ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ, ಹ್ಯಾಕರ್ ಶ್ರೀಕೃಷ್ಣ ಮತ್ತು ವಿಷ್ಣುಭಟ್ ಕೋರ್ಟ್ ಮುಂದೆ ಹಾಜರು
ಬೆಂಗಳೂರು, ನ. 08: ರಾಯಲ್ ಅರ್ಕಿಡ್ ಹೋಟೆಲ್ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪುಂಡಾಟ ಮೆರೆದ ಪ್ರಕರಣದಲ್ಲಿ ಹ್ಯಾಕರ್ ಶ್ರೀಕೃಷ್ಣ, ಆತನ ಆಪ್ತ ವಿಷ್ಣುಭಟ್ ನನ್ನು ಜೀವನ ಭೀಮಾ ನಗರ ಪೊಲೀಸರು ವಿಚಾರಣೆ ಪೂರ್ಣಗೊಳಿಸಿದ್ದಾರೆ. ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟ ಬೆನ್ನಲ್ಲೇ ಇಬ್ಬರ ವಿರುದ್ಧ ಮಾದಕ ವಸ್ತು ನಿಯಂತ್ರಣ ಕಾಯ್ದೆ ಅಡಿಯಲ್ಲೂ ಕೇಸು ದಾಖಲಿಸಲಾಗಿದೆ. ಇಬ್ಬರು ಆರೋಪಿಗಳನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದಾರೆ.
ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ವಿಚಾರಣೆ ನಡೆಸಿದಾಗ, ಆರೋಪಿಗಳಿಬ್ಬರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಮನೆ ಮೇಲೆ ದಾಳಿ ನಡೆಸಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಜೀವನ ಭೀಮಾ ನಗರ ಪೊಲೀಸರು ವಶಪಡಿಸಿಕೊಂಡಿದ್ದರು. ಇಬ್ಬರು ಆರೋಪಿಗಳನ್ನು ಭಾನುವಾರ ಸಂಜೆ ನ್ಯಾಯಾಧೀಶರ ನಿವಾಸದಲ್ಲಿ ಹಾಜರು ಪಡಿಸಲಾಗಿತ್ತು. ಇಬ್ಬರು ಆರೋಪಿಗಳನ್ನು ತೆರೆದ ನ್ಯಾಯಾಲಯದಲ್ಲಿ ಹಾಜರು ಪಡಿಸಲು ನ್ಯಾಯಾಧೀಶರು ಸೂಚನೆ ನೀಡದ ಹಿನ್ನೆಲೆಯಲ್ಲಿ ಒಂದು ದಿನ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತೆರೆದ ನ್ಯಾಯಾಲಯದ ಮುಂದೆ ಇಬ್ಬರು ಆರೋಪಿಗಳನ್ನು ಪೊಲೀಸರು ಹಾಜರು ಪಡಿಸಲಿದ್ದಾರೆ.
ಬಿಟ್ ಕಾಯಿನ್ ದಂಧೆಕೋರರಿಗೆ ಭಯ
ಹ್ಯಾಕರ್ ಶ್ರೀಕೃಷ್ಣ ಬಿಟ್ ಕಾಯಿನ್ ಹ್ಯಾಕಿಂಗ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವಾಗಲೇ ಶ್ರೀಕಿ ಬಂಧನಕ್ಕೆ ಒಳಗಾಗಿದ್ದಾನೆ. ಈಗಾಗಲೇ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಕೇಂದ್ರದ ಗುಪ್ತಚರ ಇಲಾಖೆ ಅಧಿಕಾರಿಗಳು ರಾಜ್ಯಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ದೆಹಲಿಗೆ ತೆರಳಿದ್ದಾರೆ. ಇದರ ನಡುವೆ ಹ್ಯಾಕರ್ ಶ್ರೀಕೃಷ್ಣನ ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನು ತಮಿಳುನಾಡು ವಿಭಾಗದ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ವರ್ಗಾಯಿಸಲಾಗಿದೆ. ರಾಜ್ಯದಲ್ಲಿರುವ ಇಡಿ ಘಟಕದ ಅಧಿಕಾರಿಗಳ ಬಗ್ಗೆ ಕೆಲವು ದೂರು ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ತಮಿಳುನಾಡು ಘಟಕ್ಕೆ ವರ್ಗಾವಣೆಯಾಗಿದೆ ಎಂಬ ಮಾತು ಪೊಲೀಸ್ ವಲಯಲ್ಲಿ ಕೇಳಿ ಬರುತ್ತಿದೆ. ಹಲ್ಲೆ ಪ್ರಕರಣದಲ್ಲಿ ಹ್ಯಾಕರ್ ಶ್ರೀಕೃಷ್ಣ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದು, ಇಡಿ ಅಧಿಕಾರಿಗಳು ಬಾರಿ ವಾರಂಟ್ ಆಧಾರದ ಮೇಲೆ ಆತನನ್ನು ವಶಕ್ಕೆ ಪಡೆದರೂ ಅಚ್ಚರಿ ಪಡಬೇಕಿಲ್ಲ. ಇದು ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿದೆ.
ಶ್ರೀಕೃಷ್ಣನ ನೆರವು ಪಡೆದು ರಾಜಕಾರಣಿಗಳು
ಹ್ಯಾಕರ್ ಶ್ರೀಕೃಷ್ಣನ ನೆರವು ಪಡೆದು ರಾಜಕಾರಣಿಗಳು ಲಾಭ ಮಾಡಿಕೊಂಡಿದ್ದಾರೆ. ಕೆಲವು ಪೊಲೀಸ್ ಅಧಿಕಾರಿಗಳು ಬಿಟ್ಕಾಯಿನ್ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ, ವಾಸ್ತವದಲ್ಲಿ ಈ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವ ಅಪರಾಧ. ದೇಶದ ಗಡಿಗಳಾಚೆಗೆ ಹೋಗಿ ತನಿಖೆ ನಡೆಸಬೇಕಿದೆ. ಇನ್ನೂ ಈ ಪ್ರಕರಣದಲ್ಲಿ ಕೇವಲ ತಾಂತ್ರಿಕ ಸಾಕ್ಷ್ಯಾಧಾರಗಳನ್ನಷ್ಟೇ ಸಂಗ್ರಹಿಸಬೇಕು. ಅದು ಹ್ಯಾಕರ್ ಶ್ರೀಕೃಷ್ಣನಿಂದಲೇ ಕೃತ್ಯ ಆಗಿದೆ ಎಂಬುದನ್ನು ನಿರೂಪಿಸುವಂತಿರಬೇಕು.
ಹ್ಯಾಕಿಂಗ್ ಬಗ್ಗೆ ಜ್ಞಾನ ಹೊಂದಿರಬೇಕು
ಕೇಂದ್ರ
ತನಿಖಾ
ಸಂಸ್ಥೆಗಳು
ಹೊರತು
ಪಡಿಸಿದರೆ,
ರಾಜ್ಯದ
ತನಿಖಾ
ಸಂಸ್ಥೆಗಳು
ಈ
ಪ್ರಕರಣವನ್ನು
ತನಿಖೆ
ಮಾಡಲು
ಸಾಧ್ಯವಿಲ್ಲ.
ಈ
ಪ್ರ
ರಕರಣವನ್ನು
ತನಿಖೆ
ಮಾಡಲು
ಹ್ಯಾಕಿಂಗ್
ಬಗ್ಗೆ
ಜ್ಞಾನ
ಹೊಂದಿರಬೇಕು,
ಇಲ್ಲದಿದ್ದರೆ
ಈ
ಪ್ರಕರಣವನ್ನು
ಪತ್ತೆ
ಮಾಡುವುದು
ಬಹಳ
ಕಷ್ಟ.
ದೇಶದಲ್ಲಿ
ಬಿಟ್ಕಾಯಿನ್
ವಹಿವಾಟು
ನಿಷೇಧ.
ಆದರೆ,
ಹ್ಯಾಕಿಂಗ್
ಮಾಡಿ
ಸಾವಿರಾರು
ಕೋಟಿ
ರೂ.ಅಕ್ರಮ
ಮಾಡಿದರೂ
ವಂಚನೆ
ಪ್ರಕರಣದ
ಅಡಿ
ತನಿಖೆ
ನಡೆಸಬಹುದು.
ಅಂತಾರಾಷ್ಟ್ರೀಯ
ಮಟ್ಟದಲ್ಲಿ
ನಡೆದಿರುವ
ಹ್ಯಾಕಿಂಗ್
ಪ್ರಕರಣವನ್ನು
ನಿಜವಾಗಿಯೂ
ದೇಶದ
ತನಿಖಾ
ಸಂಸ್ಥೆಗಳು
ಸಮರ್ಥವಾಗಿ
ತನಿಖೆ
ನಡೆಸಲಿವೆಯಾ
ಎಂಬ
ಪ್ರಶ್ನೆ
ಎದ್ದಿದೆ.
Recommended Video
ಜಾರಿ ನಿರ್ದೇಶನಾಲಯದ ತನಿಖೆ
ಬಿಟ್ಕಾಯಿನ್ ಹ್ಯಾಕಿಂಗ್ ಮಾಡಿ, ಅವುಗಳ ಮೂಲಕ ಹಣದ ಹವಾಲ ದಂಧೆ ನಡೆಸಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹ್ಯಾಕರ್ ಶ್ರೀಕೃಷ್ಣ ಬಿಟ್ಕಾಯಿನ್ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ ವಹಿಸಲಾಗಿದೆ. ತಮಿಳುನಾಡು ಘಟಕದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ. ಇದೇ ಸಂದರ್ಭದಲ್ಲಿ ಹ್ಯಾಕರ್ ಶ್ರೀಕಿ ಪುಂಡಾಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದು, ಈ ಪ್ರಕರಣ ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ನೋಡಬೇಕಿದೆ.