ವಿಡಿಯೋ: ಪ್ರವಾಸಿಗರ ನಡುವೆ ಜಿಂಕೆ ಮೇಲೆ ದಾಳಿ ಮಾಡಿದ ಚಿರತೆ
ಭಾರತದಲ್ಲಿ 70 ವರ್ಷಗಳ ಹಿಂದೆ ಚಿರತೆಗಳು ಅಳಿವಿನಂಚಿನಲ್ಲಿವೆ. ಆದರೆ ಈಗ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನವು 8 ಚಿರತೆಗಳಿಗೆ ನೆಲೆಯಾಗಿದೆ. ಚಿರತೆಗಳು ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಓಡುವ ಪ್ರಾಣಿಗಳು. ಆದ್ದರಿಂದ ಅವು ಯಾವುದೇ ಬೇಟೆಯ ಹಿಂದೆ ಹೋದರೆ ಬೇಟೆ ತಪ್ಪಿಸಿಕೊಳ್ಳುವ ಮಾತೇ ಇಲ್ಲ. ಚಿರತೆಗಳು ಭಾರತಕ್ಕೆ ಬಂದ ನಂತರ ಜನರು ಈಗ ಸಾಮಾಜಿಕ ಜಾಲತಾಣಗಳು ಮತ್ತು ಯೂಟ್ಯೂಬ್ನಲ್ಲಿ ಅದರ ವಿಡಿಯೊಗಳನ್ನು ಹುಡುಕುತ್ತಿದ್ದಾರೆ. ಈ ಮಧ್ಯೆ, ಚಿರತೆಯೊಂದು ಜಿಂಕೆಯನ್ನು ಬೇಟೆಯಾಡುತ್ತಿರುವ ವಿಡಿಯೋವೊಂದು ಹೆಚ್ಚು ವೈರಲ್ ಆಗುತ್ತಿದೆ.
ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದಿಂದ ವಿಡಿಯೋವೊಂದು ವೈರಲ್ ಆಗಿದೆ. ಉದ್ಯಾನವನದಲ್ಲಿ 20 ಮಾರ್ಚ್ 2022 ರಂದು ಕೆಲವರು ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಆದರೆ ಅದು ಈಗ ಹೆಚ್ಚು ವೈರಲ್ ಆಗುತ್ತಿದೆ. ವಿಶೇಷ ವಾಹನಗಳಲ್ಲಿ ಹಲವಾರು ಪ್ರವಾಸಿಗರು ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸಿದ್ದು, ಜಿಂಕೆಗಳು ಅವುಗಳ ನಡುವೆ ಸ್ವಚ್ಛಂದವಾಗಿ ವಿಹರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಗ ಅಲ್ಲಿನ ಪೊದೆಗಳ ನಡುವೆ ಚಿರತೆಯೊಂದು ಹೊರಹೊಮ್ಮುತ್ತದೆ. ಆಹಾರವನ್ನು ಹುಡುಕಿಕೊಂಡು ಬಂದ ಚಿರತೆ ಜಿಂಕೆಗಳ ಹಿಂಡಿನ ಮೇಲೆ ದಾಳಿ ಮಾಡಿದೆ.

ಜಿಂಕೆಗಳ ಮೇಲೆ ದಾಳಿ ಮಾಡಿದ ಚಿರತೆ
ಪ್ರವಾಸಿಗರು ಜಿಂಕೆಗಳ ಅದ್ಬುತ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ ವೇಳೆ ಚಿರತೆ ಏಕಾಏಕಿ ಜಿಂಕೆಗಳ ಮೇಲೆ ದಾಳಿ ಮಾಡಿದೆ. ಚಿರತೆ ದಾಳಿ ಮಾಡುತ್ತಿದ್ದಂತೆ ಜಿಂಕೆಗಳ ಹಿಂಡು ಚದುರಿ ಅಲ್ಲೋಲಕಲ್ಲೋಲವಾಗುವುದು ವಿಡಿಯೋದಲ್ಲಿ ಕಾಣಬಹುದು. ಈ ದೃಶ್ಯವನ್ನು ಕಂಡು ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ. ಕ್ಷಣ ಮಾತ್ರಕ್ಕೆ ಜಿಂಕೆಗಳು ವೇಗವಾಗಿ ಓಡಲು ಆರಂಭಿಸಿವೆ. ಆದರೆ ಅದರಲ್ಲಿದ್ದ ಒಂದು ಜಿಂಕೆ ಹೋಡಲು ಸಾಧ್ಯವಾಗದೆ ಚಿರತೆಯ ಮುಂದೆ ಸೋತಿದೆ. ಚಿರತೆ ನೇರವಾಗಿ ಅದರ ಕುತ್ತಿಗೆ ಮೇಲೆ ದಾಳಿ ಮಾಡಿದೆ. ವೇಗವಾಗಿ ದಾಳಿ ಮಾಡಿ ಜಿಂಕೆ ಅರ್ಧ ಜೀವವನ್ನೇ ಕೊಂದಿದೆ. ಪೊದೆಗಳಲ್ಲಿ ಈ ಕಾದಾಟ ನಡೆಯುತ್ತಿದ್ದರೂ, ಚಿರತೆ ಮತ್ತು ಜಿಂಕೆಗಳು ರಸ್ತೆಯಲ್ಲಿ ಓಡಿ ಬಂದಿದ್ದವು. ಪ್ರವಾಸಿಗರ ಹತ್ತಾರು ವಾಹನಗಳು ಅಲ್ಲಿ ನಿಂತಿದ್ದವು. ಅವುಗಳನ್ನು ನೋಡಿದ ಚಿರತೆ ಹೆದರಿ ತನ್ನ ಬೇಟೆಯನ್ನು ಬಿಟ್ಟಿತು.
ತೀವ್ರವಾಗಿ ಗಾಯಗೊಂಡ ಜಿಂಕೆ
ಜಿಂಕೆ ತೀವ್ರವಾಗಿ ಗಾಯಗೊಂಡಿತ್ತು. ಇದರಿಂದಾಗಿ ಅದು ಕಾರಿನ ಬಳಿ ಹೋಗಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳಲು ಪ್ರಾರಂಭಿಸಿತು. ಆಗ ಪ್ರವಾಸಿಗರಿಗೆ ಮತ್ತೆ ಚಿರತೆ ಬರುವುದಿಲ್ಲ ಎಂದು ಎನಿಸಿತು. ದೂರದಲ್ಲಿ ನಿಂತ ಚಿರತೆ ಪರಿಸರವನ್ನು ಗಮನಿಸುತ್ತಲೇ ಇತ್ತು. ನಂತರ ಮನುಷ್ಯರಿಗೂ ಹೆದರದ ಚಿರತೆ ಕಾರಿನ ಬಳಿ ತಲುಪಿ ಜಿಂಕೆಯ ಕೊರಳನ್ನು ಹಿಡಿದು ಎಳೆದೊಯ್ಯುತ್ತದೆ. ಜಿಂಕೆಯನ್ನು ಪೊದೆಗೆ ಎಳೆದೊಯ್ದು ತಿನ್ನುತ್ತದೆ.

ಎಚ್ಚರಗೊಳ್ಳದ ಜಿಂಕೆ ಬಲಿ
ಘಟನೆಯ ವೇಳೆ ಅಲ್ಲಿ ಸುಮಾರು 50 ಜಿಂಕೆಗಳು ಇದ್ದವು ಎಂದು ವಿಡಿಯೋ ಚಿತ್ರೀಕರಿಸಿದವರು ಹೇಳಿದ್ದಾರೆ. ಚಿರತೆ ಮೊದಲು ಎಲ್ಲರ ಮೇಲೆ ನಿಗಾ ಇರಿಸಿ ನಂತರ ದುರ್ಬಲ ಜಿಂಕೆ ಮೇಲೆ ದಾಳಿ ಮಾಡಿತು. ದಾಳಿಯನ್ನು ನೋಡಿದ ಉಳಿದ ಜಿಂಕೆಗಳು ಅಲ್ಲಿಂದ ಓಡಿಹೋದವು. ಅಚ್ಚರಿ ಎಂದರೆ ಜಿಂಕೆಗಳಿಗೆ ಅಪಾಯದ ಅರಿವಿರಲಿಲ್ಲ. ಆದರೆ ಬೆಳ್ಳಕ್ಕಿಗಳು ಎಚ್ಚರಿಕೆ ನೀಡಲು ಪ್ರಯತ್ನಿಸಿದ ನಂತರವೂ ಆ ಪ್ರದೇಶವನ್ನು ಬಿಡಲಿಲ್ಲ. ಹೀಗಾಗಿ ಜಿಂಕೆ ಚಿರತೆಗೆ ಬಲಿಯಾಯಿತು.

ಚಿರತೆಗಳ ಅವನತಿಗೆ ಕಾರಣ
ಚಿರತೆಯು ಕೇವಲ 3 ಸೆಕೆಂಡುಗಳಲ್ಲಿ ಗಂಟೆಗೆ 100 ಕಿಮೀ ವೇಗದಲ್ಲಿ ಓಡುತ್ತದೆ. ಇದಲ್ಲದೇ ಗಂಟೆಗೆ 130 ಕಿ.ಮೀ ವೇಗದಲ್ಲಿ ಓಡುವ ಮೂಲಕ 23 ಅಡಿ ಜಿಗಿಯಬಹುದು. ಜೀವಶಾಸ್ತ್ರಜ್ಞರ ಪ್ರಕಾರ, ಸರಾಸರಿ 100 ಚಿರತೆಗಳಲ್ಲಿ 5 ಮಾತ್ರ ಬದುಕುಳಿಯುತ್ತವೆ. ಇದರ ಹಿಂದಿರುವ ಕಾರಣ ಸಿಂಹ, ಕತ್ತೆಕಿರುಬ ಮುಂತಾದ ಪ್ರಾಣಿಗಳ ಬೇಟೆಯಿಂದಾಗಿ ಅವು ಸಾವನ್ನಪ್ಪುತ್ತವೆ. ಈ ಪ್ರಾಣಿಗಳು ಸುಲಭವಾಗಿ ಚಿರತೆ ಮರಿಗಳನ್ನು ಬೇಟೆಯಾಡುತ್ತವೆ. ಇದಲ್ಲದೇ ಚಿರತೆಗಳ ದೊಡ್ಡ ಕಳ್ಳಸಾಗಣೆಯೂ ಚಿರತೆಗಳ ಅವನತಿಗೆ ಕಾರಣ ಎನ್ನಲಾಗುತ್ತದೆ.
-
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ












Click it and Unblock the Notifications