Sharadiya Navratri 2023: ನವರಾತ್ರಿಯಲ್ಲಿ ಕೋಲಾಟ ಆಡುವುದರ ಹಿಂದಿನ ಕಾರಣವೇನು? ಗರ್ಬಾ ದಾಂಡಿಯಾ ನಡುವಿನ ವ್ಯತ್ಯಾಸವೇನು?
ನವರಾತ್ರಿ ಅಕ್ಟೋಬರ್ 15ರಿಂದ ಆರಂಭವಾಗಿದೆ. ಅಕ್ಟೋಬರ್ 23ರವರೆಗೆ ಅಂದರೆ ಒಂಬತ್ತು ದಿನ ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಹತ್ತನೆ ದಿನ ಅಂದರೆ ಅ. 24ರಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇಶದೆಲ್ಲೆಡೆ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಕೆಲವೆಡೆ ಗರ್ಬಾ ಮತ್ತು ದಾಂಡಿಯಾ ಆಡುವುದು ವಿಶೇಷವಾಗಿದೆ. ಅಷ್ಟಕ್ಕೂ ನವರಾತ್ರಿಯಲ್ಲಿ ಕೋಲಾಟ ಆಡುವುದರ ಹಿಂದಿನ ಕಾರಣವೇನು? ಎಂದು ತಿಳಿಯೋಣ.
ಶಕ್ತಿಶಾಲಿ ರಾಕ್ಷಸ ಮಹಿಷಾಸುರನು ದೇವತೆಗಳಿಗೆ ತೊಂದರೆ ನೀಡಲು ಪ್ರಾರಂಭಿಸಿದಾಗ ಇದು ಬ್ರಹ್ಮ, ವಿಷ್ಣು ಮತ್ತು ಮಹೇಶರ ಚಿಂತೆಗೆ ಕಾರಣವಾಯಿತು. ನಂತರ ವಿಷ್ಣು ಮತ್ತು ಶಿವ ತಮ್ಮ ಶಕ್ತಿಯಿಂದ ಶಕ್ತಿ ಸ್ವರೂಪ ದುರ್ಗೆಯನ್ನು ಹುಟ್ಟಿಕೊಂಡಲು. ಇತರ ದೇವರುಗಳು ತಮ್ಮ ಆಯುಧಗಳಿಂದ ದುರ್ಗೆಯನ್ನು ಸಜ್ಜುಗೊಳಿಸಿದರು.

ನಂತರ ಒಂಬತ್ತು ದಿನಗಳ ಕಾಲ ಮಾತೆ ದುರ್ಗಾ ಮತ್ತು ರಾಕ್ಷಸ ಮಹಿಷಾಸುರನ ನಡುವೆ ಘೋರ ಯುದ್ಧ ನಡೆಯಿತು. ಒಂಬತ್ತು ದಿನ ಹೋರಾಡಿ ದುರ್ಗಾ ಮಾತೆ ರಾಕ್ಷಸ ಮಹಿಷಾಸುರನನ್ನು ಕೊಂದಳು. ಒಂಬತ್ತು ದಿನಗಳ ಕಾಲ ನಡೆಯುವ ಈ ಯುದ್ಧವನ್ನು ನವರಾತ್ರಿ ಎಂದು ಆಚರಿಸಲಾಗುತ್ತದೆ. ಮಾತೃದೇವತೆಯ ಒಂಬತ್ತು ರೂಪಗಳನ್ನು ಈ ದಿನಗಳಲ್ಲಿ ಪೂಜಿಸಲಾಗುತ್ತದೆ. ದಶಮಿಯ ದಿನದಂದು ಮಹಿಷಾಸುರನನ್ನು ವಧೆ ಮಾಡಲಾಯಿತು. ಆದ್ದರಿಂದ ಇದನ್ನು ಅತ್ಯಂತ ಉತ್ಸಾಹದಿಂದ ದಸರಾ ಹಾಗೂ ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಹೀಗಾಗಿ ಮಾತೃದೇವತೆಯ ಈ ವಿಜಯೋತ್ಸವವನ್ನು ಹಬ್ಬದಂತೆ ಆಚರಿಸುವ ಸಂಪ್ರದಾಯ ಪ್ರಾರಂಭವಾಯಿತು.
ನವರಾತ್ರಿಯಲ್ಲಿ ಕೋಲಾಟ ಆಡುವುದರ ಹಿಂದಿನ ಕಾರಣವೇನು?
ವಿಜಯದಶಮಿ ಹೆಸರೇ ಹೇಳುವಂತೆ ಇದು ಜಯ ಸಾಧಿಸಿದ ದಿನ. ಕೆಟ್ಟದನ್ನು ತೊಡೆದುಹಾಕಿ ಒಳ್ಳೆಯದನ್ನು ಸ್ವಾಗತಿಸಿದ ದಿನ. ಹೀಗಾಗಿ ಈ ದಿನವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ದುರ್ಗಾ ದೇವಿ ಜಯದ ಸಂಕೇತವಾಗಿ ಜನ ಈ ದಿನ ನೃತ್ಯ ಮಾಡುವ ಮೂಲಕ ಸಂಭ್ರಮಿಸುತ್ತಾರೆ. ಈ ಸಂಭ್ರಮದಲ್ಲಿ ದಾಂಡಿಯಾ, ಗರ್ಬಾ ಕೂಡ ಹೆಸರುವಾಸಿಯಾಗಿವೆ. ದಾಂಡಿಯಾ ಮತ್ತು ಗರ್ಬಾ ಆಡುವ ಮೂಲಕ ಜನ ಈ ದಿನ ಸಂತೋಷದಿಂದ ಕಳೆಯುತ್ತಾರೆ.

ದಾಂಡಿಯಾ ಮತ್ತು ಗರ್ಬಾ ನಡುವಿನ ವ್ಯತ್ಯಾಸ
ಗುಜರಾತಿನಲ್ಲಿ ಈ ಹಬ್ಬವನ್ನು ದಾಂಡಿಯಾ ನೃತ್ಯ ಮಾಡುವ ಮೂಲಕ ಆಚರಿಸಲಾಗುತ್ತದೆ. ದಾಂಡಿಯಾದಲ್ಲಿ ತಾಯಿ ದೇವಿಯ ಖಡ್ಗವನ್ನು ಸಂಕೇತಿಸುವ ಎರಡು ಮರದ ಕೋಲುಗಳನ್ನು ಬಳಸಿ ನೃತ್ಯವನ್ನು ಮಾಡಲಾಗುತ್ತದೆ. ಅದಕ್ಕಾಗಿಯೇ ದಾಂಡಿಯಾವನ್ನು ಕತ್ತಿ ನೃತ್ಯ ಎಂದೂ ಕರೆಯುತ್ತಾರೆ.
ಗರ್ಬಾ ನೃತ್ಯ
ಗಾರ್ಬಾ ನೃತ್ಯ ದಾಂಡಿಯಾ ನೃತ್ಯಕ್ಕಿಂದ ಸ್ವಲ್ಪ ವಿಭಿನ್ನವಾಗಿದೆ. ಗರ್ಬಾ ಎಂದರೆ ಗರ್ಭಾ ಪದಕ್ಕೆ ಸಂಬಂಧಿಸಿದೆ. ಅಂದರೆ ಗರ್ಭದಲ್ಲಿರುವ ಮಗು ಎಂದರ್ಥ. ಗರ್ಭದಲ್ಲಿರುವ ಮಗು ಎಷ್ಟು ಸುರಕ್ಷಕವೋ ಅಷ್ಟೇ ಸುರಕ್ಷತೆ ನೀಡಿದ ತಾಯಿ ದೇವಿಯ ಸುತ್ತ ಒಂದು ವೃತ್ತ ರಚಿಸಲಾಗುತ್ತದೆ.
ಗರ್ಭ ದುಂಡಾಗಿರುತ್ತದೆ ಮತ್ತು ಜೀವನದ ವೃತ್ತವೂ ದುಂಡಾಗಿರುತ್ತದೆ. ಆದ್ದರಿಂದ ನರ್ತಕರು ಒಂದು ಸುತ್ತಿನ ವೃತ್ತವನ್ನು ರಚಿಸುತ್ತಾರೆ. ಬಳಿಕ ನೃತ್ಯ ಮಾಡುತ್ತಾರೆ. ಮಾತೆಯ ವಿಗ್ರಹ ಮತ್ತು ಅಲ್ಲಿ ಉರಿಯುತ್ತಿರುವ ಜ್ವಾಲೆಯ ಸುತ್ತ ಗರ್ಬಾವನ್ನು ಆಡಲಾಗುತ್ತದೆ. ಈ ಸಂದರ್ಭದಲ್ಲಿ ತೆಂಗಿನಕಾಯಿ, ವೀಳ್ಯದೆಲೆ ಮುಂತಾದ ಪೂಜಾ ಸಾಮಗ್ರಿಗಳನ್ನು ಸುತ್ತಿನ ವೃತ್ತದೊಳಗೆ ಮಣ್ಣಿನ ತಟ್ಟೆಯಲ್ಲಿ ಇರಿಸಲಾಗುತ್ತದೆ.
(ಗಮನಿಸಿ: ಈ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ದಯವಿಟ್ಟು ಸಂಬಂಧಿತ ತಜ್ಞರ ಸಲಹೆಯನ್ನು ಪಡೆಯಿರಿ)
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications