Good Friday 2022: ಗುಡ್ ಫ್ರೈಡೆ ಆಚರಣೆಯ ಇತಿಹಾಸ ಮತ್ತು ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ...!
ಭಾರತದಲ್ಲಿ ಆಚರಿಸಲಾಗುವ ಪ್ರಮುಖ ಧಾರ್ಮಿಕ ದಿನಗಳಲ್ಲಿ ಗುಡ್ ಫ್ರೈಡೆ ಒಂದಾಗಿದೆ. ಇದು ಕ್ರಿಶ್ಚಿಯನ್ ಸಮುದಾಯಕ್ಕೆ ಪ್ರಮುಖವಾದ ದಿನ. ಇದು ಕರ್ತನಾದ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವಾಗಿದೆ. ಯೇಸುಕ್ರಿಸ್ತ ತ್ಯಾಗಮಾಡಿದ ದಿನವಾಗಿದೆ. ಆದ್ದರಿಂದ ಅವರ ಸವಿನೆನಪಿಗಾಗಿ ಪ್ರತೀ ಪ್ರತೀ ವರ್ಷ ಏಪ್ರಿಲ್ ನಲ್ಲಿ ಗುಡ್ ಫ್ರೈಡೆ ಆಚರಿಸಲಾಗುತ್ತದೆ. ಇದನ್ನು ವಿಶ್ವದ ವಿವಿಧ ಸ್ಥಳಗಳಲ್ಲಿ ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಕೆಲವೆಡೆ ಈ ದಿನವನ್ನು ಪವಿತ್ರ ಶುಕ್ರವಾರ ಎಂದು ಕರೆಯಲಾಗುತ್ತದೆ, ಕೆಲವೊಮ್ಮೆ ಇದನ್ನು ಗ್ರೇಟ್ ಫ್ರೈಡೇ ಮತ್ತು ಕೆಲವೊಮ್ಮೆ ಇದನ್ನು ಬ್ಲ್ಯಾಕ್ ಫ್ರೈಡೇ ಎಂದೂ ಕರೆಯುತ್ತಾರೆ.
ಗುಡ್ ಫ್ರೈಡೇ ಎಂಬುದು ಯೇಸುಕ್ರಿಸ್ತನ ಮಾನವೀಯತೆಯ ನೋವಿಗೆ ಗೌರವವನ್ನು ತೋರಿಸಲು ಒಂದು ಮಾರ್ಗವಾಗಿದೆ. ಈ ವರ್ಷ ಏಪ್ರಿಲ್ 15 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಗುಡ್ ಫ್ರೈಡೆ ನಂತರ ಕ್ರಿಶ್ಚಿಯನ್ನರಿಗೆ ಮತ್ತೊಂದು ಪವಿತ್ರ ದಿನ ಈಸ್ಟರ್ ಸಂಡೇ ಇದು ಏಪ್ರಿಲ್ 17 ರಂದು ಬರುತ್ತದೆ. ಈ ದಿನದಂದು ಯೇಸು ಕ್ರಿಸ್ತನು ಅವನ ಮರಣದ ನಂತರ ಮತ್ತೆ ಜೀವ ತೆಗೆದುಕೊಂಡನು ಎನ್ನಲಾಗುತ್ತದೆ ಆದ್ದರಿಂದ ಈ ದಿನವನ್ನು ಶುಭ ಶುಕ್ರವಾರ ಒಳ್ಳೆಯದು ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ಅವರು ತಾನು ಯಾವಾಗಲೂ ಮನುಷ್ಯರೊಂದಿಗೆ ಇರುತ್ತೇನೆ ಮತ್ತು ಮನುಷ್ಯರಿಗೆ ಒಳ್ಳೆಯದನ್ನು ಮಾಡುವುದೇ ನನ್ನ ಉದ್ದೇಶವಾಗಿದೆ ಎಂಬ ಸಂದೇಶವನ್ನು ಅವರು ನೀಡಿದ್ದರು. ಇದರಿಂದಾಗಿ ಈ ದಿನವನ್ನು ಗುಡ್ ಫ್ರೈಡೇ, ಬ್ಲ್ಯಾಕ್ ಫ್ರೈಡೇ ಅಥವಾ ಗ್ರೇಟ್ ಫ್ರೈಡೇ ಎಂದು ಕರೆಯಲಾಗುತ್ತದೆ.
ಇತಿಹಾಸ
ಹೊಸ ಒಡಂಬಡಿಕೆಯ ಪ್ರಕಾರ, ರೋಮನ್ನರು ಯೇಸುವನ್ನು ಶಿಲುಬೆಗೇರಿಸಿದ ದಿನ ಗುಡ್ ಫ್ರೈಡೇ. ಯಹೂದಿ ಧಾರ್ಮಿಕ ಮುಖಂಡರು ಯೇಸುವನ್ನು ದೇವರ ಮಗನೆಂದು ಹೇಳಿಕೊಳ್ಳುವುದಕ್ಕಾಗಿ ದೇವದೂಷಣೆಯನ್ನು ಖಂಡಿಸಿದರು. ಯೇಸುವಿನ ಕೃತ್ಯಗಳಿಂದ ಅವರು ಉದ್ರೇಕಗೊಂಡರು. ಜೊತೆಗೆ ಅವರನ್ನು ರೋಮನ್ನರ ಬಳಿಗೆ ಕರೆತಂದರು. ರೋಮನ್ ನಾಯಕನಾದ ಪೊಂಟಿಯಸ್ ಪಿಲಾತನು ಯೇಸುವನ್ನು ಶಿಲುಬೆಗೇರಿಸಲು ಶಿಕ್ಷೆ ವಿಧಿಸಿದನು.

ಕಥೆಯ ಪ್ರಕಾರ, ಯೇಸುವನ್ನು ಸಾರ್ವಜನಿಕವಾಗಿ ಹೊಡೆಯಲಾಯಿತು ಮತ್ತು ಮುಳ್ಳುಗಳಿಂದ ಕಿರೀಟಧಾರಣೆ ಮಾಡಲಾಯಿತು. ಯೋಸುವನ್ನು ಜರ್ಜರಿತ ಸ್ಥಿತಿಯಲ್ಲಿ ಬೀದಿಗಳಲ್ಲಿ ಮರದ ಶಿಲುಬೆಗೆ ಹಾಕಿ ಗೇಲಿ ಮಾಡುವ ಗುಂಪಿನ ನಡುವೆ ಸಾಗಿಸಲು ಒತ್ತಾಯಿಸಲಾಯಿತು. ಅಂತಿಮವಾಗಿ ಅವರನ್ನು ಮೊಳೆಗಳಿಂದ ಪಾದಗಳನ್ನು ಶಿಲುಬೆಗೆ ಹೊಡೆಯಲಾಯಿತು. ಅವರು ಸಾಯುವವರೆಗೂ ಶಿಲುಬೆಯಲ್ಲಿ ನೇತಾಡುತ್ತಿದ್ದರು.
ಮಹತ್ವ
ಇದು ಶೋಕದ ದಿನವಾಗಿದೆ. ಈ ದಿನವನ್ನು ವಿಶ್ವಾದಾದ್ಯಂತ ಕ್ರೈಸ್ತರು ಆಚರಿಸುತ್ತಾರೆ. ಮಾನವರ ಪಾಪಗಳಿಗಾಗಿ ಯೇಸು ನರಳಿದನು ಮತ್ತು ಸತ್ತನು ಎಂದು ನಂಬಲಾಗುತ್ತದೆ. ಆದ್ದರಿಂದ, ಈ ದಿನವನ್ನು ಮನುಷ್ಯರ ಪಾಪಗಳಿಗೆ ಕ್ಷಮೆ ಕೇಳಲು ಆಚರಿಸಲಾಗುತ್ತದೆ.

ಜನರು ತಮ್ಮ ಜೀವನದಲ್ಲಿ ನೋವು, ಸಂಕಟದಿಂದ ಮುಕ್ತರಾಗಬೇಕೆಂದು ಪ್ರಾರ್ಥಿಸುತ್ತಾರೆ. ಕ್ರಿಶ್ಚಿಯನ್ ನಂಬಿಕೆಗಳ ಪ್ರಕಾರ, ಯೇಸುವಿನ ಮರಣವು ಎಲ್ಲಾ ಪಾಪಗಳ ಅಂತ್ಯವನ್ನು ಸೂಚಿಸುತ್ತದೆ. ಎಲ್ಲಾ ಪಾಪಗಳನ್ನು ತೊಡೆದುಹಾಕಿದ ನಂತರ, ಹೊಸ ಆರಂಭದ ಸಾಧ್ಯತೆಯಿದೆ ಎಂದು ಇದು ತೋರಿಸುತ್ತದೆ. ಇದು ಈಸ್ಟರ್ ಭಾನುವಾರದಂದು ಯೇಸುಕ್ರಿಸ್ತನ ಪುನರುತ್ಥಾನಗೊಂಡ ಎಂದು ಹೇಳಲಾಗುತ್ತದೆ.
ಹೇಗೆ ಆಚರಿಸಲಾಗುತ್ತದೆ?
ಸುಮಾರು 2 ಸಾವಿರ ವರ್ಷಗಳ ಹಿಂದೆ, ಮಾನವಕುಲವನ್ನು ರಕ್ಷಿಸುವ ಜನರಿಗೆ ಸರಿಯಾದ ಮಾರ್ಗವನ್ನು ತೋರಿಸಲು ಲಾರ್ಡ್ ಜೀಸಸ್ ಪ್ರಯತ್ನಿಸಿದನು. ಕತ್ತಲೆಯಿಂದ ಬೆಳಕಿಗೆ ಅವರನ್ನು ಸರಿಸಲು ಪ್ರಯತ್ನವನ್ನು ಕೈಗೊಂಡನು. ಈ ದಿನದಂದು, ಶಿಲುಬೆಯ ಸಾಂಕೇತಿಕ ರೂಪವನ್ನು ಎಲ್ಲಾ ಚರ್ಚುಗಳಲ್ಲಿ ಇರಿಸಲಾಗುತ್ತದೆ. ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳು ಪರಸ್ಪರ ಒಟ್ಟಿಗೆ ಸೇರುತ್ತಾರೆ. ಇದರ ನಂತರ, ಎಲ್ಲಾ ಅನುಯಾಯಿಗಳು ತಮ್ಮ ಸಂಪೂರ್ಣ ದಿನವನ್ನು ಯೇಸುವಿನ ಧ್ಯಾನ ಮತ್ತು ಪ್ರಾರ್ಥನೆಯಲ್ಲಿ ತೊಡಗುತ್ತಾರೆ.

Recommended Video
ಈ ದಿನ ಶೋಕದ ಸಂಕೇತವಾಗಿ ಚರ್ಚ್ಗಳಲ್ಲಿ ಗಂಟೆಗಳನ್ನು ಬಾರಿಸುವುದಿಲ್ಲ. ಗುಡ್ ಫ್ರೈಡೆಯನ್ನು ಆಚರಿಸುವ 40 ದಿನಗಳ ಮೊದಲು ಕ್ರಿಶ್ಚಿಯನ್ ಸಮುದಾಯದವರು ಪ್ರಾರ್ಥನೆಯನ್ನು ಮತ್ತು ಉಪವಾಸವನ್ನು ಪ್ರಾರಂಭಿಸುತ್ತಾರೆ.
-
Karnataka Rain: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ -
ನಿಮ್ಮ ಸಂಬಳಕ್ಕೆ ಎಷ್ಟು ಬೆಲೆಯ ಮನೆ ಖರೀದಿಸಬಹುದು? Viral ಆಗುತ್ತಿದೆ ಬೆಂಗಳೂರಿನ ಸಿಎ ತಿಳಿಸಿದ 20-30-40 ರೂಲ್ -
Gold Rate April 8: ಯುದ್ಧ ನಿಂತ ಬೆನ್ನಲ್ಲೇ ಚಿನ್ನ - ಬೆಳ್ಳಿ ಬೆಲೆ ಭಾರೀ ಹೆಚ್ಚಳ, ಎಷ್ಟಿದೆ ಇಂದಿನ ಚಿನ್ನದ ಬೆಲೆ -
Bengaluru Road: ಬನ್ನೇರುಘಟ್ಟ ರಸ್ತೆ ಪ್ರಯಾಣಿಕರಿಗೆ ಗುಡ್ನ್ಯೂಸ್: ಸಮಗ್ರ ಅಭಿವೃದ್ಧಿಗೆ ಜಿಬಿಎ ಮಾಸ್ಟರ್ ಪ್ಲಾನ್ -
Donald Trump: ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್ ಕಳಪೆ ಕೆಲಸ ಮಾಡಿದೆ: ಡೊನಾಲ್ಡ್ ಟ್ರಂಪ್ -
Bengaluru Rent House: ಬೆಂಗಳೂರಲ್ಲಿ 1 BHK ಬಾಡಿಗೆ ಮನೆ ಸ್ಕ್ಯಾಮ್; 30,000 ಕೊಟ್ಟರೂ ಒಳ್ಳೆ ಮನೆ ಸಿಗ್ತಿಲ್ಲ, ವೈರಲ್ ಪೋಸ್ಟ್ -
Iran-US-Israel War: ಪಾಕಿಸ್ತಾನದ ಮಧ್ಯಪ್ರವೇಶದಿಂದಾಗಿ ಇರಾನ್ ಮೇಲೆ ವಿನಾಶಕಾರಿ ಬಾಂಬ್ ದಾಳಿ ಇಲ್ಲ: ಡೊನಾಲ್ಡ್ ಟ್ರಂಪ್ -
IIT Baba Love Story: ಬೆಂಗಳೂರು ಮೂಲದ ಪ್ರತೀಕಾ ಕೈಹಿಡಿದ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ -
ಇರಾನ್-ಅಮೆರಿಕ ಯುದ್ಧದಲ್ಲಿ ಶರಣಾಗಿದ್ದು ಪಾಕಿಸ್ತಾನ: ಕೃಷ್ಣಭಟ್ ಬರಹ -
US-Iran ceasefire: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶೇ. 20ರಷ್ಟು ದಾಖಲೆಯ ಕುಸಿತ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Iran Ceasefire: 2 ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಇರಾನ್; ಶಾಶ್ವತ ಕದನ ವಿರಾಮದ ಬಗ್ಗೆ ಹೇಳಿದ್ದೇನು












Click it and Unblock the Notifications