Krishna Janmashtami 2024: ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಉಪವಾಸ ಮಾಡುವವರು ಇದನ್ನು ಪಾಲಿಸಿ..!
ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಕೂಡ ಒಂದು. ಈ ದಿನ ಶ್ರೀಕೃಷ್ಣನ ಜನ್ಮ ದಿನವೆಂದು ಆಚರಿಸಲಾಗುತ್ತದೆ. ಶ್ರೀಕೃಷ್ಣನು ವಿಷ್ಣುವಿನ 9ನೇ ಅವತಾರವಾಗಿದ್ದಾನೆ. ಶ್ರೀಕೃಷ್ಣನು ಅಧರ್ಮವನ್ನು ನಾಶಪಡಿಸಲು ಮತ್ತು ಧರ್ಮವನ್ನು ಸ್ಥಾಪಿಸಲು ಅವತರಿಸಿದನೆಂದು ಹೇಳಲಾಗುತ್ತದೆ.
ಕೃಷ್ಣ ಜಯಂತಿ 2024 ಯಾವಾಗ?
ಈ ವರ್ಷ ಕೃಷ್ಣ ಜಯಂತಿ ಆಗಸ್ಟ್ 26 ಸೋಮವಾರದಂದು ಬರುತ್ತದೆ. ಅಷ್ಟಮಿ ತಿಥಿಯು ಅಂದು ಬೆಳಿಗ್ಗೆ 09.13 ಕ್ಕೆ ಪ್ರಾರಂಭವಾಗಿ ಆಗಸ್ಟ್ 27 ರಂದು ಬೆಳಿಗ್ಗೆ 07.30 ಕ್ಕೆ ಕೊನೆಗೊಳ್ಳುತ್ತದೆ. ರೋಹಿಣಿ ನಕ್ಷತ್ರ ಆಗಸ್ಟ್ 26 ರಂದು ರಾತ್ರಿ 09.41 ಕ್ಕೆ ಕಾಣಿಸಲು ಪ್ರಾರಂಭವಾಗುತ್ತದೆ.

ಆಗಸ್ಟ್ 27 ರಂದು ರಾತ್ರಿ 08.54 ರವರೆಗೆ ರೋಹಿಣಿ ನಕ್ಷತ್ರ ಕಾಣಿಸುತ್ತದೆ. ಅಷ್ಟಮಿ ತಿಥಿ ಮತ್ತು ರೋಹಿಣಿ ನಕ್ಷತ್ರ ಒಟ್ಟಿಗೆ ಬರುವ ರಾತ್ರಿಯನ್ನು ಶ್ರೀಕೃಷ್ಣನ ಅವತಾರದ ದಿನವೆಂದು ಪರಿಗಣಿಸಲಾಗಿರುವುದರಿಂದ ಆಗಸ್ಟ್ 26 ರ ಸಂಜೆ ಕೃಷ್ಣ ಜಯಂತಿಯ ಪೂಜೆಯನ್ನು ಮಾಡಬೇಕು. ಅದಕ್ಕಾಗಿ ಉಪವಾಸ ಮಾಡುವವರು ಕೆಲ ವಿಷಯಗಳನ್ನು ಪಾಲಿಸಲೇಬೇಕು. ಅವು ಯಾವುವು ಎಂದು ತಿಳಿಯೋಣ.
ಕೃಷ್ಣ ಜನ್ಮಾಷ್ಟಮಿಯಂದು ಉಪವಾಸ ಮಾಡುವವರು ಹಿಂದಿನ ದಿನ ಆರೋಗ್ಯಕರ ಆಹಾರ ಸೇವಿಸುವುದು ಉತ್ತಮ. ಹಬ್ಬದ ಒಂದು ದಿನ ಮೊದಲು ನಿಮ್ಮ ಆಹಾರದಲ್ಲಿ ಸರಿಯಾದ ಪೋಷಕಾಂಶಗಳನ್ನು ಸೇರಿಸುವುದು ತುಂಬಾ ಮುಖ್ಯ. ಇದು ನಿಮ್ಮನ್ನು ಹೈಡ್ರೀಕರಿಸಿ ಪೋಷಕಾಂಶಗಳಿಂದ ಬಲಪಡಿಸುತ್ತದೆ. ಹೀಗೆ ಮಾಡುವುದರಿಂದ ನಿಮಗೆ ತಲೆಸುತ್ತು ಮತ್ತು ದಣಿವು ಉಂಟಾಗುವುದಿಲ್ಲ. ಜೊತೆಗೆ ಆರೋಗ್ಯಕರ ಮತ್ತು ಉಲ್ಲಾಸದಿಂದ ನೀವು ಇರುತ್ತೀರಿ.
ಅದರ ನಂತರ ನೀವು ಉಪವಾಸ ಮಾಡುವಾಗ ಕೃಷ್ಣ ಜಯಂತಿಯಂದು ಹೆಚ್ಚು ನೀರು ಕುಡಿಯಿರಿ.. ದಿನವಿಡೀ ದೇಹ ಹೈಡ್ರೀಕರಿಸುವುದು ಮುಖ್ಯ. ಘನ ಆಹಾರವನ್ನು ಸೇವಿಸದಿದ್ದರೂ ಪರವಾಗಿಲ್ಲ. ಆದರೆ ಅದರ ಬದಲಿಗೆ ಸಾಕಷ್ಟು ನೀರು ಕುಡಿಯುವುದು ಅವಶ್ಯಕ. ಇದು ನಿಮ್ಮನ್ನು ಸುಸ್ತಾಗದಂತೆ ಕಾಪಾಡುತ್ತದೆ. ಜೊತೆಗೆ ಇದು ಹೊಟ್ಟೆ ಉಬ್ಬುವಿಕೆ ಮತ್ತು ಮಲಬದ್ಧತೆಯಂತಹ ಅಸ್ವಸ್ಥತೆಗಳನ್ನು ತಡೆಯುತ್ತದೆ.

ಇದು ನಿಮ್ಮ ದೇಹ ಮತ್ತು ಮನಸ್ಸನ್ನು ತಂಪಾಗಿ ಮತ್ತು ಆರೋಗ್ಯವಾಗಿಡುತ್ತದೆ. ಅನೇಕ ಸಿದ್ಧಾಂತಗಳ ಪ್ರಕಾರ, ಈರುಳ್ಳಿ ಮತ್ತು ಬೆಳ್ಳುಳ್ಳಿ ದೇಹದಲ್ಲಿ ಶಾಖವನ್ನು ಉತ್ಪಾದಿಸುತ್ತದೆ. ಹಾಗಾಗಿ ಈ ಆಹಾರ ಪದಾರ್ಥಗಳನ್ನು ಉಪವಾಸದ ಹಿಂದಿನ ದಿನ ಮತ್ತು ಮರುದಿನ ತ್ಯಜಿಸುವುದು ಉತ್ತಮ.
ಮಸಾಲೆಯುಕ್ತ ಆಹಾರವನ್ನು ಸಹ ತಪ್ಪಿಸಿ.. ಪ್ರತಿಯೊಂದು ಮಸಾಲೆಯು ನಮ್ಮ ದೇಹದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುವ ಪೋಷಕಾಂಶಗಳನ್ನು ಹೊಂದಿದೆ. ಕೆಲವು ಮಸಾಲೆಗಳು ದೇಹದಲ್ಲಿ ಶಾಖವನ್ನು ಉಂಟುಮಾಡಿದರೆ, ಕೆಲವು ನಮ್ಮನ್ನು ತಂಪಾಗಿರಿಸುತ್ತದೆ.
ನಿಮ್ಮ ಪಾನಿಯಕ್ಕೆ ಕರಿಮೆಣಸು ಮತ್ತು ಜೀರಿಗೆಯಂತಹ ಕೂಲಿಂಗ್ ಮಸಾಲೆಗಳನ್ನು ಸೇರಿಸಬಹುದು. ಇದು ಹೊಟ್ಟೆ ಉಬ್ಬುವುದು ಮತ್ತು ಅಸ್ವಸ್ಥತೆಯ ಅಪಾಯಗಳನ್ನು ತಡೆಯುತ್ತದೆ. ಕೃಷ್ಣನ ಜನ್ಮದಿನವನ್ನು ಆಚರಿಸಲು ಭಕ್ತರು ಮಧ್ಯರಾತ್ರಿಯವರೆಗೆ ಜಾಗರಣೆ ಮಾಡುತ್ತಾರೆ. ಈ ವೇಳೆ ಲಘು ಆಹಾರವನ್ನು ಸೇವಿಸುವುದರಿಂದ ಹೆಚ್ಚು ಸಮಯ ಎಚ್ಚರವಾಗಿರಲು ಸಹಾಯ ಮಾಡುತ್ತದೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications