ಖುಷಿ ವಿಚಾರ ಇದು: ಏಡ್ಸ್ ರೋಗಕ್ಕೂ ಬಂತು ಔಷಧಿ
ಆ ರೋಗದ ಹೆಸರು ಕೇಳಿದರೆ ಜನರಿಗೆ ಶಾಕ್ ಆಗುತ್ತದೆ. ಅದೊಂದು ರೋಗ ಅಂಟಿಕೊಂಡಿದೆ ಎಂದು ಗೊತ್ತಾದರೆ, ಜಗತ್ತು ನಿಮ್ಮನ್ನು ನೋಡುವ ದೃಷ್ಟಿಕೋನವೇ ಬದಲಾಗಿ ಹೋಗುತ್ತೆ. ಸಾಮಾನ್ಯವಾಗಿ ಈ ರೋಗವು ವ್ಯಕ್ತಿಯನ್ನು ಸಮಾಜದಿಂದಲೇ ದೂರ ಇರಿಸುವಂತೆ ಮಾಡಿ ಬಿಡುತ್ತದೆ. ಈಗ ನಾವು ಹೇಳುತ್ತಿರುವುದು ಜಗತ್ತನ್ನು ಕಾಡುತ್ತಿರುವ ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಕಥೆಯಲ್ಲ.
ಸಾಮಾನ್ಯರ ಮಧ್ಯ ಸಾಮಾನ್ಯವಾಗಿ ಬದುಕುತ್ತಿರುವ, ಪ್ರತಿನಿತ್ಯ ಸಾವಿನ ದಿನಗಳನ್ನು ಎಣಿಸುತ್ತಾ ಕಾಲ ಕಳೆಯುತ್ತಿರುವ, ಸಾವಿನ ಹೊಸ್ತಿಲಿನಲ್ಲಿ ನಿಂತು ಬದುಕಿನ ಕನಸು ಕಾಣುತ್ತಿರುವವರ ಕಥೆ. ಅದು ಬೇರೆ ಯಾರೂ ಅಲ್ಲ ಅವರೇ ಏಡ್ಸ್ ರೋಗಿಗಳು. ಈಗ ಅಂಥ ಏಡ್ಸ್ ರೋಗಿಗಳಿಗೂ ಖುಷಿ ಕೊಡುವ ಸಂತೋಷದ ಸುದ್ದಿಯೊಂದನ್ನು ನಾವು ನಿಮಗೆ ಹೇಳುವುದಕ್ಕೆ ಬಯಸುತ್ತೇವೆ.
ಒಂದು ಕಾಲದಲ್ಲಿ ಇಡೀ ಜಗತ್ತನ್ನು ಬೆಚ್ಚಿ ಬೀಳುವಂತೆ ಮಾಡಿದ ಏಡ್ಸ್ ರೋಗಕ್ಕೂ ಮದ್ದು ಸಿಕ್ಕಿದೆ. ವೈದ್ಯಕೀಯ ಸಂಶೋಧನೆಯೊಂದರಲ್ಲಿ ಹೆಚ್ಐವಿ ಸೋಂಕಿನಿಂದ ಜನರನ್ನು ಸುರಕ್ಷಿತವಾಗಿ ಇರಿಸುವುದು ಹೇಗಪ್ಪಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಏಡ್ಸ್ ಔಷಧಿಯ ಕುರಿತಾಗಿ ನಡೆಸಿದ ವೈದ್ಯಕೀಯ ಸಂಶೋಧನೆ ಹೇಗಿತ್ತು?, ಏಡ್ಸ್ ರೋಗಿಗಳು ಸಾವಿನ ಮನೆಯಿಂದ ಬಚಾವ್ ಆಗುವುದಕ್ಕೆ ಸಿದ್ಧವಾಗಿರುವ ಆ ಔಷಧಿ ಯಾವುದು?, ಏಡ್ಸ್ ರೋಗಿಗಳಲ್ಲಿ ಈಗ ಸಂಶೋಧಿಸಿರುವ ಔಷಧಿಯು ಹೇಗೆ ಕೆಲಸ ಮಾಡುತ್ತದೆ ಎಂಬ ಹಲವು ಅಂಶಗಳನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಚಿಂಪಾಂಜಿ ದೇಹದಲ್ಲಿ ಹೆಚ್ಐವಿ ಏಡ್ಸ್ ಮೊದಲು ಪತ್ತೆ
ಹೆಚ್ಐವಿ ಏಡ್ಸ್ ಎಂಬ ಮಾರಕ ರೋಗವು ಮಧ್ಯ ಆಫ್ರಿಕಾದ ಒಂದು ರೀತಿಯ ಚಿಂಪಾಂಜಿಯ ದೇಹದಲ್ಲಿ ಮೊದಲು ಪತ್ತೆಯಾಗಿತ್ತು. ತದನಂತರ 1800ರ ದಶಕದ ಉತ್ತರಾರ್ಧದಲ್ಲಿ ಮನುಷ್ಯನಲ್ಲಿಯೂ ಈ ರೋಗವು ಪತ್ತೆ ಆಯಿತು. ಆದರೆ ಇದುವರೆಗೂ ಮನುಷ್ಯನಲ್ಲಿ ಕಾಣಿಸಿಕೊಂಡ ಏಡ್ಸ್ ಅಥವಾ ಹೆಚ್ಐವಿಗೆ ಯಾವುದೇ ರೀತಿಯ ಔಷಧಿಯನ್ನು ಕಂಡು ಹಿಡಿದಿರಲಿಲ್ಲ. ಇದೊಂದು ಅಂಶದಿಂದ ಏಡ್ಸ್ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಭಯದ ವಾತಾವರಣ ಸೃಷ್ಟಿಯಾಗಿತ್ತು.

ಮನುಷ್ಯನಿಗೆ ಹೆಚ್ಐವಿ ಏಡ್ಸ್ ರೋಗ ಅಂಟಿದರೆ ಏನಾಗುವುದು?
ಸಾಮಾನ್ಯವಾಗಿ ಮನುಷ್ಯನಿಗೆ ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (HIV) ಅಂಟಿಕೊಂಡರೆ, ಅದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತದೆ. ಇದಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಇದು ಅಕ್ವೈರ್ಡ್ ಇಮ್ಯುನೊಡಿಫಿಷಿಯನ್ಸಿ ಸಿಂಡ್ರೋಮ್ (ಏಡ್ಸ್)ಗೆ ಕಾರಣವಾಗುತ್ತದೆ. ಕಳೆದ 1800ರ ದಶಕದ ಉತ್ತರಾರ್ಧದಲ್ಲಿ HIV ವೈರಸ್ ಚಿಂಪಾಂಜಿಗಳಿಂದ ಮನುಷ್ಯರಿಗೆ ಹರಡಿರುವುದು ಎಂದು ಹೇಳಲಾಗುತ್ತದೆ.

ಏಡ್ಸ್ ರೋಗಕ್ಕೂ ಸಿಕ್ಕಿದು ಔಷಧಿ
ಜಗತ್ತಿನಲ್ಲೇ ನಡೆದಿರುವ ವೈದ್ಯಕೀಯ ಸಂಶೋಧನೆಯೊಂದರಲ್ಲಿ ಏಡ್ಸ್ ರೋಗವನ್ನು ಗುಣಪಡಿಸುವಂತಹ ಔಷಧಿಯೊಂದನ್ನು ತಯಾರಿಸಲಾಗಿದೆ. ಸಂಶೋಧಕರ ತಂಡವು ರಚಿಸಿರುವ ಔಷಧಿಯು ಹೆಚ್ಐವಿ ಏಡ್ಸ್ ರೋಗವನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
ಮನುಷ್ಯನ ದೇಹದಲ್ಲಿ ಇರುವ ಹೆಚ್ಐವಿ ಅನ್ನು ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಉತ್ಪಾದಿಸುವ ಇಂಜಿನಿಯರಿಂಗ್-ಟೈಪ್ ಬಿ ರಕ್ತ ಕಣಗಳಿಂದ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಸಂಶೋಧಿಸುವಲ್ಲಿ ಸಂಶೋಧಕರು ಯಶಸ್ವಿ ಆಗಿದ್ದಾರೆ. ಟೆಲ್-ಅವಿವ್ ವಿಶ್ವವಿದ್ಯಾಲಯದ ದಿ ಜಾರ್ಜ್ ಎಸ್ ವೈಸ್ ಫ್ಯಾಕಲ್ಟಿ ಆಫ್ ಲೈಫ್ ಸೈನ್ಸಸ್ನಲ್ಲಿ ಸ್ಕೂಲ್ ಆಫ್ ನ್ಯೂರೋಬಯಾಲಜಿ, ಬಯೋಕೆಮಿಸ್ಟ್ರಿ ಮತ್ತು ಬಯೋಫಿಸಿಕ್ಸ್ನ ಸಂಶೋಧಕರ ತಂಡವು ಈ ಸಂಶೋಧನೆಯನ್ನು ನಡೆಸಿದೆ.

ಮನುಷ್ಯನ ದೇಹದಲ್ಲಿ ಹೇಗೆ ಕೆಲಸ ಮಾಡುವುದು ಬಿ ಸೆಲ್ಸ್?
ಹೆಚ್ಐವಿ-ಏಡ್ಸ್ ಸೋಂಕು ಮನುಷ್ಯನ ದೇಹದಲ್ಲಿ ಇರುವ ಪ್ರತಿಕಾಯ ಶಕ್ತಿಯ ಮೇಲೆ ದಾಳಿ ಮಾಡುತ್ತದೆ. ಹೀಗಾಗಿ ಯಾವುದೇ ರೋಗದಿಂದ ಮನುಷ್ಯನನ್ನು ರಕ್ಷಿಸುವಂತಹ ವ್ಯವಸ್ಥೆಯೇ ಹಾಳಾಗುವ ಅಪಾಯವಿರುತ್ತದೆ. ಆದರೆ ಈ ಇಂಜಿನಿಯರ್ ಟೈಪ್-ಬಿ ಬಿಳಿ ರಕ್ತ ಕಣಗಳು ಹೆಚ್ಐವಿ ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿಕಾಯ ಶಕ್ತಿಯನ್ನು ತಗ್ಗಿಸುವ ಹೆಚ್ಐವಿ ಸೋಂಕಿನ ಶಕ್ತಿಯನ್ನು ಕುಗ್ಗಿಸುವಂತಹ ಪ್ರತಿಕಾಯವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಈ ಲಸಿಕೆಯು ಹೊಂದಿರುತ್ತದೆ," ಎಂದು ಡಾ.ಬಾರ್ಜೆಲ್ ವಿವರಿಸಿದ್ದಾರೆ.

ಏಡ್ಸ್ ಔಷಧಿಯ ಸಂಶೋಧನಾ ಫಲಿತಾಂಶ ಏನು ಹೇಳುತ್ತೆ?
ಹೆಚ್ಐವಿ ರೋಗಿಗಳನ್ನು ಸಂಶೋಧನೆಯ ವೇಳೆ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವೇಳೆ ರೋಗಿಗಳ ರಕ್ತದಲ್ಲಿ ಪ್ರತಿಕಾಯ ಶಕ್ತಿಯನ್ನು ಹೆಚ್ಚಿಸುವ ಪ್ರಮಾಣವು ಕಂಡು ಬಂದಿದೆ. ಇದರಿಂದ ಮುಂಬರುವ ವರ್ಷಗಳಲ್ಲಿ ಏಡ್ಸ್ಗೆ ಔಷಧಿಗಳನ್ನು ಉತ್ಪಾದಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಇದರ ಹೊರತಾಗಿ B ಸೆಲ್ ಜಿನೋಮ್ನಲ್ಲಿ ಅಪೇಕ್ಷಿತ ಸ್ಥಳದಲ್ಲಿ ನಿಖರವಾಗಿ ಪರಿಚಯಿಸಲು ಸಮರ್ಥರಾಗಿದ್ದೇವೆ. ಈ ಚಿಕಿತ್ಸೆಯನ್ನು ಪಡೆದುಕೊಂಡಿರುವ ರೋಗಿಗಳ ರಕ್ತದಲ್ಲಿ ಪ್ರತಿಕಾಯ ಶಕ್ತಿಯ ಪ್ರಯಾಣ ಹೆಚ್ಚಾಗಿರುವುದು ಕಂಡು ಬಂದಿದೆ. ಇದಲ್ಲದೇ ಹೆಚ್ಐವಿ ರೋಗದ ಪ್ರಭಾವ ಮತ್ತು ಪರಿಣಾಮವನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಈ ಲಸಿಕೆಯು ಹೊಂದಿರುತ್ತದೆ ಎಂದು ಸಂಶೋಧಕ ಡಾ ಬಾರ್ಜೆಲ್ ವಿವರಿಸಿದರು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications