ಮಕ್ಕಳ ವಿಚಾರದಲ್ಲಿ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!
ಕಲಿಕೆ ಎಂಬುದು ಅನುಭವ ಪಡೆಯುವ ಪ್ರಕ್ರಿಯೆಯೆಂದರೆ ತಪ್ಪಾಗಲಾರದು. ಈ ಹಿನ್ನೆಲೆಯಲ್ಲಿ ಮಕ್ಕಳ ಅನುಭವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶಾಲೆ ಹಾಗೂ ಮನೆಯ ಪರಿಸರದಲ್ಲಿರುವ ಶಿಕ್ಷಕರು ಹಾಗೂ ಪೋಷಕರ ನಡೆಗಳು ಯಾವ ರೀತಿ ಇರಬೇಕೆಂಬುದು ತಿಳಿಯೋಣ.
ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ
ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಅನ್ನುವ ಹಾಗೆ, ಮಕ್ಕಳು ತಾವು ನೋಡಿದ್ದನ್ನು, ಸ್ಪರ್ಷಿಸಿದ್ದರ ಕುರಿತು ಮನಸಿನಲ್ಲಿ ಹಲವು ಪ್ರಶ್ನೆಗಳು ಮೂಡುವುದು ಸಹಜ. ಈ ಪ್ರಶ್ನೆಗಳು ಶಿಕ್ಷಕರಿಗೆ ಹಾಗೂ ಪೋಷಕರಿಗೆ ಕ್ಷುಲಕ ಅನಿಸಬಹುದು. ಆದರೆ, ಮಕ್ಕಳಿಗೆ ಅದು ಮಹತ್ವದ್ದೆ ಆಗಿರುತ್ತದೆ. ಹೀಗಾಗಿ ಮಕ್ಕಳು ಯಾವುದೇ ಪ್ರಶ್ನೆ ಕೇಳಿದರೂ ಸಮಾಧಾನದಿಂದ ಉತ್ತರಿಸುವಂತಹ ಮನಃಸ್ಥಿತಿಯನ್ನು ಹೊಂದಿರುವುದು ಅಗತ್ಯ.

ಉದಾಹರಣೆಗೆ ಹೇಳುವುದಾದರೆ, ಹೈ-ಸ್ಕೂಲ್ ಓದುತ್ತಿರುವಾಗ ನನ್ನ ಕ್ಲಾಸ್ ಮೆಟ್ ವಿಜ್ಞಾನ ವಿಷಯದ ಶಿಕ್ಷಕರಿಗೆ, ವಿಮಾನ ಆಕಾಶದಲ್ಲಿ ಚಲಿಸುವಾಗ ಮೋಡದ ಒಳಗಡೆ ತೂರಿ ಹೋಗುತ್ತಲ್ವ ಸರ್. ಹೀಗೆ ಹೋಗುವಾಗ ವಿಮಾನಕ್ಕೆ ಡ್ಯಾಮೆಜ್ ಏನು ಆಗಲ್ವ ಅಂತ ಪ್ರಶ್ನೆ ಕೇಳಿದ. ಇದಕ್ಕೆ ಪ್ರತಿಯಾಗಿ ನಮ್ಮ ವಿಜ್ಞಾನ ಶಿಕ್ಷಕರು ಸ್ವಲ್ಪ ಯೋಚಿಸಿ ಯಾವ ಪಾಠ ಓದುತ್ತಿದ್ದಿಯಾ. ಅದನ್ನು ಗಮನ ಕೊಟ್ಟು ಓದು. ತಲೆಹರಟೆ ಪ್ರಶ್ನೆ ಕೇಳಬೇಡವೆಂದು ಬೈದರು. ನನ್ನ ಸ್ನೇಹಿತ ಪ್ರಶ್ನೆ ಮಾಡಿದ್ದೆ ತಪ್ಪೆಂದುಕೊಂಡು ಪುಸ್ತಕದತ್ತ ತಲೆ ಬಗ್ಗಿಸಿದ. ಶಿಕ್ಷಕರು ಈ ರೀತಿ ಮಾಡುವುದರಿಂದ ಮಕ್ಕಳೊಳಗಿರುವ ಕುತೂಹಲಕಾರಿ ಹಾಗೂ ಪ್ರಶ್ನೆ ಮಾಡುವ ಮನೋಭಾವ ನಿಧಾನವಾಗಿ ಕಡಿಮೆ ಆಗುತ್ತದೆ. ಅದರ ಬದಲಾಗಿ ಪ್ರಶ್ನೆಗೆ ಸಮರ್ಪಕ ಉತ್ತರ ತಿಳಿದಿದ್ದರೆ ಅಲ್ಲಿಯೇ ಉತ್ತರಿಸಬಹುದಾಗಿತ್ತು. ಗೊತ್ತಿಲ್ಲದಿದ್ದರೆ ತಿಳಿದುಕೊಂಡು ಹೇಳಿದ್ದರೆ ಮುಗಿಯುತ್ತಿತ್ತು. ಅದರ ಬದಲಾಗಿ ಪ್ರಶ್ನೆ ಕೇಳಿದ್ದೆ ಮಹಾಪರಾಧವೆಂಬಂತೆ ವರ್ತಿಸಿದ್ದು ಈಗಲೂ ಕಣ್ಣಿಗೆ ಕಟ್ಟಿದಂತ್ತಿದೆ.
ಸ್ವಂತಿಕೆಗೆ ಅವಕಾಶ ಇರಲಿ
ಬದುಕಿನಲ್ಲಿ ಯಾವುದು ಅಲ್ಟಿಮೇಟ್ ಪರ್ಫೆಕ್ಟ್ ಅನ್ನುವುದಿರುವುದಿಲ್ಲ. ಕಲಿಕೆ ಅಂದ್ರೆ ಇವತ್ತಿನಿಂದ ನಾಳೆಗೆ ಬೆಟರ್ ಮಾಡುವುದಷ್ಟೆ. ಆದರೆ, ಬಹುತೇಕ ಪೋಷಕರು ತಮ್ಮ ಮಕ್ಕಳು ಈ ದಿನವೇ ಕಲಿತು ಮುಗಿಸಿ ಬಿಡಬೇಕೆಂದು ಭಾವಿಸುತ್ತಾರೆ. ರಿಯಾಲಿಟಿ ಶೋಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಗೂ ಪರೀಕ್ಷೆಗಳಲ್ಲಿ ತನ್ನ ಮಗುವೆ ಪ್ರಥಮ ಬರಬೇಕೆಂದು ಅನಗತ್ಯವಾದ ಒತ್ತಡ ಹಾಕಲು ಪ್ರಾರಂಭಿಸುತ್ತಾರೆ. ಆದರೆ, ಪ್ರತಿ ಮಗುವಿಗೂ ಅದರದೇ ಕಲಿಕಾ ವಿಧಾನವಿರುತ್ತದೆ.
ಒಂದು ಮಗು ನೋಡಿ ಕಲಿತರೆ, ಮತ್ತೊಂದು ಮಗು ಮಾಡಿ ತಿಳಿಯುತ್ತದೆ. ಇನ್ನೊಂದು ಮಗುವಿಗೆ ಕ್ರೀಡೆಯಲ್ಲಿ ಆಸಕ್ತಿ ಇದ್ದರೆ, ಮಗದೊಂದು ಮಗುವಿಗೆ ಸಾಹಿತ್ಯದಲ್ಲಿ ಆಸಕ್ತಿ ಇರುತ್ತದೆ. ಆದರೆ, ಪೋಷಕರಾದ ನಮಗೆ ತನ್ನ ಮಗು ತಾನು ಹೇಳಿದಂತೆ, ತನ್ನ ತೋರಿಸಿದ್ದನ್ನು, ತಾನು ಮಾಡಿದ್ದನ್ನು ಮಾತ್ರ ಮಾಡಬೇಕೆಂಬ ಹಠ ಇರುತ್ತದೆ. ಇದರಿಂದ ಮಗುವಿನ ಒಳಗಿರುವ ಸಹಜವಾದ ಪ್ರತಿಭೆ ಅಲ್ಲಿಯೇ ಕಮರಿ ಹೋಗುತ್ತದೆ. ಅದರ ಬದಲು ತನ್ನ ಮಗುವಿಗೆ ಏನು ಆಸಕ್ತಿ ಇದೆಯೋ ಅದರತ್ತ ಹೋಗಲು ಪೋಷಕರು ಪ್ರೋತ್ಸಾಹಿಸಿದರೆ ಪ್ರತಿಯೊಂದು ಮಗು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಹತ್ತರವಾದುದ್ದನ್ನು ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
ಅಭ್ಯಾಸದ ಬಗ್ಗೆ ಗಮನ ಇರಲಿ
ಇನ್ನು ಮಕ್ಕಳನ್ನು ಶಾಲೆಗೆ ಸೇರಿಸಿಬಿಟ್ಟರೆ ನನ್ನ ಕೆಲಸ ಮುಗೀತು. ಇನ್ನು ಏನಿದ್ದರೂ ಶಿಕ್ಷಕರ ಜವಾಬ್ದಾರೆ ಎಂದು ಪೋಷಕರು ಭಾವಿಸುತ್ತಾರೆ. ನಾನು ಪಾಠ ಮಾಡಿದ್ದೇನೆ. ನನ್ನ ಜವಾಬ್ದಾರಿ ಮುಗೀತು. ಓದುವುದು ಬಿಡುವುದು ವಿದ್ಯಾರ್ಥಿ ಹಣೆಬರಹ ಎಂದು ಉದಾಸೀನ ಮಾಡುವ ಶಿಕ್ಷಕರಿಗೇನು ನಮ್ಮಲ್ಲಿ ಕೊರತೆ ಇಲ್ಲ.
ಎಂತಹ ಪ್ರತಿಭಾ ವಿದ್ಯಾರ್ಥಿಗೂ ಕಲಿಕಾ ಹಂತದಲ್ಲಿ ನಾನಾ ಕಾರಣಗಳಿಂದ ಕಲಿಕೆಯಲ್ಲಿ ಹಿಂದುಳಿಯುತ್ತಾನೆ. ಒಂದು ಹಂತದಲ್ಲಿ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ತಲೆ ದೂರಬಹುದು. ಉದಾಹರಣೆಗೆ ವಿದ್ಯಾರ್ಥಿಯೊಬ್ಬನಿಗೆ ಇದ್ದಕ್ಕಿದಂತೆ ಮಂದ ದೃಷ್ಟಿದೋಷ ಸಮಸ್ಯೆ ಎದುರಾಗಬಹುದು. ಆದರೆ, ಆ ವಿದ್ಯಾರ್ಥಿಗೆ ತನ್ನ ಸಮಸ್ಯೆಯನ್ನು ಗುರುತಿಸಿಕೊಳ್ಳಲು, ತನ್ನ ಸಮಸ್ಯೆಯನ್ನು ಮತ್ತೊಬ್ಬರೊಂದಿಗೆ ಮುಕ್ತವಾಗಿ ಚರ್ಚಿಸಲು ಹಿಂಜರಿಯಬಹುದು.
ಈ ಸಂದರ್ಭದಲ್ಲಿ ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳ ದಿನನಿತ್ಯದ ಕಾರ್ಯಚಟುವಟಿಕೆಗಳ ಕುರಿತು ಸರಿಯಾಗಿ ಮಾಪನ ಮಾಡದಿದ್ದರೆ, ಸಮಸ್ಯೆಗೆ ಒಳಗಾಗಿರುವ ವಿದ್ಯಾರ್ಥಿ ಮತ್ತಷ್ಟು ಸಮಸ್ಯೆಗೆ ಈಡಾಗುತ್ತಾನೆ. ಮಕ್ಕಳು ಎದುರಿಸುವ ಇಂತಹ ಸಮಸ್ಯೆಯನ್ನು ತಡೆಯಬೇಕಾದರೆ ನಾವು ಮಕ್ಕಳ ಪ್ರತಿದಿನದ ಕಾರ್ಯಚಟುವಟಿಕೆ, ಚಲನವಲನಗಳ ಕುರಿತು ಗಮನ ವಹಿಸಬೇಕು. ಯಾವ ಸಂದರ್ಭದಲ್ಲಿ ತನ್ನ ಅಗತ್ಯವಿದೆ ಎಂಬುದನ್ನು ಪೋಷಕರು ಹಾಗೂ ಶಿಕ್ಷಕರು ತಿಳಿಯುವುದು ಅಗತ್ಯವಿದೆ.
ಮಕ್ಕಳ ಪಾಲು ಇರಲಿ
ಮಕ್ಕಳು ಪೋಷಕರು ಹೇಳುವುದನ್ನು ಮಾಡುವುದಿಲ್ಲ. ಆದರೆ, ಮಾಡಿದ್ದನ್ನು ಅನುಸರಿಸಲು ಪ್ರಯತ್ನಿಸುತ್ತಾರೆ. ಹೀಗಾಗಿ ಮನೆಯಲ್ಲಿ ಮಕ್ಕಳನ್ನು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯಯುತವಾಗಿ ಬೆಳೆಸುವಲ್ಲಿ ಪೋಷಕರ ಪಾತ್ರ ಮಹತ್ವದಾಗಿರುತ್ತದೆ. ಹೀಗಾಗಿ ಪೋಷಕರು ತಮ್ಮ ಕೆಲಸಗಳ ಕುರಿತು ಯೋಜನೆಗಳನ್ನು ರೂಪಿಸುವಾಗ ತಮ್ಮ ಮಕ್ಕಳ ಭಾಗವಹಿಸುವಿಕೆಗೆ ಅವಕಾಶ ನೀಡಿ. ಇದರಿಂದ ಮಕ್ಕಳು ಓದಿನ ಜೊತೆಗೆ ಪ್ರಾಕ್ಟಿಕಲ್ ಅನುಭವವೂ ದೊರಕುವಂತಾಗುತ್ತದೆ. ಹಾಗೂ ನಮ್ಮ ಸುತ್ತಮುತ್ತ ಸಮಾಜದಲ್ಲಿ ಎಂತೆಂತಹ ವ್ಯವಹಾರಗಳಿವೆ. ಅವುಗಳ ಸ್ವರೂಪಗಳನ್ನು ಪ್ರಾಥಮಿಕ ತಿಳುವಳಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications