Get Updates
Get notified of breaking news, exclusive insights, and must-see stories!

ರಸ್ತೆ ಅಪಘಾತ: ಕರ್ನಾಟಕದಲ್ಲಿ ಯಾವ ಜಿಲ್ಲೆಯಲ್ಲಿ ಅಧಿಕ? ಇದಕ್ಕೆ ಆಧುನಿಕ ಕಾರಣವೇನು?

ಬೆಂಗಳೂರು, ಆಗಸ್ಟ್‌ 29: ಕಠಿಣ ನಿಯಂತ್ರಣ ಕ್ರಮಗಳ ನಡುವೆಯೂ ರಸ್ತೆ ಅಪಘಾತಗಳ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಹೀಗಾಗಿ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅಧಿಕ ರಸ್ತೆ ಅಪಘಾತಗಳು ಸಂಭವಿಸಿವೆ ಎಂದು ತಿಳಿಯೋಣ,

2021-2022 ರ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 816 ರಸ್ತೆ ಅಪಘಾತದಿಂದಾಗಿ ಸಾವುಗಳೊಂದಿಗೆ ರಾಜ್ಯದಲ್ಲಿ ಗರಿಷ್ಠ ಜೀವಗಳನ್ನು ಬಲಿ ಪಡೆದು ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಬೆಂಗಳೂರು ನಗರದಲ್ಲಿ 633, ತುಮಕೂರು ಜಿಲ್ಲೆಯಲ್ಲಿ 596, ಮೈಸೂರು 510 ಮತ್ತು ಬೆಂಗಳೂರು ಜಿಲ್ಲೆ (507) ಇದೆ.

2021-2022ರಲ್ಲಿ ರಾಜ್ಯದಾದ್ಯಂತ 34,394 ಅಪಘಾತಗಳು ವರದಿಯಾಗಿದ್ದು, 9,868 ಸಾವುಗಳು ಮತ್ತು 40,483 ಮಂದಿ ಗಾಯಗೊಂಡಿದ್ದಾರೆ. ಅಂದರೆ ಆ ಅವಧಿಯಲ್ಲಿ ರಾಜ್ಯದಲ್ಲಿ ಪ್ರತಿದಿನ ಸರಾಸರಿ 94 ಅಪಘಾತಗಳು ಮತ್ತು 27 ಸಾವುಗಳು ವರದಿಯಾಗಿವೆ.

ಬೆಳಗಾವಿ ನಗರ ಪೊಲೀಸ್ ಕಮಿಷನರ್ ಎಂ.ಬಿ.ಬೋರಲಿಂಗಯ್ಯ ಮಾತನಾಡಿ, ''ಬೆಳಗಾವಿ ಭೌಗೋಳಿಕವಾಗಿ ದೊಡ್ಡ ಜಿಲ್ಲೆ, ನಾವು ಗರಿಷ್ಠ ಅಪಘಾತಗಳು ವರದಿಯಾಗುವ ಸ್ಥಳಗಳನ್ನು ಗುರುತಿಸಿದ್ದೇವೆ. ಈ ಸ್ಥಳಗಳ ಪಟ್ಟಿಯನ್ನು ಎನ್‌ಎಚ್‌ಎಐ ಮತ್ತು ಪಿಡಬ್ಲ್ಯೂಡಿ ಯಂತಹ ಇಲಾಖೆಗಳಿಗೆ ಸಲ್ಲಿಸುತ್ತೇವೆ. ನಾವು ಆ ಪ್ರದೇಶಗಳಲ್ಲಿ ಹೆಚ್ಚುವರಿ ಫಲಕಗಳನ್ನು ಹಾಕುತ್ತಿದ್ದೇವೆ'' ಎಂದರು.

ಗುರುವಾರ ತುಮಕೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದು, 14ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜೂನ್‌ನಲ್ಲಿ ಬೆಳಗಾವಿಯಲ್ಲಿ ದಿನಗೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ವಾಹನ ಕಾಲುವೆಗೆ ಬಿದ್ದಾಗ ಏಳು ಜನರು ಮೃತರಾಗಿ 14 ಇತರರು ಗಾಯಗೊಂಡರು. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಹೆಚ್ಚಿನ ಅಪಘಾತಗಳು ನಡೆಯುತ್ತಿವೆ. ವಾಸ್ತವವಾಗಿ, ಅವುಗಳಲ್ಲಿ ಹೆಚ್ಚಿನವು ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ಖಾಸಗಿ ಸಾರಿಗೆಯಿಂದ ಸಂಭವಿತ್ತವೆ ಎಂದು ಟಿಐಒ ವರದಿ ಮಾಡಿದೆ.

ಈ ಬಗ್ಗೆ ಸಂಚಾರ ತಜ್ಞ ಎಂ.ಎನ್.ಶ್ರೀಹರಿ ಮಾತನಾಡಿ, ಎನ್‌ಎಚ್‌ 4 (ಬೆಂಗಳೂರು-ತುಮಕೂರು ಹೆದ್ದಾರಿ)ಯಲ್ಲಿ ಏಕರೂಪದ ಮಾರ್ಗವಿಲ್ಲ. ಕೆಲವೆಡೆ ರಸ್ತೆ ತೀರಾ ಕಿರಿದಾಗಿದ್ದು, ಇನ್ನು ಕೆಲವೆಡೆ ಅಗಲವಾಗಿದೆ. ನಾಲ್ಕು ಪಥಗಳು ಏಕಾಏಕಿ ದ್ವಿಪಥವಾಗಿ ಮಾರ್ಪಟ್ಟಾಗ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆಯುದ್ದಕ್ಕೂ ಹಲವು ಗ್ರಾಮಗಳಿರುವುದರಿಂದ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಅಡ್ಡಾದಿಡ್ಡಿಯಾಗಿ ರಸ್ತೆ ದಾಟುತ್ತಿದ್ದು, ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ತುಮಕೂರಿನಲ್ಲಿ ರಾತ್ರಿ ವೇಳೆ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು, ಕಳ್ಳಂಬೆಳ್ಳವೂ ಒಂದು ಅಪಘಾತ ಪೀಡಿತ ಪ್ರದೇಶಗಳಲ್ಲಿ ಒಂದಾಗಿದೆ.

ಬೆಂಗಳೂರು- ಬೆಳಗಾವಿ ನಡುವಿನ ಅಪಘಾತಗಳ ಕಾರಣಗಳ ಕುರಿತು ಸಂಚಾರ ತಜ್ಞ ಎಂ.ಎನ್.ಶ್ರೀಹರಿ ಮಾತನಾಡಿ, ಇಲ್ಲಿ ಹೆಚ್ಚಿನ ಚಾಲಕರು ಮಹಾರಾಷ್ಟ್ರದವರು. ಮಹಾರಾಷ್ಟ್ರದ ರಸ್ತೆ ಪರಿಸ್ಥಿತಿಗಳು ಮತ್ತು ಚಾಲನಾ ಮಾದರಿಗಳು ಕರ್ನಾಟಕಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿವೆ. ಅವರು ಆಗಾಗ್ಗೆ ಮಿತಿಮೀರಿದ ಮತ್ತು ರಸ್ತೆ ಸಂಕೇತಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ. ಇದರಿಂದ ಅಪಘಾತಗಳಿಗೆ ಕಾರಣವಾಗುತ್ತಾರೆ ಎಂದರು.

ವಾಹನಗಳ ಫಿಟ್‌ನೆಸ್ ಖಾತ್ರಿಪಡಿಸುವಲ್ಲಿ ದೋಷ

ವಾಹನಗಳ ಫಿಟ್‌ನೆಸ್ ಖಾತ್ರಿಪಡಿಸುವಲ್ಲಿ ದೋಷ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಸುಸ್ಥಿರ ಸಾರಿಗೆ ಲ್ಯಾಬ್‌ನ ಸಂಚಾಲಕ ಆಶಿಶ್ ವರ್ಮಾ ಅವರ ಪ್ರಕಾರ, ಅಪಘಾತ ಸ್ಥಳಗಳನ್ನು ಗುರುತಿಸುವುದು ಒಂದು ಅಂಶವಾಗಿದೆ. ಆದರೆ ಈ ಅಂಶಗಳು, ವಾಹನ, ರಸ್ತೆ ಯೋಗ್ಯತೆ, ಗುಣಮಟ್ಟ ಇತ್ಯಾದಿಗಳು ಪ್ರಮುಖ ಪಾತ್ರವಹಿಸುತ್ತವೆ. ಆರ್‌ಟಿಒಗಳಲ್ಲಿ ಭ್ರಷ್ಟಾಚಾರದಲ್ಲಿ ಆಳವಾಗಿ ಬೇರೂರಿದೆ. ಡ್ರೈವಿಂಗ್ ಲೈಸೆನ್ಸ್ ಪ್ರಕ್ರಿಯೆ ಅಥವಾ ವಾಹನಗಳ ಫಿಟ್‌ನೆಸ್ ಖಾತ್ರಿಪಡಿಸುವಲ್ಲಿ ಹಲವು ಲೋಪದೋಷಗಳಿವೆ. ನಮ್ಮ ನಾಗರಿಕರನ್ನು ಸುರಕ್ಷಿತ ಮತ್ತು ಜಾಗೃತ ಚಾಲಕರನ್ನಾಗಿ ಮಾಡಲು ಸರಿಯಾದ ತರಬೇತಿ ನೀಡಬೇಕು. ಆದರೆ ಇಲ್ಲಿ ಡಿಎಲ್ ನೀಡುವುದರಲ್ಲಿ ಭ್ರಷ್ಟಾಚಾರವಿದೆ. ಇದು ಚಾಲನಾ ಮಾನದಂಡಗಳ ಮೇಲೂ ಪರಿಣಾಮ ಬೀರುತ್ತದೆ. ಖಾಸಗಿ ನಿರ್ವಾಹಕರು ಹಣ ಗರಿಷ್ಠಗೊಳಿಸುವತ್ತ ಗಮನಹರಿಸುತ್ತಿದ್ದಾರೆ. ಅವರ ಲಾಭದಿಂದ ಅವರು ಹಳೆಯ ವಾಹನಗಳನ್ನು ನಿಯೋಜಿಸುವ ಮೂಲಕ ಮತ್ತು ಹೆಚ್ಚುವರಿ ಪ್ರಯಾಣಿಕರನ್ನು ಸಾಗಿಸುವ ಮೂಲಕ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳುತ್ತಿದ್ದಾರೆ. ಅಂತಹ ವಾಹನಗಳನ್ನು ಭೇದಿಸಲು ಸಾರಿಗೆ ಇಲಾಖೆಯಿಂದ ನಿಯಮಗಳ ಸರಿಯಾದ ಜಾರಿ ಇಲ್ಲ ಎಂದರು.

ರಸ್ತೆ ವಿನ್ಯಾಸ ದೋಷ, ಬ್ಲಾಕ್‌ಸ್ಪಾಟ್‌ಗಳು ಕಾರಣ

ರಸ್ತೆ ವಿನ್ಯಾಸ ದೋಷ, ಬ್ಲಾಕ್‌ಸ್ಪಾಟ್‌ಗಳು ಕಾರಣ

ಅಪಘಾತಗಳ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಅತಿ ವೇಗ, ಕುಡಿದು ವಾಹನ ಚಲಾಯಿಸುವುದು, ಪ್ರಯಾಣಿಕರಲ್ಲಿ ಮಾರ್ಗದ ಶಿಸ್ತಿನ ಕೊರತೆ, ಅತಿಯಾದ ಚಾಲನೆಯ ಸಮಯದಿಂದ ಚಾಲಕರು ನಿದ್ದೆಗೆ ಜಾರುವುದು, ರಸ್ತೆ ವಿನ್ಯಾಸ ದೋಷ, ಬ್ಲಾಕ್‌ಸ್ಪಾಟ್‌ಗಳು ಇತ್ಯಾದಿಗಳು ಇಂತಹ ಮಾರಣಾಂತಿಕ ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ತಿಳಿಸಿದ್ದಾರೆ.

1,416 ವಾಹನ ಚಾಲಕರ ಚಾಲನಾ ಪರವಾನಗಿ ರದ್ದು

1,416 ವಾಹನ ಚಾಲಕರ ಚಾಲನಾ ಪರವಾನಗಿ ರದ್ದು

ಮುಖ್ಯವಾಗಿ ರಾತ್ರಿ ಸಮಯದಲ್ಲಿ ಸಂಭವಿಸುವ ಅಪಘಾತಗಳಲ್ಲಿ ಪಾನಮತ್ತ ಚಾಲಕರು ಕಾರಣರಾಗುತ್ತಿದ್ದಾರೆ. ಅಪಘಾತ ಸ್ಥಳಗಳು, ವಲಯಗಳನ್ನು ಗುರುತಿಸಲಾಗುತ್ತಿದೆ. ಆ ಪ್ರದೇಶಗಳಲ್ಲಿ ರಸ್ತೆ- ಸುರಕ್ಷತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆಯ ಅಧಿಕಾರಿ ಹೇಳಿದರು. 2021-22ರಲ್ಲಿ ಸಾರಿಗೆ ಇಲಾಖೆಯು ಕುಡಿದು ವಾಹನ ಚಲಾಯಿಸಿದ 1,416 ವಾಹನ ಚಾಲಕರ ಚಾಲನಾ ಪರವಾನಗಿಯನ್ನು ಮತ್ತು ಇತರ ಅಪರಾಧಗಳಿಗಾಗಿ 6,180 ಪರವಾನಗಿಗಳನ್ನು ಅಮಾನತುಗೊಳಿಸಿದೆ.

ಪರ್ಮಿಟ್ ಷರತ್ತುಗಳ ಉಲ್ಲಂಘನೆ

ಪರ್ಮಿಟ್ ಷರತ್ತುಗಳ ಉಲ್ಲಂಘನೆ

ಉಳಿದ 1,587 ಪ್ರಕರಣಗಳಲ್ಲಿ ಇತರೆ ಉಲ್ಲಂಘನೆಗಾಗಿ ನೋಟಿಸ್ ಜಾರಿ ಮಾಡಲಾಗಿದೆ. ಪರ್ಮಿಟ್ ಷರತ್ತುಗಳನ್ನು ಉಲ್ಲಂಘಿಸಿ ಸರಕು ವಾಹನಗಳಲ್ಲಿ ಓವರ್ ಲೋಡ್ ಸಾಗಿಸುತ್ತಿರುವುದು ಅಪಘಾತಗಳಿಗೆ ಮತ್ತೊಂದು ಕಾರಣ. 2021-22ರಲ್ಲಿ 7.19 ಲಕ್ಷ ಸರಕು ವಾಹನಗಳನ್ನು ಪರಿಶೀಲಿಸಲಾಗಿದೆ. ಈ ಪೈಕಿ 6,899 ಪ್ರಕರಣಗಳನ್ನು ದಾಖಲಿಸಿ 1,434 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅವರಿಂದ 11.9 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+