ಕ್ರೂರಿ ಕೊರೊನಾ ಬಾಂಬ್ ನಿಂದ ಧಾರಾವಿ ಜನರನ್ನು ಕಾಪಾಡು ದೇವರೇ.!
ಮುಂಬೈ, ಏಪ್ರಿಲ್ 3: ಡೆಡ್ಲಿ ಕೊರೊನಾ ವೈರಸ್ ಭಾರತಕ್ಕೆ ಬಂದಿದ್ದು ವಿಮಾನದ ಮೂಲಕ. ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗರು ಮತ್ತು ಹೊರದೇಶಗಳಿಂದ ವಾಪಸ್ ಆದ ಭಾರತೀಯರಿಂದ ಇಲ್ಲಿ ಕೊರೊನಾ ವೈರಸ್ ಸೋಂಕು ಹರಡಲು ಆರಂಭವಾಯಿತು.
Recommended Video
ಹೈ-ಫೈ ಮಂದಿಯಿಂದ ಶುರುವಾದ ಈ ಮಹಾಮಾರಿ ಕಾಯಿಲೆ ಇದೀಗ ಮುಂಬೈ ಕೊಳಗೇರಿ ಪ್ರದೇಶವನ್ನೂ ಆವರಿಸಿದೆ. ಏಷ್ಯಾದ ಅತಿ ದೊಡ್ಡ ಸ್ಲಂ ಎಂದು ಕರೆಯಿಸಿಕೊಳ್ಳುವ ಮುಂಬೈನ ಧಾರಾವಿಯಲ್ಲಿ ಕೋವಿಡ್-19 ಕಿಡಿ ಹೊತ್ತಿಕೊಂಡಿದೆ. ಈ ಕಿಡಿಗೆ ಈಗಾಗಲೇ ಅಲ್ಲಿ ಓರ್ವ ಬಲಿಯಾಗಿದ್ದಾನೆ.
ಮೊದಲೇ ಧಾರಾವಿ ಕ್ಷಯ ರೋಗದ ಕೂಪ. ಇದರ ಜೊತೆಗೀಗ ಕೊರೊನಾ ಬಾಂಬ್ ಏನಾದರೂ ಸ್ಫೋಟಗೊಂಡರೆ.. ಅಲ್ಲಿ ನೆಲೆಸಿರುವ 15 ಲಕ್ಷ ಮಂದಿಯ ಪ್ರಾಣವೂ ಹರೋಹರ.

ಸೋಂಕು ದೃಢಪಟ್ಟಿದೆ.!
ಇಲ್ಲಿಯವರೆಗೂ ಮುಂಬೈನ ಧಾರಾವಿಯಲ್ಲಿ ಒಟ್ಟು ಮೂವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದರಲ್ಲಿ ಒಬ್ಬರು ಈಗಾಗಲೇ ಕೋವಿಡ್-19 ನಿಂದ ಸಾವನ್ನಪ್ಪಿದ್ದಾರೆ. ವಿದೇಶಿ ಟ್ರಾವೆಲ್ ಹಿಸ್ಟರಿ ಹೊಂದಿಲ್ಲದ ಈ ಮೂವರು ಸ್ಲಂ ನಿವಾಸಿಗಳಿಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.

ಧಾರಾವಿಯಲ್ಲಿನ ಜನಸಂಖ್ಯೆ ಎಷ್ಟು.?
ಇಡೀ ಏಷ್ಯಾದಲ್ಲೇ ಅತಿ ದೊಡ್ಡ ಸ್ಲಂ ಎಂದು ಕರೆಯಿಸಿಕೊಳ್ಳುವ ಧಾರಾವಿ 613 ಹೆಕ್ಟೇರ್ ಪ್ರದೇಶವನ್ನು ವ್ಯಾಪಿಸಿಕೊಂಡಿದೆ. ಇಲ್ಲಿನ ಜನಸಂಖ್ಯೆ ಸುಮಾರು 15 ಲಕ್ಷ.! ಬೆಂಕಿಪಟ್ಟಣದಂತಹ ಪುಟ್ಟ ಪುಟ್ಟ ಮನೆಗಳನ್ನು ಹೊಂದಿರುವ ಧಾರಾವಿಯಲ್ಲಿ, ಪ್ರತಿ ಮನೆಯಲ್ಲಿ ನೆಲೆಸಿರುವವರ ಸಂಖ್ಯೆ ಕಮ್ಮಿ ಎಂದರೂ 8 ಜನ.!

ಸಾಮಾಜಿಕ ಅಂತರ ಹೇಗೆ ಸಾಧ್ಯ.?
ಚಿಕ್ಕ ಪುಟ್ಟ ಮನೆಗಳು.. ವಠಾರಕ್ಕೊಂದು ಶೌಚಾಲಯ.. ಕಿಷ್ಕಿಂದೆಯಂತಹ ಓಣಿ.. ಒಂದೇ ಮನೆಯೊಳಗೆ ಹತ್ತಾರು ಜನವಿರುವ ಧಾರಾವಿಯಲ್ಲಿ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಸಾಮಾಜಿಕ ಅಂತರಕಾಯ್ದುಕೊಳ್ಳುವುದು ದೂರದ ಮಾತು. ಇನ್ನೂ 'ಹೋಮ್ ಕ್ವಾರಂಟೈನ್' ಎಂಬ ಕಾನ್ಸೆಪ್ಟ್ ಗೆ ಧಾರಾವಿಯಲ್ಲಿ ಅರ್ಥವೇ ಇಲ್ಲ. ಹೀಗಿರುವಾಗ, ಇಲ್ಲಿ ಕೊರೊನಾ ತಾಂಡವವಾಡಿದರೆ, ಲಕ್ಷಾಂತರ ಮಂದಿ ಬೀದಿ ಹೆಣಗಳಾಗುವುದು ಗ್ಯಾರಂಟಿ.

ನೈರ್ಮಲ್ಯ ಇಲ್ಲವೇ ಇಲ್ಲ.!
ಕೋವಿಡ್-19 ತಡೆಗಟ್ಟಲು ಆಗಾಗ ಸೋಪಿನಲ್ಲಿ ಕೈತೊಳೆದುಕೊಳ್ಳಿ ಅಂತಾರೆ. ಆದ್ರೆ, ಧಾರಾವಿಯಂತಹ ಕೊಳಗೇರಿಯಲ್ಲಿ ನೈರ್ಮಲ್ಯ, ಸ್ವಚ್ಛತೆ ಕನಸಿನ ಮಾತು. ಕುಡಿಯುವ ನೀರಿಗಾಗಿ ಪರದಾಡುವ ಅಲ್ಲಿನ ಜನ, ಪ್ರತಿ ದಿನ ಸ್ನಾನ ಮಾಡುವುದೇ ಅನುಮಾನ. ಅಂಥದ್ರಲ್ಲಿ ಅವರೆಲ್ಲಾ ಶುಚಿತ್ವ ಕಾಪಾಡಿಕೊಳ್ಳುವುದು ಹೇಗೆ.? ಒಳಚರಂಡಿ ವ್ಯವಸ್ಥೆಯೂ ಸರಿಯಾಗಿ ಇಲ್ಲದ ಧಾರಾವಿಯಲ್ಲಿ ಈಗಾಗಲೇ ಹಲವು ಜನ ಟೈಫಾಯ್ಡ್ ನಿಂದ ಬಳಲುತ್ತಿದ್ದಾರೆ.

ರೋಗಗಳ ಬೀಡು
ಚರ್ಮೋದ್ಯಮ, ಜವಳಿ ಸೇರಿದಂತೆ 5000ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳು ಇಲ್ಲಿವೆ. ವಾಯು ಮಾಲಿನ್ಯದಿಂದಾಗಿ ಇಲ್ಲಿ ನೆಲೆಸಿರುವ ಅನೇಕ ಮಂದಿ ಆಸ್ತಮಾ, ಕ್ಷಯ ಮತ್ತು ಕ್ಯಾನ್ಸರ್ ರೋಗಗಳಿಂದ ಬಳಲುತ್ತಿದ್ದಾರೆ. ಹೀಗಿರುವಾಗ, ಕೊರೊನಾ ಇಲ್ಲಿ ವ್ಯಾಪಿಸಿಬಿಟ್ಟರೆ, ಅದೆಷ್ಟು ಮಂದಿ ಬಲಿಯಾಗಬಹುದು.?

ಅನೇಕ ಮಂದಿ ಸಾವನ್ನಪ್ಪಿದ್ದರು.!
ಈ ಹಿಂದೆ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗ ಧಾರಾವಿಯಲ್ಲಿ ಕಾಣಿಸಿಕೊಂಡಿದ್ದಾಗಲೂ, ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದರು. ಈಗಲೂ ಧಾರಾವಿಯಲ್ಲೇ ಅದೇ ಭೀತಿ ಎದುರಾಗಿದೆ. ಕಡಿಮೆ ಜಾಗ, ಹೆಚ್ಚು ಜನಸಾಂದ್ರತೆ ಹೊಂದಿರುವ ಧಾರಾವಿಗೆ ಕ್ರೂರಿ ಕೊರೊನಾ ಕಾಲಿಟ್ಟಾಗಿದೆ. ಇನ್ನು ಅಲ್ಲಿನ ಜನರನ್ನ ಆ ದೇವರೇ ಕಾಪಾಡಬೇಕು.!
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications