ಆರ್ಥಿಕ ಸಮೀಕ್ಷೆ 2022: ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು ಇಲ್ಲಿವೆ
ನವದೆಹಲಿ, ಜನವರಿ 31: ಈ ವರ್ಷ ಸಂಸತ್ತಿನ ಬಜೆಟ್ ಅಧಿವೇಶನವು ಸೋಮವಾರ, ಜನವರಿ 31, 2022 ರಂದು ಅಂದರೆ ಇಂದು ಪ್ರಾರಂಭವಾಗುತ್ತದೆ. ನಾಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ಆದರೆ ಅದಕ್ಕೂ ಮುನ್ನ ಇಂದು ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆಯು ಮಂಡನೆ ಆಗಲಿದೆ.
2021-22 ರ ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ಗೆ ಒಂದು ದಿನ ಮೊದಲು ಸೋಮವಾರ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಇಂದು ಮಧ್ಯಾಹ್ನ 3.45 ಕ್ಕೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಆರ್ಥಿಕ ಸಮೀಕ್ಷೆ 2021-22 ಕುರಿತು ಮಾಹಿತಿ ನೀಡಲಿದ್ದಾರೆ. ಆರ್ಥಿಕ ಸಮೀಕ್ಷೆಯನ್ನು ಪ್ರತಿ ಬಾರಿಯು ಕೇಂದ್ರ ಬಜೆಟ್ ಮಂಡನೆಯ ಒಂದು ದಿನ ಮೊದಲು ಮಂಡಿಸಲಾಗುತ್ತದೆ.
ಆರ್ಥಿಕ ಸಮೀಕ್ಷೆಯು ಕಳೆದ ಒಂದು ವರ್ಷದಲ್ಲಿ ಆರ್ಥಿಕತೆಯ ಸ್ಥಿತಿ, ಆರ್ಥಿಕತೆಗೆ ಇರುವ ಪ್ರಮುಖ ಸವಾಲುಗಳು ಮತ್ತು ಅವುಗಳ ಪರಿಹಾರದ ಬಗ್ಗೆ ವಿವರಣೆಯನ್ನು ಹೊಂದಿರುತ್ತದೆ. ಆರ್ಥಿಕ ಸಮೀಕ್ಷೆಯು ಆರ್ಥಿಕತೆಯ ವಾರ್ಷಿಕ ವರದಿ ಕಾರ್ಡ್ ಆಗಿದ್ದು ಅದರಲ್ಲಿ ಪ್ರತಿಯೊಂದು ಕ್ಷೇತ್ರದ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗುತ್ತದೆ. ಭವಿಷ್ಯದ ಬಗ್ಗೆಯೂ ಉಲ್ಲೇಖ ಮಾಡಲಾಗಿರುತ್ತದೆ. ಇದು ಜಿಡಿಪಿ ಬೆಳವಣಿಗೆಯ ಬಗ್ಗೆಯೂ ಇದರಲ್ಲಿ ಪ್ರಸ್ತಾಪವಾಗಲಿದೆ. 2021-22 ರ ಆರ್ಥಿಕ ಸಮೀಕ್ಷೆಯು ಮುಂದಿನ ಹಣಕಾಸು ವರ್ಷದಲ್ಲಿ ಸುಮಾರು ಶೇಕಡ 9ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸುತ್ತದೆ ಎಂದು ವರದಿಗಳು ಹೇಳಿವೆ.

ಈ ವರ್ಷ ಆರ್ಥಿಕ ಸಮೀಕ್ಷೆಯಲ್ಲಿ ಏನು ಬದಲಾವಣೆ?
ಸಿಇಎ ವಿ ಅನಂತ ನಾಗೇಶ್ವರನ್ ಮಂಡನೆ ಮಾಡುವ ಮಂಡಿಸಿದ ಮೊದಲ ಆರ್ಥಿಕ ಸಮೀಕ್ಷೆ ಇದಾಗಿದೆ. ಕೇಂದ್ರ ಸರ್ಕಾರ ಶುಕ್ರವಾರ ಆರ್ಥಿಕ ತಜ್ಞ ವಿ ಅನಂತ ನಾಗೇಶ್ವರನ್ರನ್ನು ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ (ಸಿಇಎ) ನೇಮಕ ಮಾಡಿದೆ. ತಮ್ಮ ಮೂರು ವರ್ಷಗಳ ಅವಧಿ ಮುಗಿದ ನಂತರ ಡಿಸೆಂಬರ್ 2021 ರಲ್ಲಿ ಸಿಇಎ ಕಚೇರಿಯನ್ನು ತೊರೆದ ಕೆವಿ ಸುಬ್ರಮಣಿಯನ್ ಅವರ ಹುದ್ಧೆಗೆ ಈಗ ಸರ್ಕಾರವು ವಿ ಅನಂತ ನಾಗೇಶ್ವರನ್ರನ್ನು ನೇಮಕ ಮಾಡಿದೆ. ಆರ್ಥಿಕ ಸಮೀಕ್ಷೆಯ ಮಂಡನೆಗೆ ಕೆಲವೇ ದಿನಗಳ ಮೊದಲು ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರರು ಸಾಮಾನ್ಯವಾಗಿ ದಾಖಲೆಯನ್ನು ಸಿದ್ಧಪಡಿಸುತ್ತದೆಯಾದರೂ, ಡಿಸೆಂಬರ್ನಲ್ಲಿ ಕೊನೆಗೊಂಡ ಕೃಷ್ಣಮೂರ್ತಿ ಸುಬ್ರಮಣಿಯನ್ ಅವಧಿಯ ನಂತರ ಹುದ್ದೆಯು ಖಾಲಿಯಿರುವುದರಿಂದ ಈ ವರ್ಷದ ಆರ್ಥಿಕ ಸಮೀಕ್ಷೆಯನ್ನು ಪ್ರಧಾನ ಆರ್ಥಿಕ ಸಲಹೆಗಾರರು ಮತ್ತು ಇತರ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ.
ಆರ್ಥಿಕ ಸಮೀಕ್ಷೆಯು ಸಾಮಾನ್ಯವಾಗಿ ಸಂಪುಟ 1 ಮತ್ತು ಸಂಪುಟ 2 ಎಂಬ ಎರಡು ಭಾಗಗಳನ್ನು ಒಳಗೊಂಡಿರುತ್ತದೆ. ಮೊದಲ ಸಂಪುಟವು ಈ ವರ್ಷ ಚಾಲ್ತಿಯಲ್ಲಿ ನೀತಿ ಸಲಹೆಗಳನ್ನು ಒಳಗೊಂಡಿದೆ. 2 ನೇ ಸಂಪುಟವು ಆರ್ಥಿಕತೆಯ ವಲಯ ವಿಶ್ಲೇಷಣೆಯನ್ನು ಒಳಗೊಂಡಿದೆ.
ನೀವು ಆರ್ಥಿಕ ಸಮೀಕ್ಷೆಯನ್ನು ಖರೀದಿಸಬಹುದು: ಇಲ್ಲಿದೆ 5 ಸಂಗತಿಗಳು
* ಆರ್ಥಿಕ ಸಮೀಕ್ಷೆಯು ಆಸಕ್ತಿದಾಯಕ ಓದುವಿಕೆಯ ಒಂದು ಮೂಲ ಎಂದರೆ ತಪ್ಪಾಗಲಾರದು. ಹಾಗೆಯೇ ಅರ್ಥಶಾಸ್ತ್ರಜ್ಞರು ಹೊಂದಿರಬೇಕಾದ ಕೈಪಿಡಿ ಕೂಡಾ ಹೌದು. ಎಲ್ಲಾ ಆರ್ಥಿಕ ಸಮೀಕ್ಷೆಗಳು https://www.indiabudget.gov.in/economicsurvey/ ನಲ್ಲಿ ಲಭ್ಯವಿದೆ. ಸೈಟ್ನಿಂದ ಕಳೆದ ವರ್ಷದ ಆರ್ಥಿಕ ಸಮೀಕ್ಷೆಯನ್ನು ಸಹ ಖರೀದಿಸಬಹುದು.
* ಆರ್ಥಿಕ ಸಮೀಕ್ಷೆಗಳು ಪ್ರತಿ ವರ್ಷ ಒಂದು ಥೀಮ್ ಅನ್ನು ಹೊಂದಿರುತ್ತದೆ. ಕಳೆದ ವರ್ಷ, ಥೀಮ್ ಜೀವನ ಮತ್ತು ಜೀವನೋಪಾಯವನ್ನು ಉಳಿಸುವುದು ಆಗಿತ್ತು. 2017-18ರಲ್ಲಿ ಮಹಿಳಾ ಸಬಲೀಕರಣದ ವಿಷಯವಾಗಿ ಆರ್ಥಿಕ ಸಮೀಕ್ಷೆ ಇತ್ತು.
* ಮೊದಲ ಆರ್ಥಿಕ ಸಮೀಕ್ಷೆಯನ್ನು 1950-51 ರಲ್ಲಿ ಮಂಡಿಸಲಾಯಿತು. 1964 ರಿಂದ, ಕೇಂದ್ರ ಬಜೆಟ್ಗೆ ಒಂದು ದಿನ ಮೊದಲು ಸಮೀಕ್ಷೆಯನ್ನು ಬಿಡುಗಡೆ ಮಾಡುವ ಅಭ್ಯಾಸ ಪ್ರಾರಂಭವಾಗಿದೆ.
* ಸರ್ಕಾರವು ಸಮೀಕ್ಷೆಯನ್ನು ಪ್ರಸ್ತುತಪಡಿಸುವುದು ಕಡ್ಡಾಯವಲ್ಲ ಮತ್ತು ಮೊದಲ ಸಂಪುಟದಲ್ಲಿ ಪ್ರಸ್ತುತಪಡಿಸಲಾದ ಶಿಫಾರಸುಗಳು ಸರ್ಕಾರಕ್ಕೆ ಬದ್ಧವಾಗಿಲ್ಲ.
* 2019-20 ರಲ್ಲಿ, ಕೆ ಸುಬ್ರಮಣಿಯನ್ ಅವರು 'ಥಾಲಿನೋಮಿಕ್ಸ್', ಎಂಬ ಪರಿಕಲ್ಪನೆಯನ್ನು ಪರಿಚಯಿಸಿದ್ದು, ಇದು ಬಹಳ ಜನಪ್ರಿಯವಾಯಿತು. ಸಾಮಾನ್ಯ ವ್ಯಕ್ತಿಗೆ ಅರ್ಥಶಾಸ್ತ್ರವು ಸಂಬಂಧಿಸುವಂತೆ ಮಾಡಲು ಉತ್ತಮವಾದ ಮಾರ್ಗ ಯಾವುದು, ಅವನು ಪ್ರತಿದಿನ ಎದುರಿಸುವ ಆಹಾರದ ತಟ್ಟೆ?. 'ಥಾಲಿನೋಮಿಕ್ಸ್: ದಿ ಎಕನಾಮಿಕ್ಸ್ ಆಫ್ ಎ ಪ್ಲೇಟ್ ಆಫ್ ಫುಡ್ ಇನ್ ಇಂಡಿಯಾ' ಅನ್ನು ಪಾಲಿಸಿ. ಇದು ಭಾರತದಾದ್ಯಂತ ಒಬ್ಬ ಸಾಮಾನ್ಯ ವ್ಯಕ್ತಿ ಊಟಕ್ಕೆ ಪಾವತಿಸುವ ಮೊತ್ತವನ್ನು ಲೆಕ್ಕ ಹಾಕುವ ಪ್ರಯತ್ನ," ಎಂದು ಸುಬ್ರಮಣಿಯನ್ ಆ ಸಮೀಕ್ಷೆಯಲ್ಲಿ ಬರೆದಿದ್ದಾರೆ. (ಒನ್ಇಂಡಿಯಾ ಸುದ್ದಿ)
Recommended Video
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications