ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನಾಡಹಬ್ಬ ದಸರಾದಲ್ಲಿ ಭಟ್ಟಂಗಿ ಸಾಹಿತಿಗಳು, ಬೂಸಾ ಸಾಹಿತ್ಯ’

By Staff
|
Google Oneindia Kannada News


ರಾಜರ ಕಾಲದ ಭಟ್ಟಂಗಿ ಸಂಸ್ಕೃತಿಯ ಪುನರುತ್ಥಾನ

ಮೈಸೂರು : ನಾಡಹಬ್ಬ ದಸರಾದ ಕವಿಗೋಷ್ಠಿಯಲ್ಲಿ ಭಟ್ಟಂಗಿ ಸಾಹಿತಿಗಳು ಮೆರೆಯುತ್ತಿದ್ದಾರೆ. ಕವಿಗೋಷ್ಠಿಯಲ್ಲಿ ಭಟ್ಟಂಗಿ ಸಾಹಿತಿಗಳಿಗೆ ಹೆಚ್ಚಿನ ಅವಕಾಶ ಕೊಡಲಾಗಿದೆ ಎಂದು ವಿಚಾರವಾದಿ ಹಾಗೂ ಕರ್ನಾಟಕ ಪ್ರಗತಿರಂಗದ ಸಂಚಾಲಕ ಕೆ.ರಾಮದಾಸ್‌ ಟೀಕಿಸಿದ್ದಾರೆ.

ದಸರಾದಲ್ಲಿ ಕಂಡುಬರುತ್ತಿರುವ ಬೂಸಾ ಸಾಹಿತ್ಯದ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿರುವ ರಾಮದಾಸ್‌ ಅವರ ಹೇಳಿಕೆಯ ಮುಖ್ಯಾಂಶಗಳು ಇಂತಿವೆ :

  • ಸರ್ಕಾರ ಮೋಡಬಿತ್ತನೆ ನಡೆಸಿ ಮಳೆ ಬರಿಸಲು ಪ್ರಯತ್ನಿಸುತ್ತಿದೆ. ಇಂಥ ಸಂದರ್ಭದಲ್ಲಿ ಮಳೆ ಸುರಿಸುವಂತೆ ಖ್ಯಾತ ವಿಜ್ಞಾನಿ ಡಾ. ಸಿಎನ್ನಾರ್‌ ರಾವ್‌ ಚಾಮುಂಡೇಶ್ವರಿ ದೇವಿಯನ್ನು ಪ್ರಾರ್ಥಿಸುತ್ತಾರೆ. ಇದು ಹಾಸ್ಯಾಸ್ಪದ.
  • ದಸರಾ ಕವಿಗೋಷ್ಠಿ ಖಾಸಗಿ ಮರ್ಜಿಯ ಗೋಷ್ಠಿಯಾಗಿ ಪರಿವರ್ತಿತಗೊಂಡಿದೆ.
  • ಭಟ್ಟಂಗಿ ಸಾಹಿತಿಗಳಿಂದಾಗಿ ಕರ್ನಾಟಕ ಸಂಸ್ಕೃತಿಯ ಪತನವಾಗಿದೆ. ರಾಜರ ಕಾಲದ ಭಟ್ಟಂಗಿ ಸಂಸ್ಕೃತಿ ಪ್ರತಿಬಿಂಬಿತವಾಗಿದೆ.
  • ಕುವೆಂಪು ಅವರು ಅಭಿಪ್ರಾಯಪಟ್ಟಂತೆ ಗುಲಾಮಗಿರಿಗೆ ಪರಂಪರೆಯ ಹೆಸರಿನಲ್ಲಿ ಚಿನ್ನದ ಲೇಪ ಹಚ್ಚುವ ಕೆಲಸದಲ್ಲಿ ಸಾಹಿತಿಗಳು ತೊಡಗಿದ್ದಾರೆ.
(ಇನ್ಫೋ ವಾರ್ತೆ)

ಕೆ. ರಾಮದಾಸ್‌ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ?

ವಾರ್ತಾ ಸಂಚಯ

ಮೈಸೂರು ದಸರಾ ಕವಿಗೋಷ್ಠಿಗೆ ಎನ್‌ಟಿಆರ್‌ ಶ್ರೀಮತಿ ಅತಿಥಿ


ಮುಖಪುಟ / ಮೈಸೂರು ದಸರಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X