Home Remedies: ದಿನೇ ದಿನೇ ಹೆಚ್ಚುವ ಒಣ ಕೆಮ್ಮುವಿಗೆ ಇಲ್ಲಿದೆ ಸರಳವಾದ ಮನೆಮದ್ದು
ಸುತ್ತಲಿನ ವಾತಾವರಣ ಕ್ಷಣಾರ್ಧದಲ್ಲಿ ಬದಲಾಗುತ್ತಿರುತ್ತದೆ. ಚಳಿ, ಬಿಸಿಲು, ಮಳೆ ಹೀಗೆ ಒಂದೇ ದಿನದಲ್ಲಿ ಮೂರು ರೀತಿಯ ವಾತಾವರಣ ಕೂಡ ಬರುತ್ತಿದ್ದು, ಇದರಿಂದ ಅನಾರೋಗ್ಯ ಕೂಡ ಜಾಸ್ತಿಯಾಗುತ್ತಿದೆ. ಬದಲಾಗುತ್ತಿರುವ ಹವಮಾನದಿಂದ ಜ್ವರ, ಶೀತ, ಕೆಮ್ಮವಿನಂತಹ ಕಾಯಿಲೆಗಳು ಹೆಚ್ಚಾಗುತ್ತಿದೆ.
ಇನ್ನು ಕೊರೊನಾ ಕೂಡ ಹೆಚ್ಚಾಗುತ್ತಿದೆ ಜನರಲ್ಲಿ ಸಾಂಕ್ರಾಮಿಕ ರೋಗದ ಭಯ ಹೆಚ್ಚಾಗುತ್ತಿದೆ. ಕೆಲವೊಮ್ಮೆ ಜ್ವರ, ಶೀತ ಕಮ್ಮಿಯಾದರೂ ಸಹ ಕೆಮ್ಮು ಕಡಿಮೆಯಾಗುವುದಿಲ್ಲ. ರಾತ್ರಿ ಹಗಲೆನ್ನದೆ ಕೆಮ್ಮ ಕಾಡುತ್ತಿರುತ್ತದೆ. ಚಿಕ್ಕ ಮಕ್ಕಳಿಗೆ ಹಾಗೂ ವಯಸ್ಸಾದವರಿಗೆ ಈ ಒಣ ಕೆಮ್ಮು ಒಮ್ಮೆಲೆ ಕಾಣಿಸಿಕೊಡರೆ ಕಡಿಮೆಯಾಗುವುದೇ ಇಲ್ಲ. ಹಾಗಾದರೆ ಕಾಡುವ ಒಣ ಕೆಮ್ಮು ಕಡಿಮೆ ಮಾಡಿಕೊಳ್ಳಲು ಕೆಲವು ಸರಳ ಮನೆ ಮದ್ದುಗಳನ್ನು ಇಲ್ಲಿ ನೀಡಲಾಗಿದೆ.

1. ಶುಂಠಿ ಚಹಾ
ಶುಂಠಿ ಚಹಾದ ಸುವಾಸನೆ ಬರುತ್ತಿದ್ದಂತೆ ಮನಸ್ಸು ಆಹ್ಲಾದಕರವಾಗುತ್ತದೆ. ಶುಂಠಿ ಚಹಾದಲ್ಲಿ ಮನಸ್ಸಿಗೆ ರಿಫ್ರೆಶ್ ನೀಡುವ ಗುಣಲಕ್ಷಣಗಳಿರುತ್ತದೆ. ಶುಂಠಿ ಟೀ ತನ್ನ ಘಮಗುಡುವ ಪರಿಮಳದೊಂದಿಗೆ ಕುಡಿಯಲು ನಾಲಿಗೆಗೆ ರುಚಿ ಕೊಡುತ್ತದೆ. ಇನ್ನು ಆರೋಗ್ಯದ ವಿಷಯಕ್ಕೆ ಸಂಬಂಧ ಪಟ್ಟರಂತೂ, ಇದರ ಉಪಯೋಗ ಹಲವಿದೆ. ಬಿಸಿ ಬಿಸಿ ಶುಠಿ ಚಹಾವನ್ನು ಸೇವಿಸಿದರೆ ಗಂಟಲಿನ ಕಿರಿಕಿರಿ ಕಡಿಮೆಯಾಗುತ್ತದೆ. ಇದು ಗಂಟಲಿನ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಕೆಮ್ಮನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೇ ಶುಂಠಿಯಲ್ಲಿನ ರೋಗ ನಿರೋಧಕ ಶಕ್ತಿಯು ಕೆಮ್ಮನ್ನು ಉಂಟುಮಾಡುವ ಸೋಂಕುಗಳ ವಿರುದ್ಧ ಹೋರಾಡಲು ದೇಹದ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

2. ಅರಿಶಿನ ಹಾಲು
ಅರಿಶಿನ ಹಾಲು ಆರೋಗ್ಯಕರವಾದ ಹಾಗೂ ಹಿತವಾದ ಬೆಚ್ಚಗಿನ ಪಾನೀಯವಾಗಿದ್ದು ಒಣ ಕೆಮ್ಮುವಿನ ಲಕ್ಷಣಗಳನ್ನು ಕಡಿಮೆ ಮಾಡಲು ಇದನ್ನು ಕುಡಿಯಲಾಗುತ್ತದೆ. ಬಿಸಿ ಹಾಲಿಗೆ ಅರಿಶಿನ ಹಾಕಿ ಕುಡಿಯುವುದರಿಂದ ಗಂಟಲು ಕಿರಿಕಿರಿ ಕಡಿಮೆಯಾಗುತ್ತದೆ. ಅರಿಶಿನದ ರುಚಿ ಇಷ್ಟವಾಗದೇ ಇರುವವರು ಹಾಲಿಗೆ ಅರಿಶಿನದ ಜೊತೆಗೆ ಜೇನುತುಪ್ಪ ಹಾಗೂ ಇತರ ಸಿಹಿ ಸಿರಪ್ಗಳನ್ನು ಬಳಸಬಹುದು. ಅರಿಶಿನ ಹಾಲು ಕೆಮ್ಮು ಕಡಿಮೆ ಮಾಡುವುದರೆ ಜೊತೆಗೆ ದೇಹದ ಉಷ್ಣತೆಯನ್ನು ಸರಿದೂಗಿಸುತ್ತದೆ.
3. ಪುದೀನಾ
ಪುದೀನಾ ಸೊಪ್ಪು ಒಂದು ಗಿಡ ಮೂಲಿಕೆಯಾಗಿದೆ. ಪುದೀನಾ ವಿಶಿಷ್ಟವಾದ ಮಿಂಟಿ ಸುವಾಸನೆ ಸೇವಿಸಲು ಅನುಕೂಲಕರವಾಗಿದ್ದು, ಇದರ ನಿರೋಧಕ ಶಕ್ತಿಯು ಕೆಮ್ಮ ಕಡಿಮೆ ಮಾಡುತ್ತದೆ. ಪುದೀನಾ ಹಾಕಿ ಕುದಿಸಿದ ಬೆಚ್ಚಗಿನ ನೀರು ಅಥವಾ ಪುದೀನಾ ಚಹಾವನ್ನು ಕುಡಿಯುವುದರಿಂದ ಗಂಟಲಿನ ಕಿರಿಕಿರಿ ಹಾಗೂ ಕಫ ಕಡಿಮೆಯಾಗುತ್ತದೆ. ಪುದೀನಾದಲ್ಲಿನ ಆಂಟಿಟಸ್ಸಿವ್ (ಕೆಮ್ಮು ನಿಗ್ರಹಿಸುವ) ಗುಣಲಕ್ಷಣಗಳು ಒಣ ಕೆಮ್ಮು ಕಡಿಮೆ ಮಾಡುತ್ತದೆ. ಜೊತೆಗೆ ಪುದೀನಾ ನೈಸರ್ಗಿಕವಾಗಿ ಉಸಿರಾಟದ ಸಮಸ್ಯೆಯನ್ನು ಕೂಡ ಕಡಿಮೆ ಮಾಡುವ ಗುಣ ಲಕ್ಷಣಗಳನ್ನು ಹೊಂದಿದೆ.

4.ತುಳಸಿ ದಳ
ತುಳಸಿ ಗಿಡದ ಎಲೆಗಳಲ್ಲಿ ಕಂಡುಬರುವ ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್, ಆಂಟಿ ಇನ್ಫಾಮೇಟರಿ, ಆಂಟಿ ಫಂಗಲ್ ಗುಣಲಕ್ಷಣಗಳು, ಶೀತ ಜ್ವರ ನೆಗಡಿ, ಕೆಮ್ಮಿನ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತದೆ. ಪ್ರತಿದಿನ ಒಂದೆರಡು ತುಳಸಿ ಎಲೆಗಳನ್ನು ಖಾಲಿ ಹೊಟ್ಟೆಗೆ ಸೇವಿಸುವುದರಿಂದ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ತುಳಸಿಯ ಎಲೆಗಳಲ್ಲಿ ಔಷಧೀಯ ಗುಣಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವುದರಿಂದ, ಈ ಎಲೆಗಳನ್ನು ಬಳಸಿ ಚಹಾ ಮಾಡಿ ಕುಡಿದರೆ ಕೆಮ್ಮು ಬಹಳ ಬೇಗನೇ ನಿವಾರಣೆಯಾಗುತ್ತದೆ.

5. ಜೇನುತುಪ್ಪ ಮತ್ತು ಶುಂಠಿ
ಒಣ ಕೆಮ್ಮಿನಿಂದ ಪಾರಾಗಲು ಜೇನುತುಪ್ಪ ಮತ್ತು ಶುಂಠಿ ಸೇವಿಸುವುದು ಉತ್ತಮ ಕೆಲವರಿಗೆ ಗಂಟಲಿನ ಭಾಗದಲ್ಲಿ ಸೋಂಕು ಉಂಟಾಗಿರುತ್ತದೆ. ನಿರ್ಲಕ್ಷ್ಯ ಮಾಡಿದರೆ ಉಸಿರಾಟ ವ್ಯವಸ್ಥೆಯಲ್ಲಿ ಸಾಕಷ್ಟು ತೊಂದರೆ ಎದುರಾಗಬಹುದು. ಹೀಗಾಗಿ ಕೆಮ್ಮು ಕಡಿಮೆಯಾಗಲು ಜೇನುತುಪ್ಪ ಮತ್ತು ಶುಂಠಿ ಸೇವಿಸಿ. ಎದೆಯ ಭಾಗದಲ್ಲಿ ಹಾಗೂ ಮೂಗಿನ ಭಾಗದಲ್ಲಿ ಕಟ್ಟಿಕೊಳ್ಳುವ ಕಫವನ್ನು ಶುಂಠಿ ಮತ್ತು ಜೇನು ತುಪ್ಪದ ಮಿಶ್ರಣ ಕರಗಿಸುತ್ತದೆ. ಒಂದು ಲೋಟ ಕುಡಿಯುವ ನೀರಿಗೆ ಸ್ವಲ್ಪ ಶುಂಠಿ ರಸವನ್ನು ಸೇರಿಸಿ ಇಲ್ಲವೆಂದರೆ ಸಣ್ಣದಾಗಿ ತುರಿದ ಶುಂಠಿಯನ್ನು ಹಾಕಿ ಕುದಿಸಿ ಆರಿಸಿ ಬೆಚ್ಚಗಾದ ನಂತರ ಜೇನು ತುಪ್ಪ ಹಾಕಿ ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.
-
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ












Click it and Unblock the Notifications