ಆಯ್ತೆ ಮಾರಾಯ್ತಿ, ಬೆಂಗ್ಳೂರಲ್ಲಿ ಸೈಟ್ ಕೊಂಡೇ ಬರ್ತೀನಿ!

"ಇಂಥವರು ಸೈಟು ತೆಗೆದುಕೊಂಡರಂತೆ" ಎನ್ನುವ ಶೀರ್ಷಿಕೆ ಹೊತ್ತ ಮುಖಪುಟ, ಇಂತಿಷ್ಟು ಲಕ್ಷಕ್ಕೆ ಅನ್ನುವ ಮಾಹಿತಿ ಪುಟ, ಹೇಗೆ ಹುಡುಕಿದರು, ಯಾವ ರೀತಿಯಲ್ಲಿ ಹಣ ಹೊಂದಿಸಿದರು ಎನ್ನುವ ಸುದೀರ್ಘ ಮುನ್ನುಡಿ. ಆ ಮೇಲಿನ ನಾಲ್ಕು ಮಾತುಗಳು ನನ್ನ ದಿವ್ಯಜಡತ್ವಕ್ಕೆ "ಅರ್ಪಣೆ". ಮತ್ತೆ ಶುರು ಒಂದಾದಮೇಲೊಂದರಂತೆ ವಿವಿಧ ಅಧ್ಯಾಯಗಳಲ್ಲಿ ಸೈಟು ಖರೀದಿ ಮಾಡಿದವರ ಸಂತೃಪ್ತಿಯ ಯಶೋಗಾಥೆಗಳು, ಹುಡುಕುತ್ತಿದ್ದರೂ ಸೈಟು ಸಿಗದವರ ವ್ಯಥೆಗಳು ಮತ್ತು ಸೈಟು ಕೊಂಡು ಇಮ್ಮಡಿ ಲಾಭದಲ್ಲಿ ಮಾರಿ ಶ್ರೀಮಂತರಾದವರ ಮಾದರಿ ಕಥೆಗಳು.... ಹೀಗೆ ಸಾಗುತ್ತಲೇ ಇರುತ್ತಿತ್ತು. ಎಲ್ಲ ಮುಗಿದಮೇಲೆ ನಮ್ಮ ಹಣೆಯಲ್ಲಿ ಸೈಟು ಬರೆದೇ ಇಲ್ಲವೇನೋ ಎನ್ನುವ ದೊಡ್ಡ ಅಕ್ಷರಗಳ ಬೆನ್ನುಡಿ!
ಪರಿಸ್ಥಿತಿ ಹೀಗಿದ್ದಾಗ ಒಮ್ಮೆ ಕೋಪಗೊಂಡು "ಈ ಬಾರಿ ರಜೆಯಲ್ಲಿ ಹೋದಾಗ ಒಂದು ಮನೆ ಅಥವಾ ಕನಿಷ್ಠ ಒಂದು ಸೈಟು ಖರೀದಿಸಿಯೇ ಬರುತ್ತೇನೆ, ಆಯಿತಲ್ಲ, ಇನ್ನಾದರೂ ಕಿರಿಕಿರಿ ನಿಲ್ಲಿಸು" ಅಂದಿದ್ದೆ ರೋಷಾವೇಶದಲ್ಲಿ. ನನ್ನ ಕೋಪಕ್ಕೆ ಒಂದಿಷ್ಟೂ ಸೊಪ್ಪು ಹಾಕದೆ ಸಂತೋಷದಿಂದ "ಇದಕ್ಕೇ ಕಾಲ ಕೂಡಿ ಬರುವುದು ಅಂತಾರೆ" ಅನ್ನುತ್ತಾ ಹಿಗ್ಗಿದ್ದಳಾಕೆ. ಮುಂದೆ ರಜೆಯ ಮಾತು ಬಂದಾಗಲೆಲ್ಲಾ ನನ್ನಲ್ಲಿ ಮನೆ ಕೊಳ್ಳಲು ಹಣ ಎಲ್ಲಿಂದ ಎಂದು ತಾನೇ ತರ್ಕಿಸಿ, ನನ್ನ ಪ್ರತಿಜ್ಞೆಯನ್ನು ಬರೇ ಸೈಟಿಗೆ ಸ್ಕೇಲ್ ಡೌನ್ ಮಾಡಿ, ಆಗಾಗ ಜ್ಞಾಪಿಸುತ್ತಲೇ ಇದ್ದಳು. "ದಸರಾಕ್ಕೆ ಊರಿಗೆ ಹೋಗಲು ಟಿಕೆಟ್ ಮಾಡಿದ್ರಾ?" ಅಂತ ಕೇಳಿದ ಗೆಳತಿಯರಿಗೆ "ಹೌದು, ಈ ಬಾರಿ ಬೆಂಗಳೂರಿನಲ್ಲಿ ಜಾಸ್ತಿ ದಿನ ಇರುವ ಪ್ಲಾನು. ದೀಪಾವಳಿ ಕೂಡ ಊರಲ್ಲೇ ಆದರೂ ಆಗಬಹುದು. ಇವರದು ಒಂದು ಸೈಟು ತೆಗೆದುಕೊಳ್ಳೋ ಆಲೋಚನೆಯಿದೆ" ಎಂಬ ಆಕೆಯ ಉದ್ಘೋಷಣೆಯನ್ನೂ ಕೇಳಿಸಿಕೊಂಡಿದ್ದೆ. ಸೈಟು ಸಿಗದೆ ಅಮ್ಮಾವ್ರು ಬೆಂಗಳೂರಿನಿಂದ ಕದಲುವುದಿಲ್ಲ ಎನ್ನುವುದಂತೂ ನನಗೆ ದಿಟವಾಗಿತ್ತು.
ವಿಮಾನದಿಂದ ಬೆಂಗಳೂರು ಅರ್ದರ್ಧ ಕಾಣಿಸುತ್ತಲೇ "ಇಲ್ಲೆಲ್ಲ ರೇಟು ಕಡಿಮೆಯಿರಬಹುದು, ಇನ್ನೂ ಡೆವಲಪ್ ಆಗಿಲ್ಲ ನೋಡಿ, ಏಳೆಂಟು ವರ್ಷದ ಮೇಲೆ ವಾಪಸ್ ಬರುವಾಗ ಡೆವಲಪ್ ಆಗಬಹುದು... ಸಿಟಿಯಲ್ಲಿ ಜಾಸ್ತಿ ರೇಟಿದ್ದು ನಿಮ್ಮ ಬಜೆಟಿನ ಒಳಗೆ ಕಷ್ಟ ಅನ್ನಿಸಿದರೆ ಸಿಟಿಯ ಹೊರಗೆ ಇಲ್ಲೆಲ್ಲಾದ್ರೂ ಪರವಾಗಿಲ್ಲ. ಸೈಟು ಒಳ್ಳೆಯದಿದ್ದರೆ ತೆಗೆದುಕೊಳ್ಳಿ" ಅಂತ ಆಕೆ ಅಪ್ಪಣೆ ಕೊಡಿಸುವುದಕ್ಕೂ ವಿಮಾನ ದೇವನಹಳ್ಳಿಯಲ್ಲಿಳಿಯುವುದಕ್ಕೂ ಸರಿಹೋಗಿತ್ತು. "ಬೆಂಗಳೂರಿನಲ್ಲೊಂದು ಸಣ್ಣ ಸೈಟು ಕೊಳ್ಳುವುದಕ್ಕೂ ಅಸಮರ್ಥ ಅಂತ ದೇವನಹಳ್ಳಿ ತೋರಿಸುತ್ತಿದ್ದಾಳೆ ಈಕೆ" ಅಂದುಕೊಂಡೆ ನಾನು.
ನಾವು ಸೈಟು ಖರೀದಿಯ ಇರಾದೆಯಲ್ಲಿದ್ದೇವೆ ಎನ್ನುವುದನ್ನು ನಮ್ಮ ಬಂಧುಮಿತ್ರರಿಗೆ ಹೇಳಿ ನಮ್ಮ ಸೈಟು ಶೋಧ ಅಭಿಯಾನಕ್ಕೆ ಒಂದು ಶುಭಾರಂಭ ಮಾಡೋಣ ಅಂತ ಫೋನೆತ್ತಿಕೊಂಡ ನನಗೆ ಆಶ್ಚರ್ಯ. ಈ ಕಾರಣಕ್ಕೇ ನಾವು ಸಿದ್ಧವಾಗಿ ಬರುತ್ತಿದ್ದೇವೆ ಎನ್ನುವುದು ಎಲ್ಲರಿಗೂ ಗೊತ್ತಿತ್ತು - ನಿನ್ನೆ ಟೀವಿಯಲ್ಲಿ ಬ್ರೇಕಿಂಗ್ ನ್ಯೂಸ್ ಹಾಕಿ ತೋರಿಸಿದ್ದಾರೋ ಹೇಗೆ!
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications