ರಾಜ್ಯದಲ್ಲಿ ಬೀದಿ ನಾಯಿಗಳು ಜನರಿಗೆ ಕಚ್ಚಿರುವ ಸಂಖ್ಯೆ ಎಷ್ಟು ಗೊತ್ತಾ?
ಕರ್ನಾಟಕದಲ್ಲಿ ಈ ವರ್ಷ 1.58 ಲಕ್ಷಕ್ಕೂ ಹೆಚ್ಚು ಜನರಿಗೆ ನಾಯಿಗಳು ಕಚ್ಚಿದೆ. ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ, ಇವರೊಂದಿಗೆ 2,677 ಜನರಿಗೆ ಬೆಕ್ಕು ಮತ್ತು ಮಂಗಗಳಂತಹ ಪ್ರಾಣಿಗಳು ಜನರಿಗೆ ಹಾಗೂ ಮಕ್ಕಳಿಗೆ ಕಚ್ಚಿವೆ. ಕಳೆದ ವರ್ಷವೂ ಈ ಸಂಖ್ಯೆಗಳು ಹೆಚ್ಚಾಗಿತ್ತು. ಕಳೆದ ವರ್ಷ ಒಟ್ಟು 2.5 ಲಕ್ಷ ಪ್ರಾಣಿ ಕಡಿತ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇನ್ನು ರೇಬಿಸ್ ಸಾವುಗಳಿಗೆ ಸಂಬಂಧಿಸಿದಂತೆ, ನಿಮ್ಹಾನ್ಸ್ನಲ್ಲಿನ ಪ್ರಯೋಗಾಲಯ ಪರೀಕ್ಷೆಗಳ ಆಧಾರದ ಮೇಲೆ ಈ ವರ್ಷದ ಜುಲೈವರೆಗೆ 9 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಕಳೆದ ವರ್ಷ 13 ಸಾವುಗಳು ದೃಢಪಟ್ಟಿವೆ ಎಂದು ಸರ್ಕಾರವೇ ಮಾಹಿತಿ ನೀಡಿದೆ.
ಆರೋಗ್ಯ ಇಲಾಖೆಯು ಕೆಲವು ಪ್ರಕರಣಗಳನ್ನು ಆಸ್ಪತ್ರೆಯಲ್ಲಿ ವೈದ್ಯಕೀಯವಾಗಿ ಶಂಕಿತ ರೇಬೀಸ್ ಸಾವುಗಳು ಎಂದು ವರ್ಗೀಕರಿಸುತ್ತದೆ. ಈ ವರ್ಗದಲ್ಲಿ ಸೇರಿಸಲಾದ ಸಂಖ್ಯೆಗಳು ಪ್ರಯೋಗಾಲಯದ ದೃಢೀಕರಣವಿಲ್ಲದೆ ವೈದ್ಯಕೀಯ ಮೌಲ್ಯಮಾಪನವನ್ನು ಆಧರಿಸಿವೆ. ಈ ವರ್ಷವು ಇದುವರೆಗೆ ಇಂತಹ ಮೂರು ಪ್ರಕರಣಗಳು ವರದಿಯಾಗಿವೆ. ಇನ್ನೊಂದು ಪ್ರಕರಣದಲ್ಲಿ ಆರು ಶಂಕಿತ ರೋಗಿಗಳು ವೈದ್ಯಕೀಯ ಸಲಹೆಗೆ ವಿರುದ್ಧವಾಗಿ ಆಸ್ಪತ್ರೆ ತೊರೆದಿದ್ದರು. ಅವರು ಬದುಕುಳಿದಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಹಾಗೂ ಅನೇಕ ಪ್ರಕರಣಗಳು ದಾಖಲಾಗಿಲ್ಲ.

ಬೀದಿ ನಾಯಿ ಕಡಿತಕ್ಕೆ ಲಸಿಕೆಗಳು ಕಡಿಮೆ
ಪ್ರಸ್ತುತ, ಆರೋಗ್ಯ ಇಲಾಖೆಯಲ್ಲಿ ನಾಯಿ ಕಡಿತ ಮತ್ತು ಲಸಿಕೆಗಳ ಅಂಕಿ-ಅಂಶಗಳು ತುಂಬಾ ಕಡಿಮೆಯಾಗಿದೆ. ಹೆಚ್ಚಿನ ರೋಗಿಗಳು ಕಚ್ಚಿದ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (PHC) ತಲುಪುತ್ತಾರೆ. ಆರೋಗ್ಯ ಇಲಾಖೆಯ ಅಧಿಕಾರಿಯ ಪ್ರಕಾರ, ರೇಬಿಸ್ ಮತ್ತು ಇತರ ಕೆಲವು ಕಾಯಿಲೆಗಳಿಗೆ ಸಂಬಂಧಿಸಿದ ದೈನಂದಿನ ಡೇಟಾವನ್ನು ವರದಿ ಮಾಡಲು ಪಿಎಚ್ಸಿಯು ಮೀಸಲಾದ ಡೇಟಾ ಎಂಟ್ರಿ ಆಪರೇಟರ್ ಹೊಂದಿರಬೇಕು. ಇದರಿಂದ ಯಾವುದೇ ಪ್ರಕರಣವು ತಪ್ಪಿಸಿಕೊಳ್ಳಬಾರದು. ಆದರೆ ಅನೇಕ ಪಿಎಚ್ಸಿಗಳಲ್ಲಿ ಮೀಸಲಿಟ್ಟ ಸಿಬ್ಬಂದಿ ಇಲ್ಲ. ಇದರರ್ಥ ಪ್ರಕರಣಗಳ ಡೇಟಾ ಕಡಿಮೆ ವರದಿಯಾಗಿರಬಹುದು ಅಥವಾ ಸಮಯಕ್ಕೆ ಸರಿಯಾಗಿ ಅಪ್ಲೋಡ್ ಮಾಡದಿರಬಹುದು.

ಖಾಸಗಿ ಆಸ್ಪತ್ರೆಗಳ ಮಾಹಿತಿ ಲಭ್ಯವಾಗಿಲ್ಲ
ಅಲ್ಲದೆ ಪ್ರಸ್ತುತ ಡೇಟಾವು ಖಾಸಗಿ ವಲಯವನ್ನು ಒಳಗೊಂಡಿಲ್ಲ. ಸರ್ಕಾರಿ ಸೌಲಭ್ಯಗಳು ಪ್ರಸ್ತುತ ತಮ್ಮ ಡೇಟಾವನ್ನುಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪ್ಲಾಟ್ಫಾರ್ಮ್ ( IHIP)ಗೆ ಅಪ್ಲೋಡ್ ಮಾಡುತ್ತವೆ. ಪ್ರಸ್ತುತ ಪ್ಲಾಟ್ಫಾರ್ಮ್ ವರದಿ ಮಾಡುವ 95 ಪ್ರತಿಶತವು ಸರ್ಕಾರಿ ವಲಯದಿಂದ ಬಂದಿದೆ. NFHS-4 (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ) ಪ್ರಕಾರ, ಕರ್ನಾಟಕದಲ್ಲಿ 64 ಪ್ರತಿಶತ ರೋಗಿಗಳು ಖಾಸಗಿ ವಲಯದೊಂದಿಗೆ ಸಂಪರ್ಕ ಹೊಂದಿದ್ದಾರೆ. ಆದ್ದರಿಂದ ಖಾಸಗಿ ಸೌಲಭ್ಯಗಳಿಂದ ಡೇಟಾವನ್ನು ಪಡೆಯುವುದು ಮುಖ್ಯವಾಗಿದೆ.

466 ಆಸ್ಪತ್ರೆಗಳಿಂದ ಮಾಹಿತಿ ಕೇಳಲಾಗಿದೆ
ಪ್ರಸ್ತುತ ನಾವು 30 ಅಥವಾ ಹೆಚ್ಚಿನ ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಗಳನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದು ರಂದೀಪ್ ಹೇಳಿದ್ದಾರೆ. ಅವುಗಳಲ್ಲಿ ಮೊದಲ ಹಂತದಲ್ಲಿ ದತ್ತಾಂಶವನ್ನು ನಮೂದಿಸಲು ನಾವು ದೊಡ್ಡದಾದ, ಹೆಚ್ಚು ವಿಶ್ವಾಸಾರ್ಹ ಮತ್ತು ಕಾರ್ಯವಿಧಾನವನ್ನು ತಿಳಿದಿರುವ 466 ಆಸ್ಪತ್ರೆಗಳನ್ನು ಕೇಳಿದ್ದೇವೆ. ಪ್ರತಿ ಆಸ್ಪತ್ರೆಯಲ್ಲಿನ ನೋಡಲ್ ಅಧಿಕಾರಿಗಳನ್ನು ಗುರುತಿಸಲು ಮತ್ತು ತರಬೇತಿ ನೀಡಲು ಜಿಲ್ಲಾ ಕಣ್ಗಾವಲು ಅಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಹಣವನ್ನು ನೀಡಲಾಗಿದೆ. ಅವರು ಡೇಟಾ ಎಂಟ್ರಿಗೆ ಜವಾಬ್ದಾರರಾಗಿರುತ್ತಾರೆ. ಕಾಲಾನಂತರದಲ್ಲಿ ಡೇಟಾ ನಮೂದನ್ನು ಏಕ ಚಿಕಿತ್ಸಾಲಯಗಳು ಮತ್ತು ಪ್ರಯೋಗಾಲಯಗಳಿಗೆ ವಿಸ್ತರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ರೇಬೀಸ್ ಡೇಟಾವನ್ನು ದಾಖಲಿಸಲು ಸೂಚನೆ
ಕಳೆದ ಸೆಪ್ಟೆಂಬರ್ 1ರಂದು ರಾಜ್ಯ ಆರೋಗ್ಯ ಕಮಿಷನರ್ ಡಿ ರಂದೀಪ್ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಅಸೋಸಿಯೇಷನ್, ಖಾಸಗಿ ಆರೋಗ್ಯ ಸೌಲಭ್ಯಗಳು ಮತ್ತು ಪ್ರಯೋಗಾಲಯಗಳು ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪ್ಲಾಟ್ಫಾರ್ಮ್ನಲ್ಲಿ ರೇಬೀಸ್ ಡೇಟಾವನ್ನು ಕಡ್ಡಾಯ ದಾಖಲಿಸುವುದನ್ನು ಖಚಿತಪಡಿಸಿಕೊಳ್ಳಲು ಐಎಂಎಗೆ ನಿರ್ದೇಶನವನ್ನು ನೀಡಿದ್ದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications