ಕನ್ನಡ ರಾಜ್ಯೋತ್ಸವ: ನಮ್ಮ 'ಆಟೋ ರಾಜ'ರ ಪಾತ್ರ ಎಷ್ಟಿದೆ?
ಮೈಸೂರು, ಅಕ್ಟೋಬರ್. 31: ನವೆಂಬರ್ ಬಂತೆಂದರೆ ಸಾಕು ಎಲ್ಲೆಡೆ ಕನ್ನಡ ನಾಡು, ನುಡಿ ಬಗ್ಗೆ ಹೆಮ್ಮೆಯ ಮಾತುಗಳು, ಚರ್ಚೆಗಳು ಆರಂಭವಾಗಿ ಬಿಡುತ್ತದೆ.
ಅದರಲ್ಲೂ ಈಗ ಮೊಬೈಲ್ ಕಾಲ, ಫೇಸ್ಬುಕ್, ವಾಟ್ಸಾಪ್ ತೆರೆದರೆ ಸಾಕು ಕನ್ನಡದ ಒಂದು ಸ್ಲೋಗನ್, ಕೆಂಪು- ಹಳದಿ ಬಣ್ಣದ ಧ್ವಜ ಹಾಕಿ ನಾಡ ಮೇಲೆ ಅಭಿಮಾನವಿದ್ದರೆ ಷೇರ್ ಮಾಡಿ, ಲೈಕ್ ಮಾಡಿ, ನವೆಂಬರ್ 1 ರೊಳಗಾಗಿ 1 ಕೋಟಿ ಲೈಕ್ ಸಿಗಲಿ ಎಂಬ ಸಲಹೆ, ಸೂಚನೆ ಇರುತ್ತದೆ.
ಆದರೆ ತಮ್ಮ ಹಾಗೂ ಕುಟುಂಬದ ಹೊಟ್ಟೆ ಹೊರೆಯಲು ಹಗಲಿರುಳು ದುಡಿಯುವ ಆಟೋ ರಾಜರು ಕನ್ನಡ ರಾಜ್ಯೋತ್ಸವವನ್ನು ತಮ್ಮ ಆಟೋ ನಿಲ್ದಾಣಗಳಲ್ಲಿ ಈ ತಿಂಗಳ ಪೂರ್ತಿ ಆಚರಿಸುವ ಮೂಲಕ ಅಭಿಮಾನ ತೋರಿಸುವುದರ ಜೊತೆಗೆ ಜನರಲ್ಲಿ ಕನ್ನಡಾಭಿಮಾನವನ್ನು ಹೆಚ್ಚಿಸುತ್ತಾರೆ.
ಸಾಮಾನ್ಯವಾಗಿ ರಾಜ್ಯದ ಮೂಲೆ -ಮೂಲೆಯಲ್ಲಿನ ಬಹುತೇಕ ಎಲ್ಲಾ ಆಟೋ ನಿಲ್ದಾಣಗಳ ಬಳಿ ನಾಡದೇವತೆ ಚಾಮುಂಡಿ ದೇವತೆಯ ಚಿಕ್ಕಗುಡಿ, ಅದಕ್ಕೆ ಹೊಂದಿಕೊಂಡಂತೆ ಧ್ವಜಸ್ತಂಭ, ಅರಿಶಿನ -ಕುಂಕುಮ (ಕೆಂಪು- ಹಳದಿ) ಬಣ್ಣದ ಅಲಂಕಾರ, ಅದರ ಮೇಲೊಂದು ಕನ್ನಡದ ಧ್ವಜ ಹಾರಾಡುತ್ತಿರುತ್ತದೆ. ಮುಂದೆ ಓದಿ...

ಆಟೋ ನಿಲ್ದಾಣದತ್ತ ಸ್ವಲ್ಪ ಗಮನಕೊಡಿ
ಎಲ್ಲರೂ ನಿತ್ಯ ಆಟೋ ನಿಲ್ದಾಣ ನೋಡಿರುತ್ತಾರೆಯೇ ಹೊರತು ಅಲ್ಲಿರುವ ಕನ್ನಡ ಪ್ರೀತಿ ನೋಡಿರುವುದಿಲ್ಲ. ಏಕೆಂದರೆ ಅದು ಅವರಿಗೆ ಬೇಕಿಲ್ಲ. ಆದರೆ, ಈ ಬಾರಿ ನವೆಂಬರ್. 1ರಿಂದ ಇಡೀ ತಿಂಗಳು ಆಟೋ ನಿಲ್ದಾಣದತ್ತ ಸ್ವಲ್ಪ ಗಮನಕೊಡಿ ಅವರ ಕನ್ನಡಾಭಿಮಾನದ ಆಚರಣೆಯನ್ನು ಕಣ್ತುಂಬಿಕೊಂಡರೆ ಸಂತಸಪಡಲು ಪಾರವೇ ಇರುವುದಿಲ್ಲ.

ಸಿಹಿ, ಉಪಾಹಾರ ಹಂಚುವುದು ವಾಡಿಕೆ
ನವೆಂಬರ್ ತಿಂಗಳ ಪೂರ್ತಿ ಎಲ್ಲಾ ಆಟೋ ನಿಲ್ದಾಣಗಳಲ್ಲಿ ಕನ್ನಡ ಧ್ವಜಾರೋಹಣ ಮಾಡುತ್ತಾರೆ. ಧ್ವನಿವರ್ಧಕಗಳ ಮೂಲಕ ನಾಡಗೀತೆಗಳು, ರೈತ ಗೀತೆಗಳು ಮೊಳಗುತ್ತವೆ. ಬರುವ ಜನರಿಗೆ ಸಿಹಿ, ಉಪಾಹಾರ ಹಂಚುವುದು ಸಹ ವಾಡಿಕೆ.

ಧ್ವಜಾರೋಹಣ ವಿತರಣೆ
ರಾಜ್ಯೋತ್ಸವದ ಅಂಗವಾಗಿ ರಕ್ತದಾನ ಮಾಡಲು ಮುಂದಾಗುವ ನಮ್ಮ ಆಟೋ ಚಾಲಕರು ಈ ಮೂಲಕ ಕನ್ನಡಮ್ಮನ ಹೆಸರಿನಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಚಾಲಕರೆಲ್ಲರೂ ಸೇರಿ ತಮ್ಮ ಕೈಲಾದ ಮಟ್ಟಿಗೆ ಹಣ ಸಂಗ್ರಹಿಸಿ ಧ್ವಜಾರೋಹಣ ವಿತರಿಸುತ್ತಾರೆ.

ಆಟೋ ಚಾಲಕರ ಪಾತ್ರ ಹಿರಿದು
ನಮ್ಮ ಹಿಂದೂ ಹಬ್ಬಗಳೊಟ್ಟಿಗೆ ಕನ್ನಡ ರಾಜ್ಯೋತ್ಸವವು ಮತ್ತೊಂದು ಹಬ್ಬವಾಗಿ ಮಾರ್ಪಾಟಾಗಿರುವುದು ಸಂತಸವೇ ಸರಿ. ಇದರಲ್ಲಿ ಆಟೋ ಚಾಲಕರ ಪಾತ್ರ ಹಿರಿದು ಎಂಬುದರಲ್ಲಿ ಅತಿಶಯೋಕ್ತಿಯೇನು ಇಲ್ಲ.
-
Iran 10 Demands: ಕದನ ವಿರಾಮಕ್ಕೆ ಇರಾನ್ ವಿಧಿಸಿರುವ 10 ಷರತ್ತುಗಳ ವಿವರ ಇಲ್ಲಿದೆ, ನ್ಯೂಕ್ಲಿಯರ್ ಬೇಡ ಎಂದಿದ್ಯಾಕೆ -
Karnataka Rain: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ -
ನಿಮ್ಮ ಸಂಬಳಕ್ಕೆ ಎಷ್ಟು ಬೆಲೆಯ ಮನೆ ಖರೀದಿಸಬಹುದು? Viral ಆಗುತ್ತಿದೆ ಬೆಂಗಳೂರಿನ ಸಿಎ ತಿಳಿಸಿದ 20-30-40 ರೂಲ್ -
Gold Rate April 8: ಯುದ್ಧ ನಿಂತ ಬೆನ್ನಲ್ಲೇ ಚಿನ್ನ - ಬೆಳ್ಳಿ ಬೆಲೆ ಭಾರೀ ಹೆಚ್ಚಳ, ಎಷ್ಟಿದೆ ಇಂದಿನ ಚಿನ್ನದ ಬೆಲೆ -
Bengaluru Road: ಬನ್ನೇರುಘಟ್ಟ ರಸ್ತೆ ಪ್ರಯಾಣಿಕರಿಗೆ ಗುಡ್ನ್ಯೂಸ್: ಸಮಗ್ರ ಅಭಿವೃದ್ಧಿಗೆ ಜಿಬಿಎ ಮಾಸ್ಟರ್ ಪ್ಲಾನ್ -
Donald Trump: ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್ ಕಳಪೆ ಕೆಲಸ ಮಾಡಿದೆ: ಡೊನಾಲ್ಡ್ ಟ್ರಂಪ್ -
Bengaluru Rent House: ಬೆಂಗಳೂರಲ್ಲಿ 1 BHK ಬಾಡಿಗೆ ಮನೆ ಸ್ಕ್ಯಾಮ್; 30,000 ಕೊಟ್ಟರೂ ಒಳ್ಳೆ ಮನೆ ಸಿಗ್ತಿಲ್ಲ, ವೈರಲ್ ಪೋಸ್ಟ್ -
Iran-US-Israel War: ಪಾಕಿಸ್ತಾನದ ಮಧ್ಯಪ್ರವೇಶದಿಂದಾಗಿ ಇರಾನ್ ಮೇಲೆ ವಿನಾಶಕಾರಿ ಬಾಂಬ್ ದಾಳಿ ಇಲ್ಲ: ಡೊನಾಲ್ಡ್ ಟ್ರಂಪ್ -
IIT Baba Love Story: ಬೆಂಗಳೂರು ಮೂಲದ ಪ್ರತೀಕಾ ಕೈಹಿಡಿದ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ -
ಇರಾನ್-ಅಮೆರಿಕ ಯುದ್ಧದಲ್ಲಿ ಶರಣಾಗಿದ್ದು ಪಾಕಿಸ್ತಾನ: ಕೃಷ್ಣಭಟ್ ಬರಹ -
US-Iran ceasefire: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶೇ. 20ರಷ್ಟು ದಾಖಲೆಯ ಕುಸಿತ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು












Click it and Unblock the Notifications