತಿ ದೊರೆಯುತ್ತದೆ ಎಂಬ ನಂಬಿಕೆಯಿಂದ ಶರಶಯ್ಯೆಯಲ್ಲೇ ಮಲಗಿದ್ದರು. ಉತ್ತರಾಯಣ ಆರಂಭವಾದ ಮೇಲೆ ಪ್ರಾಣತ್ಯಾಗ ಮಾಡಿದರು. ಪಿತೃಗಳ ಮುಕ್ತಿಗಾಗಿ ಮಹಾರಾಜ ಭಗೀರಥ ತಪಸ್ಸು ಮಾಡಿ ಗಂಗೆಯನು ಭುವಿಗೆ ಕರೆದು ತಂದ, ಪಿತೃಗಳಿಗೆ ಸಂಕ್ರಮಣದಂದು ಗಂಗಾಜಲ ತರ್ಪಣ ನೀಡಿದನೆಂದು ಗಂಗೆಯಲಿ ಸ್ನಾನ ಮಾಡಿದರೆ ಪುಣ್ಯವೆಂದು ಗಂಗಾತೀರ ನಿವಾಸಿಗಳ ಅಚಲ ನಂಬಿಕೆ.
ದಕ್ಷಿಣಾಯಣದಲಿ ಸೂರ್ಯನ ಪ್ರಖರತೆ, ಶಾಖ ಹಾಗೂ ಹಗಲು ಕಡಿಮೆ, ಚಳಿಯ, ಶೀತ ವಾತಾವರಣ, ರಾತ್ರಿ ಹೆಚ್ಚಾಗಿರುತ್ತದೆ. ಜೀವಲೋಕ ಕುಗ್ಗುವುದು. ಉತ್ತರಾಯಣದಲಿ ಹಗಲು ಹೆಚ್ಚು, ಬೆಚ್ಚನೆಯ ವಾತಾವರಣ, ಸೂರ್ಯನ ಪ್ರಖರತೆ, ಶಾಖ ಹೆಚ್ಚುತ್ತದೆ. ಪ್ರಕೃತಿಯಲಿ ಹೆಚ್ಚು ಲವಲವಿಕೆ ಮೂಡುತ್ತದೆ. ಇದು ಹಿಗ್ಗುವುದರ ಸಂಕೇತ.
ಹಣ್ಣೆಲೆಗಳು ಉದುರಿ, ಮದುಮಗಳಂತೆ ಹಸಿರು ಸೀರೆಯನುಟ್ಟು ಉತ್ತರಾಯಣ ಸ್ವಾಗತಕೆ ಸಜ್ಜಾದ ವನದೇವಿ, ವರುಷದ ದುಡಿಮೆಯ ಫಲದ ಭಾಗ್ಯವನು ಮನೆ ತುಂಬಿಸಿಕೊಂಡು ಸಂತೃಪ್ತಿಯ ನಗೆ ಸೂಸುವ ಕೃಷಿಕ. ಸಂಕ್ರಾಂತಿ ಇಡೀ ಪ್ರಕೃತಿ ಮತ್ತು ಮನುಷ್ಯನ ಬದುಕಿನಲಿ ಮೂಡುವ ಹೊಸ ಪರ್ವಕಾಲ. ಸಂಕ್ರಾಂತಿ ಹೊಸವರುಷದ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿ, ವಸಂತದ ಆಗಮನದ ನಿರೀಕ್ಷೆಯ, ಭರವಸೆಯ, ಹುರುಪನ್ನು ತರುವ ಹಬ್ಬ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications