Ram Navami Health Tips: ಬೇಲದ ಹಣ್ಣಿನ ಪಾನಕ ಮಾಡುವುದು ಹೇಗೆ?
ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು, ರಾಮ ನವಮಿಯನ್ನು ಆಚರಿಸಲಾಗುತ್ತದೆ. ಬೇಸಿಗೆಯಲ್ಲಿ ಬರುವ ಪ್ರಮುಖ ಹಬ್ಬವಾಗಿರುವ ರಾಮನವಮಿಯಂದು ಪ್ರಮುಖವಾಗಿ ಹಂಚುವ ಪಾನಕ, ನೀರು ಮಜ್ಜಿಗೆ, ಕೋಸಂಬರಿ ಎಲ್ಲರಿಗೂ ಅಚ್ಚು ಮೆಚ್ಚು. ಬಿಸಿಲಿನ ತಾಪಕ್ಕೆ ಬೆಂದ ಭಕ್ತರ ಜಠರಾಗ್ನಿ ತಣಿಸಲು ಪಾನಕ ಸಹಕಾರಿ. ಮುಖ್ಯವಾಗಿ ನಿಂಬೆ, ಕಲ್ಲಂಗಡಿ, ಕರಬೂಜ ಬಳಸಿ ಪಾನಕ ತಯಾರಿಸಲಾಗುತ್ತದೆ. ಈ ಪೈಕಿ ಬೇಲದ ಹಣ್ಣಿಗೆ ಮಹತ್ವ ಹೆಚ್ಚಾಗಿದೆ.
ಭಕ್ತರು ಇಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ, ಸಲ್ಲಿಸಿ, ಪ್ರಾರ್ಥಿಸುತ್ತಾರೆ. ಆದರೆ, ಎಷ್ಟೇ ಉಪವಾಸವಿದ್ದರೂ ಪಾನಕ, ಕೋಸಂಬರಿ ಸೇವನೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಆಬಾಲವೃದ್ಧರಾದಿಯಾಗಿ ಎಲ್ಲರೂ ಸೇವಿಸಬಹುದು. ಸರ್ವಧರ್ಮದ ಸಾಮರಸ್ಯವಾಗಿ ಹಲವು ವರ್ಷಗಳಿಂದ ಪಾನಕ ಕೋಸಂಬರಿ ಹಂಚುವ ಕಾರ್ಯ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ನಡೆದುಕೊಂಡು ಬಂದಿದೆ.
ಬೇಲದ ಹಣ್ಣು ಬಗ್ಗೆ ಸಂಕ್ಷಿಪ್ತ ಮಾಹಿತಿ :
* ಸಂಸ್ಕೃತದಲ್ಲಿ ಕಪಿತ್ಥ, ಇಂಗ್ಲೀಷಲ್ಲಿ ವುಡ್ ಆಪಲ್ ಎಂದು ಕರೆಯಲ್ಪಡುವ ಬೇಲದ ಹಣ್ಣು ಲೀಮೊನಿಯಾ ಆಸಿಡಿಸೀಮಾ ಎಂಬ ಪ್ರಬೇಧಕ್ಕೆ ಸೇರಿದ ಹಣ್ಣು.
* ಈ ಹಣ್ಣಿಗೆ ಇರುವ ಇನ್ನಿತರ ಹೆಸರುಗಳು: ಬ್ಯಾಲ, ಮಳೂರ, ಮನ್ಮಥ-ಪುಷ್ಪಫಲ, ದಾದಿಫಲ, ದಂತಫಲ, ಗಂಧಫಲ, ಗೋಪಕರ್ಣ, ಗ್ರಾಹಿ, ಗ್ರಂಥಿಫಲ, ಕಪಿಪ್ರಿಯ, ಕರಂಜ ಫಲಕ
* ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಮಲೇಷಿಯಾ ಮತ್ತು ಇಂಡೋಚೈನಾ ಪ್ರದೇಶಗಳಲ್ಲಿ ಕಂಡು ಬರುತ್ತದೆ.
* ಒರಟು, ಮುಳ್ಳಿರುವ ತೊಗಟೆ ಹೊಂದಿದ್ದು 9 ಮೀ. ಎತ್ತರಕ್ಕೆ ಬೆಳೆಯುವ ನಿಂಬೆ ಹಣ್ಣಿನ ಜಾತಿಗೆ ಸೇರಿದ ಒಂದು ದೊಡ್ಡ ಮರ.

* ಬೂದಿ ಬಣ್ಣದ ಗಟ್ಟಿ ತೊಗಟೆ ಹೊಂದಿರುವ ಹಣ್ಣು ಒಡೆದಾಗ ಅಂಟಂಟಾಗಿರುವ ಕಂದು ತಿರುಳು ಮತ್ತು ಸಣ್ಣ ಬಿಳಿ ಬೀಜವುಳ್ಳ ಹಣ್ಣು ಸಿಗುತ್ತದೆ.
* ಬಹುತೇಕ ಬಿಲ್ವದ ಹಣ್ಣಿನ ಮಾದರಿಯಲ್ಲಿರುತ್ತದೆ. ತಿರುಳು ಹುಳಿಮಿಶ್ರಿತ ಸಿಹಿಯ ರುಚಿ ಹೊಂದಿದೆ.
* 100 ಗ್ರಾಂನಷ್ಟು ಹಣ್ಣಿನಲ್ಲಿ 18 ಗ್ರಾಂ ಶರ್ಕರಪಿಷ್ಟ, 3.7 ಗ್ರಾಂ ಕೊಬ್ಬು, 7.1 ಗ್ರಾಂ ಪ್ರೋಟಿನ್, 28 ಗ್ರಾಂವಿಟಮಿನ್ ಸಿ, ವಿಟಮಿನ್ ಬಿ ಹಾಗೂ 130 ಮಿಲಿ ಗ್ರಾಂನಷ್ಟು ಕ್ಯಾಲ್ಸಿಯಂ, ಫಾಸ್ಪೊರಸ್ ಮುಂತಾದ ಖನಿಜಗಳಿರುತ್ತದೆ.
ಉಪಯೋಗ:
* ಜೀರ್ಣಕ್ರಿಯೆ ಹೆಚ್ಚಳ, ಮಲಬದ್ಧತೆ ನಿವಾರಣೆ, ರೋಗ ನಿರೋಧಕ ಶಕ್ತಿವರ್ಧನೆ, ಹುಣ್ಣು, ಕರಳು ಬೇನೆ ನಿವಾರಕೆ,ನೆನಪಿನ ಶಕ್ತಿ ಹೆಚ್ಚಿಸಲು, ತ್ವಚೆ ಸಂರಕ್ಷಣೆ, ಗಂಟಲು, ಕಿವಿ, ಕಣ್ಣು ನೋವು, ಕೆಮ್ಮು, ಪಿತ್ತಶಮನ, ಮಧುಮೇಹ ನಿಯಂತ್ರಣ, ಅಧಿಕ ರಕ್ತದೊತ್ತಡ ತಗ್ಗಿಸಲು ಹೀಗೆ ನಾನಾ ಬಗೆ ಉಪಯೋಗಕ್ಕೆ ಬೇಲದ ಹಣ್ಣು ಬಳಸಬಹುದು.
ಬಳಸುವ ವಿಧಾನ:
* ಅಪಕ್ವವಾದ ಹಣ್ಣಿನ ತಿರುಳನ್ನು ಒಣಗಿಸಿಕೊಳ್ಳಿ ಅಥವಾ ಹಸಿಯಾಗಿ ಬಳಸಬಹುದು. ಅರ್ಧಚಮಚದಷ್ಟು ಪುಡಿಯನ್ನು ಒಂದು ಲೋಟದ ಮಜ್ಜಿಗೆಗೆ ಹಾಕಿ ಸೇವಿಸಿದರೆ ಜೀರ್ಣಶಕ್ತಿ ವೃದ್ಧಿಸುತ್ತದೆ. ಅತೀಸಾರ, ಆಮಶಂಕೆ ನಿಯಂತ್ರಣಕ್ಕೆ ಬರುತ್ತದೆ.
* ಬೇಲದ ಮರದ ಬೇರು, ತೊಗಟೆ, ಎಲೆ, ಹೂವು ಹಾಗೂ ಹಣ್ಣು ಬಳಸಿ ತಯಾರಿಸಿದ ಎಣ್ಣೆಯನ್ನು ಚರ್ಮಕ್ಕೆ ಲೇಪಿಸುತ್ತಾ ಬಂದರೆ, ಚರ್ಮದ ಸುಂದರ ವೃದ್ಧಿಸಿ, ಆರೋಗ್ಯಕರವಾಗಿರುತ್ತದೆ.
* ಬೇಲದ ಪಕ್ವವಾದ(ಅರ್ಧ ಕಳೆತ ಹಣ್ಣು ಬೇಡ) ಹಣ್ಣು ಪಾನಕ/ ಶರಬತ್ ಮಾಡಲು ಸೂಕ್ತವಾಗಿದ್ದು, ಬೇಸಿಗೆಯಲ್ಲಿ ಯಥೇಚ್ಛವಾಗಿ ಬಳಸಿ.
* ಮರದ ತೊಗಟೆಯ ಗೋಂದನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ, ಸಣ್ಣ ಚಮಚ ಜೇನುತುಪ್ಪ ಅಥವಾ ಎಳೆನೀರು ಬೆರೆಸಿ ಸೇವಿಸಿದರೆ ಹೊಟ್ಟೆ ನೋವು, ಭೇದಿ ಸಮಸ್ಯೆ ನಿವಾರಣೆಯಾಗುತ್ತದೆ.
ಬೇಲದ ಹಣ್ಣಿನ ಪಾನಕ:
ಬಹುತೇಕ ಬಿಲ್ವಪತ್ರೆಯ ಕಾಯಿಯಂತೆಯೇ ಕಾಣುವ ಬೇಲದ ಹಣ್ಣಿನ ಗಾತ್ರ ತುಸು ದೊಡ್ಡದು. ಸಿಹಿ, ಹುಳಿ, ಒಗರು ಮಿಶ್ರಿತ ವಿಶಿಷ್ಠ ರುಚಿ ಕೊಡುವ ಹಣ್ಣು. ನೀರಿನ ಪ್ರಮಾಣಕ್ಕೆ ತಕ್ಕಂತೆ ಬೆಲ್ಲದ ಪುಡಿ ಬಳಸಿ.
* ಶುದ್ಧ ಕುಡಿಯುವ ನೀರು- ಅಗತ್ಯಕ್ಕೆ ತಕ್ಕಷ್ಟು- 4 ಲೋಟ
* ಬೆಲ್ಲ ಅಥವಾ ಬೆಲ್ಲದ ಪುಡಿ -1/2 ಕಪ್
* 1 ದೊಡ್ಡ ಬೇಲದ ಹಣ್ಣಿನ ತಿರುಳು
* ಕಾಳು ಮೆಣಸಿನ ಪುಡಿ (ಅಗತ್ಯವಿದ್ದರೆ ಬಳಸಿ)
ವಿಧಾನ:
ಬೇಲದ ಹಣ್ಣಿನ ಮೇಲಿನ ತೊಗಟೆ ಒಡೆದು, ಹಣ್ಣಿನ ತಿರುಳನ್ನು ತೆಗೆದುಕೊಳ್ಳಿ, ಸಣ್ಣ ಪಾತ್ರೆಯೊಂದರಲ್ಲಿ ನೀರು ಹಾಕಿ, ಸ್ವಲ್ಪ ಹೊತ್ತು ಹಣ್ಣನ್ನು ನೆನಸಿಡಿ. ನಂತರ ಹುಣಸೆ ಹಣ್ಣು ಕಿವುಚುವಂತೆ ಕಿವುಚಿ ರಸವನ್ನು ತೆಗೆಯಿರಿ, ಚೆನ್ನಾಗಿ ಸೋಸಿಕೊಂಡು ನೀರಿನ ಪಾತ್ರೆಗೆ ಸೇರಿಸಿ, ಹಣ್ಣಿನ ತಿರುಳನ್ನು ಎರಡು ಮೂರು ಸಲ ಚೆನ್ನಾಗಿ ಕಿವುಚಿ ರಸ ತೆಗೆದುಕೊಳ್ಳಿ.
ಅಗತ್ಯಕ್ಕೆ ತಕ್ಕ ನೀರು ಸೇರಿಸಿ ನಂತರ ಅಗತ್ಯಕ್ಕೆ ತಕ್ಕಷ್ಟು ಬೆಲ್ಲದ ಮಿಶ್ರಣ ಹಾಗೂ ಕಾಳು ಮೆಣಸಿನ ಪುಡಿ ಸೇರಿಸಿ. ಇನ್ನು ಪಾನಕ ಎಂದ ಮೇಲೆ ಪರಿಮಳ ಬರಲಿ ಎಂದು ಏಲಕ್ಕಿ ಬೆರೆಸಲು ಹೋಗಬೇಡಿ, ಬೇಲದ ಪರಿಮಳವೇ ಸಾಕು. ಇನ್ಯಾಕೆ ತಡ, ಬೇಸಿಗೆಯಲ್ಲಿ ಈ ಪಾನಕ ಮಾಡಿ, ಎಲ್ಲರಿಗೂ ಹಂಚಿ.
-
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು











Click it and Unblock the Notifications