ಅಜರ್ ಬೆನ್ನಿಗೆ ನಿಂತ ಚೀನಾ, ಟ್ವಿಟ್ಟರ್ ನಲ್ಲಿ 'ಚೀನಾ ಉತ್ಪನ್ನಗಳನ್ನು ನಿಷೇಧಿಸಿ' ಟ್ರೆಂಡ್
ನವದೆಹಲಿ, ಮಾರ್ಚ್ 14: ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆ ಜೈಷ್-ಎ- ಮೊಹಮ್ಮದ್ ಮುಖ್ಯಸ್ಥ ಮೌಲನಾ ಮಸೂದ್ ಅಜರ್ನನ್ನು 'ಜಾಗತಿಕ ಉಗ್ರ' ಎಂದು ವಿಶ್ವಸಂಸ್ಥೆಯಲ್ಲಿ ಘೋಷಣೆ ಮಾಡಲು ಭಾರತ ಮಾಡಿದ್ದ ಮನವಿಗೆ ಚೀನಾ ಮತ್ತೊಮ್ಮೆ ತಡೆಯೊಡ್ಡಿದೆ. 2009ರಿಂದ ಇಲ್ಲಿ ತನಕ ನಾಲ್ಕು ಬಾರಿ ಅಜರ್ ನನ್ನು ರಕ್ಷಿಸಿರುವ ಚೀನಾ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿವೆ.
ಭದ್ರತಾ ಸಮಿತಿಯಲ್ಲಿ ವಿಟೋ ಅಧಿಕಾರ ಉಳ್ಳ ಶಾಶ್ವತ ಸದಸ್ಯ ರಾಷ್ಟ್ರಗಳ ಪೈಕಿ ಚೀನಾ ಕೂಡಾ ಒಂದು. ಈ ಬಾರಿ ಭಾರತದ ಪರವಾಗಿ ಉಗ್ರ ಅಜರ್ ಗೆ ನಿರ್ಬಂಧ ಹೇರುವ ಪ್ರಸ್ತಾವನೆಯನ್ನು ವಿಶ್ವಸಂಸ್ಥೆ ಮುಂದೆ ಫ್ರಾನ್ಸ್ ಮುಂದಿಟ್ಟಿತ್ತು.
ಯುಎಸ್, ಯುಕೆ ಬೆಂಬಲ ವ್ಯಕ್ತಪಡಿಸಿದ್ದವು. ಆದರೆ, ಪಾಕಿಸ್ತಾನದ ಪಾಲಿನ ಸರ್ವ ಋತು ಮಿತ್ರ ದೇಶ ಚೀನಾ ಮಾತ್ರ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಿಟ್ಟಿತು.
|
ಚೀನಾ ಉತ್ಪನ್ನ, ಚೀನಿ ಆಪ್ ಗಳನ್ನು ನಿಷೇಧಿಸಿ
ಅಜರ್ ಬೆನ್ನಿಗೆ ನಿಂತ ಚೀನಾ, 'ಚೀನಾ ಉತ್ಪನ್ನ ನಿಷೇಧಿಸಿ' ಟ್ರೆಂಡ್ ಜಾರಿಯಲ್ಲಿದ್ದು, ಚೀನಾ ದೇಶದ ಉತ್ಪನ್ನಗಳಲ್ಲದೆ, ಚೀನಾದ ಮೊಬೈಲ್ ಅಪ್ಲಿಕೇಷನ್ ಗಳನ್ನು ನಿಷೇಧಿಸಿ ಎಂದು ಆಪ್ ಗಳ ಪಟ್ಟಿ ಕೊಟ್ಟ ಸಾರ್ವಜನಿಕರು.
|
ಮಸೂದ್ ಅಜರ್ ಪ್ರಯಾಣದ ಮೇಲೆ ನಿರ್ಬಂಧ ಬೀಳುತ್ತಿತ್ತು
ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ್ದರೆ ಆತನ ಆಸ್ತಿ ಮೇಲೆ, ಪ್ರಯಾಣ ಮೇಲೆ ನಿರ್ಬಂಧ ಬೀಳುತ್ತಿತ್ತು. ಜಾಗತಿಕವಾಗಿ ಪ್ರಯಾಣವೂ ಸಾಧ್ಯವಾಗುತ್ತಿರಲಿಲ್ಲ. ಎಲ್ಲ ದೇಶಗಳಲ್ಲಿನ ಆತನ ಹಣಕಾಸು ಮೂಲಕ್ಕೆ ತಡೆ ಆಗುತ್ತಿತ್ತು. ಇನ್ನು ಯಾವುದೇ ದೇಶದ ಮೂಲಕ ಮತ್ತೊಂದು ದೇಶಕ್ಕೆ ಹೋಗುವುದು ಸಹ ಅಸಾಧ್ಯವಾಗುತ್ತಿತ್ತು.
|
ಅಜರ್ ಮೇಲಿನ ನಿರ್ಬಂಧಕ್ಕೆ ಅಡ್ಡಿಯಾಗಿದೆ
ಯಾವುದೇ ದೇಶದ ಶಸ್ತ್ರಾಸ್ತ್ರ ಪೂರೈಕೆ, ಸೇನಾ ತರಬೇತಿ, ತಾಂತ್ರಿಕ ಸಲಹೆ, ಎಲ್ಲ ಬಗೆಯ ಸಲಕರಣೆಗಳು ನೇರ-ಪರೋಕ್ಷ ಮಾರಾಟ, ಹಸ್ತಾಂತರ ಮಾಡುವುದಕ್ಕೆ ಅಜರ್ ಮೇಲೆ ನಿರ್ಬಂಧ ಬೀಳುತ್ತಿತ್ತು.
|
ಪುಲ್ವಾಮಾ ದಾಳಿ, ಬಾಲಕೋಟ್ ದಾಳಿ
ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ದಾರ್ ಎಂಬ ಆತ್ಮಾಹುತಿ ದಾಳಿಕೋರ ಕಾರ್ ಬಾಂಬ್ ಸ್ಫೋಟಿಸಿ 44 ಯೋಧರ ಬಲಿದಾನಕ್ಕೆ ಕಾರಣವಾಗಿದ್ದ. ಅದರ ಪ್ರತೀಕಾರ ಎಂಬಂತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಬಾಲಕೋಟ್, ಗಡಿ ನಿಯಂತ್ರಣ ರೇಖೆ ಬಳಿ ಇರುವ ಮುಜಾಫರ್ ಬಾದ್ ಹಾಗೂ ಚಕೋತಿಯಲ್ಲಿದ್ದ ಉಗ್ರದ ಅಡಗುತಾಣಗಳ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿತು.
|
ಭಾರತದ ಬೇಡಿಕೆಗೆ ಪಾಕಿಸ್ತಾನ, ಚೀನಾ ಪ್ರತಿರೋಧ ಒಡ್ಡುತ್ತಿದೆ
ವಿಶ್ವಸಂಸ್ಥೆಯ 1267 ಭದ್ರತಾ ಸಮಿತಿಯ ಮುಂದೆ ಈ ವಿಚಾರ ಚರ್ಚೆಗೆ ಬಂದಾಗ, ಭಾರತದ ಬೇಡಿಕೆಗೆ ವಿಶ್ವ ಸಂಸ್ಥೆಯ ಉಳಿದ ಸದಸ್ಯ ರಾಷ್ಟ್ರಗಳ ಬೆಂಬಲ ಬೇಕಾಗುತ್ತದೆ. ಭಾರತದ ಬೇಡಿಕೆಗೆ ಪಾಕಿಸ್ತಾನ, ಚೀನಾ ಪ್ರತಿರೋಧ ಒಡ್ಡುತ್ತಿದೆ
|
ಅಮೆರಿಕ ಬೆಂಬಲಿಸುತ್ತಾ ಬಂದಿದೆ
ಸಂಸತ್ ದಾಳಿ, ಪಠಾಣ್ ಕೋಟ್ ದಾಳಿ ರೂವಾರಿ ಮೌಲನಾ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕನಾಗಿ ಘೋಷಿಸಬೇಕು ಎಂಬ ಭಾರತದ ಬೇಡಿಕೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ಬಾರಿ ಬೆಂಬಲ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
|
ಜಪಾನ್ ನಿಂದ ಭಾರತ ಕಲಿಯುವುದು ಸಾಕಷ್ಟಿದೆ
ಜಪಾನ್ ನಿಂದ ಭಾರತ ಕಲಿಯುವುದು ಸಾಕಷ್ಟಿದೆ. ಬಲಿಷ್ಠ ಯುಎಸ್ಎಗೆ ಸವಾಲು ಹಾಕಿ, ಸಮರ್ಥವಾಗಿ ಬೆಳೆದು ನಿಂತಿದೆ.
|
ಪಾಕಿಸ್ತಾನ- ಚೀನಾ ಉತ್ಪನ್ನಗಳಿಗೆ ನಿಷೇಧ ಹೇರಿ
ಚೀನಾ ಉತ್ಪನ್ನಗಳಿಗೆ ನಿಷೇಧ ಹೇರುವ ಮೂಲಕ ಪಾಕಿಸ್ತಾನದ ಉತ್ಪನ್ನಗಳಿಗೂ ನಿರ್ಬಂಧ ಹಾಕಬಹುದು.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications