ವಿಶ್ವ ಪಾರ್ಶ್ವವಾಯು ದಿನಾಚರಣೆ ನಿಮಿತ್ತ ವಿಶೇಷ ಲೇಖನ
ಮಾನವನ ಮೆದುಳಿನ ಅಂಗ ರಚನೆ, ಕಾರ್ಯ ತತ್ಪರತೆ ಇಂದಿಗೂ, ಎಂದೆಂದಿಗೂ, ಅತ್ಯಂತ ನಿಗೂಢ ಎಂದರೆ, ಉತ್ಪ್ರೇಕ್ಷೆ ಆಗಲಿಕ್ಕಿಲ್ಲ. ಈ ಮಿದುಳಿಗೆ ಆಘಾತ ಆಗಿ ಲಕ್ವಾ ಅಥವಾ ಪಾರ್ಶ್ವವಾಯು ತರಬಲ್ಲ ರೋಗಗಳೆಂದರೆ, ಸಕ್ಕರೆ ರೋಗ ಹಾಗೂ ಎಲ್ಲೆ ಮೀರಿದ ರಕ್ತದ ಒತ್ತಡ.
ಪ್ರತಿ ವರುಷದ ಅಕ್ಟೋಬರ್ 29ರಂದು ವಿಶ್ವ ಪಾರ್ಶ್ವವಾಯು (ಸ್ಟ್ರೋಕ್) ದಿನಾಚರಣೆ ಎಂದು ವಿಶ್ವದ್ಯಾಂತ ಆಚರಿಸಲಾಗುತ್ತದೆ. ಈ ದಿವಸ ಸ್ಟ್ರೋಕ್ ಬಗ್ಗೆ ತಿಳಿವಳಿಕೆ, ಅರಿವು, ಜಾಗೃತೆ ಮೂಡಿಸುವುದು ವೈದ್ಯರ ಹಾಗೂ ಮಾಧ್ಯಮಗಳ ಆದ್ಯ ಕರ್ತವ್ಯ. ಈ ವರ್ಷದ ಆಚರಣೆಯ ಘೋಷಣೆ ಹೀಗಿದೆ, "ನಾನು ಕಾಳಜಿ ಮಾಡುತ್ತೇನೆ. ಆದ್ದರಿಂದ ಈ ಆಚರಣೆ ಬರೀ ಅಕ್ಟೋಬರ್ 29ಕ್ಕೆ ಮಾತ್ರ ಸೀಮಿತವಲ್ಲ, ಬದಲಾಗಿ ಈ ಇಡೀ ಮುಂದಿನ ವಾರ ಈ ಆಚರಣೆ ಮಾಡಲಾಗುವುದು."
ಕುಟುಂಬದ ಮುಖ್ಯಸ್ಥನಾದವನು ತನ್ನ ಹೆಂಡತಿ ಹಾಗೂ ಮಕ್ಕಳ ಬಗ್ಗೆ, ಸಂಬಂಧಿಕರ ಬಗ್ಗೆ ಹಾಗೂ ಸ್ನೇಹಿತರ ಬಗ್ಗೆ ಕಾಳಜಿ ಮಾಡುವದಾದರೆ, ತನ್ನ ಮಿದುಳನ್ನು ಸಮತೋಲನದಲ್ಲಿ ಕಾಯ್ದುಕೊಳ್ಳಬೇಕೆಂದೇ ಇದರ ತಾತ್ಪರ್ಯ. ನಮ್ಮ ದೇಹದ ಅತ್ಯಂತ ಸುಸಜ್ಜಿತ ಕಂಪ್ಯೂಟರ್ ಅಂದರೆ ನಮ್ಮ ಮಿದುಳು. ಈ ಮಿದುಳಿನಿಂದಲೇ ಇತರ ಅಂಗಾಂಗಳು ಹಾಗೂ ಅಯವಯಗಳು ಕಾರ್ಯ ನಿರ್ವಹಿಸುವುದು. [ಪುರುಷರ ಮೆದುಳೇ ಬೇರೆ ಮಹಿಳೆಯ ಮೆದುಳು ಬೇರೆ]

ಈ ಮಿದುಳಿಗೆ ಆಘಾತ ಅಥವಾ ಸ್ಟ್ರೋಕ್ ಎರಗಿದಾಗ ರೋಗಿಯು ಹಠಾತ್ ಸಾವನ್ನೇ ಅಪ್ಪಿಯಾನು. ಸ್ವಲ್ಪ ಅವನ ಅದೃಷ್ಟ ಚೆನ್ನಾಗಿ ಇದ್ದರೆ ಮರಣಶೈಯೆಯಿಂದ ಪಾರಾಗಿ, ಬರೀ ಕೈಕಾಲುಗಳು ಊನ, ಲಖವಾ, ಬಾಯಿ ಸೊಟ್ಟ ಆಗುವುದು ಇವೇ ಮೊದಲಾದ ಲಕ್ಷಣಗಳಿಂದ ಬಳಲಿಯಾನು.
ಈ ಮಿದುಳಿನ ಸ್ಟ್ರೋಕ್ಗೆ ಮುಖ್ಯ ಕಾರಣಗಳೆಂದರೆ 1) ಸಕ್ಕರೆ ರೋಗ 2) ಬ್ಲಡ್ ಪ್ರೆಶರ್ 3) ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ 4) ಮದ್ಯಪಾನ ಹಾಗೂ 5) ಸೀಗರೇಟು ಸೇದುವಿಕೆ. ಈ ಎಲ್ಲಾ ಕಾರಣಗಳಿಂದ ಅಥವಾ ಮೇಲೆ ತಿಳಿಸಿದ ಒಂದೆರಡು ಕಾರಣಗಳಿಂದ ಕೂಡಾ ಮಿದುಳಿನ ಸ್ಟ್ರೋಕ್ ಹಠಾತ್ತಾಗಿ ಕಾಣಿಸಿಕೊಳ್ಳುವುದು. ದೈಹಿಕ ಸಮಸ್ಯೆಗಳಾದ ಸಕ್ಕರೆ ರೋಗ, ಬ್ಲಡ್ ಪ್ರೆಶರ್ ಹಾಗೂ ಮದ್ಯಪಾನ ಅವಲಂಬನೆಗೆ ಮುಖ್ಯ ಕಾರಣವೇನೆಂದರೆ, ಮಾನವನ ನಿಯಂತ್ರಣದಲ್ಲಿರದ ಒತ್ತಡ. [ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!]
ಮಿದುಳಿನ ಸ್ಟ್ರೋಕ್ ಲಕ್ಷಣಗಳು
* ಒಂದು ಕ್ಕೆ ಅಥವಾ ಕಾಲಿನಲ್ಲಿ ನಿಶ್ಯಕ್ತಿ, ನಿತ್ರಾಣ, ಕೈಕಾಲು ಅಲ್ಲಾಡಿಸಲು ಸಾಧ್ಯವಾಗದಿರುವಿಕೆ.
* ತೀವ್ರವಾಗಿ ಒಂದೇ ಕೈಯಲ್ಲಿ ಅಥವಾ ಕಾಲಲ್ಲಿ ಕಾಣಿಸಿಕೊಳ್ಳುವ ಮರಗಟ್ಟುವಿಕೆ.
* ಚಿತ್ರವಿಚಿತ್ರವಾದ ವರ್ತನೆ.
* ಹಠಾತ್ತನೆ ಕಾಣಿಸಿಕೊಳ್ಳುವ ದೃಷ್ಟಿದೋಷ ಅಥವಾ ಎರಡೆರಡು ಕಾಣಿಸುವಿಕೆ. ದೇಹದ ಮೇಲೆ ಬ್ಯಾಲನ್ಸ್ ಅಥವಾ ನಿಯಂತ್ರಣ ತಪ್ಪುವುದು. ತೀವ್ರ ತೆರನಾದ ತಲೆಶೂಲೆ, ಹಲವು ಬಾರಿ ವಾಂತಿ.
ಹಲವು ಜನರಲ್ಲಿ ಈ ಮೇಲೆ ಕಾಣಿಸಿದ ಲಕ್ಷಣಗಳು ಸ್ವಲ್ಪ ಸಮಯದವರೆಗೆ ಮಾತ್ರ ಕಂಡು ಬಂದು, ನಂತರ ಹಠಾತ್ತನೆ ಮಾಯವಾಗಬಲ್ಲವು. ಇದಕ್ಕೆ ತಾತ್ಪೂರ್ತಿಕ ರಕ್ತದ ಕೊರತೆ ಅಥವಾ ಟ್ರಾನ್ಸಿಯಂಟ್ ಇಶ್ಕೀಮೀಕ್ ಅಟ್ಯಾಕ್ ಎಂದು ಸಂಬೋಧಿಸುವರು. ಇದಕ್ಕೆ ಅಲ್ಪ ಪ್ರಮಾಣದ ಸ್ಟ್ರೋಕ್ ಎಂದೂ ಕರೆಯುವರು.
ಇದು ಒಂದು ತರಹದ ಎಚ್ಚರಕೆಯ ಘಂಟೆ ಇದ್ದಂತೆ. ಇನ್ನು ನೀನು ಜಾಗರೂಕನಾಗಿರು, ನಿನ್ನ ಸಕ್ಕರೆ ಪ್ರಮಾಣ, ರಕ್ತದ ಒತ್ತಡ, ಮನಸ್ಸಿನ ಒತ್ತಡವನ್ನು ನಿಯಂತ್ರಣದಲ್ಲಿರಿಸಿಕೋ ಎಂದು ಡಂಗುರವನ್ನು ಸಾರಿದಂತೆ!
ಈ ವಿಶ್ವ ಸ್ಟ್ರೋಕ್ ದಿನಾಚರಣೆಯಂದು, ಎಲ್ಲರೂ ಜಾಗೃತೆಯಿಂದ ತಮ್ಮ ಶಾರೀರಿಕ ಆರೋಗ್ಯ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದೇ ಈ ಲೇಖನದ ಮೂಲ ಉದ್ದೇಶ. ಇಂದೇ ಮದ್ಯ, ಸೀಗರೇಟು, ಗುಟಕಾ ವರ್ಜಿಸಿರಿ, ಪ್ರತಿನಿತ್ಯ ಒಂದು ಘಂಟೆ ರಭಸವಾದ ಶಾರೀರಿಕ ವಾಯಾಮದಲ್ಲಿ ತೊಡಗಿಸಿಕೊಳ್ಳಿರಿ. ಚಿಂತೆಯಿಂದ ದೂರ ಇರಿ. ವಾಸ್ತವಿಕತೆಯನ್ನು ಧೈರ್ಯದಿಂದ ಎದುರಿಸಿರಿ.
ಬ್ಲಡ್ ಪ್ರೆಶರ್, ಡಯಾಬಿಟಿಸ್ ಎರಗದಂತೆ ಎಚ್ಚರವಹಿಸಿರಿ. ಹೆಚ್ಚು ಹೆಚ್ಚು ತರಕಾರಿ ಹಾಗೂ ಹಣ್ಣುಗಳನ್ನು ಭುಂಜಿಸಿರಿ. ಮಾಂಸಹಾರಿ ಆಹಾರಕ್ಕೆ ತಿಲಾಂಜಲಿ ಇಡಿರಿ. ಆವಾಗ ಆಗದಿರುವುದು ನಿಮ್ಮ ಮಿದುಳು ಹೋಳು ಹೋಳು!
-
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications