ಉತ್ತರ ಕೊರಿಯಾ: ದೂರಗಾಮಿ ಕ್ರೂಸ್ ಕ್ಷಿಪಣಿ ಪರೀಕ್ಷೆ ಕುರಿತು ಮಾಹಿತಿ
ಸಿಯೋಲ್, ಸೆಪ್ಟೆಂಬರ್ 13:ಉತ್ತರ ಕೊರಿಯಾವು ದೂರಗಾಮಿ ಕ್ರೂಸ್ ಕ್ಷಿಪಣಿ ಪರೀಕ್ಷೆಯನ್ನು ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದೇ ಸೆಪ್ಟೆಂಬರ್ 11 ಹಾಗೂ 12ರಂದು ನಡೆಸಲಾದ ಪರೀಕ್ಷೆಯಲ್ಲಿ ಕ್ಷಿಪಣಿಯು 1,500 ಕಿ.ಮೀ ದೂರದ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಅಮೆರಿಕ ವಿರುದ್ಧ ದೀರ್ಘಕಾಲದಿಂದ ಸಂಘರ್ಷದಲ್ಲಿರುವ ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಬಲವನ್ನು ಹೆಚ್ಚಿಸಿಕೊಳ್ಳುವ ಭಾಗವಾಗಿ ಕ್ಷಿಪಣಿ ಪ್ರಯೋಗ ನಡೆಸಿದೆ.

ಹಾಗೆಯೇ ಕ್ಷಿಪಣಿ ಪರೀಕ್ಷೆಯೊಂದಿಗೆ ಉತ್ತರ ಕೊರಿಯಾ ಶಸ್ತ್ರಾಸ್ತ್ರ ತಂತ್ರಜ್ಞಾನದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಮಟ್ಟದ ನಿರ್ಬಂಧ ಹಾಗೂ ತೀವ್ರ ಒತ್ತಡದ ನಡುವೆಯೂ ಅಣ್ವಸ್ತ್ರ ಹಾಗೂ ಖಂಡಾಂತರ ಕ್ಷಿಪಣಿಗಳ ಪ್ರಯೋಗ ನಡೆಸುತ್ತಲೇ ಬಂದಿರುವ ಉತ್ತರ ಕೊರಿಯಾ ರಕ್ಷಣಾ ವಲಯದಲ್ಲಿ ಬಲವೃದ್ಧಿಸಿಕೊಳ್ಳುತ್ತಿದೆ. ನೂತನ ಕ್ಷಿಪಣಿ ರಕ್ಷಣಾ ವಲಯವನ್ನು ಬೇಧಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ.
ಅಮೆರಿಕಾ ಜೊತೆಗೆ ಅಣ್ವಸ್ತ್ರ ಮತ್ತು ಖಂಡಾಂತರ ಕ್ಷಿಪಣಿಗಳನ್ನು ಉತ್ತರ ಕೊರಿಯಾದ ಸೇನಾ ಬತ್ತಳಿಕೆಯಲ್ಲಿ ತುಂಬಿಸುತ್ತಾ ಬಂದಿರುವ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇತ್ತೀಚೆಗೆ ಸೇನಾ ಚಟುವಟಿಕೆ ವಿಷಯದಲ್ಲಿ ಸ್ವಲ್ಪಮಟ್ಟಿಗೆ ಸೈಲೆಂಟ್ ಮೋಡ್ಗೆ ಹೋಗಿದ್ದರು. ಇದಕ್ಕೆ ಅವರ ಆರೋಗ್ಯವೂ ಕಾರಣವಾಗಿತ್ತು ಎನ್ನಲಾಗಿದೆ.
ಆದರೆ ಈಗ ದಿಢೀರನೆ ಪುಟಿದೆದ್ದಿರುವ ಉತ್ತರ ಕೊರಿಯಾದ ಸೇನೆಯು ಶನಿವಾರ ಮತ್ತು ಭಾನುವಾರದ ನಡುವೆ ನಡೆಸಿರುವ ದೂರಗಾಮಿ ಕ್ರೂಸ್ ಕ್ಷಿಪಣಿಗಳನ್ನು ಪರೀಕ್ಷಿಸಿದ್ದು, ಜಗತ್ತಿಗೆ ಸಡ್ಡುಹೊಡೆದಿದೆ. ಈ ದೂರಗಾಮಿ ಕ್ರೂಸ್ ಕ್ಷಿಪಣಿಗಳು 1,500 ಕಿಮೀ ದೂರದ ಶತ್ರು ನೆಲೆಗಳನ್ನು ಕ್ಷಣಾರ್ಧದಲ್ಲಿ ಧ್ವಂಸ ಮಾಡಬಲ್ಲದು ಎಂದು ಕೊರಿಯಾದ ವಾರ್ತಾ ಸಂಸ್ಥೆಗಳು ವರದಿ ಮಾಡಿವೆ.
ಸಿಯೋಲ್, ವಾಷಿಂಗ್ಟನ್, ಟೋಕಿಯೋ ಮತ್ತು ಇತರ ವಿಶ್ವ ರಾಜಧಾನಿಗಳಲ್ಲಿ ಕಿಮ್ ಆರೋಗ್ಯದ ವಿಷಯಗಳು ಹೆಚ್ಚು ಗಮನ ಸೆಳೆಯುತ್ತದೆ. ಏಕೆಂದರೆ, ಯುನೈಟೆಡ್ ಸ್ಟೇಟ್ಸ್ ಮತ್ತು ಅದರ ಮಿತ್ರರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಮುಂದುವರಿದ ಪರಮಾಣು ಕಾರ್ಯಕ್ರಮವನ್ನು ನಿಯಂತ್ರಿಸುವ ಉತ್ತರಾಧಿಕಾರಿ ಅಧಿಕಾರದಲ್ಲಿ ಮುಂದುವರಿಯಲು ಅಸಮರ್ಥರಾಗಿದ್ದರೆ, ಅವರು ತಮ್ಮ ಉತ್ತರಾಧಿಕಾರಿಯನ್ನು ಘೋಷಿಸಿಲ್ಲ.
ಇನ್ನೊಂದೆಡೆ, ಉತ್ತರ ಕೊರಿಯಾ, ತನ್ನ ನಾಯಕತ್ವದ ಆಂತರಿಕ ಕಾರ್ಯಚಟುವಟಿಕೆಗಳ ಬಗ್ಗೆ ಎಂದಿಗೂ ಬಹಿರಂಗಪಡಿಸುವುದಿಲ್ಲ. ಕಳೆದ ವರ್ಷ ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದ ತನ್ನ ದೇಶ ರಕ್ಷಿಸಿಕೊಳ್ಳಲು ಬಿಗಿ ಕ್ರಮಗಳನ್ನು ಕೈಗೊಂಡಿತ್ತು. ಹೊರದೇಶದ ಜನರಿಗೆ ತೆರಳಲು ಅವಕಾಶ ಇಲ್ಲದಂತೆ ಬಂದ್ ಆಗಿತ್ತು.
ಜತೆಗೆ, ಅತಿಯಾದ ಮದ್ಯಪಾನ ಮತ್ತು ಧೂಮಪಾನಕ್ಕೆ ಹೆಸರುವಾಸಿಯಾದ ಕಿಮ್ ಜಾಂಗ್ ಉನ್, ಹೃದಯ ಸಂಬಂಧಿ ಸಮಸ್ಯೆಗಳಿರುವ ಕುಟುಂಬದಿಂದ ಬಂದವರು. ಕಿಮ್ಗಿಂತ ಮೊದಲು ಉತ್ತರ ಕೊರಿಯಾವನ್ನು ಆಳಿದ ಅವರ ತಂದೆ ಮತ್ತು ಅಜ್ಜ, ಇಬ್ಬರೂ ಹೃದಯದ ಸಮಸ್ಯೆಯಿಂದ ಮೃತಪಟ್ಟಿದ್ದರು. ಅವರ ತೂಕವು ಹೃದಯರಕ್ತನಾಳದ ಕಾಯಿಲೆಗಳ ಸಾಧ್ಯತೆ ಹೆಚ್ಚಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಈ ಹಿನ್ನೆಲೆ ಜೂನ್ನಲ್ಲಿ ಕಿಮ್ ಅವರ ಮೊದಲ ಫೋಟೋಗಳು ಕಾಣಿಸಿಕೊಂಡಾಗ, ಉತ್ತರ ಕೊರಿಯಾದ ನಾಗರಿಕರು ಕಿಮ್ ಜಾಂಗ್ ಉನ್ ತೂಕ ಇಳಿಕೆಯ ಬಗ್ಗೆ ಮನನೊಂದಿದ್ದರು ಎಂದು ಪ್ಯೋಂಗ್ಯಾಂಗ್ನ ಅಪರಿಚಿತ ನಿವಾಸಿಯೊಬ್ಬರು ರಾಯಿಟರ್ಸ್ಗೆ ತಿಳಿಸಿದ್ದಾರೆ.
ಆಗಸ್ಟ್ನಲ್ಲಿ ಕಿಮ್ ಜಾಂಗ್ ಉನ್ ಕಪ್ಪು ಕಲೆಯ ಜೊತೆಗೆ ಅವರ ತಲೆಯ ಹಿಂಭಾಗದಲ್ಲಿ ಬ್ಯಾಂಡೇಜ್ ಹಾಕಿಕೊಂಡು ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು ಎಂದು NK ನ್ಯೂಸ್ ಸೈಟ್ ವರದಿ ಮಾಡಿದೆ.
ಹಾಗೂ ಜುಲೈ 24ರಿಂದ ಜುಲೈ 27ರವರೆಗಿನ ಕೊರಿಯನ್ ಪೀಪಲ್ಸ್ ಆರ್ಮಿಯ ಕಾರ್ಯಕ್ರಮಗಳಲ್ಲಿ ಮತ್ತು ಜುಲೈ 27ರಿಂದ ಜುಲೈ 29ರವರೆಗಿನ ಯುದ್ಧ ಪರಿಣತರ ಸಮಾವೇಶ ಮತ್ತು ಸಂಬಂಧಿತ ಕಾರ್ಯಕ್ರಮಗಳ ತುಣುಕಿನಲ್ಲಿಯೂ ಕಿಮ್ ಜಾಂಗ್ ಉನ್ ಕಾಣಿಸಿಕೊಂಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಹಾಗೆಯೇ ಅವರ ತಲೆಯ ಹಿಂಭಾಗದಲ್ಲಿ ಮೂಗೇಟಿಗೆ ಒಳಗಾಗಿದ್ದು ಪತ್ತೆಯಾಗಿತ್ತು ಎಂದೂ ಹೇಳಲಾಗಿದೆ. ಈ ಘಟನೆಗಳ ಚಿತ್ರಗಳು ಕಿಮ್ ಜಾಂಗ್ ಉನ್ ಅನ್ನು ಬ್ಯಾಂಡೇಜ್ ಇಲ್ಲದೆ ತೋರಿಸುತ್ತದೆ ಮತ್ತು ಕೆಲವು ಕಡು ಹಸಿರು ಮಿಶ್ರಿತ ತಾಣ ಅಥವಾ ಅವರ ತಲೆಯ ಮೇಲೆ ಮೂಗೇಟುಗಳನ್ನು ಕಾಣಬಹುದು ಎಂದು NK ನ್ಯೂಸ್ ವರದಿ ಮಾಡಿದೆ.
ಕಾರಣ ಅಥವಾ ಸ್ವರೂಪದ ಬಗ್ಗೆ ತಿಳಿದಿರಲಿಲ್ಲ ಮತ್ತು ಕೇವಲ ಚಿತ್ರಗಳನ್ನು ಬಳಸಿ ರೋಗನಿರ್ಣಯ ಮಾಡುವುದು ಕಷ್ಟ ಎಂದು NK ನ್ಯೂಸ್ ಹೇಳಿದೆ. ಕಿಮ್ ಜಾಂಗ್ ಉನ್ ತಲೆಯ ಮೇಲಿನ ಗುರುತು, ಅವರು ಜೂನ್ 29ರಂದು ನಡೆದ ಪೊಲಿಟ್ ಬ್ಯೂರೊ ಸಭೆಯಲ್ಲಿ ಅಥವಾ ಜುಲೈ 11 ರಂದು ಸಂಗೀತಗಾರರೊಂದಿಗೆ ಕಾಣಿಸಿಕೊಂಡ ಫೋಟೋಗಳಲ್ಲಿ ಕಾಣಿಸಿರಲಿಲ್ಲ. ಆ ವೇಳೆ ಅವರ ತಲೆಯ ಹಿಂಭಾಗವನ್ನು ತೋರಿಸಿರಲಿಲ್ಲ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications