Get Updates
Get notified of breaking news, exclusive insights, and must-see stories!

ಗಾಂಧಿಯನ್ನು ಕೊಂದ ಗೋಡ್ಸೆ 'ಹಿಂದೂ ಉಗ್ರ'ನಾಗಲು ಹೇಗೆ ಸಾಧ್ಯ?

ನಟ-ರಾಜಕಾರಣಿ ಕಮಲ್ ಹಾಸನ್ ಅವರ 'ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದೂ. ಆತನ ಹೆಸರು ನಾಥೂರಾಮ್ ಗೋಡ್ಸೆ' ಈ ಹೇಳಿಕೆ ಬಾರಿ ಚರ್ಚೆಯಾಗುತ್ತಿದೆ. ಆಗಾಗ 'ಹಿಂದೂ' ಎಂಬ ಪದ ತೆಗೆದು, ಅದಕ್ಕೆ ಎ‌ಷ್ಟು ಸಾಧ್ಯವೋ ಅ‌ಷ್ಟು ಅವಮಾನಿಸೋದೆ ಕೆಲವರ ಕೆಲಸ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಸದ್ಯದ ಪರಿಸ್ಥಿತಿಯಲ್ಲಿ ಇಡಿ ಜಗತ್ತು ಇಸ್ಲಾಂ ಭಯೋತ್ಪಾದನೆಯ ಬಗ್ಗೆ ತಲೆಕೆಡಸಿಕೊಂಡಿದ್ದಿದ್ದರೆ, ಕಮಲ್ ಹಾಸನ್ ರಂತವರು ಮಾತ್ರ 'ಹಿಂದೂ ಉಗ್ರ', 'ಹಿಂದೂ ಭಯೋತ್ಪಾದಕ' ಈ ಪದಗಳಿಗೆ ಅಂಟಿಕೊಂಡಿದ್ದಾರೆ. ಇವರ ಬಾಯಲ್ಲಿ, 'ಮುಸ್ಲಿಂ ಉಗ್ರ' ಎಂಬ ಪದ ಎಷ್ಟುಬಾರಿ ಬಂದಿದೆ?

ಫೆಬ್ರವರಿಯಲ್ಲಿ ಪುಲ್ವಾಮ ದಾಳಿ ಮಾಡಿದ್ದು ಇಸ್ಲಾಂ ಉಗ್ರರು ಎಂದು ಇಡೀ ಜಗತ್ತಿಗೆ ಗೊತ್ತು. ಆದರೆ ಒಂದು ಗುಂಪು ಮಾತ್ರ 'ಭಯೋತ್ಪಾದಕರಿಗೆ ಧರ್ಮವಿಲ್ಲ' ಎನ್ನುತ್ತದೆ. ತಮಾಷೆಯೆಂದರೆ, ಅದೇ ಗುಂಪು ನಾಥೂರಾಮ ಗೋಡ್ಸೆಯನ್ನು 'ಹಿಂದೂ ಉಗ್ರ' ಎನ್ನುತ್ತದೆ. ಭಯೋತ್ಪಾದಕರಿಗೆ ಧರ್ಮವಿಲ್ಲ ಎಂದ ಮೇಲೆ, ನಾಥೂರಾಮ್ ಗೋಡ್ಸೆ 'ಹಿಂದೂ ಉಗ್ರ'ನಾಗಲು ಹೇಗೆ ಸಾದ್ಯ?

How can Nathuram Godse be termed as terrorist?

ಉಗ್ರನಿಗೂ, ಕೊಲೆಗಾರನಿಗೂ ಬಹಳ ವ್ಯತ್ಯಾಸವಿದೆ. ಬಹುತೇಕ ಉಗ್ರ ದಾಳಿಯಲ್ಲಿ ಉಗ್ರರಿಗೆ ಸಾಯಿಸುವುದಷ್ಟೆ ಗುರಿಯಾಗಿರುತ್ತದೆ. ತಾವು ಸಾಯಿಸಲಿರುವ ವ್ಯಕ್ತಿಯ ಪರಿಚಯವೂ ಉಗ್ರರಿಗೆ ಇರುವುದಿಲ್ಲ. ಇನ್ನು ವೈಯಕ್ತಿಕ ದ್ವೇಷವಂತೂ ದೂರದ ಮಾತು. 2008ರಲ್ಲಿ ಮುಂಬೈ ಮೇಲೆ ನಡೆದ ಉಗ್ರರ ದಾಳಿ, ಇತ್ತೀಚೆಗೆ ಶ್ರೀಲಂಕದಲ್ಲಿ ನಡೆದ ಉಗ್ರರ ದಾಳಿ; ಇಲ್ಲಿ ಮೃತಪಟ್ಟ ಅಮಾಯಕರ ಪರಿಚಯ ಆ ಉಗ್ರರಿಗೆ ಇರಲಿಲ್ಲ. ಯಾರನ್ನಾದರೂ ಸರಿ, ಸಾಯಿಸಬೇಕಷ್ಟೆ- ಇದು ಉಗ್ರರ ಉದ್ದೇಶವಾಗಿತ್ತು.

ಆದರೆ ನಾಥೂರಾಮ್ ಗೋಡ್ಸೆ, ಗಾಂಧಿಯವರನ್ನು ಕೊಲ್ಲುವುದ್ದಕ್ಕೇ ಅವನದ್ದೇ ಆದ ಕೆಲವು ಕಾರಣಗಳಿದ್ದವು. ದೇಶ ವಿಭಜನೆ ಸಮಯದಲ್ಲಿ ನಡೆದ ಕೆಲವು ಘಟನೆಗಳು, ಹಿಂದೂಗಳ ಮಾರಣ ಹೋಮ, ಹಿಂದೂ ಮಹಿಳೆಯರ ಅತ್ಯಾಚಾರ; ಇವೆಲ್ಲಾ ಗೋಡ್ಸೆಗೆ ತುಂಬ ಸಿಟ್ಟು-ಬೇಸರಗಳನ್ನು ತಂದಿದ್ದವು. (ಅದನ್ನು ಇಲ್ಲಿ ವಿಸ್ತಾರವಾಗಿ ಬರೆಯಲು ಸಾಧ್ಯವಿಲ್ಲ. ತಿಳಿದುಕೊಳ್ಳಲು ಆಸಕ್ತಿ ಇರುವವರು ರವಿ ಬೆಳಗೆರೆಯವರ 'ಗಾಂಧಿ ಹತ್ಯೆ ಮತ್ತು ಗೋಡ್ಸೆ' ಪುಸ್ತಕ ಓದಬಹುದು). ಗೋಡ್ಸೆ ದೃಷ್ಟಿಯಲ್ಲಿ ಇವೆಲ್ಲಕ್ಕೂ ಗಾಂಧಿಯೇ ಪರೋಕ್ಷವಾಗಿ ಕಾರಣರಾಗಿದ್ದರು. ಹಾಗಾಗಿ ಅವನು ಗಾಂಧಿಯವರ ಮುಂದೆಯೇ ನಿಂತು ಗುಂಡು ಹಾರಿಸಿ ಹತ್ಯೆ ಮಾಡಿದ. ಸಿಕ್ಕ ಸಿಕ್ಕವರ ಮೇಲೆಲ್ಲ ಗುಂಡಿನ ದಾಳಿ ಮಾಡಲಿಲ್ಲ.

ನಾಥೂರಾಮ್ ಗೋಡ್ಸೆಯ ದುಷ್ಕೃತ್ಯ ಸಮರ್ಥನೀಯವಲ್ಲ. ಆದರೆ ಆತ ಉಗ್ರನಲ್ಲ ಎಂಬ ವಾದ ಮಂಡಿಸುವುದಕ್ಕಾಗಿ ಇದನ್ನು ವಿವರಿಸಿ ಹೇಳಬೇಕಾಯ್ತು. ಏಕೆಂದರೆ ಕೆಲವರಿಗೆ ಹಿಂದೂ ಧರ್ಮವನ್ನು ಅವಕಾಶ ಸಿಕ್ಕಾಗಲೆಲ್ಲ ಹೀಯಾಳಿಸಿ, ಹಿಂದೂಗಳಲ್ಲಿ ಕೀಳರಿಮೆ ಹುಟ್ಟಿಸುವುದೇ ಚಟವಾಗಿ ಬಿಟ್ಟಿದೆ. ಹಿಂದೂಗಳು ಮುಸ್ಲಿಮರ ಮೇಲೆ ದಾಳಿ ಮಾಡೇ ಇಲ್ಲ ಎಂದು ನಾನು ಹೇಳುವುದಿಲ್ಲ. ಖಂಡಿತಾ ಮಾಡಿದ್ದಾರೆ.

ಆದರೆ ಇಸ್ಲಾಂ ಮತಾಂಧರು ನಮ್ಮ ದೇಶದ ಮೇಲೆ, ಧರ್ಮದ ಮೇಲೆ ಯಾವ ಪರಿ ದಾಳಿ ಮಾಡಿ, ನಮ್ಮ ದೇವಸ್ಥಾನಗಳನ್ನು ಧ್ವಂಸ ಮಾಡಿದರು, ಸಂಸ್ಕೃತಿಯನ್ನು ನಾಶ ಮಾಡಿದರು, ಬಲವಂತದ ಮತಾಂತರ ಮಾಡಿದರು, ಮತಾಂತರ ಆಗಲು ಒಪ್ಪದ್ದಿದ್ದವರನ್ನು ಕೊಂದು ಹಾಕಿದರು, ಅತ್ಯಾಚಾರಗಳನ್ನು ಮಾಡಿದರು; ಇವೆಲ್ಲವೂ ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಹೇಳಿ ಕಮಲ ಹಾಸನ್, ಇದರ ಬಗ್ಗೆ ಯಾವಾಗ ಮಾತಾಡುತ್ತೀರಾ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+