Get Updates
Get notified of breaking news, exclusive insights, and must-see stories!

ಮೈಸೂರು ದಸರಾ ವಿಷಯದಲ್ಲಿ ಪಿಹೆಚ್‌ಡಿ, ಡಾ. ವಿ. ರಂಗನಾಥ್ ಸಾಧನೆ

ಸುಮಾರು ನಾಲ್ಕು ಶತಮಾನಗಳನ್ನು ಸವೆಸಿ ಐದನೇ ಶತಮಾನದತ್ತ ಸಾಗುತ್ತಿರುವ ಮೈಸೂರು ದಸರಾ ಪ್ರತಿವರ್ಷವೂ ಹಲವು ಹೊಸತನಗಳನ್ನು ತನ್ನೊಡಲಲ್ಲಿ ಸೇರಿಸಿಕೊಂಡು ಅದ್ಧೂರಿತನವನ್ನು ಇಮ್ಮಡಿ ಮಾಡಿಕೊಂಡು ಮುಂದೆ ಸಾಗುತ್ತಿದೆ. ಆಳರಸರ ಕಾಲದ ದಸರಾ ಇವತ್ತು ಸಾಂಸ್ಕೃತಿಕ ಸಂಗಮವಾಗಿ ನಾಡಹಬ್ಬವಾಗಿ ಪ್ರಜ್ವಲಿಸುತ್ತಿದೆ. ಇಂತಹ ದಸರಾದ ಬಗ್ಗೆ ಅಧ್ಯಯನ ಮಾಡಿ ಡಾ. ವಿ. ರಂಗನಾಥ್ ಪಿಹೆಚ್‌ಡಿ ಪದವಿಪಡೆದಿರುವುದು ವಿಶೇಷವಾಗಿದೆ.

ದಸರೆಗೆ ಪೌರಾಣಿಕ ಮತ್ತು ಐತಿಹಾಸಿಕ ಎರಡರ ಬೆಸುಗೆಯಿದೆ. ಇವತ್ತಿಗೂ ದಸರೆಯನ್ನು ಹಲವೆಡೆ ಆಚರಿಸಲಾಗುತ್ತಿದೆಯಾದರೂ ಅಲ್ಲಿನ ಆಚರಣೆಗೂ ಮೈಸೂರಿನಲ್ಲಿ ಆಚರಿಸಲ್ಪಡುವ ದಸರೆಗೂ ಭಿನ್ನತೆ ಮತ್ತು ವಿಶಿಷ್ಟತೆ ಕಂಡು ಬರುತ್ತದೆ. ಇಲ್ಲಿನ ದಸರೆಯಲ್ಲಿ ಸಂಪ್ರದಾಯದ ಲೇಪನದೊಂದಿಗೆ ರಾಜಪಾರಂಪರ್ಯದ ವೈಭವ, ಇತಿಹಾಸದ ಮೇಳೈಕೆ ಸಾಂಸ್ಕೃತಿಕ ಉತ್ಸವವಾಗಿ ಗಮನಸೆಳೆಯುತ್ತಿದೆ.

 ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ

ಮೈಸೂರು ದಸರಾದ ಬಗ್ಗೆ ತಿಳಿಯುತ್ತಾ ಹೋದಷ್ಟು ಮಹತ್ವದ ವಿಚಾರಗಳು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಈಗಾಗಲೇ ಡಾ. ವಿ. ರಂಗನಾಥ್ ' ಮೈಸೂರು ದಸರಾ ಒಂದು ಸಾಂಸ್ಕೃತಿಕ ಅಧ್ಯಯನ' ಎಂಬ ಮಹಾ ಪ್ರಬಂಧವನ್ನು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಮಂಡಿಸಿ, ಪಿ. ಎಚ್. ಡಿ ಪದವಿಯನ್ನು ಪಡೆದಿದ್ದಾರೆ. ಮೈಸೂರು ದಸರಾದ ಬಗ್ಗೆ ಥೇಟ್ ವಿದ್ಯಾರ್ಥಿಯಂತೆಯೇ ಅಧ್ಯಯನ ಮಾಡಿದ ಡಾ. ವಿ. ರಂಗನಾಥ್ ಅವರ ಬದುಕೇ ಇತರರಿಗೆ ಮಾದರಿ.

ಅವರ ಬಗ್ಗೆ ಒಂದಿಷ್ಟು ಹೇಳುವುದಾದರೆ ಮೊದಲಿಗೆ ಕೆಲವು ದಶಕಗಳ ಹಿಂದೆ ಮೈಸೂರಿನಲ್ಲಿ 'ಆರತಿ' ಎಂಬ ದಿನಪತ್ರಿಕೆ ಮತ್ತು 'ಜನರಂಜಿನಿ' ಎಂಬ ವಾರ ಪತ್ರಿಕೆ ನಡೆಸುತ್ತಿದ್ದರು. ಆದರೆ ಸಣ್ಣ ಪತ್ರಿಕೆ ನಡೆಸಿ ಜೀವನ ನಡೆಸುವುದು ಕಷ್ಟದ ಕೆಲಸವಾಗಿದ್ದರಿಂದ ಸರಕಾರಿ ಕೆಲಸದತ್ತ ಮುಖ ಮಾಡಿದರು. ಮದುವೆಯಾಯಿತು. ಮಕ್ಕಳಾದವು. ಆ ನಂತರ ಅವರ ಬದುಕಿನಲ್ಲೊಂದು ತಿರುವು ಕಾಣಿಸಿತು.

 ಮಗನ ಪಾಠ ಹೇಳುತ್ತಾ ಓದು ಪುನಾರಂಭ

ಮಗನ ಪಾಠ ಹೇಳುತ್ತಾ ಓದು ಪುನಾರಂಭ

ಅದು 1998ರ ದಿನಗಳು. ಅವರ ಮಗ ಒಂದನೇ ತರಗತಿಯಲ್ಲಿ ಓದುತ್ತಿದ್ದ. ಈ ವೇಳೆ ಕಚೇರಿ ಕೆಲಸ ಮುಗಿಸಿ ಬರುತ್ತಿದ್ದ ಅವರಿಗೆ ಪತ್ನಿ ನಂದಿನಿ ಮಗನಿಗೆ ಪಾಠ ಹೇಳಿಕೊಡುವಂತೆ ತಾಕೀತು ಮಾಡಿದರು. ಅದು ಸರಿ ಎನಿಸಿತು. ಅದರಂತೆ ಮಗನಿಗೆ ಪಾಠ ಹೇಳಿಕೊಡುತ್ತಾ ತಾವೇಕೆ ಓದಬಾರದು ಎಂಬ ಆಲೋಚನೆ ಬಂತು. ಅವತ್ತಿನಿಂದ ಅವರು ಕೂಡ ಓದಲು ಆರಂಭಿಸಿದರು. ಅದಾಗಲೇ 1987ರಲ್ಲಿ ಬಿ.ಎಸ್‌ಸಿ. ಓದಿ ಕೆಲಸಕ್ಕೆ ಸೇರಿದ್ದ ಅವರು, ಎಲ್‌ಎಲ್‌ಬಿ ಓದಿದ್ದರೂ ಪರೀಕ್ಷೆ ಬರೆದಿರಲಿಲ್ಲ. ಹಾಗಾಗಿ ಮಗನಿಗೆ ಪಾಠಹೇಳುತ್ತಲೇ ಎಲ್‌ಎಲ್‌ಬಿ ಪರೀಕ್ಷೆಗೆ ಸಿದ್ಧರಾದರು. ಮಗ ಶ್ರೀಹರಿ ಮೂರನೇ ತರಗತಿಗೆ ಬರುವ ವೇಳೆಗೆ ಎಲ್‌ಎಲ್‌ಬಿ ಮುಗಿಸಿದರು. ಬಳಿಕ ಎಂ.ಎ ಇತಿಹಾಸದಲ್ಲಿಯೂ ಉತ್ತೀರ್ಣರಾದರು.

 ಹಲವು ಪದವಿಗಳ ಸರದಾರರು

ಹಲವು ಪದವಿಗಳ ಸರದಾರರು

ಆ ನಂತರ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ. ಅದರ ನಂತರ ಪತ್ರಿಕೋದ್ಯಮ ಹಾಗು ಸಮೂಹ ಮಾಧ್ಯಮದಲ್ಲಿ ಪೋಸ್ಟ್‌ಗ್ರಾಜ್ಯುಯೇಟ್ ಡಿಪ್ಲೊಮಾ ಮಾಡಿದರು. ಮಗ ಪ್ರೌಢಶಾಲೆಗೆ ಬಂದ ಬಳಿಕ ಅವನಿಗೆ ಓದು ಹೇಳಿಕೊಡುತ್ತಲೆ ಎಂ.ಎ. ಕನ್ನಡ ಮುಗಿಸಿದರು. ಹೀಗಿರುವಾಗಲೇ ಅವರು ಸುಮಾರು ಹನ್ನೊಂದು ವರ್ಷಕ್ಕೂ ಹೆಚ್ಚು ದಸರಾದ ಒಂದು ಭಾಗವಾಗಿ ಎಲ್ಲಾ ಐಎಎಸ್ ಅಧಿಕಾರಿಗಳ ಕೈಕೆಳಗೆ ಕೆಲಸ ಮಾಡಿದ್ದರು. ಆಗ ದಸರಾದ ಬಗ್ಗೆಯೇ ಒಂದು ವ್ಯವಸ್ಥಿತ ಅಧ್ಯಯನ ಮಾಡಬೇಕೆಂದು ಪಿ.ಎಚ್.ಡಿ ಮಾಡಲು ನಿರ್ಧರಿಸಿ ಅದನ್ನು ಮುಗಿಸಿದರು. ಈ ನಡುವೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಸಂಗೀತ ಕೊಡುಗೆಗಳು ಎಂಬುದರ ಬಗ್ಗೆ ಡಿ.ಲಿಟ್ ಪದವಿ ಮುಗಿಸಿದ ಅವರಿಗೆ ಅಭಿನಂದನ ಗ್ರಂಥವೂ ಸಲ್ಲಿಕೆಯಾಗಿದೆ.

 ದಸರಾ ಬಗ್ಗೆ ತೀವ್ರ ಅಧ್ಯಯನ

ದಸರಾ ಬಗ್ಗೆ ತೀವ್ರ ಅಧ್ಯಯನ

2007ರಲ್ಲಿ ರಂಗನಾಥ ಅವರು ಪ್ರಾದೇಶಿಕ ಆಯುಕ್ತರ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಆಗ ಪಾಲಿಕೆ ಆಯುಕ್ತರಾಗಿದ್ದ ಸೆಲ್ವಕುಮಾರ್ , ಅವರ ಪದವಿಗಳ ಪಟ್ಟಿನೋಡಿ ನೀವು ದಸರಾ ವಿಭಾಗದಲ್ಲಿ ಕೆಲಸ ಮಾಡಲು ತಿಳಿಸಿದರು. ಅಲ್ಲಿಂದಲೇ ಅವರಿಗೆ ಮೈಸೂರು ದಸರಾದ ಬಗೆಗೆ ಆಸಕ್ತಿ ಮೂಡಿತು. ಅದರಂತೆ ಅವರು ದಸರಾದ ಬಗೆಗೆ ತೀವ್ರ ಅಧ್ಯಯನ ಆರಂಭಿಸಿದರು. ಐದು ವರ್ಷಗಳ ಕಾಲ ದಸರಾದ ಬಗ್ಗೆ ಸಂಶೋಧನೆ ಮಾಡಿದ ಅವರು ಸುಮಾರು 150 ಪುಸ್ತಕಗಳ ಪರಾಮರ್ಶೆ, 84 ಪುಸ್ತಕಗಳ ಅಧ್ಯಯನ ಮಾಡಿದ್ದಾರೆ. ಅಷ್ಟೇ ಅಲ್ಲದೆ ದಸರಾ ನಡೆಯುವ ಎಲ್ಲ ಸ್ಥಳಗಳಿಗೆ ತೆರಳಿ ಮಾಹಿತಿ ಕಲೆ ಹಾಕಿರುವುದು ಇವರ ವಿಶೇಷತೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+