New Year 2025: ಹೊಸ ಭರವಸೆಯೊಂದಿಗೆ ಹೊಸವರ್ಷವನ್ನು ಸ್ವಾಗತಿಸೋಣ
ಹೊಸ ನಿರೀಕ್ಷೆಯೊಂದಿಗೆ ನೂತನ ವರ್ಷಾರಂಭಕ್ಕೆ ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದೇವೆ. ಹಾಗೆಯೇ ಸಡಗರ ಸಂಭ್ರಮದಿಂದ ಹೊಸವರ್ಷವನ್ನು ಸ್ವಾಗತಿಸಲು ತಮ್ಮದೇ ಆದ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಇದರ ಜೊತೆಯಲ್ಲಿ ಹೊಸ ವರ್ಷದಲ್ಲಿ ಏನಾದರೊಂದು ಮಾಡಲೇ ಬೇಕೆಂಬ ಸಂಕಲ್ಪದೊಂದಿಗೆ ಹೆಜ್ಜೆಯಿಡುವ ದೃಢ ನಿರ್ಧಾರವನ್ನು ನಾವೆಲ್ಲರೂ ಮಾಡಬೇಕಾಗಿದೆ.
ಹಾಗೆನೋಡಿದರೆ ಹೊಸವರ್ಷ ಎನ್ನುವುದು ಪ್ರಕೃತಿ ನಿಯಮ. ರಾತ್ರಿ ಕಳೆದು ಹಗಲು ಬಂದೇ ಬರುತ್ತದೆ ಅದರಂತೆ ಹೊಸ ವರ್ಷವೂ ಕೂಡ. ಆದರೆ ನಾವು ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷಕ್ಕೆ ಹೆಜ್ಜೆಯಿಡುವ ಮುನ್ನ ಹೊಸವರ್ಷದಲ್ಲಿ ಏನೆಲ್ಲ ಮಾಡಬಹುದು ಮತ್ತು ಮಾಡಬೇಕು ಎಂಬುದರ ಕುರಿತಂತೆ ಒಂದಷ್ಟು ಸಿದ್ಧತೆಗಳನ್ನು ಮಾಡಿಕೊಂಡು ಮುನ್ನಡೆದರೆ ಪ್ರತಿ ವರ್ಷವೂ ನಮ್ಮ ಬದುಕಿಗೆ ವಿಶೇಷವೇ ಆಗಿರಲಿದೆ.

ಎಲ್ಲ ವರ್ಷಗಳಲ್ಲಿಯೂ ಸಾವು ನೋವು ಇದ್ದದ್ದೇ ಆದರೆ ಅದರಾಚೆಗೆ ನಮ್ಮ ಬದುಕಿನಲ್ಲಿ ಕೆಲವು ಇಸವಿಯ ವರ್ಷಗಳು ನೆನಪು ಮಾಡಿಕೊಳ್ಳುವಂತಿರುತ್ತವೆ. ಮತ್ತೆ ಅವು ನಮ್ಮ ಸಾಧನೆಗೆ ಸಾಕ್ಷಿಯಾಗಿ ಉಳಿದು ಬಿಟ್ಟಿರುತ್ತವೆ. ಅಂತಹದೊಂದು ನೆನಪಿನಲ್ಲಿ ಉಳಿಯುವ ಕೆಲಸವನ್ನು ನಾವು ಮಾಡಿಯೇ ತೀರುತ್ತೇವೆ ಎಂಬ ನಿರ್ಧಾರವನ್ನು ವರ್ಷದ ಆರಂಭದಲ್ಲಿ ಮಾಡಿಕೊಂಡು ಮುನ್ನಡೆದರೆ ನಮ್ಮ ಬದುಕಿಗೆ ಅರ್ಥ ಸಿಗಲಿದೆ.
ಹೊಸ ಭರವಸೆಯೊಂದಿಗೆ ಮನ್ನಡೆಯೋಣ
ನಾವು ಅನುಭವಿಸಿದ ಸಂಕಷ್ಟಗಳು ಕೋವಿಡ್ ಗಿಂತ ಭೀಕರವಾಗಿರಲು ಸಾಧ್ಯವಿಲ್ಲ. ಅಂತಹ ಸಂಕಷ್ಟವನ್ನೇ ಸಾಮೂಹಿಕವಾಗಿ ಎದುರಿಸಿ ಬಂದವರು ನಾವು. ಹೀಗಿರುವಾಗ ನಮ್ಮೊಳಗಿನ ಕಷ್ಟಗಳನ್ನು ಪರಿಹರಿಸಿಕೊಳ್ಳುವ ದೃಢ ಸಂಕಲ್ಪವನ್ನು ಹೊಸವರ್ಷದಲ್ಲಿ ಮಾಡಿಕೊಳ್ಳಬೇಕಿದೆ. ನೆನಪಿರಲಿ ನಾವಿಡುವ ಎಚ್ಚರಿಕೆಯ ಹೆಜ್ಜೆಗಳಷ್ಟೇ ನಾವು ಎಡವದಂತೆ ನೋಡಿಕೊಳ್ಳುತ್ತದೆ. ಹೀಗಿದ್ದ ಮೇಲೆ ಎಡವದಂತೆ ಹೆಜ್ಜೆಹಾಕುವುದು ಜಾಣತನವಾಗುತ್ತದೆ. ನಿಜ ಹೇಳಬೇಕೆಂದರೆ ನಾವು, ನೀವು ಎಲ್ಲರೂ ಹೊಸ ವರ್ಷ ಬಂದಾಗಲೆಲ್ಲ ಹೊಸತರ ನಿರೀಕ್ಷೆಯಲ್ಲಿ ಹಳೆಯ ವರ್ಷಕ್ಕೆ ವಿದಾಯ ಹೇಳಿ ಮುನ್ನಡೆಯುತ್ತೇವೆ.
ಕಳೆದು ಹೋದ ವರ್ಷದ ಅಷ್ಟು ಸಂಕಷ್ಟಗಳನ್ನು ನೆನಪು ಮಾಡುತ್ತಾ ಹೊಸ ವರ್ಷದಲ್ಲಿ ಎಲ್ಲವೂ ಸುಖಕರವಾಗಿರಲಿ ಎಂಬ ಪ್ರಾರ್ಥನೆ ಯೊಂದಿಗೆ ಹಲವು ನಿರೀಕ್ಷೆಯಲ್ಲಿ ಮುನ್ನಡೆಯುತ್ತಾ ಬಂದಿದ್ದೇವೆ. ನಾವೆಲ್ಲರೂ ಭರವಸೆಯ ಜೀವಿಗಳು ಇವತ್ತು ದಕ್ಕದೆ ಹೋಗಿದ್ದು ನಾಳೆ ದಕ್ಕಬಹುದು ಎಂದು ಬಯಸುವವರು ನಾವು. ಇಂತಹ ಭರವಸೆಯಲ್ಲಿಯೇ ನಾವೆಲ್ಲರೂ ಬದುಕುತ್ತಿದ್ದೇವೆ. ಭರವಸೆಗಳೆಲ್ಲವೂ ಈಡೇರದೆ ಇರಬಹುದು ಆದರೆ ಬದುಕಿಗೆ ಭರವಸೆಗಳು ಬೇಕಾಗುತ್ತದೆ. ಆ ಭರವಸೆ ಇಲ್ಲದೆ ಹೋದರೆ ಬದುಕು ಶೂನ್ಯವಾಗಿ ಬಿಡುತ್ತದೆ. ಹೊಸವರ್ಷದಲ್ಲಿ ಬೆಟ್ಟದಂತಹ ಕನಸುಗಳನ್ನು ಹೊತ್ತು ಅವು ಈಡೇರದೆ ತಲೆ ಚಚ್ಚಿಕೊಳ್ಳುವುದಕ್ಕಿಂತ ಚಿಕ್ಕ, ಚಿಕ್ಕ ನನಸಾಗುವ ಕನಸನ್ನೇ ಕಾಣುತ್ತಾ ಅವುಗಳನ್ನು ನನಸು ಮಾಡುತ್ತಾ ಖುಷಿಪಡೋಣ.

ಹೊಸ ಮನುಷ್ಯರಾಗುವ ಸಂಕಲ್ಪ ಇರಲಿ
ಸಾಮಾನ್ಯವಾಗಿ ಹೊಸ ವರ್ಷದಲ್ಲಿ ಹೊಸದಾದ ಯೋಜನೆಗಳನ್ನು ಹಾಕಿ ಕೊಂಡು ಕಾರ್ಯರೂಪಕ್ಕೆ ತರಲು ಪ್ರಯತ್ನ ಪಡುತ್ತೇವೆ. ಹೊಸ ವರ್ಷದ ಕನಸುಗಳು ಕೂಡ ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತದೆ. ಹೊಸವರ್ಷವನ್ನು ನಾವು ಕೇವಲ ಹೊಸ ವಸ್ತುಗಳ ಖರೀದಿಗೆ ಮಾತ್ರ ಸೀಮಿತ ಮಾಡಿಕೊಳ್ಳದೆ ನಾವು ನಮಗಾಗಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಕೂಡ ಅಗತ್ಯವೇ... ಹೊಸ ವರ್ಷದಿಂದ ನಾನು ಹೊಸ ಮನುಷ್ಯನಾಗುತ್ತೇನೆ ಎಂಬ ದೃಢ ನಿರ್ಧಾರಕ್ಕೆ ಬರುವುದು ಕೂಡ ಬಹುಮುಖ್ಯವಾಗುತ್ತದೆ.
ಮದ್ಯಪಾನ, ಧೂಮಪಾನ ಸೇರಿದಂತೆ ಹಲವು ದುಶ್ಚಟಗಳನ್ನು ಹೊಂದಿದವರು ಅದಕ್ಕೆ ಇತಿಶ್ರೀ ಹೇಳುತ್ತೇನೆ ಎಂಬ ಸಂಕಲ್ಪ ಮಾಡಬೇಕು. ಆ ಮೂಲಕ ಹಳೆಯ ವರ್ಷದಲ್ಲಿ ಕಳೆದುಕೊಂಡಿದ್ದನ್ನು ಹೊಸವರ್ಷದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಹೊಸ ಮನುಷ್ಯರಾಗಿ ಮಾರ್ಪಾಡಾಗಲು ಸಾಧ್ಯವಾಗಲಿದೆ. ಇದು ನಮ್ಮದೇ ಕುಟುಂಬಕ್ಕೆ ಕೊಡುವ ಕೊಡುಗೆಯೂ ಆಗಬಹುದು. ಜತೆಗೆ ಹೊಸ ಬದುಕಿಗೆ ತೆರೆದುಕೊಳ್ಳಲು ಸಹಾಯ ಆಗಬಹುದು. ನಾವು ಹೊಸ ವರ್ಷವನ್ನು ಆಚರಿಸುವ ರೀತಿ, ನೀತಿಗಳನ್ನು ಗಮನಿಸಿದರೆ ಹೊಸವರ್ಷದಲ್ಲಿ ಹೊಸ ಮನುಷ್ಯರಾಗಿ ಮಾರ್ಪಾಡಾಗಲು ಸಾಧ್ಯನಾ? ಎಂಬ ಪ್ರಶ್ನೆಯೂ ಮೂಡದಿರದು.
ನಮ್ಮ ಆಲೋಚನೆ ವಿಭಿನ್ನ, ವಿಶಿಷ್ಟವಾಗಿರಲಿ
ಏಕೆಂದರೆ ವರ್ಷದ ಆರಂಭವನ್ನೇ ನಾವು ಮೋಜು ಮಸ್ತಿಯೊಂದಿಗೆ ಆರಂಭಿಸುತ್ತಿದ್ದೇವೆ. ಕಂಠಮಟ್ಟ ಕುಡಿದು ತಿಂದು ಎಲ್ಲೆಂದರಲ್ಲಿ ಉರುಳಾಡುವುದೇ ವರ್ಷಾಚರಣೆ ಎಂಬ ಮಟ್ಟಕ್ಕೆ ಬಂದು ನಿಂತಿದ್ದೇವೆ. ಹೊಸ ವರ್ಷದ ಸ್ವಾಗತವನ್ನು ಈ ರೀತಿಯಾಗಿ ಮಾಡಿದ ಮೇಲೆ ಒಂದೊಳ್ಳೆಯ ಸಂಕಲ್ಪವನ್ನು ಮಾಡುವುದಾದರೂ ಹೇಗೆ? ಪಾಶ್ಚಿಮಾತ್ಯರ ಸಂಸ್ಕೃತಿಗೆ ಮಾರುಹೋಗುತ್ತಿರುವ ನಾವು ಹೊಸವರ್ಷವನ್ನು ಗುಂಡು ತುಂಡಿನೊಂದಿಗೆ ಆಚರಿಸುತ್ತಿದ್ದೇವೆ. ಹೊಸವರ್ಷ ಆಚರಣೆ ಎಂದರೆ ಮಜಾ ಉಡಾಯಿಸುವುದು ಎಂಬಂತೆ ಬಿಂಬಿತವಾಗತೊಡಗಿದೆ.

ನಗರ ಪ್ರದೇಶಗಳು ಮಾತ್ರವಲ್ಲದೆ, ಹಳ್ಳಿಗಳಲ್ಲಿಯೂ ಅಂತಹದ್ದೇ ಮನೋಭಾವನೆ ಬೆಳೆಯತೊಡಗಿದೆ. ಹೀಗಾಗಿ ಆಚರಣೆ ಕೂಡ ಎಲ್ಲೋ ಒಂದು ಕಡೆ ಹಳಿ ತಪ್ಪುತ್ತಿದೆ ಎಂಬುದನ್ನು ಒಪ್ಪಿಕೊಳ್ಳಬೇಕಿದೆ. ಆದರೆ ಅದೆಲ್ಲವನ್ನೂ ಮೀರಿ ನಮಗೂ ಯೋಚನಾಶಕ್ತಿಯಿದೆ. ಒಳಿತು ಕೆಟ್ಟದರ ಬಗ್ಗೆ ಅರಿತುಕೊಳ್ಳುವಷ್ಟು ವಿವೇಚನೆಯಿದೆ. ಹೀಗಿರುವಾಗ ಎಲ್ಲರಂತೆ ನಾವೇಕೆ ಆಲೋಚಿಸಬೇಕು? ನಮ್ಮ ಆಲೋಚನೆ ವಿಭಿನ್ನ ಮತ್ತು ವಿಶಿಷ್ಟವಾಗಿರಲಿ... ಮತ್ತು ಅದು ವರ್ಷಪೂರ್ತಿ ಒಳಿತನ್ನೇ ಮಾಡುವಂತಿರಲಿ ಏನಂತೀರಾ?
Photo credit:This is an AI generated aticle image through WISE
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications