ಸಡಗರ ಸಂಭ್ರಮದ ಕೂಡ್ಲಿಗಿ ಊರಮ್ಮ ದೇವಿ ಉತ್ಸವ

ಮಂಗಳವಾರ ಬೆಳಗಿನಿಂದ ಸಂಜೆಯವರೆಗೆ ಪಟ್ಟಣದ ಸಕಲ ದೇವತೆಗಳಿಗೆ ಪೂಜೆ, ನೈವೇದ್ಯವನ್ನು ಸಮರ್ಪಿಸಲಾಯಿತು. ನಂತರ ಜೀನಗಾರರ ಮನೆಯಿಂದ ತೊಟ್ಟಿಲನ್ನು ತರಲಾಯಿತು. ರಾತ್ರಿ ಗಂಗೆ ಪೂಜೆ ನೆರವೇರಿಸಿ, ದೇವಿಯನ್ನು ಚೌಕಿಮನೆಯಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ದೇವಿಗೆ ಸಾಂಪ್ರದಾಯಿಕವಾಗಿ ದೃಷ್ಟಿ ಇಡಲಾಯಿತು.
ವಿವಿಧ ವಾದ್ಯವೃಂದಗಳೊಂದಿಗೆ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯೊಂದಿಗೆ ಜೋಯಿಸರ, ಮಠಸ್ಥರ, ಬಣಕಾರರ, ಗೌಡರ, ಶೆಟ್ಟರ ಮನೆಗಳಿಂದ ನೈವೇದ್ಯ, ಉಡಿ ತುಂಬುವ ಕಾರ್ಯಕ್ರಮ ಜರುಗಿತು. ನಂತರ ಮಹಾಪೂಜೆ, ಮಹಾ ಮಂಗಳಾರತಿಯೊಂದಿಗೆ ಉತ್ಸವದೊಂದಿಗೆ ರಂಗಮಂಟಪಕ್ಕೆ ಕರೆತರಲಾಯಿತು.
ಬುಧವಾರ ನಸುಕಿನಲ್ಲಿ ಜೋಳದ ಅಂಬಲಿಯನ್ನು ಹೊತ್ತ ನೂರಾರು ಭಕ್ತರು ಪಟ್ಟಣದ ಸುತ್ತಲೂ ಚರಗ ಚೆಲ್ಲಿದರು. ಬೆಳಿಗ್ಗೆ ಅಮರದೇವರಗುಡ್ಡ ತವರು ಮನೆಯಿಂದ ಹೂ, ಹಣ್ಣು, ಕಾಯಿಯೊಂದಿಗೆ ಉಡಿ ತುಂಬುವ ವಸ್ತುಗಳನ್ನು ತಂದು ದೇವತೆಗೆ ಉಡಿ ತುಂಬಲಾಯಿತು. ನಂತರ ಪಟ್ಟಣದ ಮಹಿಳೆಯರು ದೇವಿಗೆ ಉಡಿ ತುಂಬಿದರು.
ಇಡೀ ಕಾರ್ಯಕ್ರಮದಲ್ಲಿ ವಾದ್ಯವೃಂದಗಳ ಮೆರಗು, ವರ್ಣಮಯವಾಗಿ, ಅಲಂಕರಿಸಲ್ಪಟ್ಟ ದೇವತೆಯ ಉತ್ಸವಮೂರ್ತಿ ಸಾವಿರಾರು ಭಕ್ತರ ಕಂಠಗಳ ಜಯಘೋಷ ಉತ್ಸವಕ್ಕೆ ಮೆರುಗನ್ನು ತಂದಿತ್ತು. ರಾಜೇಶ್ವರಿ ಹಾಗೂ ವೀಣಾ ಮಹಿಳಾ ಕಲಾ ತಂಡದ ಡೊಳ್ಳು ಕುಣಿತ ಉತ್ಸವದ ಆಕರ್ಷಣೆಯಾಗಿತ್ತು.
ಪಟ್ಟಣದಲ್ಲಿ ಉತ್ಸವದ ಸಂದರ್ಭದಲ್ಲಿ ನೀರಿನ ಅಭಾವವಾಗದಂತೆ ನೋಡಿಕೊಳ್ಳಲು ಪಟ್ಟಣ ಪಂಚಾಯ್ತಿವತಿಯಿಂದ ಎಂಟು ಟ್ಯಾಂಕರಗಳ ಮೂಲಕ ನೀರು ಸರಬರಾಜು ವ್ಯಾವಸ್ತೆ ಮಾಡಲಾಗಿತ್ತು.
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications