ಅಮ್ಮನ ಚಿತ್ರಗಳು...
ಅವಳು-
ದುಡಿದುಡಿದು ಸತ್ತವಳು,
ದುಡಿದು ಬೇಸತ್ತವಳು,
ಬದುಕ ಹೆಗ್ಗಾಲಿಯ ಕೆಳಗೆ
ನುಚ್ಚು ನೂರಾದವಳು
ಅವಳಿಲ್ಲ ಈಗ-
ಹೀಗನ್ನುವುದು ದಾಷ್ಟೀಕ
ಇದ್ದೇ ಇದ್ದಾಳೆ ಮನದಾಳದೊಳಗೆ-
ನಾನೊಂದು ಕಣ್ಣೀರಿಡುವಾಗ
ಮೈದಡವಿ ಸಂತೈಸುತ್ತಾಳೆ,
ನನ್ನ ಸುಖ, ಸಾಧನೆಗಳಿಗೆ
ತಾನೂ ಸಂಭ್ರಮಿಸಿ ನಲಿಯುತ್ತಾಳೆ,
ತೀರದ ಕೊರಗಾಗಿ ಕಾಡುತ್ತಾಳೆ,
ಆರದ ಗಾಯವಾಗಿ ಉರಿಯುತ್ತಾಳೆ,
ಭಾರದ ನೆನಪಾಗಿ ಮೀಟುತ್ತಾಳೆ
ಇಲ್ಲಿ... ಅಮೆರಿಕಾದ ಅಡಿಗೆ ಮನೆಯಲ್ಲಿ
ತಿಳಿಸಾರು ಕುದಿವಾಗ
ಕರಿಬೇವ ಘಮದಂತೆ ಹಿತವಾಗಿ ಸುಳಿಯುತ್ತಾಳೆ
ನನ್ನ ಎಳೆ ಕಂದಗಳ ಹಾಲು ನಗೆಯಲ್ಲಿ ಪಕ್ಕನೆ
ಮಿಂಚಿ ಮರೆಯಾಗುತ್ತಾಳೆ...
ದೂರದಾರಿಯಲ್ಲಿ ಏಕಾಂಗಿ ನಡೆವಾಗ
ಮಂದ ದನಿಯಲ್ಲಿ ನನ್ನ ಹೆಸರು
ಕೂಗಿ ಕರೆಯುತ್ತಾಳೆ
ಅವಳು.. ಮಹಾದೇವಿಯಲ್ಲ,
ಮಹಾನುಭಾವಳಲ್ಲ,
ಎಲ್ಲೆಲ್ಲೂ ಕಾಣಸಿಗುವ ಸರ್ವೆ ಸಾಧಾರಣ
ಪ್ರೇಮಮಯಿ ಹೆಂಗಸು,
ಅವಳು.. ಅವಳೇ... ನನ್ನಮ್ಮ...
ಆಗಿದ್ದಿರಲೂ ಬಹುದು ಅವಳು ನಿಮ್ಮಮ್ಮ.
ಕೆ. ತ್ರಿವೇಣಿ ಶ್ರೀನಿವಾಸರಾವ್, ನ್ಯೂಜೆರ್ಸಿ
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications