ಬಗೆಬಗೆ ಗಣಪನ ಒಂದೆಡೆ ಕಾಣುವ ಸುಯೋಗ

Ganesha fest exhibitionಬೆಂಗಳೂರು, ಆ.30: ಷಡಕ್ಷರಿ ಅವರ ಸಂಗ್ರಹದಲ್ಲಿರುವ ಅಪೂರ್ವ ಗಣೇಶ ವಿಗ್ರಹಗಳ ಪ್ರದರ್ಶನ ಏರ್ಪಡಿಸಲಾಗಿದೆ. ರಮಣಶ್ರೀ ಪ್ರತಿಷ್ಠಾನದ ವತಿಯಿಂದ ಸೆ.1ರಿಂದ 4ರವರೆಗೆ ವಿಜಯನಗರದಲ್ಲಿ ರುವ ರಮಣಶ್ರೀ ಉದಯ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಈ ಪ್ರದರ್ಶನ ವ್ಯವಸ್ಥೆಗೊಳಿಸಲಾಗಿದೆ.

ಸುಮಾರು 1800 ನಾನಾ ರೂಪ, ಆಕಾರ, ವೈಶಿಷ್ಟ್ಯದ ಗಣೇಶನ ವಿಗ್ರಹ ಗಳನ್ನು ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆಗೊಳಿಸಲಾಗಿದೆ. ಈ ಪ್ರದರ್ಶನವನ್ನು ಸಚಿವ ಅರವಿಂದ ಲಿಂಬಾವಳಿ ಸೆ.1ರಂದು ಸಂಜೆ 4.30ಕ್ಕೆ ಉದ್ಘಾಟಿಸಲಿದ್ದಾರೆ. ಸ್ವಾಮಿ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕರಾದ ವಿ. ಸೋಮಣ್ಣ, ಎಂ. ಕೃಷ್ಣಪ್ಪ ಹಾಗೂ ರಮಣಶ್ರೀ ಸಮೂಹ ಸಂಸ್ಥೆಗಳ ಮುಖ್ಯಸ್ಥ ಎಸ್. ಷಡಕ್ಷರಿ ಭಾಗವಹಿಸಲಿದ್ದಾರೆ.

ಈ ಪ್ರದರ್ಶನವು ವೀಕ್ಷಣೆಗೆ ಪ್ರತಿದಿನ ಮಧ್ಯಾಹ್ನ 3ರಿಂದ ರಾತ್ರಿ 8ರವರೆಗೆ ತೆರೆದಿರುತ್ತದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಆಯೋಜಕರಾದ ಷಡಕ್ಷರಿ ಅವರು ಹೇಳಿದರು.

(ದಟ್ಸ್ ಕನ್ನಡ ಸಭೆ ಸಮಾರಂಭ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+