ರಾಜಕೀಯ ಕಾರಣಕ್ಕಾಗಿ ಕಿಂಗ್ ಖಾನ್ ಶಾರುಖ್ ಪುತ್ರನ ಮೇಲೆ ಟಾರ್ಗೆಟ್?
ಮುಂಬೈ ಕರಾವಳಿಯಲ್ಲಿ ಅಕ್ಟೋಬರ್ 2 ರಂದು, ಗೋವಾ ಕಡೆಗೆ ತೆರಳುತ್ತಿದ್ದ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿ ನಡೆದಿದೆ ಎಂಬ ಶಂಕೆ ಮೇಲೆ ಎನ್ ಸಿ ಬಿ ದಾಳಿ ನಡೆಸಿತ್ತು. ಡ್ರಗ್ಸ್ ಹೊಂದಿದ್ದ ಆರೋಪದ ಮೇಲೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಹಾಗೂ ಇತರರರನ್ನು ಬಂಧಿಸಿದ್ದು ನೆನಪಿರಬಹುದು, ಇಂದು ಆರ್ಯನ್ ಖಾನ್ 13 ಷರತ್ತುಗಳಿಗೆ ಒಪ್ಪಿ ನ್ಯಾಯಾಲಯದ ಆದೇಶದಂತೆ ಜಾಮೀನು ಪಡೆದುಕೊಂಡಿದ್ದಾರೆ.
23 ವರ್ಷದ ಖಾನ್ನಿಂದ ಯಾವುದೇ ಡ್ರಗ್ಸ್ ಪತ್ತೆಯಾಗದಿದ್ದರೂ, ಅಕ್ಟೋಬರ್ 8 ರಿಂದ ಮುಂಬೈ ಸೆಂಟ್ರಲ್ ಜೈಲಿನಲ್ಲಿ ಕುಳಿತಿದ್ದರು. ಮುಂಬೈ ನ್ಯಾಯಾಲಯವು ಗುರುವಾರ ಜಾಮೀನು ಮನವಿಯನ್ನು ಸ್ವೀಕರಿಸುವವರೆಗೂ ತನಿಖಾ ಸಂಸ್ಥೆಗೆ ಸಹಕರಿಸಿದ್ದಾರೆ ಎಂದು ಆರ್ಯನ್ ಪರ ವಕೀಲರು ಹೇಳಿದ್ದಾರೆ.
ಖಾನ್ ಮತ್ತು ಇತರ ಇಬ್ಬರು ಆರೋಪಿಗಳನ್ನು ನಾಳೆ ಸಂಜೆಯೊಳಗೆ ಬಿಡುಗಡೆ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಕೆಳ ನ್ಯಾಯಾಲಯಗಳು ಜಾಮೀನು ಅರ್ಜಿಗಳನ್ನು ಎರಡು ಬಾರಿ ತಿರಸ್ಕರಿಸಿದ ನಂತರ ಗುರುವಾರದಂದು ಹೈಕೋರ್ಟ್ ತೀರ್ಪು ಬಂದಿದೆ.
ಹೈ-ಪ್ರೊಫೈಲ್ ಪ್ರಕರಣವು ಭಾರತದಾದ್ಯಂತ ಚರ್ಚೆಯಾಗುತ್ತಿದೆ, ಸೆಲೆಬ್ರಿಟಿ ಪುತ್ರ ಹಾಗೂ ಬೆಂಬಲಿಗರು ತಮ್ಮ ತಂದೆಯ ಖ್ಯಾತಿಯಿಂದಾಗಿ ಅಧಿಕಾರಿಗಳಿಂದ ಅನ್ಯಾಯವಾಗಿ ಬಂಧಿತನಾಗಿದ್ದಾ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಅಂತಾರಾಷ್ಟ್ರೀಯ ನೆಟ್ವರ್ಕ್ನಿಂದ ಡ್ರಗ್ಸ್ ಸಂಗ್ರಹ?: ಆರ್ಯನ್ ಖಾನ್ ಅವರು ಅಂತಾರಾಷ್ಟ್ರೀಯ ನೆಟ್ವರ್ಕ್ನಿಂದ ಡ್ರಗ್ಸ್ ಸಂಗ್ರಹಿಸುವ ದೊಡ್ಡ ಪಿತೂರಿಯ ಭಾಗವಾಗಿದ್ದಾರೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಯ ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಯಾವುದೇ ಮಾದಕವಸ್ತುಗಳು ಪತ್ತೆಯಾಗದ ಕಾರಣ ಮತ್ತು ಪ್ರಾಥಮಿಕ ಪುರಾವೆಗಳು ವಾಟ್ಸಾಪ್ ಚಾಟ್ಗಳನ್ನು ಆಧರಿಸಿದ ಕಾರಣ, ಮಾದಕವಸ್ತು ಆರೋಪದ ಮೇಲೆ ಕೆಳ ನ್ಯಾಯಾಲಯಗಳು ಪದೇ ಪದೇ ಜಾಮೀನು ನಿರಾಕರಿಸುವ ಕಾನೂನುಬದ್ಧತೆಯ ಬಗ್ಗೆ ಖಾನ್ ಅವರ ಪರ ವಕೀಲರು ಪ್ರಶ್ನೆಗಳನ್ನು ಎತ್ತಿದ್ದಾರೆ.

ಬಾಲಿವುಡ್ ಡ್ರಗ್ ಬಂಧನಗಳ ಮಾದರಿ
ಕಳೆದ ಕೆಲವಾರು ವರ್ಷಗಳಿಂದ, ಬಾಲಿವುಡ್ ತಾರೆಯರು ಸಾಮಾನ್ಯವಾಗಿ ಡ್ರಗ್ಸ್ ಪ್ರಕರಣಗಳಲ್ಲಿ ಸಿಕ್ಕಿ ಬೀಳುತ್ತಿದ್ದಾರೆ.
ಖಾನ್ ಪ್ರಕರಣಕ್ಕೂ ಮುನ್ನ ಟ್ರೆಂಡ್ನಲ್ಲಿದ್ದ ಒಂದು ಪ್ರಕರಣದಲ್ಲಿ, ನಟಿ ರಿಯಾ ಚಕ್ರವರ್ತಿ ಬಂಧನವಾಗಿತ್ತು. 2020 ರ ಸೆಪ್ಟೆಂಬರ್ ತಿಂಗಳಲ್ಲಿ ಆಕೆಯ ಗೆಳೆಯ, ನಟ ಸುಶಾಂತ್ ಸಿಂಗ್ ರಜಪೂತ್ಗಾಗಿ ಡ್ರಗ್ಸ್ ಸಂಗ್ರಹಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು.
ಈ ಎರಡೂ ಪ್ರಕರಣಗಳಲ್ಲಿ, ಸಿನಿಮಾ ಉದ್ಯಮ ಸಂಪರ್ಕ ಹೊಂದಿರುವ ಆರೋಪಿಗಳಿಗೆ ಪದೇ ಪದೇ ಜಾಮೀನು ನಿರಾಕರಿಸಲಾಯಿತು. ಮತ್ತು ಎರಡೂ ಪ್ರಕರಣಗಳಲ್ಲಿ, ತನಿಖಾಧಿಕಾರಿಗಳು ತಮ್ಮ ಪ್ರಕರಣವನ್ನು ಮಾಡಲು ಬಂಧಿತರ ಫೋನ್ಗಳಿಂದ ಸಂಗ್ರಹಿತ ವಾಟ್ಸಾಪ್ ಚಾಟ್ಗಳನ್ನು ಸಾಕ್ಷಿಯಾಗಿ ಹೆಚ್ಚು ಬಳಸಿದ್ದಾರೆ ಮತ್ತು ಆರೋಪಿಗಳು ಮಾದಕ ದ್ರವ್ಯಗಳನ್ನು ವಿತರಿಸುವ ವ್ಯಾಪಕ ಪಿತೂರಿಯ ಭಾಗವಾಗಿದ್ದಾರೆ ಎಂದು ಹೇಳಿದ್ದಾರೆ.
"ಯಾವುದೇ ಸೆಲೆಬ್ರಿಟಿಗಳು ಕಾನೂನಿಗಿಂತ ದೊಡ್ಡವರಲ್ಲ. ಆದರೆ ಆರೋಪಿಯ ಸ್ಥಾನಮಾನವನ್ನು ಲೆಕ್ಕಿಸದೆ ಕಾನೂನನ್ನು ಇನ್ನೂ ಕಟ್ಟುನಿಟ್ಟಾಗಿ ಅನುಸರಿಸಬೇಕಾಗಿದೆ" ಎಂದು ಭಾರತದ ಸುಪ್ರೀಂ ಕೋರ್ಟ್ನ ಹಿರಿಯ ವಕೀಲರಾದ ರೆಬೆಕಾ ಜಾನ್ DW ಗೆ ತಿಳಿಸಿದ್ದಾರೆ.
"ಈ ಪ್ರಕರಣದಲ್ಲಿ, ಆರ್ಯನ್ ಖಾನ್ ಶಾರುಖ್ ಖಾನ್ ಅವರ ಮಗನಲ್ಲದಿದ್ದರೆ, ಅವರು ಬಹಳ ಹಿಂದೆಯೇ ಜಾಮೀನಿನ ಮೇಲೆ ಹೊರಗಿರಬಹುದು" ಎಂದು ಜಾನ್ ಸೇರಿಸಲಾಗಿದೆ.

ಹಿರಿಯ ವಕೀಲ ವಿಕಾಸ್ ಪಹ್ವಾ
"ಆ ಅರ್ಥದಲ್ಲಿ ಸಾಂವಿಧಾನಿಕ ರಕ್ಷಣೆಗಳನ್ನು ಉಲ್ಲಂಘಿಸಿ ಯುವಕನನ್ನು ಬಂಧಿಸಲು ಕಾನೂನನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ" ಎಂದು ಅನೇಕ ಹೈ ಪ್ರೊಫೈಲ್ ಕೇಸ್ ಕೈಗೆತ್ತಿಕೊಂಡು ನಿಭಾಯಿಸಿರುವ, ಭಾರತದ ಅತ್ಯಂತ ಗೌರವಾನ್ವಿತ ವಕೀಲರಲ್ಲಿ ಒಬ್ಬರಾದ ಜಾನ್ ಹೇಳಿದರು,
ಹಿರಿಯ ವಕೀಲ ವಿಕಾಸ್ ಪಹ್ವಾ, ಆರ್ಯನ್ ಖಾನ್ ತನ್ನ ಸೆಲೆಬ್ರಿಟಿ ಸ್ಥಾನಮಾನಕ್ಕೆ ಬೆಲೆ ತೆರುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಯಾವುದೇ [ಡ್ರಗ್ಸ್] ಜಪ್ತಿ ಇಲ್ಲದಿದ್ದಾಗ, ಸೇವನೆಯ ಯಾವುದೇ ಪುರಾವೆಗಳಿಲ್ಲ. ಕಾರ್ಯವಿಧಾನಗಳ ಸ್ಪಷ್ಟ ದುರುಪಯೋಗವಾಗಿದೆ," ಪಹ್ವಾ DW ಗೆ ಹೇಳಿದರು.
ಉನ್ನತ ಮಟ್ಟದ ಪ್ರಕರಣಗಳಲ್ಲಿ ಅಧಿಕಾರಿಗಳು ಜಾಮೀನು ನಿರಾಕರಿಸುವ ಪ್ರವೃತ್ತಿಯು ಭಾರತದಲ್ಲಿ ಹೊರಹೊಮ್ಮುತ್ತಿದೆ ಎಂದು ಕೆಲವರು ಹೇಳುತ್ತಾರೆ.
"ನ್ಯಾಯಶಾಸ್ತ್ರದ ಮಟ್ಟದಲ್ಲಿ ಹೆಚ್ಚು ಹೆಚ್ಚು ಸ್ವೀಕಾರವನ್ನು ಪಡೆಯುತ್ತಿರುವಂತೆ ತೋರುತ್ತಿರುವುದು ಏನೆಂದರೆ, ಜಾಮೀನು ನಿರಾಕರಣೆಯನ್ನು ಹೇಗಾದರೂ ನ್ಯಾಯಾಂಗದ ಪ್ರಾಮಾಣಿಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ" ಎಂದು ಭಾರತೀಯ ಸುಪ್ರೀಂ ಕೋರ್ಟ್ನ ವಕೀಲರಾದ ಫುಜೈಲ್ ಅಹ್ಮದ್ ಅಯ್ಯುಬಿ DW ಗೆ ತಿಳಿಸಿದರು.
"ಕಾನೂನು ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ಬಹುಶಃ ಇಲ್ಲಿ ಪ್ರಶ್ನೆಯಲ್ಲ, ಬದಲಿಗೆ ಜಾಮೀನು ವಿಷಯಗಳಲ್ಲಿ ವಿವೇಚನೆಯ ಬಳಕೆಯು ಸಮಸ್ಯೆಯ ಮೂಲವಾಗಿದೆ" ಎಂದು ಅಯ್ಯುಬಿ ಸೇರಿಸಲಾಗಿದೆ.

ಖಾನ್ಗಳನ್ನು ಗುರಿಯಾಗಿಸಿಕೊಂಡಿದ್ದಾರೆಯೇ ಅಧಿಕಾರಿಗಳು?
ಶಾರುಖ್ ಖಾನ್ ಭಾರತದ ಅತ್ಯಂತ ಪ್ರಸಿದ್ಧ ಸೆಲೆಬ್ರಿಟಿಗಳಲ್ಲಿ ಒಬ್ಬರು ಮತ್ತು ಅವರನ್ನು "ಕಿಂಗ್ ಖಾನ್, ಕಿಂಗ್ ಆಫ್ ಬಾಲಿವುಡ್" ಎಂದೇ ಕರೆಯಲಾಗುತ್ತದೆ. ಖಾನ್ ಭಾರತದ ಮುಸ್ಲಿಂ ಸಮುದಾಯದ ಪ್ರತಿನಿಧಿಯಾಗಿದ್ದಾರೆ, ಇದು ಅವರ ಮಗನ ಬಂಧನದ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಕೆಲವರು ನಂಬುವಂತೆ ಮಾಡಿದೆ.
" ಇಲ್ಲಿ ಮುಖ್ಯ ಗುರಿ ಆರ್ಯನ್ ಖಾನ್ ಅಲ್ಲ, ಅತಿದೊಡ್ಡ ಸೆಲೆಬ್ರಿಟಿಯಾಗಿರುವ ಶಾರುಖ್" ಎಂದು ಹಕ್ಕುಗಳ ಕಾರ್ಯಕರ್ತೆ ಮತ್ತು ಶಿಕ್ಷಣತಜ್ಞ ಸೈರಾ ಶಾ ಹಲೀಮ್ DW ಗೆ ತಿಳಿಸಿದ್ದಾರೆ.
"ಶಾರುಖ್ ಅವರ ಬ್ರ್ಯಾಂಡ್ಗೆ ಕಳಂಕ ತರುವ ಉದ್ದೇಶವಿದೆ, ಮತ್ತು ನಂತರ ಇತರ ಖಾನ್ಗಳನ್ನು ಅವರು ಅನುಗ್ರಹದಿಂದ ಬಿದ್ದವರಂತೆ ತೋರುವ ಮೂಲಕ ಅವರನ್ನು ಕುಸಿಯುವಂತೆ ಮಾಡುವ ಹುನ್ನಾರ" ಎಂದು ಅವರು ಹೇಳಿದರು.
ಆರ್ಯನ್ ಖಾನ್ ಪ್ರಕರಣವು ಪ್ರಸಿದ್ಧ ಮುಸ್ಲಿಂ ಕುಟುಂಬವನ್ನು ಕೆಟ್ಟದಾಗಿ ಕಾಣುವ ಮೂಲಕ ರಾಜಕೀಯ ಲಾಭಾಂಶವನ್ನು ಪಡೆಯುವ ದೊಡ್ಡ ತಂತ್ರದ ಭಾಗವಾಗಿದೆ ಎಂದು ತಾನು ನಂಬುತ್ತೇನೆ ಎಂದು ಹಲೀಮ್ ಹೇಳಿದರು. ಮತ್ತು ಇದು ಹಲೀಮ್ ಒಬ್ಬರ ಅಭಿಪ್ರಾಯ ಮಾತ್ರವಲ್ಲ, ಹಲವರ ಅನಿಸಿಕೆಯಾಗಿದೆ.

ಆತ ಇನ್ನೂ ಸ್ಟಾರ್ ಆಗಿ ಬೆಳೆದಿಲ್ಲ
ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ "ಕ್ರಶಿಂಗ್ ದಿ ಸ್ಟಾರ್ಸ್" ಎಂಬ ಶೀರ್ಷಿಕೆಯ ಇತ್ತೀಚಿನ ಲೇಖನದಲ್ಲಿ, ಪ್ರತಾಪ್ ಭಾನು ಮೆಹ್ತಾ ಅವರು "ಮುಸ್ಲಿಮ್ನೆಸ್" ಮೇಲೆ ಸೈದ್ಧಾಂತಿಕ ಯುದ್ಧ ಇದಾಗಿದೆ ಎಂದು ವಾದಿಸಿದ್ದಾರೆ.
ಆಹಾರದಿಂದ ಹಿಡಿದು ಮುಸ್ಲಿಂ ಸೆಲೆಬ್ರಿಟಿಗಳವರೆಗೆ ಸಾಂಸ್ಕೃತಿಕ ಅಭಿವ್ಯಕ್ತಿಗೆ ಕಡಿವಾಣ ಹಾಕುವುದು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಂ ಧಾರ್ಮಿಕತೆಯನ್ನು ಅಗೋಚರವಾಗಿಸುವುದು ಇದರಲ್ಲಿ ಸೇರಿದೆ ಎಂದಿದ್ದಾರೆ.
ಮೆಹ್ತಾ ಅವರ ಪ್ರಕಾರ, ಬಾಲಿವುಡ್ನ ಮಿತಿಮೀರಿದ ಪಳಗಿಸುವ ಉದ್ದೇಶವು ಚಲನಚಿತ್ರ ತಾರೆಯರು ಕಾನೂನಿನ ಮುಂದೆ ಸಮಾನರು ಎಂದು ತೋರಿಸಲು ಮಾಡಿದ ಯತ್ನದಂತೆ ಕಾಣುತ್ತಿಲ್ಲ ಬದಲಿಗೆ ನಿಜವಾದ ಶಕ್ತಿ ಮತ್ತು ಸಾಂಸ್ಕೃತಿಕ ಕ್ರಮವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಪ್ರದರ್ಶಿಸಲು ಅಧಿಕಾರಿಗಳು ಮುಂದಾಗಿದ್ದರು ಎನಿಸುತ್ತದೆ ಎಂದಿದ್ದಾರೆ.
"ಆರೋಪಿ ಶಾರುಖ್ ಖಾನ್ ಅವರ ಮಗ ಎಂದು ಒಪ್ಪಿಕೊಳ್ಳಬೇಕು, ಆತ ಇನ್ನೂ ಸ್ಟಾರ್ ಆಗಿ ಬೆಳೆದಿಲ್ಲ, ಆದರೆ ಇಡೀ ಪ್ರಕ್ರಿಯೆಯಲ್ಲಿ, ಗುರಿಯನ್ನು ಸ್ಪಷ್ಟಪಡಿಸಲು ಸಾಧ್ಯವಾಗಲಿಲ್ಲ" ಎಂದು ಮೆಹ್ತಾ ಹೇಳಿದರು.
|
ಚಿತ್ರರಂಗ ಬಹಿರಂಗವಾಗಿ ಮುಂದೆ ಬಂದಿಲ್ಲ
ಆಶ್ಚರ್ಯಕರ ಸಂಗತಿಯೆಂದರೆ, ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಶಾರುಖ್ ಖಾನ್ ಅವರನ್ನು ಬೆಂಬಲಿಸಲು ಬಹಿರಂಗವಾಗಿ ಮುಂದೆ ಬಂದಿಲ್ಲ, ಕೇವಲ ಬೆರಳೆಣಿಕೆಯಷ್ಟು ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಚಿತ್ರ ನಿರ್ದೇಶಕ ಸಂಜಯ್ ಗುಪ್ತಾ ಟ್ವಿಟ್ಟರ್ನಲ್ಲಿ ಖಾನ್ ಅವರನ್ನು ಹೊಗಳಿದ್ದಾರೆ.
"ಅವರು ಚಲನಚಿತ್ರೋದ್ಯಮದ ಪ್ರತಿಯೊಂದು ಸಮಸ್ಯೆಗೂ ಸ್ಪಂದಿಸಿದ್ದಾರೆ, ಬೆಂಬಲವಾಗಿ ನಿಂತಿದ್ದಾರೆ. ಮತ್ತು ಅವರು ಕಠಿಣ ಕ್ಷಣ ಎದುರಿಸುವಾಗ ಇದೇ ಚಿತ್ರರಂಗದ ಚಾಣಾಕ್ಷ ಮೌನವು ನಾಚಿಕೆಗೇಡಿನ ಸಂಗತಿಯಲ್ಲದೇ ಮತ್ತೇನು."
ಜಾಮೀನು ನೀಡಿದ ಹೈಕೋರ್ಟ್ ತೀರ್ಪನ್ನು ಗುಪ್ತಾ ಸ್ವಾಗತಿಸಿದ್ದಾರೆ.
Recommended Video
|
ಖಾನ್ ಬಂಧನವನ್ನು ತೀವ್ರವಾಗಿ ಖಂಡಿಸಿದ್ದರು
ಚಲನಚಿತ್ರ ನಿರ್ಮಾಪಕ ರಾಹುಲ್ ಧೋಲಾಕಿಯಾ ಅವರು ಖಾನ್ ಬಂಧನವನ್ನು ತೀವ್ರವಾಗಿ ಖಂಡಿಸಿದ್ದರು.
"ಅವನ ಫೋನ್ನಿಂದ ವಶಪಡಿಸಿಕೊಂಡ 'ವಾಟ್ಸಾಪ್' ಚಾಟ್ನ ಆಧಾರದ ಮೇಲೆ ಅವನ 'ಅಂತಾರಾಷ್ಟ್ರೀಯ' ದಂಧೆಗೆ 'ಸಂಭವನೀಯ' ಸಂಪರ್ಕವಿದೆ ಎಂದು ನೀವು ಹೇಳುತ್ತಿದ್ದೀರಾ, ಏನೋ ದೊಡ್ಡದು ಕೈವಶವಾಗಿದೆ ಎಂದು ಭ್ರಮೆ ಹುಟ್ಟಿಸಿದ್ದೀರಾ, ಮತ್ತು ನೀವು ಹಲವಾರು ದಿನಗಳಿಂದ ಗಾಳ ಹಾಕಿದ್ದೀರಿ ಆದರೆ, ಇನ್ನೂ ಏನೂ ಕಂಡುಬಂದಿಲ್ಲವೇಕೆ?" ಎಂದು ಪ್ರಶ್ನಿಸಿದ್ದಾರೆ. (DW)
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications