ಕನ್ನಡ ನಾಡಿಗೆ ಆಯುಧ ಪೂಜೆಯ ಹಸಿರು ತೋರಣ

ಈ ಹಬ್ಬದೊಡನೆ ಎರಡು ಪೌರಾಣಿಕ ಕಥೆಗಳು ಬೆಸೆದುಕೊಂಡಿವೆ. ದೇವತೆಗಳಿಗೆ ವಿಪರೀತ ಕಾಟ ಕೊಡುತ್ತಿದ್ದ ಮಹಿಷಾಸುರನನ್ನು ನವರಾತ್ರಿಯ ಒಂಬತ್ತನೇ ದಿನ, ಅಂದರೆ ಆಯುಧ ಪೂಜೆಯ ದಿನ ಚಾಮುಂಡೇಶ್ವರಿ ಸಂಹರಿಸಿದಳೆಂಬ ಪ್ರತೀತಿ. ಇನ್ನೊಂದು ಕಥೆ, ದ್ವಾಪರಯುಗದಲ್ಲಿ ಪಾಂಡವರು 1 ವರ್ಷ ಅಜ್ಞಾತವಾಸ ಮುಗಿಸಿದ ನಂತರ ಬನ್ನಿಮರದಲ್ಲಿ ಅಡಗಿಸಿಟ್ಟಿದ್ದ ಆಯುಧಗಳ ಪೂಜೆ ಮಾಡುತ್ತಾರೆ. ವಿಜಯದಶಮಿಯ ಹಿಂದಿನ ದಿನವನ್ನೇ ಆಯುಧ ಪೂಜೆಗೆ ಮೀಸಲಿಡಲಾಗಿದೆ. ವಿಜಯದಶಮಿಯಂದು ಬನ್ನಿಎಲೆಗಳನ್ನು ಬಂಗಾರವೆಂದು ಪರಿಗಣಿಸಿ ಪರಸ್ಪರ ಕೊಟ್ಟು ಒಳಿತಾಗಲೆಂದು ಆಶಿಸುವ ಪರಿಪಾಠ ಚಾಲ್ತಿಯಲ್ಲಿದೆ.
ಜಿಟಿಜಿಟಿ ಮಳೆಯಲ್ಲಿ ಗಿಜಿಗುಡುವ ರಸ್ತೆಗಳಲ್ಲೆಲ್ಲ ತೋರಣಕಟ್ಟಲು ಮಾವಿನ ಸೊಪ್ಪು, ಬಾಳೆ ಕಂಬ, ಬನ್ನಿಪತ್ರಗಳು, ಹೂವುಗಳು, ಹಣ್ಣುಗಳು, ನಿವಾಳಿಸಲು ಬುದೂಗುಂಬಳಕಾಯಿಗಳು ಬಂದು ಕುಳಿತಿವೆ. ಬೆಲೆ ಗಗನಕ್ಕೇರಿದ್ದರೂ ಹಬ್ಬದ ಉತ್ಸಾಹದಲ್ಲಿ ಎಳ್ಳಷ್ಟೂ ಉತ್ಸಾಹ ಕಡಿಮೆಯಾಗಿಲ್ಲ. ಮುಡಿಗೇರುತ್ತಿದ್ದ ಮಲ್ಲಿಗೆ ದೇವರಿಗೆ ಮಾತ್ರ ಮೀಸಲು. ಐದು ರುಪಾಯಿಗೆ ಸಿಗುತ್ತಿದ್ದ ಮಾವಿನ ಸೊಪ್ಪು ಕೂಡ ಹತ್ತು ರುಪಾಯಿಗೇರಿದೆ. ಇನ್ನು ಮಾರುದ್ದ ಸೇವಂತಿಗೆ ದರ 60ರಿಂದ 80.
ತರಕಾರಿ ಮಾರುವ ತಳ್ಳುಗಾಡಿಯಿಂದ ಹಿಡಿದು ಫ್ಯಾಕ್ಟರಿ, ಸಾಫ್ಟ್ ವೇರ್ ಕಂಪನಿಗಳಲ್ಲೆಲ್ಲ ಆಯುಧ ಪೂಜೆಯಂದು ಸಂಭ್ರಮದ ವಾತಾವರಣ. ಸೈಕಲ್, ಬೈಕ್, ಕಾರು, ಲಾರಿ, ಕಂಪ್ಯೂಟರ್, ವೈವಿಧ್ಯಮಯ ಮಷಿನರಿಗಳನ್ನೆಲ್ಲ ನೀಟಾಗಿ ಒರೆಸಿ, ಸುಣ್ಣ ಬಳಿದು, ಹೂವಿಟ್ಟು, ಊದುಬತ್ತಿ ಬೆಳಗಿ ಪೂಜಿಸುತ್ತಾರೆ. ಎಲ್ಲ ಕಾರ್ಮಿಕರೂ ಅವತ್ತೊಂದು ದಿನ ಕೆಲಸಕ್ಕೆ ಸಲಾಂ ಹೊಡೆದು ಪೂಜೆ ಮಾಡಿ, ಸಿಹಿ ಹಂಚಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಮನೆ, ಕಚೇರಿಗಳ ಮುಂದೆ ಹೆಂಗಳೆಯರು ಥಳಿ ಹೊಡೆದು, ಚೆಂದದ ರಂಗೋಲಿ ಬಿಡಿಸಿ, ಹೂವಿನಿಂದ ಅಲಂಕಾರ ಮಾಡಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ತೋರಣ ಕಟ್ಟುವ, ಬಾಳೆಕಂಬ ನಿಲ್ಲಿಸುವ, ವಾಹನ ಆಯುಧಗಳನ್ನು ತೊಳೆದು ಅಣಿಗೊಳಿಸುವ ಜವಾಬ್ದಾರಿ ಗಂಡಸರದ್ದು. ಕರ್ಪೂರದಾರತಿ ಬೆಳಗಿ ಪೂಜೆ ಮುಗಿಸುವ ಹೊತ್ತಿಗೆ ಎಲ್ಲರ ಲಕ್ಷ್ಯ ಬೇರೆಡೆ ಸಾಗಿರುತ್ತದೆ. ಕಚೇರಿಯಲ್ಲಾದರೆ ಪೂಜೆಯ ನಂತರ ಕಾಲು ಕೆಜಿ ಸ್ವೀಟ್ ಡಬ್ಬ, ನೂರು ಗ್ರಾಂ ಕಾರದ ಕಾಳುಗಳ ಬಳುವಳಿ. ಮನೆಯಲ್ಲಾದರೆ ಭರ್ಜರಿ ಹೋಳಿಗೆ ಊಟದ ಸುಯೋಗ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications