"ಇದು ನನ್ನ ಕೊನೆಯ ತಾಣ. ಇಲ್ಲೇ ಸಮಾಧಿ" ಎಂದಿದ್ದರು ರವಿ ಬೆಳಗೆರೆ
ಕಾರವಾರ, ನವೆಂಬರ್ 13: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದಲ್ಲಿ ಫಾರ್ಮ್ ಹೌಸ್ ಖರೀದಿಸಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ, "ಅಲ್ಲೇ ನನ್ನ ಸಮಾಧಿ ಎಂದಿದ್ದರು. ಇದೀಗ ಬೆಳಗೆರೆ ನಿಧನದ ಹಿನ್ನೆಲೆಯಲ್ಲಿ ಈ ಫಾರ್ಮ್ ಹೌಸ್ನಲ್ಲಿ ನೀರವ ಮೌನ ಆವರಿಸಿದೆ.
ಜೊಯಿಡಾ ತಾಲೂಕಿನ ಜಗಲ್ ಬೇಟ್ ನಲ್ಲಿ ರವಿ ಬೆಳಗೆರೆ ಕಳೆದ ಹತ್ತಾರು ವರ್ಷದಿಂದ ಫಾರ್ಮ್ ಹೌಸ್ ಮಾಡಿಕೊಂಡಿದ್ದರು. ರವಿ ಬೆಳಗೆರೆಗೆ ಜೊಯಿಡಾ ಅಚ್ಚು ಮೆಚ್ಚಿನ ತಾಣವಾಗಿದ್ದು, ಸಮಯ ಬಿಡುವು ಮಾಡಿಕೊಂಡು ಇಲ್ಲಿಗೆ ಆಗಮಿಸುತ್ತಿದ್ದರು. ಹೊಸ ಪುಸ್ತಕಗಳನ್ನು ಬರೆಯಲು ಹಾಗೂ ಲೇಖನ ಬರೆಯಲು ಸ್ಫೂರ್ತಿಗಾಗಿ ಜೊಯಿಡಾದ ತಮ್ಮ ಫಾರ್ಮ್ ಹೌಸ್ಗೆ ಬರುತಿದ್ದ ರವಿ ಬೆಳಗರೆ, ಕಾಡುಮೇಡು ಸುತ್ತಾಡುತ್ತಾ ಹಕ್ಕಿಗಳ ವೀಕ್ಷಣೆ ಮಾಡುತ್ತ ತಿಂಗಳುಗಟ್ಟಲೇ ಇಲ್ಲಿಯೇ ತಂಗುತ್ತಿದ್ದರು.

ಜೊಯಿಡಾದಲ್ಲಿ ಫಾರ್ಮ್ ಹೌಸ್ ಖರೀದಿಸಿದ್ದ ರವಿ ಬೆಳಗೆರೆ
ಆಂಗ್ಲ ಬರಹಗಾರ ಮನೋಹರ್ ಮಾಲ್ಗಾಂವಕರ್ ಅವರ ಈ ಫಾರ್ಮ್ ಹೌಸ್ ಅನ್ನು ರವಿಯವರು ಖರೀದಿಸಿದ್ದರು. ಮೂರು ವರ್ಷದ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ವೇಳೆ ರವಿಯವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ, "ನನ್ನ ಜೊಯಿಡಾದ ಎಸ್ಟೇಟ್ ನ ಮಾಲೀಕ ಮನೋಹರ್ ಮಲ್ಗಾಂವಕರ್ ಒಬ್ಬ ಮಹಾನ್ ಇಂಗ್ಲಿಷ್ ರೈಟರ್. ಅವರು ಸ್ಟಿಕ್ ಹಿಡಿದು ಓಡಾಡುತ್ತಿದ್ದರು. ನಂತರ ಕುರ್ಚಿಗೆ ಸ್ಥಿರರಾದರು. ಕೊನೆಗೆ ಧರಾಶಾಹಿಯಾದರು" ಎಂದು ಬರೆದುಕೊಂಡಿದ್ದರು.

"ಇದೇ ನನ್ನ ಕೊನೆಯ ತಾಣ, ಅಲ್ಲೇ ಸಮಾಧಿ"
ಮುಂದುವರೆದು, "ಮನೋಹರ್ ಮಲ್ಗಾಂವಕರ್ ಅವರ ಕೊನೆಗಾಲದಲ್ಲಿ ಸೇವೆ ಮಾಡಿದೆ. ದೊಡ್ಡ ಮೊತ್ತ ಕೊಟ್ಟು ಅವರ ಎಸ್ಟೇಟ್ ಖರೀದಿಸಿದೆ. ಅದು ನನ್ನ ಕೊನೆಯ ತಾಣ. ಅಲ್ಲೇ ಸಮಾಧಿ' ಎಂದು ಬರೆದುಕೊಂಡಿದ್ದರು. ರವಿ ಬೆಳೆಗೆರೆಯವರು ನಿಧನರಾದ ಈ ಸಮಯದಲ್ಲಿ ಅವರ ಈ ಮಾತುಗಳು ಅನುರಣಿಸುತ್ತಿವೆ.

ಸೂರ್ಯನಿಲ್ಲದ ಬಾನಿನಂತಾದ ಫಾರ್ಮ್ ಹೌಸ್
ಆದರೆ, ಕಳೆದ ಲಾಕ್ಡೌನ್ ನಿಂದ ಇತ್ತ ಕಡೆ ರವಿ ಬೆಳಗೆರೆ ಫಾರ್ಮ್ ಹೌಸ್ನತ್ತ ಸುಳಿದಿರಲಿಲ್ಲ. ಈಗಫಾರ್ಮ್ ಹೌಸ್ ಸೂರ್ಯನಿಲ್ಲದ ಬಾನಿನಂತಾಗಿದ್ದು, ಮೌನ ಆವರಿಸಿದೆ. ಬೆಳಗೆರೆಯವರ ಫಾರ್ಮ್ ಹೌಸ್ ನಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಅಲ್ಲಿನ ಜನರು ತಮ್ಮ ದುಃಖ ತೋಡಿಕೊಂಡಿದ್ದಾರೆ.

ಮಾಧ್ಯಮ ರಂಗದಲ್ಲಿ ಅಚ್ಚಳಿಯದ ರವಿ ಬೆಳಗೆರೆ ಹೆಸರು...
ಪತ್ರಕರ್ತ, ಬರಹಗಾರ ರವಿ ಬೆಳಗೆರೆ ಅವರು ತೀವ್ರ ಹೃದಯಾಘಾತಕ್ಕೊಳಗಾಗಿ ನವೆಂಬರ್ 13ರ ಶುಕ್ರವಾರ ನಿಧನರಾದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ರವಿ ಬೆಳಗೆರೆಯವರು ಹಾಯ್ ಬೆಂಗಳೂರ್ ವಾರಪತ್ರಿಕೆ ಹಾಗೂ 'ಓ ಮನಸೇ' ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದರು.
ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಈ-ಟಿವಿ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದರು. ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕರು, ಹಾಯ್ ಬೆಂಗಳೂರ್' ಪತ್ರಿಕೆ ಪ್ರಾರಂಭಿಸುವ ಮುನ್ನ ಕರ್ಮವೀರ, ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.-
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ












Click it and Unblock the Notifications