Fact Check: 2000 ರೂಪಾಯಿ ನೋಟುಗಳನ್ನು ಆರ್ಬಿಐ ನಿಷೇಧಿಸಿದೆ
ನವದೆಹಲಿ, ಆಗಸ್ಟ್ 26: ಎರಡು ಸಾವಿರ ರೂಪಾಯಿ ನೋಟುಗಳ ಜಾರಿಗೆ ಬಂದ ಬಳಿಕ ಅನೇಕ ಬಾರಿ ಅಂತರ್ಜಾಲದಲ್ಲಿ ಹರಿದಾಡಿರುವ ವಿಷಯ ಅಂದರೆ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನ ನಿಷೇಧಿಸಲಾಗಿದೆ ಎಂಬ ಸುದ್ದಿ. ಇಂದು ಮತ್ತೊಮ್ಮೆ ಇದೇ ವಿಷಯ ಎಲ್ಲೆಡೆ ಹರಿದಾಡಿದೆ.
ಹಾಗಿದ್ದರೆ ಎರಡು ಸಾವಿರ ನೋಟುಗಳನ್ನು ನಿಷೇಧಿಸಲಾಗಿದೆಯೇ ಅಥವಾ ಇಲ್ಲವೇ ಎಂದು ಈಗಾಗಲೇ ಹಲವಾರು ಪ್ರಶ್ನೆಗಳು ಕೇಳಿ ಬಂದಿವೆ. ಕಳೆದ ವರ್ಷ ಕೂಡ ಇಂತಹದೇ ಪ್ರಶ್ನೆಗಳು ಕೇಳಿಬಂದಿದೆ. ಈ ವಿಷಯದ ಬಗ್ಗೆ ಒನ್ಇಂಡಿಯಾ ಹಲವಾರು ಅಧಿಕಾರಿಗಳನ್ನು ಸಂಪರ್ಕಿಸಿದಾಗ, 2,000 ರೂಪಾಯಿ ನೋಟು ನಿಷೇಧಿಸಲು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.
ಹಾಗಿದ್ದರೆ 2,000 ರೂಪಾಯಿ ನೋಟು ನಿರ್ಷೇಧವಾಗಿದೆ ಎಂಬ ಸುದ್ದಿ ಎಲ್ಲಿಂದ ಬಂತು ಎಂಬುದು ಆಶ್ಚರ್ಯ ಮೂಡಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಾರ್ಷಿಕ ವರದಿಯನ್ನು ಅನುಸರಿಸಿ ಈ ಸುಳ್ಳು ಸುದ್ದಿ ಹೊರಬಂದಿದೆ. ಆರ್ಬಿಐನ ವಾರ್ಷಿಕ ವರದಿಯು 2019-2020ರಲ್ಲಿ ಒಂದೇ ಒಂದು 2 ಸಾವಿರ ರೂ. ನೋಟುಗಳನ್ನು ಮುದ್ರಿಸಲಾಗಿಲ್ಲ ಎಂದು ಹೇಳಿದೆ.

ಚಲಾವಣೆಯಲ್ಲಿರುವ 2 ಸಾವಿರ ರೂಪಾಯಿ ಕರೆನ್ಸಿ ನೋಟುಗಳ ಸಂಖ್ಯೆ 2018 ರ ಮಾರ್ಚ್ ಅಂತ್ಯದ ವೇಳೆಗೆ 33,632 ಲಕ್ಷಗಳಷ್ಟಿದ್ದು, ಅದು 2019 ರ ಮಾರ್ಚ್ ಅಂತ್ಯದ ವೇಳೆಗೆ 32,910 ಲಕ್ಷ ನೋಟುಗಳಿಗೆ ಇಳಿಕೆಯಾಗಿದೆ ಮತ್ತು 2020ರ ಮಾರ್ಚ್ ಅಂತ್ಯದ ವೇಳೆಗೆ 27,398 ಲಕ್ಷ ನೋಟ್ ಗಳಿಗೆ ತಗ್ಗಿದೆ ಎಂದು ಆರ್ಬಿಐ ವಾರ್ಷಿಕ ವರದಿ ವಿವರಿಸಿದೆ.
2020ರ ಮಾರ್ಚ್ ಅಂತ್ಯದ ವೇಳೆಗೆ ಒಟ್ಟು ನೋಟುಗಳ ಪ್ರಮಾಣ ಶೇಕಡಾ 2.4 ರಷ್ಟಿದ್ದು, 2019 ರ ಮಾರ್ಚ್ ಅಂತ್ಯದ ವೇಳೆಗೆ ಇದು ಶೇ. 3 ಮತ್ತು 2018 ರ ಮಾರ್ಚ್ ಅಂತ್ಯದ ವೇಳೆಗೆ ಶೇ. 3.3 ರಿಂದ ಇಳಿಕೆಯಾಗಿದೆ ಎಂದು ಆರ್ಬಿ ಹೇಳಿದೆ.
ಎರಡು ಸಾವಿರ ಮುಖಬೆಲೆಯ ನೋಟುಗಳ ಚಲಾವಣೆಯ ಪ್ರಮಾಣದಲ್ಲೂ ಕೂಡ ಇಳಿಕೆ ಕಂಡಿದ್ದು, ಮಾರ್ಚ್ 2020ರಲ್ಲಿ 22.6ರಷ್ಟಿದ್ದು, ಮಾರ್ಚ್ 2019ರಲ್ಲಿ ಶೇ. 31.2 ಮತ್ತು 2018 ಮಾರ್ಚ್ನಲ್ಲಿ ಶೇ. 37.3ರಷ್ಟಿತ್ತು.
ಮತ್ತೊಂದೆಡೆ 2018 ರಿಂದ ಚಲಾವಣೆಗೆ ಬಂದ 500 ಹಾಗೂ 200 ರೂಪಾಯಿ ನೋಟ್ ಗಳ ಪ್ರಮಾಣ ಮತ್ತು ಚಲಾವಣೆ ಕಳೆದ ಮೂರು ವರ್ಷಗಳಲ್ಲಿ ಗಣನೀಯವಾಗಿ ಏರಿದೆ ಎಂದು ವರದಿ ತಿಳಿಸಿದೆ.

Fact Check
ಕ್ಲೇಮು
2000 ರೂಪಾಯಿ ನೋಟುಗಳನ್ನು ಆರ್ಬಿಐ ನಿಷೇಧಿಸಿದೆ
ಪರಿಸಮಾಪ್ತಿ
2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಆರ್ಬಿಐ ನಿಷೇಧಿಸಿದೆ ಎಂಬುದು ಶುದ್ಧ ಸುಳ್ಳು.
Rating
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications