ಉಗುರು ಕಡಿಯುತ್ತಾ ಜಾತ್ರೇಲಿ ತಪ್ಪಿಸಿಕೊಂಡ ಮಗುವಿನ ಮುಖಭಾವದ ಕಾಶೀನಾಥ್
ನರಪೇತಲ ದೇಹ, ತನ್ನನ್ನು ತಾನೇ ಪ್ಯಾದೆ ಅಂದು ಕರೆದುಕೊಳ್ಳುವ 'ಹೀರೋ', ಖಳನಟರಿಂದಲೇ ಒದೆ ತಿಂದೂ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಕಾಶೀನಾಥ್ ಸಿನಿಮಾಗಳೆಂದರೆ ಎಂಥವರಲ್ಲೂ ಆತ್ಮವಿಶ್ವಾಸ ತುಂಬುತ್ತಿದ್ದವು. ಏಕೆಂದರೆ ಕಾಶೀನಾಥ್ ಅವರೇ ಹೀರೋ ಆಗಿದ್ದಾರೆಂದರೆ ನಾನ್ಯಾಕೆ ಹೀರೋ ಆಗಬಾರದು ಎಂಬಂಥ ಆತ್ಮವಿಶ್ವಾಸ ಅದು.
ಆದರೆ, ತೆರೆಯ ಮೇಲೆ ತಮ್ಮನ್ನು ನೋಡುವಂತೆ ಜನರನ್ನು ಹಿಡಿದಿಡುವುದು ಸಲೀಸಲ್ಲ. ಅದಕ್ಕೆ ಕಾರಣ ಏನೆಂದರೆ, ಕಾಶೀನಾಥ್ ಸಿನಿಮಾಗಳಲ್ಲಿ ಭರಪೂರ ಮನರಂಜನೆ ಇರುತ್ತಿತ್ತು. ಡಬಲ್ ಮೀನಿಂಗ್ ಡೈಲಾಗ್, ನಮ್ಮ ಮನೆ ರಸ್ತೆ ಬದಿಯಲ್ಲೇ ಇದ್ದಾನೇನೋ ಎಂಬಂಥ ಹೀರೋ ಮಟೀರಿಯಲ್ಲು, ಅತ್ತೆ ಮಗಳೇನೋ ಅನಿಸುವಷ್ಟೇ ಸಹಜ ಸುಂದರಿಯಾದ ಹೀರೋಯಿನ್ ಇರುತ್ತಿದ್ದರು.
ಸ್ನೇಹಿತರ ಗುಂಪು ಪಟ್ಟಾಂಗ ಹೊಡೆಯುವಾಗ ಹೇಳುತ್ತಿದ್ದ ಪಂಚ್ ಡೈಲಾಗ್ ಗಳೇ ಸಿನಿಮಾದಲ್ಲೂ ಇರುತ್ತಿದ್ದವು. ಒಬ್ಬ ಹೀರೋನ ನಮ್ಮ ಥರವೇ, ನಮ್ಮವನೇ ಅಂದುಕೊಳ್ಳುವುದಕ್ಕೆ ಇನ್ನೇನು ಬೇಕಿತ್ತು? ಕಾಶೀನಾಥ್ ಅವರಿಗೆ ಇಟಾಲಿಯನ್, ಇಂಗ್ಲಿಷ್ ಸೇರಿದಂತೆ ವಿದೇಶಿ ಭಾಷೆಗಳ ಸಿನಿಮಾ ಸ್ಫೂರ್ತಿಯಾಗಿತ್ತೇ? ಇದೊಂದು ಪ್ರಶ್ನೆ ಕೇಳಬೇಕು ಅಂದುಕೊಳ್ಳುವಷ್ಟರಲ್ಲಿ ಹೊರಟುಬಿಟ್ಟಿದ್ದಾರೆ.

ಅನಂತನ ಅವಾಂತರ, ಅಜಗಜಾಂತರ, ಅನಾಮಿಕ ಹೀಗೆ 'ಅ'ಕಾರ ಪ್ರಿಯರಾಗಿದ್ದ ಕಾಶೀನಾಥ್ ರ ಅಪರಿಚಿತ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಮೈಲುಗಲ್ಲಿನಂತೆ ನಿಲ್ಲುತ್ತದೆ. ಅನುಭವ ಸಿನಿಮಾದ ತಲೆಮಾರಿನಿಂದ ತಲೆಮಾರಿಗೆ ಮತ್ತೆ ಮತ್ತೆ ಇಷ್ಟ ಆಗುವಂತೆ ಮಾಡುತ್ತದೆ.
ಕಣ್ಮರೆಯಾದ ಕಲಾಯೋಗಿ ಕಾಶಿನಾಥ್ ಅಪರೂಪದ ಚಿತ್ರಸಂಪುಟ
ಕಾಶೀನಾಥ್ ರ ಬಳಿ ಚಿತ್ರರಂಗದ ಕೆಲಸ ಕಲಿತ ಅತಿರಥ- ಮಹಾರಥರು ಇದ್ದಾರೆ. ತಮ್ಮ ಗುರುವನ್ನೂ ಮೀರಿ ಅಗಾಧವಾಗಿ ಬೆಳೆದಿದ್ದಾರೆ. ಈ ರೀತಿಯ ಗುರು- ಶಿಷ್ಯ ಪರಂಪರೆ ಕಾಣುವುದು ಕೂಡ ಅಪರೂಪ. ಸಿನಿಮಾ ಎಂಬುದು ಅದ್ಧೂರಿತನ, ಸ್ಕೀನ್ ನ ಪ್ರತಿ ಇಂಚೂ ಸೌಂದರ್ಯವನ್ನೇ ತೋರಿಸಬೇಕು ಎಂಬಂಥ ಎಲ್ಲ ಸೂತ್ರಗಳನ್ನೂ ಮುರಿದುಹಾಕಿದ ವ್ಯಕ್ತಿ ಅವರು.
ಕಾಶಿನಾಥ್ : ಪ್ರತಿಭಾವಂತ, ಸ್ವಾಭಿಮಾನಿ ಮತ್ತು ರೆಬೆಲ್
ಕಾಶೀನಾಥ್ ರ ಸಿನಿಮಾಗಳಲ್ಲಿನ ಸಂಗೀತದ್ದೇ ಮತ್ತೊಂದು ತೂಕ. ಹೊಸ ಬಗೆಯ ಸಾಹಿತ್ಯವನ್ನು ಪ್ರೇಕ್ಷಕರಿಗೆ ರೂಢಿ ಮಾಡಿಸಿದವರಲ್ಲಿ ಖಂಡಿತಾ ಅವರು ಪ್ರಮುಖರು. ಕಾಶೀನಾಥ್ ತೀರಿಕೊಂಡಿದ್ದಾರೆ. ಟಿವಿಯಲ್ಲಿ ಅವರ ಅಭಿನಯದ ದೃಶ್ಯ ಬಂದರೆ ಕಣ್ಣಿನಲ್ಲಿ ನೀರಿದ್ದರೂ ತುಟಿಯ ಮೇಲೊಂದು ನಗು ಮೂಡುತ್ತದೆ. ಉಗುರು ಕಡಿಯುತ್ತಾ, ಜಾತ್ರೆಯಲ್ಲಿ ತಪ್ಪಿಸಿಕೊಂಡ ಮಗುವಿನಂಥ ಮುಖಭಾವದ ಕಾಶೀನಾಥ್ ಮನದಲ್ಲಿ ಉಳಿದುಹೋಗಿದ್ದಾರೆ.
-
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು












Click it and Unblock the Notifications