ಬ್ಯಾಂಕ್ ಖಾತೆ, ಮೊಬೈಲ್ ಫೋನ್ಗಳ ಆಧಾರ್ ಸಂಖ್ಯೆ ಡೀಲಿಂಕ್ ಮಾಡುವುದು ಹೇಗೆ?
ನವದೆಹಲಿ, ಸೆಪ್ಟೆಂಬರ್ 27: ಬ್ಯಾಂಕ್ ಖಾತೆ ತೆರೆಯಲು, ಶಾಲೆ ಪ್ರವೇಶಾತಿಯಲ್ಲಿ ಮತ್ತು ಮೊಬೈಲ್ ಸಿಮ್ ತೆಗೆದುಕೊಳ್ಳಲು ಆಧಾರ್ ಸಂಖ್ಯೆ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.
ಆದರೆ, ಈಗಾಗಲೇ ಜನರು ತಮ್ಮ ಬ್ಯಾಂಕ್ ಖಾತೆಗಳನ್ನು ಆಧಾರ್ಗೆ ಲಿಂಕ್ ಮಾಡಿಸಿದ್ದಾರೆ. ಆಧಾರ್ ಜೋಡಣೆ ಕಡ್ಡಾಯ ಎಂದು ಬ್ಯಾಂಕ್ ಗಡುವು ನೀಡಿದ್ದರಿಂದ ಅನಿವಾರ್ಯವಾಗಿ ಬ್ಯಾಂಕ್ ಖಾತೆಗೆ ಜನರು ಆಧಾರ್ ಜೋಡಿಸಿದ್ದಾರೆ.
ಮಾತ್ರವಲ್ಲ, ಮೊಬೈಲ್ ಸೇವಾ ಕಂಪೆನಿಗಳು ಹಾಗೂ ಪೇಟಿಎಂ, ಫೋನ್ ಪೇ ಮುಂತಾದ ಡಿಜಿಟಲ್ ವ್ಯಾಲೆಟ್ಗಳಲ್ಲಿಯೂ ಕೆವೈಸಿ ಅಪ್ಡೇಟ್ ಮಾಡಲು ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಿದ್ದವು. ಹೊಸ ಸಿಮ್ ತೆಗೆದುಕೊಳ್ಳಲು ಮತ್ತು ಹಳೆಯ ಸಿಮ್ ಉಳಿಸಿಕೊಳ್ಳಲು ಸಹ ಆಧಾರ್ ಸಂಖ್ಯೆ ನೀಡಲೇಬೇಕು ಎಂದು ಸೂಚಿಸಲಾಗಿತ್ತು.
ಈಗ ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಕಾರಣ, ಈ ಹಿಂದೆ ಮಾಡಿರುವ ಆಧಾರ್ ಜೋಡಣೆಗಳನ್ನು ಕಡಿತಗೊಳಿಸಲು ಅನೇಕರು ಮುಂದಾಗಿದ್ದಾರೆ. ಆಧಾರ್ ಜೋಡಣೆಯನ್ನು ಕಡಿತಗೊಳಿಸುವುದು (ಅನ್ಲಿಂಕ್) ಹೇಗೆ ಎಂಬ ವಿವರ ಇಲ್ಲಿದೆ.

ಮೊಬೈಲ್ ವ್ಯಾಲೆಟ್
ಉದಾಹರಣೆಗೆ ಪೇಟಿಎಂಗೆ ಮಾಡಿರುವ ಆಧಾರ್ ಜೋಡಣೆಯನ್ನು ತೆಗೆಯಲು ಈ ಕ್ರಮಗಳನ್ನು ಅನುಸರಿಸಬಹುದು.
* ಪೇಟಿಎಂ ಗ್ರಾಹಕ ಸೇವೆ ಸಂಖ್ಯೆ 01204456456 ಕರೆ ಮಾಡಿ
* ಆಧಾರ್ ಜೋಡಣೆಯನ್ನು ಕಡಿತಗೊಳಿಸಲು ನಿಮ್ಮ ಇ-ಮೇಲ್ ವಿಳಾಸಕ್ಕೆ ಕಳುಹಿಸುವಂತೆ ತಿಳಿಸಿ
* ಪೇಟಿಎಂನಿಂದ ಬರುವ ಮೇಲ್ನಲ್ಲಿ ಈ ಮನವಿಯನ್ನು ಕಾರ್ಯಗತಗೊಳಿಸಲು ನಿಮ್ಮ ಆಧಾರ್ ಕಾರ್ಡ್ನ ಸ್ಪಷ್ಟ ಚಿತ್ರವನ್ನು ಕಳುಹಿಸುವಂತೆ ಕೋರಲಾಗುತ್ತದೆ. ಅದರಂತೆ ಆ ಸೂಚನೆಯನ್ನು ಪಾಲಿಸಿ.
* ಬಳಿಕ 72 ಗಂಟೆಗಳಲ್ಲಿ ಆಧಾರ್ ಡೀಲಿಂಕ್ ಆಗಲಿದೆ ಎಂದು ಪೇಟಿಎಂನ ದೃಢಪಡಿಸುವ ಮೇಲ್ ಬರಲಿದೆ.
* ಆಧಾರ್ ಡೀಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ಇದೇ ರೀತಿಯ ಪ್ರಕ್ರಿಯೆಯನ್ನು ಉಳಿದ ಡಿಜಿಟಲ್ ವ್ಯಾಲೆಟ್ ಸಂಸ್ಥೆಗಳಿಗೂ ಅನುಸರಿಸಬಹುದು.

ಬ್ಯಾಂಕ್ ಖಾತೆಯಿಂದ ಡೀಲಿಂಕ್ ಮಾಡುವುದು
* ನಿಮ್ಮ ಬ್ಯಾಂಕ್ನ ಶಾಖೆಗೆ ಭೇಟಿ ನೀಡಿ
* ಆಧಾರ್ ಜೋಡಣೆ ತೆಗೆದುಹಾಕಲು ಫಾರಂ ಪಡೆದುಕೊಳ್ಳಿ
* ಫಾರ್ಮ್ ಭರ್ತಿ ಮಾಡಿ ಸಲ್ಲಿಸಿ
* 48 ಗಂಟೆಗಳಲ್ಲಿ ನಿಮ್ಮ ಆಧಾರ್ ಜೋಡಣೆ ರದ್ದಾಗಲಿದೆ
* ಜೋಡಣೆ ರದ್ದಾಗದೆ ಇದ್ದರೆ, ಬ್ಯಾಂಕ್ನ ಗ್ರಾಹಕ ಸೇವೆಗೆ ಕರೆ ಮಾಡಿ ಸರಿಪಡಿಸಬಹುದು.ಬ್ಯಾಂಕ್ ಖಾತೆಗೆ, ಮೊಬೈಲ್ ಸಂಖ್ಯೆಗೆ ಜೋಡಣೆಯಾದ ಆಧಾರ್ ಏನ್ಮಾಡ್ತಾರೆ?

ಮೊಬೈಲ್ ಫೋನ್ ನಂಬರ್
* ಮೊಬೈಲ್ ಕಂಪೆನಿ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ
* ಆಧಾರ್ ಸಂಪರ್ಕ ಕಡಿತಗೊಳಿಸುವಂತೆ ಕೋರಿಕೆ ಸಲ್ಲಿಸಿ. ಅದಕ್ಕೆ ಸಂಬಂಧಿಸಿದ ಇ-ಮೇಲ್ ರವಾನಿಸುವಂತೆ ಕೇಳಿ
* ಮೊಬೈಲ್ ಕಂಪೆನಿಯಿಂದ ಆಧಾರ್ ಕಾರ್ಡ್ನ ಫೋಟೊ ಕಳಿಸುವಂತೆ ಕೋರಿಕೆಯ ಮೇಲ್ ನಿಮಗೆ ತಲುಪುತ್ತದೆ. ಅವರ ಸೂಚಿಸಿದ ಕ್ರಮಗಳನ್ನು ಅನುಸರಿಸಿ.
* 72 ಗಂಟೆಗಳಲ್ಲಿ ಆಧಾರ್ ಜೋಡಣೆಯನ್ನು ರದ್ದುಗೊಳಿಸಿದ್ದನ್ನು ದೃಢಪಡಿಸುವ ಮೇಲ್ ನಿಮಗೆ ಸಿಗುತ್ತದೆ.

ಪರಿಶೀಲಿಸುವುದು ಹೇಗೆ?
ಈಗಾಗಲೇ ಆಧಾರ್ ಜೋಡಣೆ ಮಾಡಿರುವ ವಿವಿಧ ಖಾಸಗಿ ಕಂಪೆನಿಗಳಿಗೆ ಅದನ್ನು ಕಡಿತಗೊಳಿಸುವ ಪ್ರಕ್ರಿಯೆ ದೊಡ್ಡ ತಲೆನೋವಾಗಲಿದೆ.
ಆಧಾರ್ ಜೋಡಣೆಯನ್ನು ತೆಗೆದುಹಾಕಿದರೂ ಖಾಸಗಿ ಕಂಪೆನಿಗಳು ಅಲ್ಲಿ ಜನರ ಖಾಸಗಿತನದ ಗೋಪ್ಯತೆಯನ್ನು ಕಾಯ್ದುಕೊಳ್ಳುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸುಲಭವಲ್ಲ.
ಏಕೆಂದರೆ ಆಧಾರ್ಗೆ ಸಂಬಂಧಿಸಿದಂತೆ ಅವರು ಪಡೆದುಕೊಂಡ ಸಂಪೂರ್ಣ ದತ್ತಾಂಶವನ್ನು ಎಲ್ಲ ಕಡತ, ದಾಖಲೆಗಳಿಂದಲೂ ಅಳಿಸಿ ಹಾಕಬೇಕು. ಈ ಪ್ರಕ್ರಿಯೆ ನಡೆದಿದೆ ಎನ್ನುವುದನ್ನು ಪರಿಶೀಲಿಸುವುದು ಕೂಡ ಕಷ್ಟ.
ರಿಲಯನ್ಸ್ನಂತಹ ಟೆಲಿಕಾಂ ಕಂಪೆನಿಗಳು ಆರಂಭದಿಂದಲೂ ಆಧಾರ್ ಸಂಖ್ಯೆಗೆ ಮಾತ್ರವೇ ತನ್ನ ಸಿಮ್ಗಳನ್ನು ವಿತರಿಸಿವೆ. ಉಳಿದ ಕಂಪೆನಿಗಳು ಹಳೆಯ ಗ್ರಾಹಕರು ಆಧಾರ್ ಜೋಡಣೆ ಮಾಡುವಂತೆ ಸೂಚಿಸಿದ್ದವು.
ಈಗ ರಿಲಯನ್ಸ್ ಕಂಪೆನಿಯ ಜಿಯೊ ಸಿಮ್ಗೆ ಆಧಾರ್ ಸಂಖ್ಯೆ ನೀಡಿರುವ ಗ್ರಾಹಕರು ಯಾವ ಕ್ರಮ ಅನುಸರಿಸಬೇಕು ಎನ್ನುವುದು ಸ್ಪಷ್ಟವಾಗಿಲ್ಲ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications