World Sight Day 2023; ಕಣ್ಣಿನ ಕಾಳಜಿಗೆ ಸಲಹೆಗಳು
ಅಕ್ಟೋಬರ್ 12 ಅನ್ನು 'ವಿಶ್ವ ದೃಷ್ಟಿ ದಿನ'ವಾಗಿ ಆಚರಣೆ ಮಾಡಲಾಗುತ್ತದೆ. ಕಣ್ಣುಗಳ ಸುರಕ್ಷತೆಗೆ ಪ್ರತಿಯೊಬ್ಬರೂ ಆದ್ಯತೆ ನೀಡುವಂತೆ ಅರಿವು ಮೂಡಿಸುವುದು ವಿಶ್ವ ದೃಷ್ಟಿ ದಿನದ ಪ್ರಮುಖ ಗುರಿಯಾಗಿದೆ.
ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೈ. ರಮೇಶ್ ಬಾಬು ಅವರು ದೇವರು ಮನುಷ್ಯನಿಗೆ ನೀಡಿದ ಅದ್ಭುತ ಕೊಡುಗೆಗಳಲ್ಲಿ ಕಣ್ಣು ಸಹ ಒಂದಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯು ಕಣ್ಣಿನ ಆರೈಕೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದ್ದಾರೆ. 'ವಿಶ್ವ ದೃಷ್ಟಿ ದಿನ 2023' ಅಂಗವಾಗಿ ವಿಶೇಷ ಲೇಖನ ಇಲ್ಲಿದೆ.

ಜಾಗತಿಕವಾಗಿ ಕುರುಡುತನ ಮತ್ತು ದೃಷ್ಟಿ ಹೀನತೆಯ ಬಗ್ಗೆ ಜನ ಜಾಗೃತಿ ರೂಪಿಸಲು 2000ರ ಅಕ್ಟೋಬರ್ 12ರಿಂದ ಪ್ರತಿ ವರ್ಷ ವಿಶ್ವ ದೃಷ್ಟಿ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸಾಮಾನ್ಯವಾಗಿ ಕುರುಡುತನದ ಸಮಸ್ಯೆಗಳನ್ನು ತಡೆಗಟ್ಟಬಹುದಾದರೂ, ಹೆಚ್ಚಿನ ಸಂದರ್ಭಗಳಲ್ಲಿ ಸರಿಯಾದ ಚಿಕಿತ್ಸೆ ಪಡೆಯದ ಕಾರಣ, ಕ್ರಮೇಣ ದೃಷ್ಟಿ ಹೀನತೆಗೆ ಕಾರಣವಾಗುತ್ತವೆ.
ಸಾರ್ವಜನಿಕರು ಈ ದಿಶೆಯಲ್ಲಿ ಪೌಷ್ಟಿಕಕಾಂಶವುಳ್ಳ ಆಹಾರವನ್ನು ಸೇವಿಸಬೇಕು, ಊಟದಲ್ಲಿ ಹಸಿರು ತರಕಾರಿಗಳು, ಹಳದಿ ಮತ್ತು ಕೆಂಪು ಹಣ್ಣುಗಳು ಹಾಗೂ ಸ್ಥಳೀಯವಾಗಿ ಸಾಮಾನ್ಯವಾಗಿ ದಿನನಿತ್ಯ ಸಿಗುವ ತರಕಾರಿ ಮತ್ತು ಕಾಯಿಪಲ್ಲೆಗಳನ್ನು ದೈನಂದಿನ ಆಹಾರದಲ್ಲಿ ಸೇವಿಸುವುದಕ್ಕೆ ಮಹತ್ವ ನೀಡಬೇಕು.
ಕಣ್ಣಿನ ಸೋಂಕು ವಿಟಮಿನ್ 'ಎ' ಅನ್ನಾಂಗದ ಕೊರತೆ, ಅಪೌಷ್ಠಿಕತೆ, ಕಣ್ಣಿನ ಅಕ್ಷಿಪಟಿಲದ ಗಾಯ, ಅನುವಂಶಿಕ ನ್ಯೂನತೆ ಮುಂತಾದವುಗಳು ಕಣ್ಣಿನ ದೃಷ್ಟಿ ಹಾನಿಯಾಗಲು ಕಾರಣವಿರುತ್ತದೆ. ಕಣ್ಣಿಗೆ ಸಂಬಂಧಿಸಿದಂತೆ ಯಾವುದೇ ಸೋಂಕು ಕಂಡುಬಂದರೆ ನಿಗದಿತವಲ್ಲದ ಔಷಧಿಗಳನ್ನು ಹಾಕಬಾರದು, ಬದಲಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು.
ಡಯಾಬಿಟಿಕ್ ರೆಟಿನೋಪತಿ ಮತ್ತು ಸದ್ದಿಲ್ಲದೇ ಕಣ್ಣಿನ ದೃಷ್ಟಿಯನ್ನು ಹಾನಿ ಮಾಡುವ ಗ್ಲಾಕೋಮದಂತಹ ರೋಗಗಳನ್ನು ನಿಯಮಿತವಾಗಿ ಪರೀಕ್ಷಿಸುವ ಮೂಲಕ ದೃಷ್ಟಿಯನ್ನು ಸಂರಕ್ಷಿಸುವುದು. ಸಾರ್ವಜನಿಕರು ವಕ್ರಕಾರಕ ದೋಷಗಳು ಅಂದರೆ ದೃಷ್ಟಿ ದೋಷವುಳ್ಳವರು ನಿರ್ಲಕ್ಷ್ಯವಹಿಸದೇ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ನೇತ್ರ ತಜ್ಞರ ಅಭಿಪ್ರಾಯದಂತೆ ಕನ್ನಡಕಗಳನ್ನು ಹಾಕಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು. ಕಣ್ಣಿನ ಪೊರೆ ಕಂಡುಬಂದರೆ ಸಕಾಲದಲ್ಲಿ ವೈದ್ಯರಿಂದ ಪರೀಕ್ಷೆ ಮಾಡಿಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು.
ಮೊಬೈಲ್, ಕಂಪ್ಯೂಟರ್ ಬಳಕೆ; ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಮತ್ತು ಕಂಪ್ಯೂಟರ್ ಬಳಕೆ ದೈನಂದಿನ ಜೀವನದ ಚಟುವಟಿಕೆಗಳಾಗಿವೆ. ಅದರಲ್ಲೂ ಪೋಷಕರು ಮಕ್ಕಳಿಗೆ ಮೊಬೈಲ್ ಕೊಡುವುದನ್ನು ಆದಷ್ಟು ನಿಯಂತ್ರಿಸಿ ಮತ್ತು ಮೊಬೈಲ್ಗಳ ಪ್ರಕರತೆ (ಸ್ಕ್ರೀನ್ ಬೆಳಕು) ತುಂಬಾ ಕಡಿಮೆ ಇರುವಂತೆ ಕ್ರಮವಹಿಸಬೇಕು.
ಕಂಪ್ಯೂಟರ್ ಮುಂದೆ ಕಾರ್ಯನಿರ್ವಹಿಸುವಾಗ ಪ್ರತಿ 20 ನಿಮಿಷಕ್ಕೊಮ್ಮೆ ಕಂಪ್ಯೂಟರ್ ಪರದೆಯಿಂದ ಕನಿಷ್ಟ 20 ಸೆಕೆಂಡ್ ಕಾಲ ಬೇರೆಡೆಗೆ ದೃಷ್ಟಿ ಹರಿಸುವುದು ಉತ್ತಮ. ಕಣ್ಣುಗಳನ್ನು ಮುಟ್ಟುವ ಮುನ್ನ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು.
ಹಬ್ಬಗಳ ಸಮಯದಲ್ಲಿ ಹಾಗೂ ಮನೆಯ ವಿಶೇಷ ಕಾರ್ಯಕ್ರಮಗಳಲ್ಲಿ ಪಟಾಕಿಗಳನ್ನು ಬಳಸದಂತೆ, ಅದರಲ್ಲೂ ಪ್ರಬಲವಾದ ಪಟಾಕಿಗಳನ್ನು ಮಕ್ಕಳಿಗೆ ಕೊಡದಂತೆ ಜಾಗ್ರತೆ ವಹಿಸಬೇಕು.
ಪಟಾಕಿಗಳನ್ನು ಹಾರಿಸುವಾಗ ಪ್ಲಾಸ್ಟಿಕ್ ಡಬ್ಬಿಗಳು, ತಗಡಿನ ಟಿನ್ಗಳು ಮುಂತಾದವುಗಳನ್ನು ಪಟಾಕಿಗಳ ಮೇಲೆ ಮುಚ್ಚಿ ಹಾರಿಸದಿರುವಂತೆ ಪಾಲಕರು ನಿಗಾವಹಿಸಬೇಕು. ಪಟಾಕಿ ಸಿಡಿತದ ಗಾಯಗಳಿಂದ ದೃಷ್ಟಿ ಕಳೆದುಕೊಳ್ಳುವುದನ್ನು ತಡೆಯಬೇಕು ಎಂದು ಡಾ. ವೈ. ರಮೇಶ್ಬಾಬು ಸಲಹೆ ನೀಡಿದ್ದಾರೆ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್












Click it and Unblock the Notifications