Get Updates
Get notified of breaking news, exclusive insights, and must-see stories!

ಭಾರತದ ಈ ಮೂರು ಹಳ್ಳಿಗಳಲ್ಲಿ ದಸರಾ ಆಚರಿಸಲ್ಲ, ಯಾಕೆ?

ನವದೆಹಲಿ, ಅಕ್ಟೋಬರ್‌ 5: ವಿಜಯ ದಶಮಿಯಂದು ದೇಶದಾದ್ಯಂತ ಜನರು ರಾವಣನ ಪ್ರತಿಕೃತಿಗಳನ್ನು ದಹಿಸುವ ಮೂಲಕ ಕೆಟ್ಟದ್ದರ ವಿರುದ್ಧ ಒಳ್ಳೆಯ ವಿಜಯವನ್ನು ಆಚರಿಸುತ್ತಾರೆ. ಈ ಮೂರು ಹಳ್ಳಿಗಳಲ್ಲಿ ಮಾತ್ರ ಆಚರಣೆ ಮಾಡುವುದಿಲ್ಲ.

ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಒಂದು ಹಳ್ಳಿಯು ದಸರಾ ಆಚರಣೆಯನ್ನು ಮಾಡುವುದಿಲ್ಲ. ಬರಗಾಂವ್ ಗ್ರಾಮದ ನಿವಾಸಿಗಳು ಕೂಡ ಹಬ್ಬವನ್ನು ಆಚರಿಸಲು ನಿರಾಕರಿಸುತ್ತಾರೆ. ಏಕೆಂದರೆ ಹಿಮಾಲಯದಲ್ಲಿ ರಾವಣನು ಶಕ್ತಿ (ಶಕ್ತಿ) ಗಳಿಸಿದ ನಂತರ ಅದನ್ನು ರೈತನಿಗೆ ಹಸ್ತಾಂತರಿಸಿದ ನಂತರ ಈ ಗ್ರಾಮದಲ್ಲಿ ಶಕ್ತಿ ಕಳೆದುಕೊಂಡನು ಎಂದು ಅವರು ನಂಬಿದ್ದಾರೆ.

ಈ ಬಗ್ಗೆ ಬಾಗ್ಪತ್ ಗ್ರಾಮದ ದೇವಾಲಯದ ಮುಖ್ಯ ಅರ್ಚಕ ಗೌರಿ ಶಂಕರ್ ಅವರು ಈ ಕಥೆಯನ್ನು ವಿವರಿಸುತ್ತಾ, ''ನಮ್ಮದು ಪ್ರಾಚೀನ ಗ್ರಾಮ. ಇದನ್ನು ಯಾವಾಗಲೂ ರಾವಣ ಎಂದು ಕರೆಯಲಾಗುತ್ತದೆ. ತಲೆಮಾರುಗಳಿಂದ, ರಾಕ್ಷಸ ರಾಜನಿಗೆ ಸಂಬಂಧಿಸಿದ ಸಾಮಾನ್ಯ ದಂತಕಥೆಯನ್ನು ನಾವು ಕೇಳುತ್ತಿದ್ದೇವೆ. ಅವರು ಶಕ್ತಿಯನ್ನು ಪಡೆಯಲು ಹಿಮಾಲಯದಲ್ಲಿ ವರ್ಷಗಳ ಕಾಲ ಧ್ಯಾನ ಮಾಡಿದ್ದನು'' ಎಂದಿದ್ದಾರೆ.

ಶಕ್ತಿಯ ಭಾರ ಹಸ್ತಾರಿಸಿದ ರಾವಣ

ಶಕ್ತಿಯ ಭಾರ ಹಸ್ತಾರಿಸಿದ ರಾವಣ

ಅವನು ಶಕ್ತಿಯನ್ನು ಪಡೆದ ನಂತರ ಪರ್ವತಗಳಿಂದ ಹಿಂತಿರುಗುತ್ತಿರುವಾಗ, ರಾವಣನು ಈ ಗ್ರಾಮದ ಮೂಲಕ ಹಾದುಹೋದನು. ಶಕ್ತಿಯನ್ನು ರೈತನಿಗೆ ಹಸ್ತಾಂತರಿಸಿದನು. ಅವನು ಶಕ್ತಿಯ ಭಾರವನ್ನು ಹೊರಲು ವಿಫಲರಾದ ಕಾರಣ ಅದನ್ನು ನೆಲದ ಮೇಲೆ ಇಟ್ಟನು. ಆಗ ಶಕ್ತಿ ರಾವಣನೊಂದಿಗೆ ಮುಂದೆ ಹೋಗಲು ನಿರಾಕರಿಸಿತು. ಆದ್ದರಿಂದ, ಅವರು ಮಾನಸಾ ದೇವಿಗೆ ಇಂದು ಇರುವ ಸ್ಥಳದಲ್ಲಿಯೇ ದೇವಾಲಯವನ್ನು ನಿರ್ಮಿಸಿದರು ಎಂದು ಅರ್ಚಕ ಗೌರಿ ಶಂಕರ್‌ ಹೇಳಿದರು.

ರಾವಣ, ಮೇಘನಾದ್ ಮತ್ತು ಕುಂಭಕರಣನ ದಹನವಿಲ್ಲ

ರಾವಣ, ಮೇಘನಾದ್ ಮತ್ತು ಕುಂಭಕರಣನ ದಹನವಿಲ್ಲ

ಅದಲ್ಲದೆ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಬಿಸ್ರಾಖ್ ಕೂಡ ದಸರಾ ಹಬ್ಬ ಆಚರಣೆ ಮಾಡುವುದಿಲ್ಲ. ಬಿಸ್ರಾಖ್‌ ಕಕೂಡದ ನಿವಾಸಿಗಳು ರಾವಣ, ಮೇಘನಾದ್ ಮತ್ತು ಕುಂಭಕರ್ಣನ ಪ್ರತಿಕೃತಿಗಳನ್ನು ಸುಡಲು ನಿರಾಕರಿಸುತ್ತಾರೆ. ದಂತಕಥೆಯ ಪ್ರಕಾರ, ಭಗವಾನ್ ಶಿವನ ಕಟ್ಟಾ ಭಕ್ತನಾದ ವಿಶ್ರವ ಋಷಿಗೆ ಜನಿಸಿದ ರಾವಣನು ತನ್ನ ಬಾಲ್ಯವನ್ನು ಬಿಸ್ರಾಕ್‌ನಲ್ಲಿ ಕಳೆದಿದ್ದನು. ಆದ್ದರಿಂದ ಅವರು ದಸರಾ ಆಚರಣೆ ಮಾಡುವುದಿಲ್ಲ.

ಲಂಕಾಧಿಪತಿ ಈ ಗ್ರಾಮದಲ್ಲಿ ಜನನ

ಲಂಕಾಧಿಪತಿ ಈ ಗ್ರಾಮದಲ್ಲಿ ಜನನ

ರಾಮ್ ದಾಸ್, ಪುರಾತನ ಶಿವ ದೇವಾಲಯದ ಅರ್ಚಕ ಅವರ ಪ್ರಕಾರ, ನಮ್ಮಲ್ಲಿ ಇದು ರಾವಣನ ದೇವಾಲಯ ಎಂದು ಕರೆಯಲ್ಪಡುತ್ತದೆ. ಲಂಕಾಧಿಪತಿ ಈ ಗ್ರಾಮದಲ್ಲಿ ಜನಿಸಿದನು. ಹಾಗಾಗಿ ನಾವು ರಾವಣನ ಪ್ರತಿಕೃತಿಯನ್ನು ಸುಡುವುದಿಲ್ಲ. ಅವನು ನಮ್ಮ ಹಳ್ಳಿಯ ಮಗ. ಅವನು ಇಲ್ಲಿ ಜನಿಸಿದನು. ಅದರ ಬಗ್ಗೆ ನಮಗೆ ಹೆಮ್ಮೆ ಇದೆ. ರಾವಣನ ತಂದೆ ಮತ್ತು ಪ್ರಸಿದ್ಧ ಋಷಿ ವಿಶ್ರವಸ್‌ನಿಂದ ಗ್ರಾಮಕ್ಕೆ ಈ ಹೆಸರು ಬಂದಿದೆ ಎಂದು ಅದರ ನಿವಾಸಿಗಳು ನಂಬುತ್ತಾರೆ ಎಂದು ದಾಸ್ ಹೇಳಿದರು.

ರಾವಣನ ಆಶೀರ್ವಾದದಿಂದಾಗಿ ತಮ್ಮ ಜೀವನ

ರಾವಣನ ಆಶೀರ್ವಾದದಿಂದಾಗಿ ತಮ್ಮ ಜೀವನ

ಅದೇ ರೀತಿ, ಮಹಾರಾಷ್ಟ್ರದ ಹಳ್ಳಿವೊಂದರ ನಿವಾಸಿಗಳು ಹಬ್ಬದಲ್ಲಿ ರಾಕ್ಷಸ ರಾಜ ರಾವಣನಿಗೆ ಆರತಿ ಮಾಡುವ ಮೂಲಕ ದಸರಾವನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಅಕೋಲಾ ಜಿಲ್ಲೆಯ ಸಂಗೋಲಾ ಗ್ರಾಮದ ಅನೇಕ ನಿವಾಸಿಗಳು ರಾವಣನ ಆಶೀರ್ವಾದದಿಂದಾಗಿ ತಾವು ವಾಸುವಿರುವುದಾಗಿ ತಮ್ಮ ಜೀವನದಲ್ಲಿ ಸುಖದಿಂದ ಇರಲು ಕಾರಣ ಎಂದು ನಂಬುತ್ತಾರೆ. ತಮ್ಮ ಗ್ರಾಮದಲ್ಲಿ ಶಾಂತಿ ಮತ್ತು ಸಂತೋಷವು ರಾಕ್ಷಸ ರಾಜ ರಾವಣನಿಂದಾಗಿ ಇದೆ. ರಾವಣನ ಬುದ್ಧಿವಂತಿಕೆ ಮತ್ತು ತಪಸ್ವಿ ಗುಣಗಳಿಗಾಗಿ ಪೂಜಿಸುವ ಸಂಪ್ರದಾಯವು ಗ್ರಾಮದಲ್ಲಿ ಕಳೆದ 300 ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಸ್ಥಳೀಯರು ಹೇಳುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+