ಗಣೇಶ ಚತುರ್ಥಿ: ಈ ಬಾರಿ ಗಣಪ ದುಬಾರಿ, ಯಾಕೆ ಗೊತ್ತಾ?
ಬೆಂಗಳೂರು, ಆಗಸ್ಟ್ 22: ಇನ್ನೇನು ಗೌರಿ ಗಣೇಶ ಹಬ್ಬ ಹತ್ತಿರ ಬರುತ್ತಿದೆ. ಬಿಬಿಎಂಪಿ ಸೇರಿದಂತೆ ರಾಜ್ಯದ ವಿವಿಧೆಡೆ ಕೂರಿಸಲಾಗುವ ಗಣೇಶ ಮೂರ್ತಿಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನಗಳನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಮನೆಗೆ ಹಾಗೂ ಬಡಾವಣೆಗೆ ಗಣೇಶ ತರುವ ಮುನ್ನ ನೀವು ಯೋಚಿಸಬೇಕಾದ ಇನ್ನೊಂದು ವಿಚಾರವಿದೆ. ಅದೇನು ಮುಂದೆ ಓದಿ.
ರಾಜ್ಯ ಸರ್ಕಾರವು ಗಣೇಶ ಚತುರ್ಥಿ ಆಚರಣೆಗೆ ನಿರ್ಬಂಧಗಳನ್ನು ಹಿಂಪಡೆದಿರುವ ಸಂತೋಷದ ನಡುವೆ ಮಣ್ಣಿನ ಮೂರ್ತಿಗೆ ಸಾಮಾನ್ಯಕ್ಕಿಂತ 50% ಹೆಚ್ಚು ವೆಚ್ಚವಾಗುವ ಸಾಧ್ಯತೆಯಿರುವುದರಿಂದ ಹಬ್ಬವು ಸಾರ್ವಜನಿಕರಿಗೆ ಕಷ್ಟಕರವಾಗಿದೆ. ಕಳೆದ ಒಂದು ತಿಂಗಳಿನಿಂದ ಅನಿರೀಕ್ಷಿತವಾಗಿ ತೇವದ ವಾತಾವರಣದಿಂದ ವಿಗ್ರಹ ತಯಾರಕರಿಗೆ ಹೆಚ್ಚುವರಿ ಹೊರೆಯಾಗಿದ್ದು, ಅವರು ಮೂಲ ಬೆಲೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಗಳು ತುಂಬಿ ತುಳುಕುತ್ತಿದ್ದು, ಮೂರ್ತಿ ತಯಾರಿಕೆಗೆ ಬಳಸುವ ಜೇಡಿಮಣ್ಣು ತೆಗೆಯಲು ತೊಂದರೆಯಾಗುತ್ತಿದೆ. ಮೂರು ತಲೆಮಾರಿನಿಂದಲೂ ಕುಂಬಾರಿಕೆ ಪೇಟೆಯ ವಿಗ್ರಹ ತಯಾರಕರಾದ ಮಲ್ಲಿಕಾ ಅವರು ಹೇಳುವಂತೆ, ಈಗಿನ ತೇವದ ವಾತಾವರಣವು ವಿಗ್ರಹ ತಯಾರಿಕೆಗೆ ದೊಡ್ಡ ಸಮಸ್ಯೆಯಾಗಿದೆ. ವಿಗ್ರಹಗಳು ತಿಂಗಳುಗಟ್ಟಲೆ ಒಣಗುತ್ತಿಲ್ಲ. ಇದರಿಂದ ತಯಾರಿಸುವ ಇಡೀ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ ಎಂದು ಎರಡು ತಿಂಗಳ ಹಿಂದೆ ತಯಾರಿಸಿದ ಮತ್ತು ಇನ್ನೂ ಒಣಗದ ವಿಗ್ರಹಗಳನ್ನು ತೋರಿಸಿ ಹೇಳಿದರು ಎಂದು ಡಿಎಚ್ ವರದಿ ಮಾಡಿದೆ.

ಲೀಡರ್ ಬಣ್ಣದ ಬೆಲೆ 1,500 ರೂ.ಗೆ ಏರಿಕೆ
ಒಮ್ಮೆ ನಾವು ವಿಗ್ರಹಗಳನ್ನು ವಿನ್ಯಾಸಗೊಳಿಸಿದರೆ, ಸಾಕಷ್ಟು ಸೂರ್ಯನ ಬೆಳಕಿನಲ್ಲಿ ಅವುಗಳನ್ನು ಒಣಗಿಸಲು ನಾವು ಬಿಡಬೇಕು. ಅದನ್ನು ಸಿದ್ದಪಡಿಸಿದ ನಂತರವೇ ನಾವು ಅವುಗಳಿಗೆ ಬಣ್ಣ ಹಾಕಲು ಮತ್ತು ಅಲಂಕರಿಸಲು ಪ್ರಾರಂಭಿಸಬಹುದು. ಆದರೆ ಈಗ ಮೂರ್ತಿಗಳು ಒಣಗದ ಕಾರಣ ಪ್ರಕ್ರಿಯೆ ಸ್ಥಗಿತಗೊಂಡಿದೆ. ಬಣ್ಣದ ಬೆಲೆಯಲ್ಲಿನ ಹೆಚ್ಚಳವು ವಿಗ್ರಹಗಳ ಬೆಲೆಯನ್ನು ಹೆಚ್ಚಿಸಲು ಕಾರಣವಾಗಿದೆ. ಉದಾಹರಣೆಗೆ ಒಂದು ಲೀಟರ್ 1,000 ರೂ. ಇದ್ದ ಚಿನ್ನದ ಬಣ್ಣದ ಬೆಲೆ ಈಗ 1,500 ರೂ.ಗೆ ಏರಿದೆ ಎಂದು ಅವರು ಹೇಳಿದರು.

ಚಿಲ್ಲರೆ ವ್ಯಾಪಾರಿಗಳಿಗೆ ದೊಡ್ಡ ನಷ್ಟ
ಈ ವರ್ಷ ಎಲ್ಲ ಬೆಲೆಗಳು ದ್ವಿಗುಣಗೊಂಡಿದೆ. ವಿಗ್ರಹ ತಯಾರಕರು ವಿಗ್ರಹಗಳ ಮೂಲ ಬೆಲೆಯನ್ನು ಹೆಚ್ಚಿಸಿದ್ದಾರೆ. ಅಲ್ಲದೆ, ಕಳೆದ ಮೂರು ವರ್ಷಗಳಲ್ಲಿ ನಾವು ಚಿಲ್ಲರೆ ವ್ಯಾಪಾರಿಗಳು ದೊಡ್ಡ ನಷ್ಟವನ್ನು ಅನುಭವಿಸಿದ್ದೇವೆ. ಅದರ ಒಂದು ಭಾಗವನ್ನು ಈ ವರ್ಷ ವಸೂಲಿ ಮಾಡದೆ ನಮಗೆ ಬೇರೆ ದಾರಿಯಿಲ್ಲ ಎಂದು 10 ವರ್ಷಗಳಿಂದ ಗಾಂಧಿ ಬಜಾರ್ನಲ್ಲಿನ ವಿಗ್ರಹ ಮಾರಾಟಗಾರರು ಹೇಳಿದ್ದಾರೆ.

ಕೋವಿಡ್ ನಿರ್ಬಂಧ ತೆಗೆದಿರುವುದರಿಂದ ವ್ಯಾಪಾರ
ಮತ್ತೊಬ್ಬ ವಿಗ್ರಹ ಮಾರಾಟಗಾರ ಮಾತನಾಡಿ, ಹಿಂದಿನ ವರ್ಷಗಳಲ್ಲಿ 300 ವಿಗ್ರಹಗಳನ್ನು ಮಾರಾಟ ಮಾಡುತ್ತಿದ್ದ ನಾವು ಕಳೆದ ವರ್ಷ 100 ಮಾತ್ರ ಮಾರಾಟ ಮಾಡಲು ಸಾಧ್ಯವಾಯಿತು. ಸಾಮಾನ್ಯ ಸ್ಥಿತಿಗೆ ಮರಳುವುದು ಮತ್ತು ಸಾಂಕ್ರಾಮಿಕ ರೋಗದಿಂದಾಗಿ ನಿರ್ಬಂಧಗಳನ್ನು ತೆಗೆದುಹಾಕಿರುವುದರಿಂದ ಈ ವರ್ಷ ಉತ್ತಮ ವ್ಯಾಪಾರ ಮಾಡುವ ನಿರೀಕ್ಷೆಯಲ್ಲಿರುವ ವಿಗ್ರಹ ಮಾರಾಟಗಾರರನ್ನು ಹುರಿದುಂಬಿಸಿದೆ.

ಬಿಬಿಎಂಪಿ, ಕೆಎಸ್ಪಿಸಿಬಿ ನಿರ್ದೇಶನ
ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮತ್ತು ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಬೆಂಗಳೂರಿನಲ್ಲಿ ಬಿಬಿಎಂಪಿಯು ವಲಯ ಜಂಟಿ ಆಯುಕ್ತರು, ಕೆಎಸ್ಪಿಸಿಬಿ ಪ್ರಾದೇಶಿಕ ಅಧಿಕಾರಿ, ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಎನ್ಜಿಒ ಪ್ರತಿನಿಧಿಯನ್ನು ಒಳಗೊಂಡ ವಲಯ ಸಮಿತಿಗಳನ್ನು ರಚಿಸುತ್ತದೆ, ನಿಯಮ ಉಲ್ಲಂಘಿಸುವವರ ಮೇಲೆ ನಿಗಾ ಇಡಲಿದೆ.












Click it and Unblock the Notifications