ವೈರಲ್ ವಿಡಿಯೋ: ಟ್ರಕ್ನ ಹಾರ್ನ್ಗೆ ನಡುರಸ್ತೆಯಲ್ಲಿ ಬೈಕರ್ಸ್ನ 'ನಾಗಿನ್' ನೃತ್ಯ
ಬೇಸಿಗೆ ಬಿಸಿಲಿಗೆ ಹೈರಾಣಾಗಿದ್ದ ಜನರಿಗೆ ಮುಂಗಾರು ಅದೆಷ್ಟು ಖುಷಿ ಕೊಟ್ಟಿದೆ ಎಂದು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಯಾಕೆಂದ್ರೆ ಕಳೆದೆರೆಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಮನೆ ಬಿಟ್ಟು ಹೊರಬರಲು ಹಿಂದಾಟುತ್ತಿದ್ದ ಜನಕ್ಕೆ ಈ ಬಾರಿಯ ಮುಂಗಾರು ಸ್ವರ್ಗದ ಬಾಗಿಲು ತೆರೆದಷ್ಟೇ ಖುಷಿ ನೀಡಿದೆ. ಪ್ರವಾಸ, ಟ್ರಕ್ಕಿಂಗ್, ಔಟಿಂಗ್ ಹೋಗುವ ಯುವಕರಿಗೆ ಇದು ಸಖತ್ ಚಿಲ್ ನೀಡಿದ್ದು ಸುಳ್ಳಲ್ಲ.
ಬೇಸಿಗೆಯ ಸುದೀರ್ಘ ಅವಧಿಯ ನಂತರ ಮಳೆ ಜನರ ಹೃದಯವನ್ನು ಸಂತೋಷಗೊಳಿಸಿದೆ. ಈ ಮುಂಗಾರು ಮಳೆಯನ್ನು ಆನಂದಿಸಲು ಬೈಕ್ ಸವಾರರು ರಸ್ತೆಯಲ್ಲಿ 'ನಾಗಿನ್' ನೃತ್ಯ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮೆಚ್ಚುಗೆ ಪಡೆದುಕೊಂಡಿದೆ.
ಕರ್ನಾಟಕದಲ್ಲಿ ಈ ಘಟನೆ ನಡೆದಿದೆ. ಟ್ರಕ್ನ ಹಾರ್ನ್ನ ಸಂಗೀತಕ್ಕೆ ಬೈಕರ್ಗಳ ಗುಂಪು ಉಲ್ಲಾಸದ ನೃತ್ಯವನ್ನು ಮಾಡಿದೆ. ಮಳೆಯಿಂದ ತೋಯ್ದ ರಸ್ತೆಯ ಬದಿಯಲ್ಲಿ ಬೈಕ್ಗಳನ್ನು ನಿಲ್ಲಿಸಿ ಅವರು ಆಹ್ಲಾದಕರ ವಾತಾವರಣವನ್ನು ಮನಬಿಚ್ಚಿ ಸಂಪೂರ್ಣವಾಗಿ ಆನಂದಿಸುತ್ತಿದ್ದಾರೆ.

ಟ್ರಕ್ನ ಮುಂದೆ ಬೈಕ್ಗಳ ಡ್ಯಾನ್ಸ್
ಜೋರಾಗಿ ಹಾರ್ನ್ ಮಾಡುವ ಟ್ರಕ್ನ ಮುಂದೆ ಬೈಕ್ಗಳು ನಿಲ್ಲಿಸುವದರೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. 'ನಾಗಿನ್' ಹಾರ್ನ್ ಹೇಳಿಸುತ್ತಿದ್ದಂತೆ ಬೈಕರ್ಗಳು ಬೇಗನೆ ತಮ್ಮ ಬೈಕ್ಗಳನ್ನು ನಿಲ್ಲಿಸುತ್ತಾರೆ. ನಂತರ ಚಾಲಕನು ಶ್ರೀದೇವಿ ಅಭಿನಯದ 'ನಾಗಿನ್' ಚಿತ್ರದ ಜನಪ್ರಿಯ "ಮೇನ್ ತೇರಿ ದುಷ್ಮನ್" ಹಾಡಿನ ಟ್ಯೂನ್ ಅನ್ನು ಆಧರಿಸಿದ ಟ್ಯೂನ್ ಇದಾಗಿತ್ತು.

ರಸ್ತೆಯಲ್ಲಿ ತೆವಳುತ್ತಾ ನಾಗಿನ್ ನೃತ್ಯ
ಈ ಟ್ಯೂನ್ ಕೇಳುತ್ತಿದ್ದಂತೆ ಯುವಕರು ಉತ್ಸಾಹದಿಂದ ನೃತ್ಯ ಮಾಡಲು ಪ್ರಾರಂಭಿಸುತ್ತಾರೆ ಮತ್ತು ಅವರಲ್ಲಿ ಕೆಲವರು ಕಿರಿಚುವ ಮತ್ತು ಉತ್ಸಾಹದಿಂದ ಕೂಗುವುದನ್ನು ಸಹ ಕೇಳಿಬರುತ್ತದೆ. ಒಬ್ಬ ಹುಡುಗ ರಸ್ತೆಯಲ್ಲಿ ತೆವಳುತ್ತಾ ಹಾವಿನ ಸ್ಲಿಥರಿಂಗ್ ಕ್ರಿಯೆಯನ್ನು ನಕಲಿಸುತ್ತಾನೆ.

ಕಾಲೇಜು ದಿನಗಳನ್ನು ನೆನೆಸಿಕೊಂಡ ನೆಟ್ಟಿಗರು
ಟ್ವಿಟರ್, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಕ್ಲಿಪ್ಗಳು ಹೊರಹೊಮ್ಮುವುದರೊಂದಿಗೆ ಅವರ ನಾಗಿನ್ ನೃತ್ಯವು ಇಂಟರ್ನೆಟ್ನಲ್ಲಿ ತ್ವರಿತ ಹಿಟ್ ಆಗಿದೆ. "ನೀವು ಸಂತೋಷವಾಗಿರಲು ಯಾವುದೇ ಕಾರಣ ಬೇಕಾಗಿಲ್ಲ" ಎಂದು ಟ್ವಿಟರ್ನಲ್ಲಿ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಸಂತೋಷ ಆಯ್ಕೆಯ ವಿಷಯವಾಗಿದೆ ಇದು ಯಾರ ಸ್ವತ್ತಲ್ಲ" ಎಂದು ಇನ್ನೊಬ್ಬರು ಹೇಳಿದರು. ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಕಾಲೇಜಿನಲ್ಲಿನ ಸಮಯ ಮತ್ತು ನೃತ್ಯದ ದಿನಚರಿಗಳನ್ನು ಸಹ ನೆನಪಿಸಿಕೊಳ್ಳುತ್ತಾರೆ.

ಐಎಂಡಿ ಸೂಚನೆ
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕರ್ನಾಟಕ ಮತ್ತು ಇತರ ರಾಜ್ಯಗಳಿಗೆ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಿದೆ. "2022 ರ ಜುಲೈ 12 ರಿಂದ ಗುಜರಾತ್, ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರ ಮತ್ತು ಕರಾವಳಿ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆ ಇದೆ" ಎಂದು ಅದು ಟ್ವೀಟ್ನಲ್ಲಿ ತಿಳಿಸಿದೆ.
Recommended Video
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ












Click it and Unblock the Notifications