ಬಾಡಿ ಡಬ್ಬಲ್ಲಾ, ಕಾಸ್ಮೆಟಿಕ್ ಸರ್ಜರಿಯಾ?- ರಹಸ್ಯವಾಗಿಯೇ ಉಳಿದ ಪುಟಿನ್
ಮಾಸ್ಕೋ, ಮೇ 7: ರಷ್ಯಾ ಉಕ್ರೇನ್ ಯುದ್ಧ ಆಲ್ ಔಟ್ ವಾರ್ ಆಗಿ ಮುಂದುವರಿಯುವ ಎಲ್ಲಾ ಸಾಧ್ಯತೆ ಇದೆ. ರಷ್ಯಾ ನಿಲ್ಲಿಸುತ್ತಿಲ್ಲ, ಉಕ್ರೇನ್ ಬಿಡುತ್ತಿಲ್ಲ ಎಂಬಂತಾಗಿದೆ. ಇದೇ ಹೊತ್ತಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಲ್ಪ ವಿರಾಮ ತೆಗೆದುಕೊಳ್ಳುತ್ತಿದ್ದಾರೆ. ಮಾಜಿ ಗುಪ್ತಚರ ದಳದ ಮುಖ್ಯಸ್ಥ ನಿಕೋಲಾಯ್ ಪಟ್ರುಶೆವ್ ತಾತ್ಕಾಲಿಕವಾಗಿ ರಷ್ಯಾದ ಚುಕ್ಕಾಣಿ ಹಿಡಿಯಲಿದ್ದಾರೆ.
ವ್ಲಾದಿಮಿರ್ ಪುಟಿನ್ ಸುತ್ತ ಬಹಳಷ್ಟು ಅನುಮಾನದ ಹುತ್ತಗಳು ಹುಟ್ಟಿಕೊಂಡಿವೆ. ಇಂಥ ಅನುಮಾನಗಳು ಬಹಳ ವರ್ಷಗಳಿಂದಲೂ ಹೊಗೆಯಾಡುತ್ತಿವೆ. ಪುಟಿನ್ಗೆ ಸ್ಕಿಜೋಫ್ರೇನಿಯಾ (Schizophrenia) ಎಂಬ ಮಾನಸಿಕ ಭ್ರಮೆ ರೀತಿಯ ಕಾಯಿಲೆ ಕಾಡುತ್ತಿದೆ ಎನ್ನಲಾಗುತ್ತಿದೆ. ಸರಕಾರದಲ್ಲಿ ತನ್ನ ವಿರುದ್ಧ ಯಾರಾದರೂ ಚಿತಾವಣೆ ನಡೆಸುತ್ತಿರಬಹುದು ಎಂಬ ಭ್ರಮೆಯಲ್ಲೇ ಅವರಿರುತ್ತಾರೆ ಎಂದು ರಷ್ಯಾದ ಮಾಜಿ ಗುಪ್ತಚರ ಅಧಿಕಾರಿಯೊಬ್ಬು ಹೇಳಿದರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಪುಟಿನ್ ಎಷ್ಟರಮಟ್ಟಿಗೆ ಅನುಮಾನ ಪಿಶಾಚಿಯಾಗಿದ್ದಾರೆಂದರೆ ತಮ್ಮ ಆಪ್ತರ ಮೇಲೂ ಸಂಶಯ ಪಡುತ್ತಾರೆ, ರಷ್ಯಾದ ಭದ್ರತಾ ಸೇವೆಯಲ್ಲಿರುವ ಅಧಿಕಾರಿಗಳನ್ನ ದ್ರೋಹಿಗಳೆಂಬಂತೆಯೇ ಅನುಮಾನದಿಂದ ಕಾಣುತ್ತಾರಂತೆ.

ಪುಟಿನ್ಗೆ ಬಾಡಿ ಡಬಲ್:
ಮಾಧ್ಯಮಗಳೆದುರು ಅಥವಾ ವಿವಿಧ ದೇಶಗಳ ನಾಯಕರ ಜೊತೆ ಮಾತುಕತೆಯಲ್ಲಿ ಕಾಣಿಸಿಕೊಳ್ಳುವ ವ್ಲಾದಿಮಿರ್ ಪುಟಿನ್ ವಾಸ್ತವವಾಗಿ ನಕಲಿ ಪುಟಿನ್ ಅಂತೆ. ಅಂದರೆ ಸಾರ್ವಜನಿಕರೆದುರು ವ್ಲಾದಿಮಿರ್ ಪುಟಿನ್ ಅವರ ಬಾಡಿ ಡಬಲ್ ವ್ಯಕ್ತಿ ಕಾಣಿಸುತ್ತಾರೆ. ಎಂಟು ಮಂದಿ ಸೇನಾಧಿಕಾರಿಗಳನ್ನ ಉಚ್ಛಾಟಿಸಿದ್ದಕ್ಕೆ ರಷ್ಯಾದ ಇತರ ಮಿಲಿಟರಿ ಅಧಿಕಾರಿಗಳು ದೊಡ್ಡಮಟ್ಟದ ಸಂಚು ರೂಪಿಸುತ್ತಿರಬಹುದು ಎಂಬುದು ಪುಟಿನ್ ಅನುಮಾನ. ಹೀಗಾಗಿ, ಅವರು ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ತಮ್ಮ ಚಹರೆ ಇರುವ ವ್ಯಕ್ತಿಯನ್ನು ಬಾಡಿ ಡಬಲ್ ಅಗಿ ಬಳಸುತ್ತಿದ್ದಾರೆನ್ನಲಾಗುತ್ತಿದೆ.
ಕ್ಯಾನ್ಸರ್ ಸರ್ಜರಿ:
ವ್ಲಾದಿಮಿರ್ ಪುಟಿನ್ ಅವರಿಗೆ ನಿಜವಾಗಿಯೂ ಕರುಳಿನ ಕ್ಯಾನ್ಸರ್ (Abdominal Cancer) ಇದೆ ಎನ್ನಲಾಗುತ್ತಿದೆ. ಈ ಕ್ಯಾನ್ಸರ್ನಿಂದಾಗಿ ಅವರ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗುತ್ತಿದೆ. ಅದಕ್ಕಾಗಿ ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆ ನಡೆಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಸರ್ಜರಿ ಆದರೆ ಕೆಲ ದಿನಗಳ ಕಾಲ ಅವರು ನಿಶ್ಚಲರಾಗಿ ಉಳಿಯಬೇಕಾಗಬಹುದು. ಅದಕ್ಕಾಗಿ ತಾತ್ಕಾಲಿಕವಾಗಿ ರಷ್ಯಾವನ್ನು ಯುದ್ದದಲ್ಲಿ ಮುನ್ನಡೆಸಲು ಬೇರೊಬ್ಬರ ಕೈಗೆ ಅಧಿಕಾರ ಒಪ್ಪಿಸಲಿದ್ದಾರೆ ಎಂಬ ಮಾತು ಪ್ರಮುಖವಾಗಿ ಕೇಳಿಬರುತ್ತಿದೆ.

ಕಾಸ್ಮೆಟಿಕ್ ಸರ್ಜರಿ:
ಕೆಲವೊಂದಿಷ್ಟು ವರದಿಗಳ ಪ್ರಕಾರ, ವ್ಲಾದಿಮಿರ್ ಪುಟಿನ್ ಯಾವುದೋ ಕಾರಣಕ್ಕೆ ಕಾಸ್ಮೆಟಿಕ್ ಸರ್ಜರಿಗೆ ಒಳಪಟ್ಟಿದ್ದಾರೆ. ಇದರಿಂದ ಅವರ ಚಹರೆಯಲ್ಲಿ ತುಸು ಬದಲಾವಣೆ ಆಗಿದೆ. ಹೀಗಾಗಿ ಅವರು ತಾತ್ಕಾಲಿಕವಾಗಿ ಬಾಡಿ ಡಬಲ್ ಬಳಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.
(ಒನ್ಇಂಡಿಯಾ ಸುದ್ದಿ)
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications