Sukhvinder Singh Sukhu : ಹಿಮಾಚಲ ಸಿಎಂ ಸುಖವಿಂದರ್ ಸಿಂಗ್ ಸುಖು ಯಾರು, ರಾಜಕೀಯ ಹಿನ್ನೆಲೆ ಏನು?
ಶಿಮ್ಲಾ, ಡಿಸೆಂಬರ್ 10: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಮುಖ್ಯಮಂತ್ರಿ ಯಾರು ಎಂಬುದನ್ನು ಫೈನಲ್ ಮಾಡಿದೆ. ರಾಜ್ಯದಲ್ಲಿ ಮುಂದಿನ ಅಧಿಕಾರದ ಚುಕ್ಕಾಣಿಯನ್ನು ಸುಖವಿಂದರ್ ಸಿಂಗ್ ಸುಖು ಕೈಗೆ ನೀಡುವುದಕ್ಕೆ ನಿರ್ಧರಿಸಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಸುಖವಿಂದರ್ ಸಿಂಗ್ ಸುಖು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಖಾತ್ರಿಪಡಿಸಿದೆ. ಈಗ ಸುಖವಿಂದರ್ ಸಿಂಗ್ ಸುಖು ಯಾರು, ಅವರ ರಾಜಕೀಯ ಹಿನ್ನೆಲೆ ಏನು ಎಂಬುದರ ಮೇಲೆ ಎಲ್ಲರ ಲಕ್ಷ್ಯ ನೆಟ್ಟಿದೆ.
ಎಂಸಿಡಿ ಚುನಾವಣೆ: ಕೇಜ್ರಿವಾಲ್ 'ಚೋಟಾ ರೀಚಾರ್ಜ್' ಎಂದ ಓವೈಸಿ
ಗುಡ್ಡಗಾಡು ರಾಜ್ಯದಲ್ಲಿ ಸುಖವಿಂದರ್ ಸಿಂಗ್ ಸುಖು ಬೆಳೆದು ಬಂದ ರೀತಿ ಹೇಗಿತ್ತು?, ಅವರ ಹುಟ್ಟು, ಬೆಳವಣಿಗೆ, ರಾಜಕೀಯ, ಶಿಕ್ಷಣ ಸೇರಿದಂತೆ ಸಂಪೂರ್ಣ ಜೀವನಚರಿತ್ರೆಯನ್ನು ಈ ವರದಿಯಲ್ಲಿ ತಿಳಿದುಕೊಳ್ಳಿರಿ.
ಆರಂಭಿಕ ಬದುಕು ಮತ್ತು ಶಿಕ್ಷಣ
ಹಿಮಾಚಲ ಪ್ರದೇಶದ ನಾದೌನ್ ಗ್ರಾಮದಲ್ಲಿ 1964ರ ಮಾರ್ಚ್ 27ರಂದು ಸುಖವಿಂದರ್ ಸಿಂಗ್ ಸುಖು ಜನಿಸಿದರು. ಇವರ ತಂದೆ ರಾಶಿಲ್ ಸಿಂಗ್ ತಾಯಿ ಹೆಸರು ತಿಳಿದು ಬಂದಿಲ್ಲ. ಶಿಮ್ಲಾದ ಕಾಸಮ್ತಿಯಲ್ಲಿ ಪ್ರೌಢಶಿಕ್ಷಣವನ್ನು ಪೂರೈಸಿದ ಅವರು, ಕಾನೂನು ವಿಷಯದಲ್ಲಿ ಪದವಿ ಪಡೆದುಕೊಂಡರು. ನಂತರ ರಾಜಕೀಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸುಖು ಪತ್ನಿ ಕಮಲೇಶ್ ಠಾಕೂರ್ ಆಗಿದ್ದು ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ರಾಜಕೀಯ ಜೀವನ
* 1989- 1995: NSUI ನ ರಾಜ್ಯ ಅಧ್ಯಕ್ಷ
• 1998-2008: ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ
• 1992-1997: ಶಿಮ್ಲಾದ ಮುನ್ಸಿಪಲ್ ಕಾರ್ಪೊರೇಷನ್ ಕೌನ್ಸಿಲರ್
• 1997-2002: ಶಿಮ್ಲಾದ ಮುನ್ಸಿಪಲ್ ಕಾರ್ಪೊರೇಶನ್ನ ಕೌನ್ಸಿಲರ್ ಆಗಿ ಮರು-ಚುನಾಯಿತರಾದರು
• 2003: ರಾಜ್ಯ ಶಾಸಕಾಂಗ ಸಭೆಗೆ ಚುನಾಯಿತರಾದರು
• 2007: ರಾಜ್ಯ ಶಾಸಕಾಂಗ ಸಭೆಗೆ ಮರು ಆಯ್ಕೆ
• 2007-2012: ಮುಖ್ಯ ಸಚೇತಕ, ಕಾಂಗ್ರೆಸ್ ಶಾಸಕಾಂಗ ಪಕ್ಷ
• 2017: ಹದಿಮೂರನೇ ವಿಧಾನ ಸಭೆಗೆ ಮರು ಆಯ್ಕೆ
• 2017: ಸಾರ್ವಜನಿಕ ಉದ್ಯಮಗಳು, ಸವಲತ್ತುಗಳು ಮತ್ತು ವ್ಯವಹಾರ ಸಲಹಾ ಸಮಿತಿಗಳ ಸದಸ್ಯರಾಗಿ ನಾಮನಿರ್ದೇಶನಗೊಂಡಿದೆ
• 2013-2019: ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು
• 2022: ಹಿಮಾಚಲ ಪ್ರದೇಶ ಅಸೆಂಬ್ಲಿ ಚುನಾವಣೆ 2022 ರಲ್ಲಿ ನಾದೌನ್ ಕ್ಷೇತ್ರದಿಂದ ಗೆದ್ದಿದ್ದಾರೆ
ಎಷ್ಟಿದೆ ಆಸ್ತಿ?
ಅಸ್ಥಿರ ಆಸ್ತಿ:
ನಗದು 1,30,000 ರೂಪಾಯಿ
• ಬ್ಯಾಂಕ್ ಠೇವಣಿ 10,00,000 ರೂಪಾಯಿ
• ಆಭರಣ 1,00,000 ರೂಪಾಯಿ
ಸ್ಥಿರ ಆಸ್ತಿಗಳು:
• ಕೃಷಿ ಭೂಮಿ 22,51,250 ರೂಪಾಯಿ
• ಕೃಷಿಯೇತರ ಭೂಮಿ 1,39,000 ರೂಪಾಯಿ
• ವಾಣಿಜ್ಯ ಕಟ್ಟಡಗಳು 1,00,00,000 ರೂಪಾಯಿ
• ವಸತಿ ಕಟ್ಟಡಗಳು 14,00,000 ರೂಪಾಯಿ
ಸುಖವಿಂದರ್ ಸಿಂಗ್ ಸುಖು ಬಗ್ಗೆ ನಾಯಕರು ಹೇಳುವುದೇನು?
ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ನಂತರ ಸಿಎಂ ಆಗಿ ಆಯ್ಕೆಯಾಗಿರುವ ಸುಖವಿಂದರ್ ಸಿಂಗ್ ಸುಖು ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, 2022ರಲ್ಲಿ ನಡೆದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾದೌನ್ ಕ್ಷೇತ್ರದಿಂದ ಗೆದ್ದಿದ್ದಾರೆ.
2017ರಲ್ಲಿ, ಅಮಿತ್ ಶಾ ಚುನಾವಣಾ ಪ್ರಚಾರದ ಸಮಯದಲ್ಲಿ ಸುಖು ಬಗ್ಗೆ ಮಾತನಾಡಿದ್ದರು. ಕಾಂಗ್ರೆಸ್ ಪಕ್ಷವು 'ರಾಜರು ಮತ್ತು ರಾಣಿಗಳ' ಪಕ್ಷವಾಗಿದೆ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಮುಂದೆ ಬರಲು ಅವಕಾಶವಿಲ್ಲ ಎಂದು ಹೇಳಿದರು. ರಾಜಕೀಯೇತರ ಹಿನ್ನೆಲೆಯಿಂದ ಬಂದಿರುವ ತಮಗೆ ರಾಜಕೀಯಕ್ಕೆ ಬರುವುದು ಕಷ್ಟ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.
"ಹೌದು, ರಾಜಕೀಯದಲ್ಲಿ ಉಳಿವಿಗಾಗಿ ಪ್ರತಿ ಹೆಜ್ಜೆಯಲ್ಲೂ ಹೆಣಗಾಡಬೇಕಾಯಿತು. ಗಣ್ಯರು ಮತ್ತು ರಾಜಕೀಯ ಬೆಂಬಲ ಹೊಂದಿರುವವರು ಚುನಾವಣಾ ರಾಜಕೀಯದಲ್ಲೂ ಸುಲಭವಾಗಿ ತಮ್ಮ ದಾರಿ ಕಂಡುಕೊಳ್ಳುತ್ತಾರೆ. ಆದರೆ ಕಠಿಣ ಪರಿಶ್ರಮ ಮತ್ತು ಸಂಘಟನೆಯ ನಿಷ್ಠೆ ನನಗೆ ಪ್ರತಿಫಲ ನೀಡಿತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಾಮಾನ್ಯ ಕಾರ್ಯಕರ್ತರನ್ನು ಮುನ್ನೆಲೆಗೆ ತರಲು ಬಯಸುತ್ತಾರೆ. ಅದಕ್ಕಾಗಿಯೇ ಅವರು ನನ್ನನ್ನು ಉನ್ನತ ಹುದ್ದೆಗೆ ತೆಗೆದುಕೊಂಡರು. 2013ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರವೂ ನನ್ನನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
2022ರಲ್ಲಿ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಹಿಂದೂ ಬಹುಸಂಖ್ಯಾತ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದ್ದರು. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷವು ಹಿಂದೂ ಬಹುಸಂಖ್ಯಾತ ರಾಜ್ಯದಲ್ಲಿ ಸರ್ಕಾರ ರಚಿಸಲು ಹೊರಟಿದೆ, ಜನರು ಬಿಜೆಪಿಯ ಸಿದ್ಧಾಂತವನ್ನು ತಿರಸ್ಕರಿಸಿದ್ದಾರೆ. ಪ್ರಿಯಾಂಕಾ ಗಾಂಧಿಯವರ ವಿಶೇಷ ತಂತ್ರದಿಂದಾಗಿ, ಬಿಜೆಪಿ ಚುನಾವಣೆಯಲ್ಲಿ ಸೋತಿದೆ, ಗಾಂಧಿ ಕುಟುಂಬಕ್ಕೆ ದೇಶದಲ್ಲಿ ಎಲ್ಲಿಯೂ ಮನೆ ಇಲ್ಲ, ಆದರೆ ಒಂದೇ ಒಂದು ಸ್ಥಳವಿದೆ, ಅಂದರೆ ಹಿಮಾಚಲ ಪ್ರದೇಶ, ಅಲ್ಲಿ ಪ್ರಿಯಾಂಕಾ ಗಾಂಧಿ ಮನೆಯನ್ನು ಹೊಂದಿದ್ದಾರೆ ಎಂದಿದ್ದರು.