ಮೈಸೂರಿನ ಖ್ಯಾತಿ ಏರಿಸಿದ ಗರಡಿ ಮನೆಗಳು
ಮೈಸೂರು
ನಗರಕ್ಕೊಂದು ಸುತ್ತು ಹೊಡೆದರೆ ಸುಮಾರು ನೂರಕ್ಕೂ ಹೆಚ್ಚು ಗರಡಿಮನೆಗಳು ಕಾಣಸಿಗುತ್ತವೆ. ಸುಣ್ಣದಕೇರಿ ನಾಲಾ ಬೀದಿಯ ಗೋಪಾಲಸ್ವಾಮಿ ಗರಡಿ, ಬಸವೇಶ್ವರ ರಸ್ತೆಯ ಮಹಾಲಿಂಗೇಶ್ವರ ಮಠದ ಗರಡಿ, ಕೆ.ಜಿ.ಕೊಪ್ಪಲು, ಪಡುವಾರಹಳ್ಳಿಯ ಹತ್ತೂ ಜನರ ಗರಡಿ, ಹುಲ್ಲಿನ ಬೀದಿಯ ಈಶ್ವರರಾಯನ ಗರಡಿ, ಫಕೀರ್ ಅಹಮ್ಮದ್ ಸಾಹೇಬರ ಗರಡಿ ಹೀಗೆ ಗರಡಿ ಮನೆಗಳ ಹೆಸರು ಮುಂದುವರೆಯುತ್ತಾ ಹೋಗುತ್ತದೆ. ಇಂತಹ ಗರಡಿಮನೆಗಳಿಂದ ಬೆಟ್ಟದ ಚಿಕ್ಕಣ್ಣ, ಪೈ.ಪಾಪಣ್ಣ, ಪೈ.ಶಂಕರ್ ಚಕ್ರವರ್ತಿ, ಚಿನ್ನ, ಅನಂತ್ ಅವರಂತಹ ನೂರಾರು ಪೈಲ್ವಾನ್ಗಳು ಪ್ರತಿಭೆ ಪ್ರದರ್ಶಿಸಿ ಮೈಸೂರಿನ ಖ್ಯಾತಿಯನ್ನು ಇಮ್ಮಡಿಸುವಲ್ಲಿ ಯಶಸ್ವಿಯಾಗಿದ್ದಾರೆ. id="toptextpromo">ಪೈಲ್ವಾನರ
ದಿನಚರಿ
:
ನಾವು
ಪೈಲ್ವಾನರ
ಬಗ್ಗೆ
ತಿಳಿಯುತ್ತಾ
ಹೋದರೆ
ಕುತೂಹಲ
ಮೂಡುತ್ತದೆ.
ಪೈಲ್ವಾನರ
ನಿತ್ಯದ
ದಿನಚರಿ,
ಅವರ
ಊಟ,
ತಾಲೀಮು
ಎಲ್ಲವೂ
ವಿಭಿನ್ನವಾಗಿರುತ್ತದೆ.
ದೇಹವನ್ನು
ವ್ಯಾಯಾಮ,
ಕಸರತ್ತಿನ
ಮೂಲಕ
ದಂಡಿಸುತ್ತಾರೆ.
ಮುಂಜಾನೆ
ಎದ್ದು
ಗರಡಿಮನೆಗೆ
ಹೋಗುವ
ಪೈಲ್ವಾನರು
ಅಲ್ಲಿರುವ
ಪರಿಕರಗಳಾದ
ಕಲ್ಲುಗುಂಡು,
ಬಳೆ,
ಗದೆ,
ಕೊಂತ,
ಕಂಬಕಟ್ಟೋದು,
ಮಣ್ಣಿನಲ್ಲಿ
ಪರಸ್ಪರ
ಕುಸ್ತಿ
ಅಭ್ಯಾಸ
ನಡೆಸುವುದಲ್ಲದೆ,
ಈ
ಸಂದರ್ಭ
ಹುಲಿಹೆಜ್ಜೆ,
ಡೇಕ್ನಿ,
ಕಟಾಪ್,
ಹನುಮಾನ್
ದಂಡೆ,
ಸುತ್ತಂಡೆ,
ಚಪ್ಪಡಿದಂಡೆ,
ಬಸ್ಕಿ
ಮುಂತಾದ
ಕಸರತ್ತುಗಳನ್ನು
ಸಹ
ನಡೆಸುತ್ತಾರೆ.
id='are-slot-1'
class='oiad
oi-axt
oiadv'>
id='top-searched-articles'>
ಪೈಲ್ವಾನರ
ಆಹಾರ
:
ಗರಡಿಮನೆಯಿಂದ
ತಾಲೀಮು
ನಡೆಸಿ
ಬರುವ
ಪೈಲ್ವಾನರು
ಮನೆಗೆ
ಬರುತ್ತಿದ್ದಂತೆಯೇ
ಲೀಟರ್ಗಟ್ಟಲೆ
ಬಾದಾಮಿ
ಬೀಜಗಳ
ಮಿಶ್ರಣ
ಮಾಡಿದ
ಹಾಲು,
ಬೆಲ್ಲ
ಮತ್ತು
ರವೆಯಿಂದ
ಮಾಡಿದ
ಸಿಹಿ
ತಿನಿಸು,
ಬೆಣ್ಣೆ
ಮುಂತಾದ
ಪೌಷ್ಠಿಕ
ಆಹಾರಗಳನ್ನು
ಸೇವನೆ
ಮಾಡುತ್ತಾರೆ.
ಮಧ್ಯಾಹ್ನ
ಚಪಾತಿ,
ರಾಗಿ
ಮುದ್ದೆ,
ಅನ್ನ
ಸಾರು,
ಹಾಲು,
ಬೆಣ್ಣೆ,
ಹಣ್ಣು
ಹೀಗೆ
ಸಾಗುತ್ತದೆ.
ಮೊದಲೆಲ್ಲಾ
ಪೈಲ್ವಾನ್
ಇದ್ದಾರೆಂದರೆ
ಅದು
ಊರಿಗೆ
ಹೆಮ್ಮೆಯ
ಸಂಗತಿಯಾಗಿರುತ್ತಿತ್ತು,
ಅಲ್ಲದೆ,
ಎಲ್ಲಾ
ರೀತಿಯ
ಪ್ರೋತ್ಸಾಹ
ನೀಡಿ
ಕಳುಹಿಸಲಾಗುತ್ತಿತ್ತು.
ಪ್ರಸ್ತುತ
ದಿನಗಳಲ್ಲಿ
ಗರಡಿಮನೆಗಳಿಗೆ
ತೆರಳುವವರ
ಸಂಖ್ಯೆ
ಕಡಿಮೆಯಾಗಿರಬಹುದು
ಆದರೆ
ಅದರ
ಘನತೆ
ಗೌರವ
ಕಡಿಮೆಯಾಗಿಲ್ಲ
ಎನ್ನಬಹುದು
ಹಾಗಾಗಿ
ಇಂದಿಗೂ
ದಸರಾದಲ್ಲಿ
ಕುಸ್ತಿ
ಪಂದ್ಯಾವಳಿಗೆ
ತನ್ನದೇ
ಆದ
ಸ್ಥಾನಮಾನವಿದೆ.












Click it and Unblock the Notifications