Fact check: ಮೀಸಲಾತಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅಪೂರ್ಣ ವಿಡಿಯೋ ವೈರಲ್
ಇತ್ತೀಚೆಗೆ ರಾಹುಲ್ ಗಾಂಧಿ ಅವರು ಅಮೇರಿಕಾದಲ್ಲಿ, 'ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದ ನಂತರ ಮೀಸಲಾತಿ ವ್ಯವಸ್ಥೆಯ ರದ್ದತಿ ಕುರಿತು ಕಾಂಗ್ರೆಸ್ ಪಕ್ಷ ಚಿಂತಿಸಲಿದೆ' ಎಂದು ಹೇಳಿದ್ದಾಗಿ ವರದಿಯಾಗಿತ್ತು. ಈ ವಿಡಿಯೋದ ಕ್ಲಿಪ್ ಸಹಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಆದರೀಗ ಈ ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ಪರಿಶೀಲನೆ ಮಾಡಲಾಗಿದೆ.
ಹೌದು... ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕುರಿತ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಅವರ ಎರಡು ವೀಡಿಯೋ ತುಣುಕುಗಳನ್ನು ಬಳಸಿಕೊಂಡು ರಾಹುಲ್ ಗಾಂಧಿ ಅವರು ಮೀಸಲಾತಿಯನ್ನು ಕೊನೆಗೊಳಿಸುವುದಾಗಿ ವಿದೇಶದಲ್ಲಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ವೈರಲ್ ಪೋಸ್ಟ್ ಕುರಿತು ವಿಶ್ವಸ್ ನ್ಯೂಸ್ ತನಿಖೆ ನಡೆಸಿದೆ. ವೈರಲ್ ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಿದೆ. ಅಮೆರಿಕ ಪ್ರವಾಸದ ವೇಳೆ ಜಾರ್ಜ್ಟೌನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದ ನಂತರ ಮೀಸಲಾತಿ ವ್ಯವಸ್ಥೆ ಕೊನೆಗೊಳಿಸುವ ಬಗ್ಗೆ ಯೋಚಿಸುತ್ತೇವೆ ಎಂದು ಹೇಳಿದ್ದರು. ರಾಹುಲ್ ಗಾಂಧಿಯವರ ಹೇಳಿಕೆಯನ್ನು ವಿಶ್ವಸ್ ನ್ಯೂಸ್ ಇಂಗ್ಲಿಷ್ ನಿಂದ ಹಿಂದಿಗೆ ಅನುವಾದಿಸಿದೆ. ಸತ್ಯ ಪರಿಶೀಲನೆ ಬಳಿಕ ಕೆಲವರು ಅಪೂರ್ಣ ವಿಡಿಯೋಗಳನ್ನು ವೈರಲ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎನ್ನುವುದು ಗೊತ್ತಾಗಿದೆ.
ವೈರಲ್ ಆಗಿದ್ದೇನು?
ಛತ್ತೀಸ್ಗಢ ಚೌಪಾಲ್ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಎರಡು ಕ್ಲಿಪ್ಗಳನ್ನು ಸೆಪ್ಟೆಂಬರ್ 10 ರಂದು ಪೋಸ್ಟ್ ಮಾಡಲಾಗಿದೆ. ರಾಹುಲ್ ಗಾಂಧಿ ದೇಶದಲ್ಲಿ ಮೀಸಲಾತಿ ಉಳಿಸುವ ಬಗ್ಗೆ ಮಾತನಾಡುತ್ತಾರೆ. ವಿದೇಶದಲ್ಲಿ ಅದನ್ನು ಕೊನೆಗೊಳಿಸುವುದಾಗಿ ಮಾತನಾಡುತ್ತಾರೆ ಎಂದು ವಿಡಿಯೋದೊಂದಿಗೆ ಬರೆಯಲಾಗಿದೆ.

ತನಿಖೆ
ರಾಹುಲ್ ಗಾಂಧಿಗೆ ಸಂಬಂಧಿಸಿದ ಮೊದಲ ವೈರಲ್ ಕ್ಲಿಪ್ ಅನ್ನು ತನಿಖೆ ಮಾಡಲು ವಿಶ್ವಾಸ್ ನ್ಯೂಸ್ ಮೊದಲು ಕಾಂಗ್ರೆಸ್ನ ಅಧಿಕೃತ ಯೂಟ್ಯೂಬ್ ಚಾನೆಲ್ ಗೆ ಭೇಟಿ ನೀಡಿತು. ಇಲ್ಲಿ ಸೆಪ್ಟೆಂಬರ್ 10 ರಂದು ಪೋಸ್ಟ್ ಮಾಡಲಾದ ಇದೇ ವಿಡಿಯೋವನ್ನು ಗಮನಿಸಲಾಗಿದೆ. ಇದರಲ್ಲಿ ರಾಹುಲ್ ಗಾಂಧಿ ಅಮೆರಿಕ ಪ್ರವಾಸದ ವೇಳೆ ಜಾರ್ಜ್ಟೌನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿರುವ ಸಂಪೂರ್ಣ ವಿಡಿಯೋವನ್ನು ಕಾಣಬಹುದು.
ಒಬ್ಬ ವಿದ್ಯಾರ್ಥಿ ಭಾರತದಲ್ಲಿ ಮೀಸಲಾತಿಯ ಬಗ್ಗೆ ಪ್ರಶ್ನೆಯನ್ನು ಕೇಳುತ್ತಾನೆ. ಇದಕ್ಕೆ ಪ್ರತಿಕ್ರಿಯೆಯಾಗಿ ರಾಹುಲ್ ಗಾಂಧಿಯವರು ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಈ ಸಂಪೂರ್ಣ ವಿಡಿಯೋ ವೈರಲ್ ಆಗಿಲ್ಲ. ಅದನ್ನು ಬೇಕಾದಂತೆ ಜೋಡಿಸಿ ವೈರಲ್ ಮಾಡಲಾಗಿದೆ.
54:30 ನಿಮಿಷದ ಸಂಪೂರ್ಣ ವೀಡಿಯೊದಲ್ಲಿ ರಾಹುಲ್ ಗಾಂಧಿ ಹೇಳುವುದನ್ನು ಕಾಣಬಹುದು, "ನೀವು ಭಾರತ ಸರ್ಕಾರವನ್ನು ನೋಡಿದರೆ ಮತ್ತು ಅದನ್ನು ನಡೆಸುತ್ತಿರುವ 70 ಅಧಿಕಾರಿಗಳನ್ನು ಪರೀಕ್ಷಿಸಿದರೆ, ಭಾರತ ಸರ್ಕಾರದ ಕಾರ್ಯದರ್ಶಿಗಳು, ಬಹುತೇಕ ಎಲ್ಲಾ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಜನರ ಸಂಖ್ಯೆ ದಲಿತರು, ಆದಿವಾಸಿಗಳು ಮತ್ತು ಒಬಿಸಿಗಳನ್ನು ಸೇರಿಸಿದರೆ ಒಟ್ಟು ಶೇ.73 ಆಗುತ್ತದೆ. ಆದರೆ ಈ 70 ಜನರಲ್ಲಿ ಒಬ್ಬ ಬುಡಕಟ್ಟು, ಮೂರು ದಲಿತ, ಮೂರು OBC ಮತ್ತು ಬಹುಶಃ ಒಬ್ಬ ಅಲ್ಪಸಂಖ್ಯಾತರಿರುತ್ತಾರೆ''
''ನೀವು ನಿಜವಾಗಿ ಹಣಕಾಸಿನ ಡೇಟಾವನ್ನು ನೋಡಿದಾಗ, ಆದಿವಾಸಿಗಳು 100 ರೂಪಾಯಿಗಳಲ್ಲಿ 10 ಪೈಸೆಗಳನ್ನು ಪಡೆಯುತ್ತಾರೆ, ದಲಿತರು 100 ರೂಪಾಯಿಗಳಲ್ಲಿ 5 ರೂಪಾಯಿಗಳನ್ನು ಪಡೆಯುತ್ತಾರೆ ಮತ್ತು OBC ಗಳು ಅದೇ ಮೊತ್ತವನ್ನು ಪಡೆಯುತ್ತಾರೆ. ಅವರಿಗೆ ಭಾಗವಹಿಸುವಿಕೆ ಸಿಗುತ್ತಿಲ್ಲ ಎಂಬುದು ಸತ್ಯ. 90 ರಷ್ಟು ಭಾರತದಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದು ಸಮಸ್ಯೆಯಾಗಿದೆ. ಭಾರತದ ಪ್ರತಿಯೊಬ್ಬ ವ್ಯಾಪಾರ ನಾಯಕರ ಪಟ್ಟಿಯನ್ನು ಪರಿಶೀಲಿಸಿ. ನಾನು ಅದನ್ನು ಮಾಡಿದ್ದೇನೆ. ನನಗೆ ಬುಡಕಟ್ಟು ಹೆಸರುಗಳನ್ನು ತೋರಿಸಿ, ನನಗೆ ದಲಿತ ಹೆಸರುಗಳನ್ನು ತೋರಿಸಿ ಮತ್ತು ನನಗೆ ಒಬಿಸಿ ಹೆಸರುಗಳನ್ನು ತೋರಿಸಿ. ಅಗ್ರ 200 ಉದ್ಯಮಿಗಳಲ್ಲಿ ಒಬ್ಬರು ಒಬಿಸಿ ಇದ್ದಾರೆ. ಒಬಿಸಿಗಳು ಭಾರತದ ಶೇಕಡಾ 50 ರಷ್ಟಿದ್ದಾರೆ. ಸಮಸ್ಯೆಯ ಮೂಲದ ಬಗ್ಗೆ ನಾವು ಗಮನ ಹರಿಸುತ್ತಿಲ್ಲ. ಅದು ಇದೀಗ ಸಮಸ್ಯೆಯಾಗಿದೆ" ಎಂದಿದ್ದಾರೆ.
ಈ ವಿಚಾರಗಳನ್ನು ಪ್ರಸ್ತಾಪಿಸುತ್ತಾ ರಾಹುಲ್ ಗಾಂಧಿ ಹೇಳುತ್ತಾರೆ "ಮೀಸಲಾತಿ ಒಂದೇ ಸಾಧನವಲ್ಲ, ಇತರ ವಿಧಾನಗಳೂ ಇವೆ. ಆದರೆ ಭಾರತವು ಎಲ್ಲರಿಗೂ ಸಮಾನವಾದ ದೇಶವಾದಾಗ ಮಾತ್ರ ನಾವು ಮೀಸಲಾತಿಯನ್ನು ಕೊನೆಗೊಳಿಸುವ ಬಗ್ಗೆ ಯೋಚಿಸುತ್ತೇವೆ. ಮತ್ತು ಈ ಸಮಯದಲ್ಲಿ ಭಾರತವು ಹಾಗಿಲ್ಲ'' ಎಂದಿದ್ದಾರೆ.
ತನಿಖೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಾ, ವಿಶ್ವಸ್ ನ್ಯೂಸ್ ದೈನಿಕ್ ಜಾಗರಣ್ ಅವರ ಇ-ಪೇಪರ್ ಅನ್ನು ಸ್ಕ್ಯಾನ್ ಮಾಡಿದೆ. ಸೆಪ್ಟೆಂಬರ್ 11 ರಂದು ಪ್ರಕಟವಾದ ಸುದ್ದಿಯನ್ನು ನಾವು ಕಂಡುಕೊಂಡಿದ್ದೇವೆ. ಭಾರತ ತಾರತಮ್ಯ ಮುಕ್ತವಾದಾಗ ಮಾತ್ರ ಮೀಸಲಾತಿಯನ್ನು ಕೊನೆಗೊಳಿಸುವ ಬಗ್ಗೆ ಕಾಂಗ್ರೆಸ್ ಯೋಚಿಸುತ್ತದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಬರೆಯಲಾಗಿದೆ.
ಹೀಗಾಗಿ ವೈರಲ್ ವಿಡಿಯೋ ಮೂಲಕ ತಪ್ಪು ಸಂದೇಶ ನೀಡಲಾಗಿದ್ದು ಈ ವಿಡಿಯೋ ಸಂದೇಶ ತಪ್ಪು ದಾರಿಗೆಳಿಯುವಂತಿದೆ.

Fact Check
ಕ್ಲೇಮು
ಮೀಸಲಾತಿ ರದ್ದುಗೊಳಿಸಲು ರಾಹುಲ್ ಗಾಂಧಿ ಮುಂದಾಗಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿದೆ
ಪರಿಸಮಾಪ್ತಿ
ಮೀಸಲಾತಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅಪೂರ್ಣ ವಿಡಿಯೋ ವೈರಲ್ ಆಗಿದೆ
Rating
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications