Diabetes: ಮಧುಮೇಹವನ್ನು ನಿಯಂತ್ರಿಸಿ ಜೀವನ ನಡೆಸುವುದು ಹೇಗೆ?
ಮಧುಮೇಹದಿಂದ ಬಳಲುತ್ತಿರುವವರಿಗೆ ಇನ್ಸುಲಿನ್ ಕಂಡು ಹಿಡಿದ ವಿಜ್ಞಾನಿ ಡಾ.ಫ್ರೆಢರಿಕ್ ಬ್ಯಾಂಟಿಂಗ್ ಅವರ ಕಾರ್ಯವನ್ನು ಸದಾ ಸ್ಮರಿಸುವ ಸಲುವಾಗಿಯೇ ಅವರ ಜನ್ಮದಿನವಾದ ನವೆಂಬರ್ 14ನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತಿದೆ. ಇಡೀ ಜಗತ್ತು ಮಧುಮೇಹವನ್ನು ನಿಯಂತ್ರಿಸಲು ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಡಾ.ಫ್ರೆಢರಿಕ್ ಬ್ಯಾಂಟಿಂಗ್ ಅವರು ವೈದ್ಯ ವಿಜ್ಞಾನಿ ಚಾರಲ್ಸ್ ಬೆಸ್ಟ್ ಅವರೊಂದಿಗೆ ಸೇರಿ ಇನ್ಸುಲಿನ್ ನ್ನು 1922, ಜನವರಿ 11ರಂದು ಕಂಡು ಹಿಡಿದಿದ್ದು ಬಹಳಷ್ಟು ಜನರು ನೆಮ್ಮದಿಯುಸಿರು ಬಿಡಲು ಸಾಧ್ಯವಾಗಿದೆ.
ಇವತ್ತು ಮಧುಮೇಹ ಯಾವಾಗ ಯಾರಿಗೆ ಅಡರಿಕೊಳ್ಳುತ್ತದೆ ಎಂಬುದನ್ನು ಹೇಳಲಾಗದು. ಹೀಗಾಗಿ ಆಗಾಗ್ಗೆ ರಕ್ತ ಪರೀಕ್ಷೆ ಮೂಲಕ ಮಧುಮೇಹ ಬಂದಿದೆಯಾ ಎಂಬುದನ್ನು ಖಾತರಿ ಮಾಡಿಕೊಳ್ಳುವುದು ಒಳ್ಳೆಯದು, ಹಾಗೆಯೇ ತಗುಲಿರುವ ಮಧುಮೇಹ ಉಲ್ಭಣಗೊಳ್ಳದಂತೆ ನಿಯಂತ್ರಣದಲ್ಲಿಟ್ಟು ಕೊಳ್ಳುವುದು ಕೂಡ ಜಾಣತನವೇ ಆಗಿದೆ. ನಿಜ ಹೇಳಬೇಕೆಂದರೆ, ಮಧುಮೇಹ ಒಮ್ಮೆ ತಗುಲಿಕೊಂಡಿತೆಂದರೆ ಮತ್ತೆ ಅದನ್ನು ಸಂಪೂರ್ಣ ಗುಣಪಡಿಸುವುದು ಅಸಾಧ್ಯ. ಬದಲಿಗೆ ನಿಯಂತ್ರಿಸಬಹುದಷ್ಟೆ.

ನಾವು ಮಧುಮೇಹವನ್ನು ನಿಯಂತ್ರಿಸಬೇಕಾದರೆ ಏನು ಮಾಡಬೇಕು ಎಂಬ ಪ್ರಶ್ನೆಯೂ ಮೂಡದಿರದು. ಇದಕ್ಕಾಗಿಯೇ ತಜ್ಞ ವೈದ್ಯರು ಜೀವನ ಕ್ರಮದಲ್ಲಿ ಪಾಲಿಸಬೇಕಾದ ಶಿಸ್ತು, ಸೇವಿಸುವ ಆಹಾರಗಳ ಬಗ್ಗೆ ವಹಿಸಬೇಕಾದ ಒಂದಷ್ಟು ಎಚ್ಚರಿಕೆ ಮತ್ತು ಸಲಹೆಗಳನ್ನು ನೀಡಿದ್ದು ಅದರಂತೆ ಪಾಲನೆ ಮಾಡುವುದು ಒಳ್ಳೆಯದು. ಇಷ್ಟಕ್ಕೂ ಮಧುಮೇಹ ಯಾವಾಗ ಬರುತ್ತದೆ ಎಂಬುದನ್ನು ನೋಡಿದ್ದೇ ಆದರೆ, ಇದಕ್ಕೆ ಕಾರಣ ದುಶ್ಚಟ, ಶಿಸ್ತಿಲ್ಲದ ಜೀವನ, ಆಹಾರ ಸೇವನೆಯಲ್ಲಿ ಹಿಡಿತ ಇಲ್ಲದಿರುವುದು ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಮಧುಮೇಹ ಬಹುಬೇಗ ನಮ್ಮನ್ನು ಆವರಿಸಿಕೊಳ್ಳುತ್ತಿದೆ.
ವೈದ್ಯರು ನೀಡುವ ಸಲಹೆ ಪಾಲಿಸಿ
ಮಧುಮೇಹ ನಿಯಂತ್ರಿಸಿಕೊಂಡು ಒಂದಷ್ಟು ದಿನ ಆರೋಗ್ಯವನ್ನು ಉಳಿಸಿಕೊಂಡು ಬದುಕನ್ನು ಕಂಡುಕೊಳ್ಳಬೇಕಾದರೆ ನಾವು ವೈದ್ಯರು ನೀಡುವ ಸಲಹೆಗಳನ್ನು ತಪ್ಪದೆ ಪಾಲಿಸಲೇ ಬೇಕಾಗಿದ್ದು, ಅದೇನೆಂದರೆ ಮಧುಮೇಹದಿಂದ ಬಳಲುವವರು ಯಾವ ಆಹಾರ ಸೇವಿಸಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಯಾವ ಆಹಾರ ಸೇವಿಸಬಾರದು ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು. ಕೇಕ್, ಫೇಸ್ಟ್ರಿ, ಸಿಹಿ ಬಿಸ್ಕೆಟ್, ಸಕ್ಕರೆ, ಐಸ್ಕ್ರೀಂ, ಕ್ಯಾಂಡಿ, ಚಾಕೋಲೆಟ್, ಜೇನುತುಪ್ಪ, ಗ್ಲೂಕೋಸ್, ಬೆಲ್ಲ, ಡ್ರೈಫ್ರೂಟ್ಸ್, ತಂಪುಪಾನೀಯ ಮತ್ತು ಸಿಹಿಯುಕ್ತ ಜ್ಯೂಸ್ಗಳು, ಹಾರ್ಲಿಕ್ಸ್, ಬೂಸ್ಟ್, ಮಾಲ್ಟ್ ಮೊದಲಾದವುಗಳಾಗಿವೆ.

ಹಣ್ಣುಗಳಲ್ಲಿ ಪಚ್ಚಬಾಳೆ, ಸಪೋಟಾ, ಹಲಸಿನಹಣ್ಣು, ಮಾವಿನಹಣ್ಣು, ಕಿತ್ತಳೆ, ತರಕಾರಿಗಳಲ್ಲಿ ಆಲೂಗೆಡ್ಡೆ, ಸಿಹಿಗೆಣಸು, ಮರಗೆಣಸು, ಸಿಹಿಕುಂಬಳ, ಬೇಯಿಸಿದ ಕ್ಯಾರೆಟ್, ಬೀಟ್ರೂಟ್, ಕೊಬ್ಬಿನಂಶವಿರುವ ತುಪ್ಪ, ಬೆಣ್ಣೆ, ವನಸ್ಪತಿ, ಡಾಲ್ಡಾ, ಕೊಬ್ಬರಿ ಎಣ್ಣೆ, ಚೀಸ್, ಪನ್ನೀರು, ಗಿಣ್ಣು ಕೋವಾ ಇವುಗಳನ್ನೆಲ್ಲ ತ್ಯಜಿಸುವುದೇ ಒಳ್ಳೆಯದು. ಸಂಸ್ಕರಿಸಿದ ರಿಫೈನ್ಡ್ ಅಥವಾ ಮೈದಾದಿಂದ ತಯಾರಿಸಿದ ಬಿಸ್ಕೆಟ್, ಬ್ರೆಡ್, ನಾನ್, ರೋಟಿ, ನೂಡಲ್ಸ್ ಮೊದಲಾದವುಗಳನ್ನು ದೂರವಿಡಿ. ಉಪ್ಪಿನ ಸೇವನೆ ಕಡಿಮೆ ಮಾಡಿ, ಧೂಮಪಾನ, ಮದ್ಯಪಾನಕ್ಕೆ ಇತಿಶ್ರೀ ಹಾಡಬೇಕು.
ಯಾವ ಆಹಾರ ಸೇವನೆ ಒಳ್ಳೆಯದು
ಇನ್ನು ಹೆಚ್ಚು ಅಲ್ಲದೆ ಸಾಧಾರಣ ಪ್ರಮಾಣದಲ್ಲಿ ಸೇವಿಸಬಹುದಾದ ಆಹಾರಗಳಿದ್ದು ಅವುಗಳೆಂದರೆ ತೆಂಗಿನಕಾಯಿ, ಕಡಲೆಬೀಜ, ಬಾದಾಮಿ, ಗೋಡಂಬಿ, ಧಾನ್ಯಗಳಲ್ಲಿ ಅಕ್ಕಿ, ರಾಗಿ, ಗೋಧಿ ಇವುಗಳನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಬೇಕು. ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಹಾಲಿನ ಪದಾರ್ಥಗಳನ್ನು ಕೂಡ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ದಿನಕ್ಕೊಂದರಂತೆ ಚಿಕ್ಕದಾದ ಮೋಸಂಬಿ, ಸೇಬು, ಸೀಬೆ, ಏಲಕ್ಕಿಬಾಳೆ, ಮರಸೇಬು, ಅನಾಸಸ್ ಚೂರು 1, ಚಕ್ಕೊತ 2ತೊಳೆ, ಪರಂಗಿಹಣ್ಣು 2 ಚೂರು, ಕಲ್ಲಂಗಡಿ 2ಚೂರು, 5ರಿಂದ10 ದ್ರಾಕ್ಷಿ, 8 ರಿಂದ10 ನೇರಳೆ, 4 ರಿಂದ 6 ನೆಲ್ಲಿಕಾಯಿಯನ್ನು ಸೇವಿಸಬಹುದು.
ಮೊಟ್ಟೆ(ಬಿಳಿಯಭಾಗ ಮಾತ್ರ), ಮೀನು, ಚರ್ಮ ತೆಗೆದ ಕೋಳಿ ಮಾಂಸ, ಹಸಿ ಅವರೆಕಾಯಿ, ತೊಗರಿಕಾಯಿ, ಬಾಳೆಕಾಯಿ, ಬಾಳೆದಿಂಡು, ಚಪ್ಪರದವರೆಯನ್ನು ಅಲ್ಪ ಪ್ರಮಾಣದಲ್ಲಿ ಆಹಾರದಲ್ಲಿ ಸೇರಿಸಿಕೊಳ್ಳಬಹುದಾಗಿದೆ. ತಿಳಿಸಾರು, ತೆಳುವಾದ ಮಜ್ಜಿಗೆ, ಟೊಮ್ಯಾಟೋ ಜ್ಯೂಸ್, ನಿಂಬೆ ಜ್ಯೂಸ್(ಸಕ್ಕರೆ ರಹಿತ), ತರಕಾರಿ ಸೂಪ್ಸ್, ಸೋಡಾ, ಬಾರ್ಲಿ ನೀರು, ತರಕಾರಿ, ಸೊಪ್ಪು, ಮೊಳಕೆ ಕಟ್ಟಿದ ಕಾಳುಗಳು, ಹೆಚ್ಚಿನ ನಾರಿನಾಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸಬಹುದಾಗಿದೆ.
ಸಕ್ಕರೆ ಮಟ್ಟ ಕಡಿಮೆ ಆದ್ರೆ ಏನು ಮಾಡ್ಬೇಕು?
ಉಪವಾಸ ಮತ್ತು ಭೂರೀ ಬೋಜನ ಮಾಡಬಾರದು, ಸ್ವಲ್ಪ, ಸ್ವಲ್ಪ ಆಹಾರವನ್ನು ಹೆಚ್ಚು ಸಲ ಸೇವಿಸಬೇಕು. ಮಧುಮೇಹ ಕಾಯಿಲೆ ಇರುವವರಲ್ಲಿ ಅತಿಯಾದ ಬೆವರು, ತಲೆಸುತ್ತುವುದು, ಕಣ್ಣುಮಂಜಾಗುವುದು, ಅತಿಯಾದ ಹಸಿವು, ತೀವ್ರ ಎದೆಬಡಿತ, ಪ್ರಜ್ಞೆ ತಪ್ಪುವುದು ಕಂಡು ಬಂದರೆ ಇದು ಸಕ್ಕರೆ ಪ್ರಮಾಣ ಸಹಜ ಮಟ್ಟಕ್ಕಿಂತ ಕಡಿಮೆಯಾಗಿದೆ ಎಂದು ತಿಳಿದು ಕೊಳ್ಳಬೇಕು. ಇಂತಹ ಸಂದರ್ಭ ಒಂದು ಲೋಟ ನೀರಿಗೆ 4ರಿಂದ 5 ಚಮಚ ಸಕ್ಕರೆ ಅಥವಾ ಗ್ಲೂಕೋಸ್ ಮಿಶ್ರ ಮಾಡಿ ಸೇವಿಸಬೇಕು. ಮಧುಮೇಹ ಇರುವವರು ಆಹಾರಕ್ರಮಗಳತ್ತ ಮುತುವರ್ಜಿ ವಹಿಸಿದರೆ ಖಂಡಿತಾ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.
-
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು -
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಅನುಮತಿ ಕೊಟ್ಟ ಅಮೆರಿಕ












Click it and Unblock the Notifications