Jagdeep Dhankhar: ನೂತನ ಉಪರಾಷ್ಟ್ರಪತಿ ಜಗದೀಪ್ ಧನಕರ್ ಜೀವನ ಹಾದಿ
ನವದೆಹಲಿ, ಆಗಸ್ಟ್ 6: ರಾಷ್ಟ್ರಪತಿ ಚುನಾವಣೆಯಂತೆ ಉಪರಾಷ್ಟ್ರಪತಿ ಚುನಾವಣೆಯಲ್ಲಿ ನಿರೀಕ್ಷೆಯಂತೆ ಎನ್ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಗೆಲುವು ಸಾಧಿಸಿದ್ದಾರೆ. ಇಂದು ಶನಿವಾರ ನಡೆದ ಚುನಾವಣೆಯಲ್ಲಿ ವಿಪಕ್ಷಗಳ ಒಮ್ಮತದ ಅಭ್ಯರ್ಥಿ ಮಾರ್ಗರೇಟ್ ಆಳ್ವ ವಿರುದ್ಧ ಧನಕರ್ ಭಾರೀ ಮತಗಳ ಅಂತರದಿಂದ ಗೆಲುವು ಪಡೆದರು.
ಜಗದೀಪ್ ಧನಕರ್ 528 ಮತಗಳನ್ನು ಪಡೆದರೆ, ಮಾರ್ಗರೇಟ್ ಆಳ್ವಗೆ ಕೇವಲ 182 ಮತಗಳು ಸಿಕ್ಕವು. ಎನ್ಡಿಎ ಒಕ್ಕೂಟದ ಪರವಾಗಿ ಹೆಚ್ಚಿನ ಮತಗಳು ಇದ್ದದ್ದರಿಂದ ಧನಕರ್ ಗೆಲುವು ನಿರೀಕ್ಷಿತವಾಗಿತ್ತು. ಕೆಲ ದಿನಗಳ ಹಿಂದೆ ನಡೆದ ರಾಷ್ಟ್ರಪತಿ ಚುನಾವಣೆಯಲ್ಲೂ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದರು.
ಮೂರು ದಶಕಗಳಿಗೂ ಹೆಚ್ಚು ಕಾಲದಿಂದಲೂ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುತ್ತಾ ಬಂದಿರುವ 71 ವರ್ಷದ ಜಗದೀಪ್ ಧನಕರ್ ವಕೀಲಿಕೆ ಮತ್ತು ರಾಜಕೀಯ ಎರಡರಲ್ಲೂ ಅನುಭವ ಇರುವವರು. ಬಹಳ ಚಾಕಚಕ್ಯತೆಯಿಂದ ಪರಿಸ್ಥಿತಿ ನಿಭಾಯಿಸಬಲ್ಲವರು. ತಮ್ಮ ಸಾಮರ್ಥ್ಯವನ್ನು ಅವರು ಅನೇಕ ಬಾರಿ ನಿರೂಪಿಸಿರುವುದುಂಟು.

ಶಿಕ್ಷಣದ ಬಳಿಕ ವಕೀಲಿಕೆಯ ವೃತ್ತಿ ಮಾಡಿದ ಧನಕರ್, ಎಂಬತ್ತು ಮತ್ತು ತೊಂಬತ್ತರ ದಶಕಗಳಲ್ಲಿ ದೇವಿಲಾಲ್ ಗರಡಿಯಲ್ಲಿ ರಾಜಕೀಯ ವಿದ್ಯೆ ಕಲಿತವರು. ಚಂದ್ರಶೇಖರ್ ನೇತೃತ್ವದ ಸರಕಾರದಲ್ಲಿ ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. 2008ರಲ್ಲಿ ಅವರು ಬಿಜೆಪಿ ಸೇರ್ಪಡೆಯಾದರು. ಜಗದೀಪ್ ಧನಕರ್ ಸಾಗಿ ಬಂದ ರಾಜಕೀಯ ಮತ್ತು ಬದುಕಿನ ದಾರಿ ಹೇಗಿತ್ತು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಜೀವನ ಮತ್ತು ಬೆಳವಣಿಗೆ
ಜಗದೀಪ್ ಧನಕರ್ 18 ಮೇ, 1951ರಂದು ರಾಜಸ್ಥಾನದ ಜುಂಜುನುದಲ್ಲಿ ಜನಿಸಿದರು. ಧನಕರ್ ಅವರು ಮೇ 18, 1951 ರಂದು ರಾಜಸ್ಥಾನ ರಾಜ್ಯದ ಕಿತಾನ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಚಿತ್ತೋರ್ಗಢದ ಸೈನಿಕ ಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ಜೈಪುರದ ರಾಜಸ್ಥಾನ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಧನಕರ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಕಿತಾನ ಹಳ್ಳಿಯ ಶಾಲೆಯಲ್ಲಿ ಮುಗಿಸಿದರು.
70 ವರ್ಷದ ಇವರು ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾಗುವ ಮುನ್ನ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಪತ್ನಿ ಸುದೇಶ್ ಧಂಖರ್ ಆಗಿದ್ದು, ಇವರಿಗೆ ಒಬ್ಬ ಪುತ್ರರಿದ್ದಾರೆ.

ರಾಜಕೀಯ ಹಿನ್ನೆಲೆ
ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಒಬ್ಬ ಭಾರತೀಯ ರಾಜಕಾರಣಿಯಾದ ಜಗದೀಪ್ ಧನಕರ್, 2019ರ ಹೊತ್ತಿಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಪ್ರಾರಂಭಿಸಿದ್ದರು. ಅದಕ್ಕೂ ಪೂರ್ವದಲ್ಲಿ ಭಾರತದ ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸಿದ್ದರು. 1989 ರಿಂದ 1991 ರವರೆಗೆ ಲೋಕಸಭೆಯ ಸದಸ್ಯರಾಗಿ ರಾಜಕೀಯ ಜೀವನ ಪ್ರಾರಂಭಿಸಿದ್ದರು. 9ನೇ ಲೋಕಸಭೆಯಲ್ಲಿ 1989-91ರ ಅವಧಿಯಲ್ಲಿ ರಾಜಸ್ಥಾನದ ಜುಂಜುನುದಿಂದ ಜನತಾ ದಳವನ್ನು ಪ್ರತಿನಿಧಿಸುವ ಸಂಸದರಾಗಿ ಆಯ್ಕೆ ಆಗಿದ್ದರು.
1993-98ರ ಅವಧಿಯಲ್ಲಿ 10ನೇ ವಿಧಾನಸಭೆ ಚುನಾವಣೆ ನಂತರದಲ್ಲಿ ರಾಜಸ್ಥಾನದ ಕಿಶನ್ಗಢ್ನಿಂದ ಸ್ಪರ್ಧಿಸಿ ಶಾಸಕಾಂಗ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇದಲ್ಲದೇ ಜೈಪುರದ ರಾಜಸ್ಥಾನ ಹೈಕೋರ್ಟ್ ಬಾರ್ ಅಸೋಸಿಯೇಷನ್ನ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಆಸ್ತಿ-ಪಾಸ್ತಿ ಮೌಲ್ಯ
2020-2021 ಸಾಲಿನಲ್ಲಿ ಜಗದೀಪ್ ಧನಕರ್ ನಿವ್ವಳ ಮೌಲ್ಯವು ಗಮನಾರ್ಹವಾಗಿ ಏರಿಕೆಯಾಗುತ್ತದೆ. 70 ವರ್ಷ ವಯಸ್ಸಿನ ಜಗದೀಪ್ ಧನಕರ್ ಅವರ ಬೆಲೆ ಎಷ್ಟು? ಜಗದೀಪ್ ಧನಕರ್ ಅವರ ಆದಾಯದ ಮೂಲವು ಹೆಚ್ಚಾಗಿ ಯಶಸ್ವಿ ರಾಜಕಾರಣವೇ ಆಗಿದೆ. ಜಗದೀಪ್ ಧನಖರ್ ನಿವ್ವಳ ಮೌಲ್ಯವು 2021ರ ವೇಳೆಗೆ ಅಂದಾಜು 10 ರಿಂದ 50 ಲಕ್ಷ ಡಾಲರ್ ಎಂದು ಅಂದಾಜಿಸಲಾಗಿದೆ.

ಮೇಲ್ಮನೆ ನಿಭಾಯಿಸುವ ಹೊಣೆಗಾರಿಕೆ
ಜಗದೀಪ್ ಧನಕರ್ ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲರಾಗಿ ಹೊಣೆಗಾರಿಕೆ ನಿಭಾಯಿಸಿದ ರೀತಿ ಬಿಜೆಪಿ ವರಿಷ್ಠರ ಗಮನ ಸೆಳೆದಿದೆ. ಅವರನ್ನು ಬಿಜೆಪಿ ಉಪರಾಷ್ಟ್ರಪತಿಯಾಗಿ ಆಯ್ಕೆ ಮಾಡಲು ಹಿಂದಿರುವ ಒಂದೆರಡು ಪ್ರಬಲ ಕಾರಣಗಳಲ್ಲಿ ಇದೂ ಒಂದೆನ್ನಲಾಗಿದೆ. ಉಪರಾಷ್ಟ್ರಪತಿ ಸ್ಥಾನ ಎಂಬುದು ಅಲಂಕೃತ ಹುದ್ದೆಯಲ್ಲ. ಸಂಸತ್ತಿನ ಮೇಲ್ಮನೆ ಎಂದು ಕರೆಯಲಾಗುವ ಹಾಗೂ ಚಿಂತಕರ ಚಾವಡಿಯೇ ಎನಿಸಿರುವ ರಾಜ್ಯಸಭೆಯ ಅಧ್ಯಕ್ಷ ಸ್ಥಾನವೂ ಅದು. ಬಹಳ ಕಠಿಣ ಚರ್ಚೆಗಳು ನಡೆಯುವ ರಾಜ್ಯಸಭೆಯ ಕಲಾಪವನ್ನು ಉಪರಾಷ್ಟ್ರಪತಿಗಳೇ ನಿರ್ವಹಿಸುತ್ತಾರೆ. ಲೋಕಸಭೆಗೆ ಹೋಲಿಸಿದರೆ ರಾಜ್ಯಸಭೆಯಲ್ಲಿ ಬಿಜೆಪಿಯ ಸಂಖ್ಯೆ ಕಡಿಮೆ. ಇಲ್ಲಿ ವಿಪಕ್ಷಗಳ ಸದಸ್ಯರ ಆರ್ಭಟವೇ ಹೆಚ್ಚಿರುತ್ತದೆ. ಇಲ್ಲಿ ವಿಪಕ್ಷಗಳ ಕೈ ಮೇಲಾಗದಂತೆ ಕಲಾಪವನ್ನು ನಿಭಾಯಿಸುವಂಥವರು ಬಿಜೆಪಿಗೆ ಬೇಕಿತ್ತು. ಅದಕ್ಕೆ ಸೂಕ್ತವಾಗಿರುವವರು ಜಗದೀಪ್ ಧನಕರ್.
ಜಗದೀಪ್ ಧನಕರ್ ರಾಜಕೀಯಕ್ಕೆ ಬರುವ ಮುನ್ನ ಹಲವು ವರ್ಷಗಳ ಕಾಲ ವಕೀಲಿಕೆ ವೃತ್ತಿ ಮಾಡಿದ್ದಾರೆ. ಅಲ್ಲದೇ 1990ರಲ್ಲಿ ಚಂದ್ರಶೇಖರ್ ಸರಕಾರದಲ್ಲಿ ಅವರು ಸಂಸದೀಯ ವ್ಯವಹಾರಗಳ ಸಚಿವರೂ ಅಗಿದ್ದರು. ಹೀಗಾಗಿ, ಅವರು ಸಂಸದೀಯ ಕಲಾಪಗಳ ಒಳಹೊರಗು ಚೆನ್ನಾಗಿ ಬಲ್ಲವರಾಗಿದ್ದಾರೆ. ವಕೀಲರಾಗಿ ವಾಕ್ಚಾತುರ್ಯ ಕೂಡ ಹೊಂದಿದ್ದಾರೆ. ಹೀಗಾಗಿ, ಉಪರಾಷ್ಟ್ರಪತಿ ಸ್ಥಾನಕ್ಕೆ ವೆಂಕಯ್ಯ ನಾಯ್ಡು ಸ್ಥಾನ ತುಂಬಲು ಜಗದೀಶ್ ಧನಕರ್ ಸಮರ್ಥರಿದ್ದಾರೆ.

ರೈತ ಪುತ್ರ ಎಂದು ಮೋದಿಯಿಂದ ಹೊಗಳಿಕೆ
ಜಗದೀಪ್ ಧನಕರ್ ಬಗ್ಗೆ ನರೇಂದ್ರ ಮೋದಿ ಹಿಂದೆ ಹಲವು ಬಾರಿ ಹೊಗಳಿದ್ದಿದೆ. ಕೃಷಿಕರ ಕುಟುಂಬದಿಂದ ಬಂದಿರುವ ಧನಕರ್ ಅವರನ್ನು ಪ್ರಧಾನಿ ಮೋದಿ 'ಕಿಸಾನ್ ಪುತ್ರ್' (ರೈತ ಪುತ್ರ) ಎಂದು ಹೊಗಳಿದ್ದಾರೆ. ಹಾಗೆಯೇ, ಪಶ್ಚಿಮ ಬಂಗಾಳದಲ್ಲಿ ದೀದಿ ಆಡಳಿತವನ್ನು ದಿಟ್ಟವಾಗಿ ರಾಜ್ಯಪಾಲರಾಗಿ ಟೀಕಿಸುವ ಛಾತಿ ಇರುವ ಧನಕರ್ ಅವರನ್ನು 'ಜನತಾ ರಾಜ್ಯಪಾಲ' ಎಂದು ಮೋದಿ ಪ್ರಶಂಸಿಸಿದ್ದಾರೆ. ರಾಜ್ಯಪಾಲರಾಗಿ ಜಗದೀಪ್ ಧನಕರ್ ಅಸಾಮಾನ್ಯ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಪ್ರಧಾನಿಗಳಿಂದ ಸರ್ಟಿಫಿಕೆಟ್ ಕೂಡ ಸಿಕ್ಕಿದೆ. ಒಂದು ಸಾಮಾನ್ಯ ಕುಟುಂಬದ ಹಿನ್ನೆಲೆ ಇರುವುದು ಒಂದೆಡೆಯಾದರೆ, ವಿವಿಧ ಶ್ರೇಣಿಗಳಲ್ಲಿ ವಿವಿಧ ರೀತಿಯ ಅನುಭವ ಹೊಂದಿರುವುದು ಇನ್ನೊಂದೆಡೆ ಇರುವ ಧನಕರ್ಗೆ ಉಪರಾಷ್ಟ್ರಪತಿ ಸ್ಥಾನದ ಬಾಗಿಲು ತೆರೆದಿದೆ.
(ಒನ್ಇಂಡಿಯಾ ಸುದ್ದಿ)
-
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ''












Click it and Unblock the Notifications