‘ನಾಡಹಬ್ಬ ದಸರಾದಲ್ಲಿ ಭಟ್ಟಂಗಿ ಸಾಹಿತಿಗಳು, ಬೂಸಾ ಸಾಹಿತ್ಯ’


ರಾಜರ ಕಾಲದ ಭಟ್ಟಂಗಿ ಸಂಸ್ಕೃತಿಯ ಪುನರುತ್ಥಾನ

ಮೈಸೂರು : ನಾಡಹಬ್ಬ ದಸರಾದ ಕವಿಗೋಷ್ಠಿಯಲ್ಲಿ ಭಟ್ಟಂಗಿ ಸಾಹಿತಿಗಳು ಮೆರೆಯುತ್ತಿದ್ದಾರೆ. ಕವಿಗೋಷ್ಠಿಯಲ್ಲಿ ಭಟ್ಟಂಗಿ ಸಾಹಿತಿಗಳಿಗೆ ಹೆಚ್ಚಿನ ಅವಕಾಶ ಕೊಡಲಾಗಿದೆ ಎಂದು ವಿಚಾರವಾದಿ ಹಾಗೂ ಕರ್ನಾಟಕ ಪ್ರಗತಿರಂಗದ ಸಂಚಾಲಕ ಕೆ.ರಾಮದಾಸ್‌ ಟೀಕಿಸಿದ್ದಾರೆ.

ದಸರಾದಲ್ಲಿ ಕಂಡುಬರುತ್ತಿರುವ ಬೂಸಾ ಸಾಹಿತ್ಯದ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿರುವ ರಾಮದಾಸ್‌ ಅವರ ಹೇಳಿಕೆಯ ಮುಖ್ಯಾಂಶಗಳು ಇಂತಿವೆ :

  • ಸರ್ಕಾರ ಮೋಡಬಿತ್ತನೆ ನಡೆಸಿ ಮಳೆ ಬರಿಸಲು ಪ್ರಯತ್ನಿಸುತ್ತಿದೆ. ಇಂಥ ಸಂದರ್ಭದಲ್ಲಿ ಮಳೆ ಸುರಿಸುವಂತೆ ಖ್ಯಾತ ವಿಜ್ಞಾನಿ ಡಾ. ಸಿಎನ್ನಾರ್‌ ರಾವ್‌ ಚಾಮುಂಡೇಶ್ವರಿ ದೇವಿಯನ್ನು ಪ್ರಾರ್ಥಿಸುತ್ತಾರೆ. ಇದು ಹಾಸ್ಯಾಸ್ಪದ.
  • ದಸರಾ ಕವಿಗೋಷ್ಠಿ ಖಾಸಗಿ ಮರ್ಜಿಯ ಗೋಷ್ಠಿಯಾಗಿ ಪರಿವರ್ತಿತಗೊಂಡಿದೆ.
  • ಭಟ್ಟಂಗಿ ಸಾಹಿತಿಗಳಿಂದಾಗಿ ಕರ್ನಾಟಕ ಸಂಸ್ಕೃತಿಯ ಪತನವಾಗಿದೆ. ರಾಜರ ಕಾಲದ ಭಟ್ಟಂಗಿ ಸಂಸ್ಕೃತಿ ಪ್ರತಿಬಿಂಬಿತವಾಗಿದೆ.
  • ಕುವೆಂಪು ಅವರು ಅಭಿಪ್ರಾಯಪಟ್ಟಂತೆ ಗುಲಾಮಗಿರಿಗೆ ಪರಂಪರೆಯ ಹೆಸರಿನಲ್ಲಿ ಚಿನ್ನದ ಲೇಪ ಹಚ್ಚುವ ಕೆಲಸದಲ್ಲಿ ಸಾಹಿತಿಗಳು ತೊಡಗಿದ್ದಾರೆ.
(ಇನ್ಫೋ ವಾರ್ತೆ)

ಕೆ. ರಾಮದಾಸ್‌ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ?

ವಾರ್ತಾ ಸಂಚಯ


ಮುಖಪುಟ / ಮೈಸೂರು ದಸರಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+