ತಾಯಿ ಪ್ರೀತಿ : ಮನುಜನಿಗಿಂತ ಪ್ರಾಣಿಗಳೇ ಗುಣದಲಿ ಮೇಲು!
ಕೆಲವರಿಗೆ ಈ ಲೇಖನದ ಶೀರ್ಷಿಕೆ ನೋಡಿಯೇ ಸಿಟ್ಟು ಬಂದಿರುತ್ತೆ. 'ತಾಯಿ' ಎಂಬ ಶಬ್ಧ ಕೇಳಿದೊಡನೆ ಅಥವಾ ಆ ಪದ ಕಣ್ಣಿಗೆ ಬಿದ್ದೊಡನೆ ನಮ್ಮಲ್ಲಿನ ಭಾವುಕತೆ ಜಾಗೃತ ಆಗುವುದೆ ಇದಕ್ಕೆ ಕಾರಣ. ಆದರೆ ಕೆಲವೊಮ್ಮೆ ಆ ಭಾವುಕತೆಯನ್ನು ಮೀರಿ ವಾಸ್ತವವನ್ನು ಪರಿಗಣಿಸಬೇಕಾಗುತ್ತದೆ.
ತಾಯಿಯ ಋಣ ತೀರಿಸಲು ಸಾದ್ಯವಿಲ್ಲ. ಆಕೆ ಒಂಭತ್ತು ತಿಂಗಳು ನಮ್ಮನ್ನು ಹೊತ್ತಿದ್ದಾಳೆ, ನಮಗೆ ಜನ್ಮ ನೀಡಿದ್ದಾಳೆ; ಇವ್ಯಾವುದನ್ನು ತೆಗೆದು ಹಾಕುವ ಹಾಗಿಲ್ಲ. ತಾಯಿ ಖಂಡಿತಾ ಇವೆಲ್ಲ ಮಾಡಿರುತ್ತಾಳೆ. ಆದರೆ ಜನ್ಮ ನೀಡಿ ಕೆಲವು ತಿಂಗಳು ಎದೆ ಹಾಲು ಕುಡಿಸಿಬಿಟ್ಟರೆ ತಾಯಿಯ ಕೆಲಸ ಮುಗಿಯಿತೆ?
ಎಷ್ಟೋ ಮನೆಗಳಲ್ಲಿ ತಾಯಿ ಮಾಡಬೇಕಿರುವ ಕೆಲಸವನ್ನು ಮನೆ ಕೆಲಸದವಳು ಮಾಡುತ್ತಿರುತ್ತಾಳೆ. ತಾಯಿಗಿಂತ ಹೆಚ್ಚಾಗಿ ಮಗು ಮನೆ ಕೆಲಸದ ಹೆಂಗಸನ್ನು ಹಚ್ಚಿಕೊಂಡಿರುತ್ತದೆ. ಅದು ಯಾವ ಮಟ್ಟಕ್ಕೆ ಎಂದರೆ, ಆ ಮಗು ತಾಯಿಯನ್ನು ಬೇಕಾದರೂ ಬಿಟ್ಟಿರುತ್ತದೆ. ಆದರೆ ಕೆಲಸದ ಹೆಂಗಸನ್ನು ಬಿಟ್ಟು ಮಗು ಇರಲ್ಲ!

ಇದೇ ರೀತಿ, ಎಷ್ಟೋ ಮನೆಗಳಲ್ಲಿ ಮಕ್ಕಳನ್ನು ಶಾಲೆಗೆ ಅಟ್ಟಿ, ಕೆಲಸಕ್ಕೆ ಹೋಗುವ ಪೋಷಕರು, ಮಕ್ಕಳು ಮನೆಗೆ ಬಂದ ಮೇಲೆ ನೋಡಿಕೊಳ್ಳಲು ಅಜ್ಜ-ಅಜ್ಜಿಯರನ್ನು ಇಟ್ಟಿರುತ್ತಾರೆ. ಕಷ್ಟವೋ ಸುಖವೋ ಅಜ್ಜಅಜ್ಜಿಯರು ಮೊಮ್ಮಕ್ಕಳನ್ನು ನೋಡಿಕೊಂಡಿರುತ್ತಾರೆ.
ಕೆಲವು ಮನೆಗಳಲ್ಲಿ ಮಕ್ಕಳನ್ನು ಬೋರ್ಡಿಂಗ್ ಸ್ಕೂಲಿಗೆ ಸೇರಿಸುತ್ತಾರೆ. ಆ ಮಗು ತಂದೆ-ತಾಯಿಯ ಪ್ರೀತಿಯಿಂದ ವಂಚಿತವಾಗುತ್ತದೆ. ಇವೆಲ್ಲವನ್ನು ಹೇಗಾದರೂ ಸಹಿಸಿಕೊಳ್ಳಬಹುದು. ಬದಲಾದ ಕಾಲಮಾನದ ಅನಿವಾರ್ಯತೆ ಎಂದು ಸಮರ್ತಿಸಿಕೊಳ್ಳಬಹುದು.
ಆದರೆ ಆಗಾಗ ದಿನ ಪತ್ರಿಕೆಗಳಲ್ಲಿ ಟಿವಿಗಳಲ್ಲಿ 'ಅಕ್ರಮ ಸಂಬಂಧ ಬಯಲಾಗಬಾರದೆಂದು ತನ್ನ ಮಗನನ್ನೇ ಕೊಂದ ತಾಯಿ' ಎಂಬ ಸುದ್ದಿಗಳು ಬರುತ್ತಲ್ಲ, ಅದಕ್ಕೆ ಏನು ಹೇಳುವುದು? ಕೆಟ್ಟ ಮಕ್ಕಳಿರುತ್ತಾರೆ, ಆದರೆ ಕೆಟ್ಟ ತಾಯಿ ಇರಲು ಸಾದ್ಯವೇ ಇಲ್ಲ ಎನ್ನುವ ಪರಿಕಲ್ಪನೆಯಿಂದ ನಾವು ಎಷ್ಟು ದೂರ ಬಂದಿದ್ದೀವಿ ಅನಿಸೋಲ್ವಾ?

ಇದ್ದಕ್ಕೆ ನಾನು ಹೇಳಿದ್ದು 'ತಾಯಿ' ಎನ್ನುವ ಪದಕ್ಕೆ ಮನುಷ್ಯರಿಗಿಂತ ಜಾಸ್ತಿ ಪ್ರಾಣಿಗಳೆ ಅರ್ಥ ತುಂಬುತ್ತವೆ ಎಂದು. ಉದಾಹರಣೆಯಾಗಿ ಒಂದು ನಾಯಿಯನ್ನೇ ತೆಗೆದುಕ್ಕೊಳ್ಳಿ, ಅದು ತನ್ನ ಮರಿಗಳನ್ನು ಎಷ್ಟು ಜೋಪಾನ ಮಾಡುತ್ತೆ. ಮರಿಗಳು ದೊಡ್ಡದಾಗುವ ತನಕ ಬೇರೆ ಯಾರಿಂದಲೂ ಅದನ್ನು ಮುಟ್ಟಿಸಲ್ಲ. ತನ್ನ ಪ್ರಾಣವನ್ನು ಪಣಕ್ಕಿಟ್ಟು ತನ್ನ ಮರಿಗಳನ್ನು ಕಾಪಾಡಿದ ಉದಾಹರಣೆಗಳು ಪ್ರಾಣಿಗಳ ಪ್ರಪಂಚದಲ್ಲಿ ಸಾಕಷ್ಟು ಸಿಗುತ್ತದೆ. ಆದರೆ ಅಂಥ ಉದಾಹರಣೆಗಳು ಮಾನವ ಪ್ರಪಂಚದಲ್ಲಿ ಕಮ್ಮಿ!
ಈಗ ನಾನು ನನ್ನ ಮಗುನ ಚೆನ್ನಾಗಿ ನೋಡಿಕೊಂಡರೆ, ಮುಂದೆ ಅದು ನನ್ನ ಚೆನ್ನಾಗಿ ನೋಡಿಕೊಳ್ಳುತ್ತೆ ಎಂದು ಎಷ್ಟೋ ತಾಯಂದಿರು ಲೆಕ್ಕ ಹಾಕುತ್ತಾರೆ. ಆದರೆ ಯಾವ ಪ್ರಾಣಿಯೂ, ತನ್ನ ಮರಿ ತನ್ನನ್ನು ನೋಡಿಕೊಳ್ಳಲಿ ಎಂದು ಬಯಸುವುದೇ ಇಲ್ಲ. ಮಕ್ಕಳು ಏನಾದರೂ ಸಾಧಿಸಿದ ಕೂಡಲೇ, ಕೆಲವು ತಾಯಂದಿರಿಗೆ ಇದ್ದಕ್ಕಿದ್ದಂತೆ ಪ್ರೀತಿ ಹೆಚ್ಚಾಗಬಹುದು. ಆದರೆ ಪ್ರಾಣಿಗಳು ಇಂಥ ಅಸಹಜ ಭಾವವನ್ನು ಹೊಂದಿರುವುದಿಲ್ಲ.
'ತಾಯಿ' ಎನ್ನುವ ಪದಕ್ಕೆ ಮನುಷ್ಯರಿಗಿಂತ ಜಾಸ್ತಿ ಪ್ರಾಣಿಗಳೆ ಅರ್ಥ ತುಂಬುವುದು ಈ ಕಾರಣಗಳಿಗಾಗಿಯೇ. ಆಧುನಿಕ ಬದುಕಿನ ಅನಿವಾರ್ಯತೆಗಳಿಂದ, ಪ್ರಕೃತಿ ಸಹಜವಾದ ಗುಣಗಳಿಗೆ ವಿರುದ್ಧವಾಗಿ ನಾವು ಬದುಕುತ್ತಿರುವುದೇ ಇದಕ್ಕೆ ಕಾರಣ! ಪ್ರಾಣಿಗಳೇ, ಮನುಷ್ಯರಿಗಿಂತ ಹೆಚ್ಚಾಗಿ 'ತಾಯಿ' ಪದಕ್ಕೆ ಅರ್ಥ ತುಂಬುತ್ತಿರುವ ನಿಮಗೆ ಎರಡು ದಿನಗಳ ಮೊದಲೇ, 'ಹ್ಯಾಪಿ ಮದರ್ಸ್ ಡೇ'.
-
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ












Click it and Unblock the Notifications