ಕ್ರಿಸ್ಮಸ್ ಹಬ್ಬದ ಕುರಿತ ಸೋಜಿಗ ಸ್ವಾರಸ್ಯಗಳು

ಸಾಲು ಸಾಲು ಕ್ರಿಸ್ಮಸ್ ಟ್ರೀಗಳ ಝಲಕು, ಪಟಾಕಿ ಬೆಳಕುಗಳ ಚಿತ್ತಾರ, ಹೊಸ ಬಟ್ಟೆ ಧರಿಸಿದ ಮಕ್ಕಳ, ಯುವತಿಯರ ಚಿತ್ರ ಕಣ್ಮುಂದೆ ಬರುತ್ತದೆ. ಚರ್ಚಿನಲ್ಲಿ ಪ್ರಾಥನೆ, ಗಂಟೆಗಳ ಸದ್ದು ಕೇಳಿಸುತ್ತದೆ. ಶುಭಾಶಯಗಳ ವಿನಿಮಯ ಕಿವಿ ಮತ್ತು ಮನಸ್ಸು ತುಂಬುತ್ತದೆ. ಗ್ರೀಟಿಂಗ್ ಕಾರ್ಡ್, ಹೂವು ಬೊಕೆಗಳು, ಕೇಕ್ ಗಳು ಹಬ್ಬದ ಸಡಗರ ಹೆಚ್ಚಿಸುತ್ತವೆ.
ಕ್ರಿಸ್ಮಸ್ ಹಬ್ಬದ ಇತಿಹಾಸದಲ್ಲಿ ಸಾಕಷ್ಟು ಸ್ವಾರಸ್ಯ, ಸೋಜಿಗಗಳು ಕಾಣುತ್ತವೆ. ಅಚ್ಚರಿಯೆಂದರೆ ಒಂದು ಕಾಲದಲ್ಲಿ ಕೆಲವು ದೇಶಗಳು ಕ್ರಿಸ್ಮಸ್ ಹಬ್ಬವನ್ನು ಬ್ಯಾನ್ ಮಾಡಿದ್ದವು. ಕ್ರಿಸ್ಮಸ್ ಕುರಿತ ಕೆಲವು ಸ್ವಾರಸ್ಯ ಸಂಗತಿಗಳು ಇಲ್ಲಿವೆ. ಸಾಂತಾಕ್ಲಾಸ್ ಎಲ್ಲಿಂದ ಬಂದ ಮುಂತಾದ ಸಂಗತಿಗಳು ಅಚ್ಚರಿ ತರಿಸುತ್ತವೆ.
ಕ್ರಿಸ್ಮಸ್ ಸೋಜಿಗ
* ಗ್ರೀಕ್ ಅಕ್ಷರದಲ್ಲಿ ಎಕ್ಸ್ ಮೊದಲಾಕ್ಷರ. ಕ್ರಿಸ್ಮಸ್(Xmas) ಹೆಸರು ಆರಂಭವಾಗಲು ಇದೇ ಕಾರಣವಂತೆ.
* 1643ರಲ್ಲಿ ಇಂಗ್ಲೆಂಡ್ ಸಂಸತ್ತು ಕ್ರಿಸ್ಮಸ್ ಆಚರಣೆಯನ್ನು ರದ್ದುಗೊಳಿಸಿತು.
* ಇಂಗ್ಲೆಂಡಿನಲ್ಲಿ 1949ರಿಂದ್ 1960ರವರೆಗೆ ಕ್ರಿಸ್ಮಸ್ ಹರ್ಷಗೀತೆಯನ್ನು ರದ್ದುಗೊಳಿಸಲಾಗಿತ್ತು. ಕೇವಲ ಪ್ರಾಥನೆಗಷ್ಟೇ ಕ್ರಿಸ್ಮಸ್ ಸೀಮಿತವಾಗಿತ್ತು.
* ಮೊದಲ ಕ್ರಿಸ್ಮಸ್ ಧಾರ್ಮಿಕ ಹರ್ಷಗೀತ ಕರೊಲ್ ಪರಿಚಯಿಸಿದ ಪಾದ್ರಿ ಹೆಸರು ಸೇಂಟ್ ಫ್ರಾನ್ಸಿಸ್.
* ಡಿಸೆಂಬರ್ 26 ಸ್ಟಿಫನ್ ದಿನ. ಇದು ಬಾಕ್ಸಿಂಗ್ ದಿನ ಕೂಡ ಹೌದು. ಆ ದಿನ ಕೆಲವು ದೇಶಗಳಲ್ಲಿ ಹಣ ಸಂಗ್ರಹಿಸಿ ಬಡಬಗ್ಗರಿಗೆ ಹಂಚಲಾಗುತ್ತದೆ.
* ಕ್ರಿಸ್ಮಸ್ ಮರ ಕುರಿತ ಮೊದಲ ಮುದ್ರಿತ ದಾಖಲೆ 1531ರಲ್ಲಿ ರಚಿಸಲ್ಪಟ್ಟಿತ್ತು.
* 1983ರವರೆಗೆ ಕ್ರಿಸ್ಮಸ್ ಗೆ ಸರಕಾರಿ ರಜೆಯಿರಲಿಲ್ಲ. ಅಮೆರಿಕದ ಅಲಬಾಮ ರಾಜ್ಯವು 1983ರಲ್ಲಿ ಕ್ರಿಸ್ಮಸ್ ಗೆ ರಜೆ ನೀಡಲು ಆರಂಭಿಸಿತ್ತು.
* ಕ್ರಿಸ್ಮಸ್ ಕುರಿತಾದ ಮೊದಲ ಅಂಚೆ ಚೀಟಿ ತಯಾರಿಸಿದ್ದು ಆಸ್ಟ್ರಿಯಾ ದೇಶ.
* ಕೆಲವು ಪಾದ್ರಿಗಳು ಪ್ರಕಾರ ಮೆರ್ರಿ ಕ್ರಿಸ್ಮಸ್ ಅಂತ ಶುಭಾಶಯ ಹೇಳುವುದು ತಪ್ಪು. ಹ್ಯಾಪಿ ಕ್ರಿಸ್ಮಸ್ ಅನ್ನಬೇಕಂತೆ. ಯಾಕೆಂದರೆ ಮೆರ್ರಿ ಎಂಬ ಪದಕ್ಕೆ ಕುಡಿಯುವುದು ಎಂಬ ಒಳಾರ್ಥವಿದೆ ಎನ್ನುವುದು ಅವರ ಅಭಿಪ್ರಾಯ.
* ಅಮೆರಿಕದಲ್ಲಿ ಮೊದಲ ಕ್ರಿಸ್ಮಸ್ ಹರ್ಷಗೀತೆಯನ್ನು ಬರೆದದ್ದು ಮಿನಿಸ್ಟರ್ ಜಾನ್ ಡಿ ಬ್ರಡೊರ್. ಜೀಸಸ್ ಈಸ್ ಬಾರ್ನ್ ಎಂಬ ಹಾಡನ್ನು ಆತ ರಚಿಸಿದ್ದ.
* ಮುಂಜಾನೆಯ ಕ್ರಿಸ್ಮಸ್ ಗಂಟೆಯ ಸದ್ದು ಸಂರಕ್ಷಕ ಬರುವ ಸಂಕೇತವಂತೆ. ಬೆಲ್ ಸದ್ದು ಕ್ರಿಸ್ತನ ಜನನದ ಸಂಕೇತ ಕೂಡ ಹೌದು.
* ಎಲ್ಲರ ನೆಚ್ಚಿನ ಸಾಂತಾಕ್ಲಾಸ್ ಕಲ್ಪನೆ ಪರಿಚಯಿಸಿದ್ದು ಸೇಂಟ್ ನಿಕೊಲಾಸ್. ಈತ ನಾಲ್ಕನೇ ಶತಮಾನದಲ್ಲಿದ್ದ ವ್ಯಕ್ತಿ. ಬಡವರು, ಬಲ್ಲದರಿಗೆ ಸಾಂತಾಕ್ಲಾಸ್ ವೇಷದಲ್ಲಿ ಉಡುಗೊರೆ ನೀಡಲು ಈ ವೇಷ ಧರಿಸಲಾಯಿತು. ಸಾಂತಾಕ್ಲಾಸ್ ನನ್ನು ಕೋಕೊಕೋಲಾ ಕಂಪನಿಯು ಉತ್ಪನ್ನಗಳ ಜಾಹೀರಾತಿಗೂ ಬಳಸಿತ್ತು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications