Amazon Forest: 31 ದಿನಗಳ ಕಾಲ ಎರೆ ಹುಳು ತಿಂದು ತನ್ನದೇ ಮೂತ್ರ ಕುಡಿದು ಬದುಕಿದ್ದ ವ್ಯಕ್ತಿ
ಅಮೆಜಾನ್ ಕಾಡಿನಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಳೆದುಹೋಗಿದ್ದ ಅಸಾಧಾರಣ ಕಥೆ ಇದು
ಅಮೆಜಾನ್ ಅರಣ್ಯದಲ್ಲಿ ವ್ಯಕ್ತಿಯೊಬ್ಬ 31 ದಿನಗಳ ಕಾಲ ಎರೆ ಹುಳು ತಿಂದು ತನ್ನದೇ ಮೂತ್ರ ಕುಡಿದು ಬದುಕಿದ್ದಾನೆ. ಅಮೆಜಾನ್ ಕಾಡಿನಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಳೆದುಹೋಗಿದ್ದ ವ್ಯಕ್ತಿಯ ಅಸಾಧಾರಣ ಕಥೆ ಇದು. ಬೊಲಿವಿಯನ್ ವ್ಯಕ್ತಿಯೊಬ್ಬರು ಅಮೆಜಾನ್ ಕಾಡಿನಲ್ಲಿ ಕಳೆದುಹೋಗಿ ಒಂದು ತಿಂಗಳು ಕೀಟಗಳು ಮತ್ತು ಹುಳುಗಳನ್ನು ತಿನ್ನುವ ಮೂಲಕ ಬದುಕುಳಿದಿದ್ದಾರೆ.
ಜನವರಿ 25 ರಂದು ಉತ್ತರ ಬೊಲಿವಿಯಾದಲ್ಲಿ ಬೇಟೆಯಾಡುವ ಪ್ರವಾಸದಲ್ಲಿ 30 ವರ್ಷ ವಯಸ್ಸಿನ ಜೊನಾಟನ್ ಅಕೋಸ್ಟಾ ಎಂಬಾತ ತನ್ನ ಸ್ನೇಹಿತರಿಂದ ಬೇರ್ಪಟ್ಟು ಕಳೆದು ಹೋಗಿದ್ದನು. ಸುಮಾರು ಒಂದು ತಿಂಗಳ ನಂತರ, ಹುಡುಕಾಟ ಮತ್ತು ಪಾರುಗಾಣಿಕಾ ತಂಡಗಳು ಆತನನ್ನು ಪತ್ತೆ ಹಚ್ಚಿವೆ.

ಪತ್ತೆಯಾದಾಗ ಅಕೋಸ್ಟಾ ಅವರು 17 ಕೆಜಿ ತೂಕವನ್ನು ಕಳೆದುಕೊಂಡಿದ್ದರು. ಕಾಡಿನಲ್ಲಿ 31 ದಿನಗಳನ್ನು ಕಳೆದ ನಂತರ ನಿರ್ಜಲೀಕರಣಗೊಂಡಿದ್ದರು. ಪತ್ತೆಯಾದ ಬಳಿಕ ಅವರನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರು ಗಡ್ಡ ಮತ್ತು ಕೂದಲನ್ನು ಬೋಳಿಸಿಕೊಂಡರು. ಅವರು ಈಗ ಬೇಟೆಯನ್ನು ಬಿಟ್ಟು ದೇವರಿಗೆ ಸಂಗೀತ ಕಾರ್ಯಕ್ರಮ ಮಾಡುವುದಾಗಿ ತನ್ನ ಜೀವನವನ್ನು ಮುಡಿಪಾಗಿಡಲು ಪ್ರತಿಜ್ಞೆ ಮಾಡಿದ್ದಾರೆ.
ಅಕೋಸ್ಟಾ ಅವರು ಕಾಡಿನಲ್ಲಿ ಹೇಗೆ ಜೀವಂತವಾಗಿದ್ದರು ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ಯಾವ ಕಷ್ಟಗಳನ್ನು ಅನುಭವಿಸಿದರು ಎಂದು ವಿವರಿಸಿದ್ದಾರೆ. ಅವರು ಕಾಡಿನಲ್ಲಿ ಹುಳು, ಕ್ರಿಮಿಕೀಟ, ಪಪ್ಪಾಯಿಯಂತಹ ಕಾಡು ಹಣ್ಣುಗಳನ್ನು ತಿಂದು ಬದುಕಿದೆ ಎಂದು ಹೇಳಿಕೊಂಡಿದ್ದಾರೆ.

ಬಾಯಾರಿಕೆಯಾದಾಗ ದೇವರಲ್ಲಿ ಮಳೆಗಾಗಿ ಕೇಳಿದೆ. ಮಳೆ ಬಾರದಿದ್ದರೆ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಕೆಲವೊಂದು ಬಾರಿ ತಾವು ತಮ್ಮ ರಬ್ಬರ್ ಬೂಟುಗಳಲ್ಲಿ ಮಳೆನೀರನ್ನು ಸಂಗ್ರಹಿಸುತ್ತಿರುವುದಾಗಿ ಎಂದರು. ಆದರೆ ನೀರು ಸಿಗದೇ ಇದ್ದಾಗ ತಮ್ಮ ಮೂತ್ರವನ್ನು ಕುಡಿಯುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
ಜಾಗ್ವಾರ್ ಸೇರಿದಂತೆ ಕಾಡಿನಲ್ಲಿ ಎಲ್ಲಾ ರೀತಿಯ ಕಾಡು ಪ್ರಾಣಿಗಳು ಮತ್ತು ವಿವಿಧ ಜೀವಿಗಳನ್ನು ಅವರು ಹೇಗೆ ಎದುರಿಸಿದರು ಎಂಬುದರ ಕುರಿತು ಅವರು ವಿವರಿಸಿದ್ದಾರೆ.
ಇದೇ ರೀತಿಯ ಘಟನೆಯಲ್ಲಿ, ಕೆರಿಬಿಯನ್ ದ್ವೀಪದ ಡೊಮಿನಿಕಾದ ವ್ಯಕ್ತಿಯೊಬ್ಬರು ಕೊಲಂಬಿಯಾದ ಸಮುದ್ರದ ಹಾಯಿದೋಣಿಯಲ್ಲಿ ಕಳೆದುಹೋದ 24 ದಿನಗಳ ನಂತರ ಬದುಕುಳಿದರು. "ನನಗೆ ಆಹಾರವಿಲ್ಲ. ದೋಣಿಯಲ್ಲಿ ಕೆಚಪ್ ಬಾಟಲಿಯಿತ್ತು, ಬೆಳ್ಳುಳ್ಳಿ ಪುಡಿ ಮತ್ತು ಮ್ಯಾಗಿ ಇತ್ತು. ಹಾಗಾಗಿ ಸಮುದ್ರದಲ್ಲಿ 24 ದಿನ ಬದುಕಲು ನಾನು ಅದನ್ನು ಸ್ವಲ್ಪ ನೀರಿನಲ್ಲಿ ಬೆರೆಸಿದೆ" ಎಂದು 47 ವರ್ಷದ ಎಲ್ವಿಸ್ ಫ್ರಾಂಕೋಯಿಸ್ ಹೇಳಿದ್ದರು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications